ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ ೧೩ ಗ್ರಾಮ ಪಂಚಾಯತನಲ್ಲಿ ಅಕ್ಟೋಬರ್ ೧೯ರಂದು ಬೆಳಿಗ್ಗೆ ೧೧ಗಂಟೆಗೆ ಪಿಂಚಣಿ ದಿನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ವಿಜಯಪುರ ಗ್ರೇಡ್ ೨ ತಹಶೀಲ್ದಾರ್ ಅವರು ಶಿವಣಗಿಯ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ, ಬಬಲೇಶ್ವರ ಗ್ರೇಡ್ ೨ ತಹಶೀಲ್ದಾರರಿಂದ ಗ್ರಾಮ ಪಂಚಾಯತ್ ಕಾರ್ಯಾಲಯ ಹೊಸುರು(ಕೃಷ್ಣಾ ನಗರ), ತಿಕೋಟಾ ಗ್ರೇಡ್ ೨ ತಹಶೀಲ್ದಾರರಿಂದ ಸಿದ್ದಾಪೂರ ಕೆ ಗ್ರಾಮ ಪಂಚಾಯತ್ ಕಾರ್ಯಾಲಯದ ಸಮುದಾಯ ಭವನ, ಬಸವನ ಬಾಗೇವಾಡಿ ಗ್ರೇಡ್ ೨ ತಹಶೀಲ್ದಾರರಿಂದ ಮುತ್ತಗಿ ಗ್ರಾಮ ಪಂಚಾಯತ್ ಕಾರ್ಯಾಲಯ, ನಿಡಗುಂದಿ ಗ್ರೇಡ್ ೨ ತಹಶೀಲ್ದಾರರಿಂದ ಯಲಗೂರ ಗ್ರಾಮ ಪಂಚಾಯತ್ ಕಾರ್ಯಾಲಯದ ಸಭಾಭವನ, ಕೋಲಾರ ತಹಶೀಲ್ದಾರರಿಂದ ತೆಲಗಿ ಗ್ರಾಮ ಪಂಚಾಯತ್ ಕಾರ್ಯಾಲಯದ ಸಭಾ ಭವನದಲ್ಲಿ ಪಿಂಚಣಿ ದಿನ ನಡೆಯಲಿದೆ.
ಮುದ್ದೇಬಿಹಾಳ ಗ್ರೇಡ್ ೨ ತಹಶೀಲ್ದಾರರಿಂದ ಮಡಿಕೇಶ್ವರ ಗ್ರಾಮಪಂಚಾಯತ್ ಆವರಣದಲ್ಲಿ, ತಾಳಿಕೋಟೆಯ ತಹಶೀಲ್ದಾರ್ ಅವರಿಂದ ಮೂಕಿಹಾಳ ಗ್ರಾಮ ಪಂಚಾಯತ್ನಲ್ಲಿ, ಇಂಡಿಯ ಗ್ರೇಡ್ ೨ ತಹಶೀಲ್ದಾರ್ ಕಪನಿಂಬರಗಿ ಗ್ರಾಮ ಪಂಚಾಯತ್ ಕಾರ್ಯಾಲಯ, ಚಡಚಣ ಗ್ರೇಡ್ ೨ ತಹಶೀಲ್ದಾರರಿಂದ ರೇವತಗಾಂವ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ, ಸಿಂದಗಿ ಗ್ರೇಡ್ ೨ ತಹಶೀಲ್ದಾರರಿಂದ ಹಂದಿಗನೂರ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ, ದೇವರ ಹಿಪ್ಪರಗಿ ಗ್ರೇಡ್ ೨ ತಹಶೀಲ್ದಾರರಿಂದ ಮಾರ್ಕೆಬ್ಬನಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಹಾಗೂ ಆಲಮೇಲ ತಹಶೀಲ್ದಾರರಿಂದ ಗುತ್ತರಗಿ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ಪಿಂಚಣಿ ದಿನ ನಡೆಯಲಿದೆ.
ಪಿಂಚಣಿದಿನದಂದು ಸಂಬಂಧಿಸಿದ ಗ್ರಾಮ ಪಂಚಾಯತಿಯ ಸಂಪೂರ್ಣ ಮಾಹಿತಿಯೊಂದಿಗೆ ಗ್ರಾಮ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಹಾಗೂ ಅಂಚೆ ಕಛೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
