ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ವೀರಭದ್ರೇಶ್ವರ ಸೌಹಾರ್ದ ಕ್ರೆಡಿಟ್ ಸರಕಾರಿ ಸಂಘ ನಿ. ೨೮ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಬುಧವಾರ ನಗರದ ಶುಭಶ್ರೀ ಹೋಟೆಲದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಶರಣು ಸಬರದ ಮಾತನಾಡಿ, ಸೌಹಾರ್ದ ಬ್ಯಾಂಕುಗಳು ಸೌಹಾರ್ದತೆಯಿಂದ ಕೆಲಸ ಮಾಡಬೇಕು. ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಮುಂದಾಗಬೇಕು. ರೈತರಿಗೆ, ಸೈನಿಕರಿಗೆ ಬಡ ಮಹಿಳೆಯರ ಸಣ್ಣ ವ್ಯಾಪಾರಗಳಿಗೆ ಸಾಲವನ್ನು ನೀಡಿ ಅವರು ಆರ್ಥಿಕವಾಗಿ ಸಬಲರಾಗಲು ಮುಂದಾಗಬೇಕೆಂದರು.
ಧುರೀಣ ಶಿವಾನಂದ ಭುಯ್ಯಾರ ಮಾತನಾಡಿ, ಬ್ಯಾಂಕಿನಲ್ಲಿ ಸಾಲ ಪಡೆದ ಸದಸ್ಯರು ಕೂಡ ಅಷ್ಟೇ ಜವಾಬ್ದಾರಿತನದಿಂದ ಸಾಲ ಮರುಪಾವತಿ ಮಾಡಿದಾಗ ಮಾತ್ರ ಬ್ಯಾಂಕುಗಳು ಪ್ರಗತಿಯಲ್ಲಿ ಸಾಧಿಸಲು ಶಕ್ತಿ ತುಂಬಿದಂತಾಗುತ್ತದೆ ಎಂದರು.
ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ನಿರ್ದೇಶಕ ಸುರೇಶ್ ಶೆಡಶ್ಯಾಳ ಮಾತನಾಡಿ, ಒಂದು ಬ್ಯಾಂಕ್ ಸುಸ್ಥಿತಿಯಲ್ಲಿ ಅಭಿವೃದ್ದಿ ಹೊಂದಬೇಕಾದರೆ ನಿರ್ದೆಶಕ ಮಂಡಳಿಯ ಸಹಕಾರ ಅತ್ಯಗತ್ಯ ಎಂದರು.
ಬ್ಯಾಂಕಿನ ಅದ್ಯಕ್ಷ ಸಿದ್ದಣ್ಣ ಸಕ್ರಿ ಮಾತನಾಡಿ, ನಮ್ಮ ಬ್ಯಾಂಕ್ ಬೆಳ್ಳಿ ಮಹೋತ್ಸವ ಆಚರಿಸಿದ್ದು, ನಮಗೆ ಹೆಮ್ಮೆ ತರುವ ವಿಚಾರ. ಬ್ಯಾಂಕ್ ಪ್ರಗತಿಯಲ್ಲಿದೆ ಸಾಕಷ್ಟು ವಹಿವಾಟು ಮತ್ತು ಸದಸ್ಯರಿಗೆ ಕಾಲ ಕಾಲಕ್ಕೆ ಸಾಲವನ್ನು ನೀಡಿ ಅವರು ವ್ಯಾಪಾರ ಉದ್ಯೋಗಕ್ಕೆ ಸಾಕಷ್ಟು ಸಹಕಾರಿಯಾಗಿ ನಿಂತಿದೆ ಎಂದರು.
ಈ ಸಮಯದಲ್ಲಿ ಮೆಡಿಕಲ್ ವಿದ್ಯಾಭ್ಯಾಸದ ನೆರವಿಗೆ ಕು.ರಾಜೇಶ್ವರಿ ಮಠ ಗೆ ರೂ.೧೧೦೦೦ ನಗದು ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಎಸ್.ಎಸ್.ಎಲ್.ಸಿ & ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸದಸ್ಯರ ಮಕ್ಕಳನ್ನು ಸಹ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹಾಗು ಆಡಳಿತ ಮಂಡಳಿಯ ಸದಸ್ಯರು, ವಾಸು ತಂಗಡಿ, ವಿಠ್ಠಲ ಮುಚ್ಚಂಡಿ, ಶಿವಾನಂದ ವಾಂಗಿ, ಮಲ್ಲಪ್ಪ ಸಾಲಿ, ಶಂಕರ ಸಕ್ರಿ, ಶಾಮು ಲಮಾಣಿ, ಪೂಜಪ್ಪ ಪೂಜಾರಿ, ಶಿವಾಜಿ ತಿವಾರಿ, ರಾಜೇಶ ಶಹಾ ಇದ್ದರು. ವ್ಯವಸ್ಥಾಪಕರಾದ ಎಸ್ ಎಲ್ ಹಳ್ಳದ ನಿರೂಪಿಸಿ, ವಂದಿಸಿದರು.

