ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಂಸಾರವೆಂಬ ಈ ಭವಸಾಗರದಲ್ಲಿ ಬೀಸುವ ಗಾಳಿಯ ಸೊಡರಿನಲ್ಲಿ ಈಜಿ ದಡಸೇರುವದು ಅಷ್ಟು ಸುಲಭದ ಮಾತಲ್ಲ ಕುಟುಂಬ ವ್ಯವಸ್ಥೆಯ ತೇರನ್ನು ಎಳೆಯುತ್ತಾ ಸಮಾಜದಲ್ಲಿ ಸಮಾಜಮುಖಿಯಾಗಿ ಕೆಲಸಮಾಡುವ ಪರಿಕಲ್ಪನೆ ಹೊಂದಿದ ವ್ಯಕ್ತಿಗಳು ಅಪರೂಪ ಅಂತಹ ವ್ಯಕ್ತಿಗಳು ಬಡತನವಿರಲಿ ಸಿರಿತನವಿರಲಿ ಸಾಧನೆಯ ಶಿಖರ ಏರುವ ಗುರಿಯನ್ನು ಹೊಂದಿರುತ್ತಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದಲ್ಲಿ ನಡೆದ ಅಧ್ಯಾತ್ಮಿಕ ಮತ್ತು ಸಂಸಾರ ವ್ಯವಸ್ಥೆ ಎನ್ನುವ ವಿವಿಧ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಮಾನವ ತನ್ನ ಜೀವಿತಾವಧಿಯ ಕೊನೆಯ ದಿನಗಳವರೆಗೂ ಧರ್ಮವಂತನಾಗಿ ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ತಂದೆ ತಾಯಿ ಗುರುವಿನ ಹಿರಿಯರ ಮಾಗದರ್ಶನದಲ್ಲಿ ನಡೆದದ್ದೇ ಆದರೆ ಎಂಥಹ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಕುಟುಂಬಕ್ಕೆ ಆಧಾರ ಸ್ಥಂಭವಾಗಿ ನಿರ್ವಹಣೆ ಮಾಡುವ ಜವಬ್ದಾರಿಯಿಂದ ತನ್ನದೇ ಆದ ಛಾಪನ್ನು ವಿವಿಧ ಕ್ಷೇತ್ರಗಳಲ್ಲಿ ಮೂಡಿಸುವ ನಾಯಕನಾಗುತ್ತಾನೆ ಎಂದರು.
ಜೆಡಿಎಸ್ ಮುಖಂಡ ಸೋಮನಗೌಡ ಬ ಪಾಟೀಲ ಮಾತನಾಡಿ, ಮನುಷ್ಯನ ಮಾತುಗಳು ಕಠೋರವಾಗಿದ್ದರೂ ಮೃದುವಾದ ಮನಸ್ಸಿನಿಂದ ಗಂಡ ಹೆಂಡತಿಯರ ಪರಸ್ಪರ ತಿಳುವಳಿಕೆಯಿಂದ ಗುಡಿಸಿಲಿನಲ್ಲಿಯೇ ಜೀವನ ಸಾಗಿಸುತ್ತಿದ್ದರೂ ಆಧುನಿಕ ಕಾಲದಲ್ಲಿಯೂ ಹೇಮರಡ್ಡಿ ಮಲ್ಲಮ್ಮ ಹಾಗೂ ಭರಮರಡ್ಡಿಯವರ ತರಹ ನಿಸ್ವಾರ್ಥ ಮನೋಭಾವದ ಜೀವನ ನಡೆಸುವ ಕೀರ್ತಿವಂತರಾಗಿ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕಲ್ಲು ದೇಸಾಯಿ, ಗಜೇಂಧ್ರಗಢ ತಳ್ಳಿಹಾಳ ಕೋಡಿಮಠದ ಕಾಲಜ್ಞಾನಬ್ರಹ್ಮ ವಿಶ್ವಕಾಲಜ್ಞಾನ ಶಿವಯೋಗಿ ಡಾ|| ಶರಣಬಸವ ಮಹಾಸ್ವಾಮಿಗಳು ಮಾತನಾಡಿದರು.
ಗಜೇಂಧ್ರಗಢ ತಳ್ಳಿಹಾಳ ಕೋಡಿಮಠದ ಕಾಲಜ್ಞಾನಬ್ರಹ್ಮ ವಿಶ್ವಕಾಲಜ್ಞಾನ ಶಿವಯೋಗಿ ಡಾ|| ಶರಣಬಸವ ಮಹಾಸ್ವಾಮಿಗಳು, ಕೊಲ್ಹಾರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಅತಿಥಿಗಳಾಗಿ ಮುರುಘೇಂದ್ರ ಮಹಾಸ್ವಾಮಿಗಳು, ಡಾ|| ಕೃಷ್ಣಕೊಲ್ಹಾರ ಕುಲಕರ್ಣಿ, ಮಲ್ಲು ದೇಸಾಯಿ ರೋಣಿಹಾಳ, ರಫೀಕ ಪಕಾಲಿ, ಉಸ್ಮಾನಸಾಬ ಪಟೇಲ, ಅನೇಕ ಗಣ್ಯಮಾನ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ರುದ್ರಮ್ಮ ಗಿಡ್ಡಪ್ಪಗೋಳ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಕೆ.ಎಸ್.ಬಾಲಗೊಂಡ ವಂದಿಸಿದರು.
ಸರ್ವಧರ್ಮ ಸಮನ್ವಯತೆಯ ಸಾಕಾರದಂತೆ ಹಿಂದೂ ಮುಸ್ಲೀಂ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕೊಲ್ಹಾರ ಪಟ್ಟಣ ಪಂಚಾಯತಿಯ ಸರ್ವ ಸದಸ್ಯರನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.

