ದಿ.ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ & ಕಲಾಕೃತಿಗಳ ಪ್ರದರ್ಶನ”
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಕ್ಯಾನವಾಸ್ ಆರ್ಟ್ ಫೌಂಡೇಷನ್ ಹಾಗೂ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ಆಯೋಜಿಸಿದ ಇತ್ತೀಚಿಗೆ ನಿಧನರಾದ ಜಮಖಂಡಿಯ ಹೆಸರಾಂತ ಹಿರಿಯ ಕಲಾವಿದರಾಗಿದ್ದ ದಿ.ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ ಹಾಗೂ ದಿ. ಶ್ರೀ ವಿಜಯ ಸಿಂಧೂರ ಅವರ ಮೂಲ ಕಲಾಕೃತಿಗಳ ಪ್ರದರ್ಶನ” ರವಿವಾರ ನಗರದ ಪ್ರವಾಸೋಧ್ಯಮ ಇಲಾಖೆಯ ಸರಕಾರಿ ಆರ್ಟಗ್ಯಾಲರಿಯಲ್ಲಿ ನಡೆಯಿತು.
ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ವಿ.ವಿ. ಪ್ರಾಧ್ಯಾಪಕ ಡಾ.ವಿಷ್ಣು ಎಂ. ಶಿಂದೆ ಅವರು, ಕಲಾವಿದರು ನಾಡಿನ ಸಂಪತ್ತು. ಕಲಾವಿದರು ಹೋದರು ಕಲೆ ಅಜರಾಮರವಾಗಿರುತ್ತದೆ ವಿಜಯ ಸಿಂಧೂರ ಜಮಖಂಡಿಯ ಸಣ್ಣ ಊರಿನಲ್ಲೇ ಇದ್ದು ಇಡಿ ದೇಶದ ಕಲಾಸಕ್ತರ ಗಮನ ಸೆಳೆದವರು. ಜಮಖಂಡಿಯು ವಿಜಯ ಸಿಂಧೂರರ ಮೂಲಕ ದೃಶ್ಯಕಲಾ ಲೋಕದಲ್ಲಿ ತನ್ನ ಛಾಪು ಮೂಡಿಸಿದೆ. ಹಾಗೆ ನಾಡಿನ ಬಹುತೇಕ ಎಲ್ಲ ಪ್ರಶಸ್ತಿ ಗೌರವಗಳಿಗೆ ಭಾಜನರಾದ ಸಿಂಧೂರರವರು ಉತ್ತರ ಕರ್ನಾಟಕದ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಕಲಾವಿದರಾಗಿದ್ದರು ಎಂದು ಸ್ಮರಿಸಿದರು.
ವಿಜಯಪುರದ ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಅವರು ತಮ್ಮ ಮತ್ತು ಸಿಂಧೂರ ಅವರ ಒಡನಾಟದ ಬಗ್ಗೆ ಮತ್ತು ಅವರ ಕಲಾಕೃತಿಗಳ ಬಗ್ಗೆ ಭಾವಚಿತ್ರ ರಚನೆಯ ತಂತ್ರಗಾರಿಗೆಯ ಅವರ ಕೌಶಲ್ಯದ ಬಗ್ಗೆ ವಿವರವಾಗಿ ಮಾತನಾಡಿದರು.
ಕ್ಯಾನವಾಸ್ ಆರ್ಟ ಫೌಂಡೇಶನ್ ಕಾರ್ಯದರ್ಶಿ ಮತ್ತು ಕಲಾವಿದ ರಮೇಶ ಚವ್ಹಾಣ, ಸಿಂಧೂರ ಮತ್ತು ತಮ್ಮ ಕಲಾ ಬದುಕಿನ ಬಾಂಧವ್ಯ ಕಳೆದ 25 ಕ್ಕೂ ಹೆಚ್ಚು ವರ್ಷಗಳಿಂದ ಇತ್ತು, ನನ್ನ ಕಲಾಕೃತಿಗಳಿಗೆ ಮಾರ್ಗದರ್ಶನ ಮಾಡುತ್ತ ಯುವ ಕಲಾವಿದರು ಬೆಳೆದರೆ ತಮಗೆ ಅತ್ಯಂತ ಖುಷಿಯ ಸಂಗತಿ, ನೀವೆಲ್ಲ ಪ್ರಾಮಾಣಿಕವಾಗಿ ಕಲಾ ಸೇವೆ ಮಾಡಿ ಎಂದು ನಮ್ಮನ್ನು ಹುರುದುಂಬಿಸಿ ತಾವು ಕಲಾಕೃತಿ ರಚಿಸುತ್ತಿದ್ದರು ಎಂದು ತಮ್ಮ ಮನದಾಳದ ಮಾತುಗಳ ಮೂಲಕ ನುಡಿ ನಮನ ಸಲ್ಲಿಸಿದರು.
ಹಿರಿಯ ಕಲಾವಿದ ವಿದ್ಯಾಧರ ಸಾಲಿ ವಿಜಯ ಸಿಂಧೂರ ಅವರ ಕುರಿತು ರಚಿಸಿದ ಕವನ ವಾಚಿಸಿದರು.
ಹಲವಾರು ಕಲಾವಿದರು ತಮ್ಮ ಮಾತುಗಳ ಮೂಲಕ ನುಡಿ ನಮನ ಸಲಿಸಿದರು.
ವೇದಿಕೆಯಲ್ಲಿ ಕಲಾ ಪೋಷಕರಾದ ವಿಶ್ವನಾಧ ಬೀಳಗಿ, ಬೆಂಗಳೂರಿನ ಬಾಲಾಜಿ ಫ್ರೇಮ್ ಮಾಲಿಕರಾದ ಪ್ರಶಾಂತ ಹೆಗಡೆ, ಜಮಖಂಡಿಯ ರಾಜು ವಿಜಯ ಸಿಂಧೂರ, ಸೋಮನಾಥ ಸಿಂಧೂರ, ಪಿ.ಎಸ್.ಕಡೇಮನಿ, ಡಾ ವಿಷ್ಣು ಎಂ ಶಿಂದೆ, ರಮೇಶ ಚವ್ಹಾಣ, ಲಿಂಗರಾಜ ಕಾಚಾಪೂರ ಇದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಎಂ.ಕೆ.ಪತ್ತಾರ. ಎಂ.ಆರ್. ಸೌದಾಗರ, ಡಾ.ಶಶಿಕಲಾ ಹೂಗಾರ ಯಾಮಿನಿ ಶಹಾ, ಮಹಾದೇವಿ ಪಾಟೀಲ, ರಾಜೇಶ್ವರಿ ಮೋಪಗಾರ, ಶ್ರೀಶೈಲ ಹೂಗಾರ, ನಿಂಗಣ್ಣ ಕೇರಿ, ಮಹಾಂತೇಶ ಸ್ವಾಮಿ, ವಿ.ವಿ.ಹಿರೆಮಠ, ಉಪಸ್ಥಿತರಿದ್ದರು.
ಕಲಾಕೃತಿಗಳ ಮೂಲಕ ಗೌರವ ನಮನ
ಇದಕ್ಕೂ ಮೊದಲು ನಡೆದ ಚಿತ್ರ ನಮನ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರುಗಳಾದ ವಿಜಯಪುರದ ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ, ರಮೇಶ ಚವ್ಹಾಣ, ಬಿ.ಎಸ್.ಪಾಟೀಲ, ಎ.ಜಿ.ನೆಲ್ಲಗಿ, ಶಿವಣ್ಣ ಗೊಳಸಂಗಿ, ರಾಘವೇಂದ್ರ ಪಾಟೀಲ, ಎಸ್. ಟಿ. ಕೆಂಭಾವಿ. ಶಿವಾನಂಧ ಅಥಣಿ, ಹಂಪಿಯ ಕೆ. ಕೆ. ಮಕಾಳಿ, ಜಮಖಂಡಿಯ ಜಿ. ವಿ. ಹಂಪಣ್ಣವರ, ಎಚ್. ಎಂ.ವಿಶ್ವನಾಥ ಧಾರವಾಡದ ಎನ್. ಆರ್. ನಾಯ್ಕರ್, ಕುಮಾರ ಕಾಟೆನಹಳ್ಳಿ, ಕಲಬುರಗಿಯ ಬಸವರಾಜ ಕಮಾಜಿ, ಬಾಗಲಕೋಟೆಯ ಶಿವು ಹೂಗಾರ ಇಲಕಲ್ಲಿನ ಚಂದ್ರಕಾಂತ ಸರೋದೆ, ಶ್ರೀಶೈಲ್ ಧೋತ್ರೆ, ಎಸ್. ಎನ್.ಪೋಚಗುಂಡಿ ತಮ್ಮ ಕಲಾಕೃತಿಗಳನ್ನು ರಚಿಸುವ ಮೂಲಕ ವಿಜಯ ಸಿಂಧೂರರವರಿಗೆ ಕಲಾಕೃತಿಗಳ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.
ರಮೇಶ ಚವ್ಹಾಣ
ಕಾರ್ಯದರ್ಶಿ ಕ್ಯಾನವಾಸ್ ಆರ್ಟ್ ಫೌಂಡೇಷನ್, ವಿಜಯಪುರ

