ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಪಟ್ಟಣದ ಶರಣ ರೇವಣಸಿದ್ದ ಹೂಗಾರ ಅವರ ಮನೆಯಲ್ಲಿ ಶರಣ ಹೂಗಾರ ಮಾದಣ್ಣನವರ ಜಯಂತಿ ಆಚರಣೆ ಮಾಡಲಾಯಿತು.
ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡುತ್ತಾ ೧೨ನೇ ಶತಮಾನದಲ್ಲಿ ಕಾಯಕ ತತ್ವದಡಿಯಲ್ಲಿ ಬದುಕು ನಡೆಸಿದ ಶರಣ ಹೂಗಾರ ಮಾದಣ್ಣನವರು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇಂದು ಅವರ ಅನುಯಾಯಿಗಳು ಅವರ ತತ್ವಾದರ್ಶಗಳ ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಶಿಕ್ಷಕ ಬಾಪುಗೌಡ ಬಿರಾದಾರ ಮಾತನಾಡುತ್ತಾ ಬಸವಾದಿ ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಅವರು ಎಲ್ಲರಿಗೂ ಒಳಿತಾಗುವಂತೆ ಮಾದರಿ ಜೀವನ ನಡೆಸಿದ್ದಾರೆ ಎಂದ ಅವರು ಹೂಗಾರ ಸಮಾಜ ಎಲ್ಲಾ ಸಮಾಜಗಳೊಂದಿಗೆ ಸಹಬಾಳ್ವೆಯಿಂದ ಬದುಕುವ ಸಮಾಜವಾಗಿದೆ. ಹೂಗಾರ ಮಾದಣ್ಣ ಶರಣರು ಕೇವಲ ಒಂದು ಸಮಾಜಕ್ಕೆ ಸೀಮಿತರಾದ ಶರಣರಲ್ಲ, ಅವರ ತತ್ವಾದರ್ಶಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಆಶಾಕಿರಣ ಸೇವಾಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಬಸವರಾಜ ಚಾಂದಕವಟೆ, ಹಿರಿಯ ಸಾಹಿತಿ ಬಿ.ಎಂ ರಾವ್ ಮಾತನಾಡಿದರು.
ತಾಲೂಕಿನ ಚಿಂಚೋಳಿ ಗ್ರಾಮದ ಆನಂದಾಶ್ರಮದ ಶರಣಬಸವ ಶರಣರು ಸಾನಿಧ್ಯ ವಹಿಸಿದ್ದರು. ಹೂಗಾರ ಸಮಾಜದ ತಾಲೂಕು ಅಧ್ಯಕ್ಷ ಮಡಿವಾಳ ಹೂಗಾರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರೇವಣಸಿದ್ದ ಹೂಗಾರ, ಸುಭಾಷ ತೇಲಿ, ಡಾ. ಸಚಿನ ಹೂಗಾರ, ಸದಾಶಿವ ಮೇತ್ರಿ, ಸಿದ್ದನಗೌಡ ಮಾಲಿಪಾಟೀಲ್, ರಾಜೇಂದ್ರ ನರೋಣಿ, ರಮೇಶ ಹೂಗಾರ, ಬಸವರಾಜ ಕೆಂಗನಾಳ, ರವಿ ಗೌರ, ಶಿವಲಿಂಗ ಹೂಗಾರ, ಶಿವಶರಣ ಕುಂಬಾರ, ಬಸವರಾಜ ಹೂಗಾರ, ಶೀತಲ ತೇಲಿ, ಆರ್.ಡಿ ಪೂಜಾರಿ, ವಿಜಯಕುಮಾರ ಹೂಗಾರ, ಗೋಪಾಲ ಮಾಂಗ, ನಿಂಗಣ್ಣ ಹೂಗಾರ, ಗಿರಿಮಲ್ಲಪ್ಪ ಹೂಗಾರ ಇದ್ದರು. ಮಹಾನಂದಾ ಮಾಲಿಪಾಟೀಲ್ ವಚನ ಗಾಯನ ಮಾಡಿದರು. ವಿಜಯಲಕ್ಷ್ಮಿ ಹೂಗಾರ ಸ್ವಾಗತಿಸಿದರು. ಅರುಣಕುಮಾರ ಹೂಗಾರ ನಿರೂಪಿಸಿದರು, ಸಿದ್ದರಾಮ ಅವಟೆ ವಂದಿಸಿದರು.

