ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಪ್ರತಿನಿತ್ಯ ಓಡಾಡುವ ೧೦೦ಕ್ಕೂ ಅಧಿಕ ಖಾಸಗಿ ವಾಹನಗಳು ಕೇವಲ ಪ್ರಯಾಣಿಕರ ಓಡಾಟಕ್ಕೆ ಇರಬೇಕಾದ ವಾಹನಗಳು ಅನಧಿಕೃತವಾಗಿ ಕ್ಯಾರಿಯರಗಳನ್ನು ಬಳಸಿ ಪ್ರತಿನಿತ್ಯ ಅನೇಕ ರೀತಿಯ ಸರಕುಗಳನ್ನು ಸಾರಿಗೆ ಇಲಾಖೆ ಹಾಗೂ ತೆರಿಗೆ ಇಲಾಖೆಯ ಯಾವುದೇ ಭಯವಿಲ್ಲದೇ ಸಾಗಿಸುತ್ತಿರುವುದು ಶೋಚನೀಯವಾಗಿದೆ. ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ರೈತಸಂಘದಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಇದು ಪ್ರಯಾಣಿಕರ ಜೀವದ ಪ್ರಶ್ನೆಯಾಗಿರುವುದರಿಂದ ಜಿಲ್ಲೆಯಿಂದ ಓಡಾಡುತ್ತಿರುವ ಎಲ್ಲಾ ಕ್ಯಾರಿಯರ್ ಹಾಕಿರುವ ವಾಹನಗಳನ್ನು ಜಪ್ತಿ ಮಾಡಿ ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ
ವಿಜಯಪುರದಿಂದ ಪ್ರಮುಖ ಮಾರ್ಗದಲ್ಲಿ ಸಂಚರಿಸುವ ವಿ.ಆರ್.ಎಲ್, ಎಸ್.ಆರ್.ಎಸ್, ಜನತಾ, ವರಲಕ್ಷ್ಮೀ, ಸುಗಮಾ, ಜಿ.ಪಿ, ಕೆ.ಇ.ಎಸ್, ಆರೇಂಜ್ ಸೇರಿದಂತೆ ಇತರೆ ಖಾಸಗಿ ಪ್ರಯಾಣಿಕರ ವಾಹನಗಳು ಯಾವುದೇ ಅನುಮತಿ ಇಲ್ಲದೇ ಕ್ಯಾರಿಯರ್ ಬಳಸುವುದನ್ನು ವಿರೊಧಿಸುತ್ತೇವೆ. ಇದರಿಂದ ಸರಕು ಸಾಗಾಣಿಕೆ ವಾಹನಗಳ ಮಾಲಿಕರಿಗೆ ಭಾರಿ ಪ್ರಮಾಣದ ಮೊಸ ಆಗುತ್ತಿದೆ, ಇದನ್ನು ಅತೀ ಅವಶ್ಯವೆಂದು ತಿಳಿದು ಕೂಡಲೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದರು.
ರೈತ ಸಾರಥಿ ಯೋಜನೆಯನ್ನು ಪುನಃ ಪ್ರಾರಂಭಿಸಿ ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ವಾಹನ ಚಾಲನಾ ಅನುಮತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ತಿಕೋಟಾ ತಾಲೂಕಾ ಉಪಾಧ್ಯಕ್ಷ ಶಾನೂರ ನಂದರಗಿ, ವಿಜಯಪುರ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ಉಪಾಧ್ಯಕ್ಷ ಪ್ರಕಾಶ ತೇಲಿ ಸೇರಿದಂತೆ ಅನೇಕರು ಇದ್ದರು.

