ಡಿಜೆಗೆ ಕುಣಿದು ಸಂಭ್ರಮಿಸಿದ ಯುವಕರು | ವಿವಿಧ ಸ್ತಬ್ದ ಚಿತ್ರಗಳು | ಜಾನಪದ ಕಲಾದರ್ಶನ | ಕೋಲಾಟ – ಜಾಂಜ್
ಉದಯರಶ್ಮಿ ದಿನಪತ್ರಿಕೆ
ಗುರು ಹಿರೇಮಠ, ದೇವನಗಾಂವ
ಆಲಮೇಲ: ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಿವಿಗಡಚಿಕ್ಕುವ ಡಿಜೆ ದ್ವನಿಯಲ್ಲಿ ಕೇಕೆ ಹಾಕಿ ಹಾಡಿಗೆ ಕುಣಿದು ಸಂಭ್ರಮಿಸಿದ ಯುವಕರು, ವಿವಿದ ಸ್ತಬ್ದ ಚಿತ್ರಗಳು, ಜಾನಪದ ಕಲಾದರ್ಶನ, ಮಕ್ಕಳ ಕೋಲಾಟ, ಜಾಂಜ್ ಗಮನ ಸೆಳೆದವು.
ಮಹಾಭಾರತ ಮತ್ತು ರಾಮಯಣ ಹಾಗೂ ಹೆಸರಾಂತ ದೇವರ ಅವತಾರಗಳು, ದೇಶದ ರಾಜ ಮಹಾರಜರ, ಪಸ್ತುತ ಸನ್ನಿವೇಶಗಳಿಗೆ ತಕ್ಕಂತೆ ಸ್ತಬ್ದಚಿತ್ರ, ರೂಪಕಗಳನ್ನು ನಿರ್ಮಾಣ ಮಾಡಲಾಗಿತ್ತು. ಪಟ್ಟಣದಲ್ಲಿ ಸುಮಾರು ೧೫ ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಗಣೇಶ ೫ನೇ ದಿನಕ್ಕೆ ಏಕ ಕಾಲಕ್ಕೆ ಸಾಲಾಗಿ ವಿಸರ್ಜನೆಗೆ ಹೋಗುವದು. ಎಲ್ಲ ಗಜಾನನ ಮಂಡಳಿಯವರು ಲಕ್ಷಾನುಗಟ್ಟಲೆ ಖರ್ಚು ಮಾಡಿ ಸ್ತಬ್ದಚಿತ್ರಗಳು ತಯಾರಿಸಿ ಮೈಸೂರು ದಸರಾ, ಪುಣೆ ಮಾದರಿಯಂತೆ ಗೋಚರಿಸಿ ನೋಡುಗರನ್ನು ಮಗ್ನರನ್ನಾಗಿ ಮಾಡಿತು.
ಇಲ್ಲಿನ ಗಣೇಶ ವಿಸರ್ಜನೆ ನೂಡಲು ವಿಜಯಪುರ, ಕಲಬುರ್ಗಿ, ಯಾದಗಿರಿ, ಬಾಗಲಕೋಟ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದ ಸೋಲ್ಲಾಪೂರ, ಅಕ್ಕಲಕೋಟ, ಸಾಂಗಲಿ, ಜತ್ತ ಹಾಗೂ ಸ್ಥಳಿಯರು ಸೇರಿ ಲಕ್ಷಾನುಗಟ್ಟಲೆ ಜನ ಆಗಮಿಸಿ ಗಣೇಶ ವಿಸರ್ಜನೆ ಮೇರವಣಿಗೆ ಕಣ್ತುಂಬಿಕೊಂಡರು.
ಭಾವೈಕ್ಯದತೆಯಿಂದ ಗಣೇಶ ವಿಸರ್ಜನೆ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಎಲ್ಲ ಗಜಾನನ ಮಂಡಳಿಯವರು ಸೇರಿಕೊಂಡು ಒಂದು ಮಹಾ ಮಂಡಳಿ ರಚನೆ ಮಾಡಿ ಕಳೆದ ಹಲವಾರು ವರ್ಷಗಳಿಂದ ಮುಸ್ಲಿಂ ಧರ್ಮಿಯ ಮೈಬೂಬ ಮಸಳಿ ಇವರನ್ನು ಅಧ್ಯಕ್ಷರಾಗಿ ಮಾಡಿ ಎಲ್ಲವನ್ನು ಅಚ್ಚುಕಟ್ಟಗಿ ನಡೆಸಿಕೊಂಡು ಹೋಗುತ್ತಿರುವದು ಇಲ್ಲಿನ ಭಾವೈಕ್ಯದ ಸಂಕೇತ ಆಗಿದೆ.
ಗಮನ ಸೆಳೆದ ಸ್ತಬ್ಧಚಿತ್ರಗಳು: ೧೫ ಚೌಕಿನವರು ತಮ್ಮ ಗಣೇಶ ವಿಗ್ರಹದೊಂದಿಗೆ ಆಕರ್ಷಕ ಸ್ತಬ್ದಚಿತ್ರ ನಿರ್ಮಿಸಿದ್ದರು.
ರೇವಣಾ ಸಿದ್ದೇಶ್ವರ ಚೌಕಿನವರು ಛತ್ರಪತಿ ಶಿವಾಜಿ ಮಹಾರಾಜ ಕುದರೆ ಮೇಲೆ ಕುಳಿತು ಕೋಟೆಯಿಂದ ಹೊರಬರುತ್ತಿರುವದು, ರಾಘವೇಂದ್ರ ಚೌಕಿನವರು ಅಯೋದ್ಯಯಲ್ಲಿನ ಬಾಲ ರಾಮ ಮತ್ತು ಆಂಜನೆಯ, ಹನುಮಾನ ಚೌಕಿನವರು ದಶಾವತಾರ ರಾವಣ, ದತ್ತ ಚೌಕಿನವರು ತುಳಜಾಪೂರ ಅಂಬಾಬವಾನಿ ಮೂರ್ತಿ ಹಾಗೂ ದ್ವಾರಬಾಗಿಲ, ಕಾಮನಕಟ್ಟಿ ಚೌಕಿನವರು ಪಂಡರಾಪೂರದ ಪಾಂಡುರಂಗ ವಿಠ್ಠಲ, ಸಾವಳಗಿ ಶಿವಲೀಂಗೇಶ್ವರ ಚೌಕಿನವರು ನಂದಿ ಮೇಲೆ ಈಶ್ವರ, ಲಕ್ಷ್ಮೀ ಚೌಕಿನವರು ದ್ಯಾಮವ್ವನ ಜಾತ್ರೆ, ಅಂಬಾಭವಾನಿ ಚೌಕಿನವರು ದೇವಿ ಅವತಾರ, ವೀರಭದ್ರೇಶ್ವರ ಚೌಕಿನವರು ಆಶಾಡ ದೇವಿ ಜಾತ್ರೆ, ಗಾಂದಿ ಚೌಕ ಛತ್ರಪತಿ ಶಿವಾಜಿ ಮಹಾರಾಜ, ಬಸವ ನಗರ ಸಪ್ತ ಶೃಂಗಿ ದೇವಿ ಅವತಾರ, ಗಣೇಶ ನಗರದ ಆಧಿ ಶಕ್ತಿ ಅವತಾರ ಹೀಗೆ ಅನೇಕ ಬಗೆಯ ಸನ್ನಿವೇಶಗಳು ರಾರಾಜಿಸಿದ್ದವು.
ದಾಸೋಹ: ಉತ್ಸವ ನೋಡಲು ಬಂದವರಿಗೆ ರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವ್ಯಾಪರಸ್ಥರಾದ ಕಾಳು ಪತ್ತಾರ, ಬೀಮಾಶಂಕರ ಬಂಡಗಾರ ಸೇರಿದಂತೆ ಅನೇಕರು ಒಗ್ಗಟಾಗಿ ದಾಸೋಹ ಸೇವೆ ಕಲ್ಪಿಸಿದ್ದರು.
ಪೊಲೀಸ್ ಬಂದೋಬಸ್ತ್: ಮುಂಜಾಗ್ರತೆಯಿಂದ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಇಂಡಿ ಡಿಎಸ್ಪಿ, ಸಿಂದಗಿ ಸಿಪಿಐ ಸೇರಿದಂತೆ ಜಿಲ್ಲೆಯ ವಿವಿದ ಠಾಣೆಯ ಪಿಎಸ್ಐಗಳು, ಡಿಆರ್ ಪೊಲೀಸ್ ಸೇರಿದಂತೆ ಹೆಚ್ಚಿನ ಬಂದೊಬಸ್ತ್ ಕಲ್ಪಿಸಲಾಗಿತ್ತು.

