ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಪಟ್ಟಣದ ವಾರ್ಡ್ ನಂಬರ್ 14-15ರ ಕಾಟಾಪುರ ರಸ್ತೆಯಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ನಿಡಗುಂದಿಯ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಚ್ಛತಾ ಹಿ ಸೇವಾ-2024 ಸ್ವಚ್ಛತೆಯ ಘೋಷವಾಕ್ಯದ ” ಏಕ್ ಪೇಡ ಮಾ ಕಾ ನಾಮ( ತಾಯಿಯ ಹೆಸರಲ್ಲಿ) ಗಿಡ ಹಚ್ಚುವ ಕಾರ್ಯಕ್ರಮವನ್ನು ಪಪಂ ಮುಖ್ಯಾಧಿಕಾರಿ ಸಮ್ಮುಖದಲ್ಲಿ ವಾರ್ಡ್ ನಂ.14-15 ರ ಸದಸ್ಯ ಕರಿಯಪ್ಪ ಸಿಂದಗಿ ಸಸಿಗಳಿಗೆ ನೀರು ಉಳಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ವೀರೇಶ್ ಹಟ್ಟಿ ಅವರು, ಸಾರ್ವಜನಿಕರಿಗೆ ನಿಡಗುಂದಿ ಪಟ್ಟಣವನ್ನು ಸಾರ್ವಜನಿಕ ಸ್ಥಳಗಳನ್ನು ಹಸಿರಿಕರಣ ಗೊಳಿಸೋಣ, ನೆರಳಿಗಾಗಿ ಗಿಡ ನೆಡಿ’ “ಶುದ್ಧ ಗಾಳಿಗಾಗಿ ಮರ ರಕ್ಷಿಸಿ ಎಂಬುದಾಗಿ ಹೇಳಿದರು. ಅದರಂತೆ ಒಟ್ಟು 700 ಸಸಿಗಳನ್ನು ನೀಡಲಾಗುವುದು ಹಾಗೂ ಅವುಗಳಿಗೆ ತಂತಿ ಬೇಲಿಗಳನ್ನು ಹಾಕಲಾಗುವುದು ಸುಮಾರು 5,6, ದಿನಗಳವರೆಗೆ ಬೆಳಗಿನ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 8.30 ಗಂಟೆವರೆಗೆ ಸ್ವಚ್ಛತಾ ಸೇವಾ ಕಾರ್ಯಕ್ರಮಕ್ಕೆ ಕೈಜೋಡಿಸಬೇಕೆಂದು ಸಾರ್ವಜನಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಕರೆ ನೀಡಿದರು.
ಈ ಸಮಯದಲ್ಲಿ ಬಸು ವಂದಾಲ, ಗಣೇಶ್ ಕೂಚಬಾಲ, ಬಸವರಾಜ್ ಗೌಡರ್, ಹನುಮಂತ್ ಬೇವಿನಕಟ್ಟಿ, ಹನುಮಂತ್ ಗುಂಡಿನಮನಿ, ನಜೀರ್ ಪೇಡಾರಿ, ಚಂದ್ರಶೇಖರ್ ಹಳೆಮನೆ, ಸಂಜು ರಾಠೋಡ್, ಮುತ್ತು ಕಾಜಗಾರ, ಲಕ್ಷ್ಮಣ್ ವಿಭೂತಿ, ಬಸವರಾಜ್ ದಂಡಿನ್, ಈಮತಾಜ್ ಕಲಾದಗಿ, ಸಂಗಮೇಶ್ ಗೌಡರ್, ಬಸು ಗನಾಚಾರಿ, ರಾಮನಗೌಡ ಬಿರಾದಾರ್, ಬಸವರಾಜ್ ಗಣಿ, ಪ್ರಕಾಶ ಕಂಚೇರ್ ,ಎಸ್ಬಿ ಬಿರಾದಾರ್, ಸಂತೋಷ್ ಕಡಿ, ವಿಜಯ್ ಕುಮಾರ್ ಚಿನಿವಾಲರ್ ರಾಜು ವಸ್ತ್ರದ್, ಹಾಗೂ ನವ ನಿಡಗುಂದಿ ಜನಾಭಿಪ್ರಾಯ ವೇದಿಕೆಯ ಸದಸ್ಯರು, ಮತ್ತು ನಿಡಗುಂದಿ ತಾಲೂಕು ಮಾಜಿ ಸೈನಿಕರ ತಂಡ, ನಿಡಗುಂದಿ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡದವರು,
ಪಟ್ಟಣ ಪಂಚಾಯತಿಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

