ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಈ ಭಾಗದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ತಂದು ಪಟ್ಟಣದ ಅಭಿವೃದ್ಧಿಗೆ ಸದಾಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವದರ ಜೊತೆಗೆ ಆಲಮೇಲ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯ ಪಟ್ಟಣವನ್ನಾಗಿ ಮಾಡುವೆ ಎಂದು ಶಾಸಕ ಅಶೋಕ ಮನಗೂಳಿ ಹೆಳಿದರು.
ಬುಧುವಾರ ಪಟ್ಟಣದ ಡಾ,ಬಿ.ಆರ್.ಅಂಬೇಡ್ಕರ ವೃತ್ತ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು.
ಸನ್ ೨೦೧೮-೧೯ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿ ಡಾ,ಬಿ.ಆರ್.ಅಂಬೇಡ್ಕರ ವೃತ್ತ ಅಭಿವೃದ್ಧಿ ಕಾಮಗಾರಿಗೆ ೫೦ ಲಕ್ಷ ರೂಗಳನ್ನು ಮಂಜೂರಾತಿ ನೀಡಿ ಇಂದು ವೃತ್ತ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಲಾಗಿದು, ಇದೇ ತರಹ ಪಟ್ಟಣದ ಪ್ರತಿ ಬಡಾವಣೆಗಳಲ್ಲಿ ಸುಮಾರು ೫ ಕೋಟಿ ರೂಗಳ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದು,ಹಂತ ಹಂತವಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳ್ಳಿಸಿ ಸುಂದರ ಪಟ್ಟಣವನ್ನಾಗಿ ಮಾಡಲಾಗುವದು.ಅದಕ್ಕಾಗಿ ಪಪಂ ಆಡಳಿತ ಮಂಡಳಿಯವರು ಗುತ್ತಿಗೆದಾರರಿಂದ ಸರಿಯಾದ ರೀತಿಯಲ್ಲಿ ಕಾಮಗಾರಿ ಕೆಲಸ ಪೂರ್ಣಗೊಳ್ಳಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ,ಬಿ.ಆರ್.ಅಂಬೇಡ್ಕರ ವೃತ್ತ ನಿರ್ಮಾಣ ಸಮಿತಿಯ ಅಧ್ಯಕ್ಷ ಹರೀಶ ಎಂಟಮಾನ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಮಾಜದ ಬಹು ದಿನಗಳ ಕನಸ್ಸು ಇಂದು ಶಾಸಕರ ಮುಖಾಂತರ ನನಸಾಗುತ್ತಿರುವದು ಬಹಳ ಖುಷಿ ತಂದಿದೆ. ಇದೇ ತರಹ ಶಾಸಕರು ನಮ್ಮ ಪಟ್ಟಣಕ್ಕೆ ದಿನನಿತ್ಯ ಹಳ್ಳಿಗಳಿಂದ ನೂರಾರು ಜನರು ಬರುತ್ತಾರೆ ಅವರಿಗೆ ಮರಳಿ ಹೋಗಲು ಬಸ್ಸಿನ ವ್ಯವಸ್ಥೆಗಳಿಲ್ಲ,ಹಾಗೂ ರಾತ್ರಿ ೭ ಗಂಟೆಯ ನಂತರ ಪಟ್ಟಣದಿಂದ ಕಲ್ಬುರ್ಗಿ ಹಾಗೂ ಇಂಡಿಗೆ ತೆರಳಲ್ಲು ಯಾವುದೇ ಬಸ್ಸುಗಳ ಸೌಲಭ್ಯಗಳಿಲ್ಲದ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ ಕೂಡಲೇ ಶಾಸಕರು ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಎಂದು ವೇದಿಕೆಯ ಮುಖಾಂತರ ವಿನಂತಿಸಿದರು.
ಹಿರಿಯರಾದ ಜಗದೀಶ ಧಾಳಿ ಪಪಂ ಅಧ್ಯಕ್ಷ ಸಾಧೀಕ ಸುಂಬಡ ಮಾತನಾಡಿದರು.
ದೇವರಗುಡ್ಡದ ಒಡೆಯರಾದ ಡಾ.ಸಂದೀಪ ಪಾಟೀಲ, ಇಂಡಿ ಉಪ ವಿಭಾಧಿಕಾರಿ ಆಬೀದ್ ಗದ್ಯಾಳ, ಇಂಡಿ ಡಿವಾಯ್ಎಸ್ಪಿ ಜಗದೀಶ್ ಎಸ್,ಎಚ್. ತಹಶೀಲ್ದಾರ ಕೆ.ವಿಜಯಕೂಮಾರ,ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ನಾಗರೀಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ, ವೀರಭದ್ರ ಕತ್ತಿ. ಗುಂಡು ಮೇಲಿನಮನಿ, ಶಿವಾನಂದ ಜಗತಿ. ಪಪಂ ಸದಸ್ಯರಾದ ಡಾ.ಸಂಜೀವಕುಮಾರ ಎಂಟಮಾನ, ಅಶೋಕ ಕೊಳ್ಳಾರಿ, ಮುಖಂಡರಾದ ಶಿವುಕುಮಾರ ಮೇಲಿನಮನಿ,ಶಶಿ ನಾಯ್ಕೋಡಿ, ಶಶಿ ಗಣಿಹಾರ, ಜೈಭೀಮ ನಾಯ್ಕೋಡಿ ,ಪುಂಡಲೀಕ ದೊಡಮನಿ ಇದ್ದರು.

