ಡಾ.ಅಂಬೇಡ್ಕರ್ ನಿಗಮ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಪ್ರಕರಣ ಸಿಓಡಿ ತನಿಖೆಗೆ ಒಪ್ಪಿಸಲು ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಖೊಟ್ಟಿ ಆಧಾರ ಕಾರ್ಡ್ ಖೊಟ್ಟಿ ಜಾತಿ ಪ್ರಮಾಣ ಪತ್ರ, ಖೊಟ್ಟಿ ಪ್ರಮಾಣ ಪತ್ರ ಫಲಾನುಭವಿಗಳನ್ನು ಸೃಷ್ಟಿಮಾಡಿ ಹಣ ಲೂಟಿಮಾಡಿದ ಇಲಾಖೆಯ ಎಲ್ಲ ನಿಗಮದ ಅಧಿಕಾರಿಗಳನ್ನು ಲೋಕಾಯುಕ್ತ ತನಿಖೆ ಮಾಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ದಲಿತ ಸಂಘರ್ಷ ಸಮಿತಿ (ರಿ) ಭೀಮವಾದ ಜಿಲ್ಲಾ ಘಟಕ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಡಾ.ಬಾಬಾಸಾಹೇಬ ಅಂಬೇಡ್ಕರ್ ನಿಗಮ ವಿಜಯಪುರ ಜಿಲ್ಲಾ ವ್ಯವಸ್ಥಾಪಕರಾಗಿದ್ದ ರೇಣುಕಾ ಸಾತರ್ಲೆಯವರ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯ ಡಾ ಬಿ.ಆರ್ ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಶ್ರೀಮತಿ ರೇಣುಕಾ ಸಾತರ್ಲೆ ಫಲಾನುಭವಿಗಳಿಗೆ ಹಂಚಲಾಗಿರುವ ಹಾಗೂ ಸರಕಾರದ ಹಣ ಪಾವತಿಯಲ್ಲಿ ಆಗಿರುವ ಅವ್ಯವಹಾರ ಮಾಡಿದ್ದು ಜಿಲ್ಲೆಯ ಇಂಡಿ ತಾಲೂಕಿನ ಗುಂದವಾನ ಗ್ರಾಮದ ಮಲ್ಲಿಕಾರ್ಜುನ ಶಂಕರ ಬಗಲಿ ಇವರಿಗೆ ಸೇರಿದ ರಿ.ಸ.ನಂ. ೨೫೫/೩/ಎ ವಿಸ್ತೀರ್ಣ ೫ ಎ -೨೫ ಗುಂ ಹಾಗೂ ಶ್ರೀಮತಿ ಶಾರದಾ ಮಲ್ಲಿಕಾರ್ಜುನ ಬಗಲಿ ಇವರಿಗೆ ಸೇರಿದ ರಿ.ಸ.ನಂ. ೨೫೫/೩/ಬ ವಿಸ್ತೀರ್ಣ ೫ಎ ೨೦ ಗುಂ ಒಟ್ಟು ೧೧ಎ -೦೫-ಗು ಜಮೀನನ್ನು ಖೊಟ್ಟಿ ಫಲಾನುಭವಿಗಳನ್ನು ಸೃಷ್ಟಿಸಿ ಬೇನಾಮಿ ವ್ಯಕ್ತಿಗಳನ್ನು ಬಳಸಿಕೊಂಡು ಬೆಕಾಯ್ದೆಸಿರಿ ಸರಕಾರದ ಹಣವನ್ನು ದುರ್ಬಳಕೆ ಮಾಡಿರುತ್ತಾರೆ. ಎಲ್ಲ ಅಭಿವೃದ್ಧಿ ನಿಗಮಗಳಲ್ಲಿಯೂ ನೂರಾರು ಕೋಟಿ ಸರಕಾರದ ಹಣ ಲೂಟಿಯಾಗಿರುತ್ತದೆ. ಮೇಲಾಗಿ ರಾಜಕಾರಣಿಗಳ ಹಿಂಬಾಲಕರು ಹಾಗು ಎಜೆಂಟರುಗಳ ಮುಖಾಂತರ ನಕಲಿ ಆಧಾರ ಕಾರ್ಡ, ನಕಲಿ ಜಾತಿ ಪ್ರಮಾಣಪತ್ರ ನಕಲಿ ಆದಾಯ ಪ್ರಮಾಣಪತ್ರ ನಕಲಿ ಫಲಾನುಭವಿಗಳನ್ನು ಸೃಷ್ಟಿಮಾಡಿ ಅಭಿವೃದ್ಧಿ ನಿಗಮಗಳ ನೂರಾರು ಕೋಟಿ ಹಣ ಲೂಟಿಯಾಗಿರುತ್ತದೆ. ಕಾರಣ ಈ ಪ್ರಕರಣವನ್ನು ಬೇಗ ತನಿಖೆಗೆ ಒಪ್ಪಿಸಬೇಕೆಂದು ಎಂದು ಕರ್ನಾಟಕ ದಲಿತ ಸಂಘರ್ಷ ಸಮೀತಿ (ಭೀಮವಾದ) ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಯಲ್ಲಪ್ಪ ವಾಲಿಕಾರ, ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಕಾಳೆ, ಮಂಹಾಂತೇಶ ಕಾಳೆ, ಬಸವರಾಜ ದೇಗಿನಾಳ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

