ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸೌಹಾರ್ದ ಸಹಕಾರಿಗಳ ಆರ್ಥಿಕ ಬೆಳವಣಿಗೆಯಲ್ಲಿ ಸಾಲಗಾರರು ಹಾಗೂ ಜಾಮೀನುದಾರರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ನಿರ್ದೇಶಕ ವೈ ಟಿ ಪಾಟೀಲ ಹೇಳಿದರು
ಪಟ್ಟಣದ ಶ್ರೀ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘ ನಿಯಮಿತದ 17 ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಕಾಲಕ್ಕೆ ಸಾಲ ಪಡೆಯುವ ಸದಸ್ಯರಿಗೆ, ಜಾಮೀನು ಆಗುವ ಸದಸ್ಯರು ಸಾಲ ಮರುಪಾವತಿ ವಿಷಯದಲ್ಲಿ ಸಾಲಗಾರನಷ್ಟೇ ಜವಾಬ್ದಾರಿಯನ್ನು ಹೊಂದಿರುತ್ತಾನೆ ಎಂದವರು, ಸಾಲ ಬೇಡಿಕೆ ಸಮಯದಲ್ಲಿದ್ದ ಗ್ರಾಹಕರ ಉತ್ಸಾಹ, ಹುಮ್ಮಸ್ಸು, ಸಾಲ ಮರುಪಾವತಿ ಮಾಡುವವರೆಗೂ ಉಳಿಸಿಕೊಂಡಾಗ ಸೌಹಾರ್ದ ಸಹಕಾರಿಗಳು ನಿರೀಕ್ಷಿತ ಗುರಿ ತಲುಪಲು ಸಾಧ್ಯ. ಸಹಕಾರವೇ ಸೌಹಾರ್ದ ಸಹಕಾರಿಗಳ ಆರ್ಥಿಕತೆಗೆ ತಳಹದಿ ಎನ್ನುತ್ತಾ, ಪ್ರಸಕ್ತ ಸಾಲಿನ ಡಿವಿಡೆಂಡ್ 18% ಕೊಡುವುದಾಗಿ ಘೋಷಿಸಿದರು.
ಮುಖ್ಯ ಕಾರ್ಯನಿರ್ವಾಹಕ ಸುರೇಶ ಯಾಳಗಿ 17 ನೇ ವಾರ್ಷಿಕ ಮಹಾಸಭೆಯ ನೋಟೀಸ್ ಓದಿ ಮಂಡಿಸಿದಾಗ ಸರ್ವ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಒಪ್ಪಿಗೆಯನ್ನು ಸೂಚಿಸಿದರು.
ಸಹಕಾರಿಯ ಅಧ್ಯಕ್ಷ ಶಾಂತಗೌಡ ಎಂ ಬಿರಾದಾರ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಉಪಾಧ್ಯಕ್ಷ ಶರಣಬಸವ ವಿ ಡಿಗ್ಗಾವಿ, ನಿರ್ದೇಶಕರಾದ ಸಂಗನಗೌಡ ಹೆಚ್ ಮರಡ್ಡಿ, ರಾಮನಗೌಡ ಎಸ್ ವಂದಗನೂರು, ಸಿದ್ದನಗೌಡ ವಾಯ್ ಕರಡಕಲ್, ಡಾ, ಪ್ರವೀಣ ಭೀ ಪೋಲೀಸ್ ಪಾಟೀಲ್, ಮಲ್ಲರಡ್ಡಿ ಹಚ್ ಹತ್ತಿಕುಣಿ, ಅಯ್ಯನಗೌಡ ಬಿ ಲಕ್ಕುಂಡಿ, ಸಿದ್ದನಗೌಡ ಎಸ್ ಪಾಟೀಲ್, ರವೀಂದ್ರ ಅಮ್ಮಣ್ಣ ಧರಿ, ಹಣಮಂತರಡ್ಡಿ ಆರ್ ಮರಡ್ಡಿ, ರಾಜಶೇಖರ ಪಾಟೀಲ, ಕನಕಪ್ಪ ವಂದಗನೂರು, ವೆಂಕೋಬನಾಯಕ ಜಾಗೀರದಾರ, ಸಿಬ್ಬಂದಿಗಳಾದ ಶ್ಯಾಮಸುಂದರ ವಿ ನಾಡಗೇರ, ಚಂದುಸಿಂಗ್ ಡಿ ರಜಪೂತ್, ಶಿವರೆಡ್ಡಿ ಎಸ್ ಬೋರಡ್ಡಿ, ಅಂಬ್ರೇಶ ಆರ್ ಗುಜ್ಜಲ್, ಚಂದ್ರಶೇಖರ ಫತ್ತೇಪುರ, ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

