ಸಿಂದಗಿ ಪಟ್ಟಣದ ವಿವಿಧ ಶಾಲೆಗಳಲ್ಲಿ ಶಿಕ್ಷಕರ ದಿನ ಆಚರಣೆ
ಸಿಂದಗಿ: ಬರಿ ಅಂಕ ಗಳಿಕೆಯ ಪ್ರತಿಷ್ಠೆಗಾಗಿ ಮಕ್ಕಳನ್ನು ತಯಾರು ಮಾಡದೇ ವಿದ್ಯಾರ್ಥಿಗಳನ್ನು ಸಂಸ್ಕಾರಯುತರನ್ನಾಗಿ ಮಾಡುವುದು ಅತೀ ಅಗತ್ಯ ಎಂದು ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹೇಳಿದರು.
ಪಟ್ಟಣದ ರಾಂಪುರ ರಸ್ತೆಯಲ್ಲಿರುವ ಶ್ರೀ ಸಮರ್ಥ ವಿದ್ಯಾ ವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ, ಪ್ರೇರಣಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಗೌರವ ಸಮರ್ಪಣಾ ಹಾಗೂ ಗುರು ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೀಪದ ಬೆಳಕಿನಂತೆ ನಿಮ್ಮ ಬದುಕು ಉಜ್ವಲವಾಗಲಿ, ಹಿರಿಯರ ಆಶಯ ಕಿರಿಯರಿಗೆ ವರವಾಗಲಿ. ಪರೀಕ್ಷೆಯಲ್ಲಿ ಸತತ ಸಾಧನೆಯ ಗುರಿ ಶಿಖರಕ್ಕೆರಲಿ. ಈ ಹೊನ್ನ ಬೆಳಕು ಪ್ರತಿಯೊಬ್ಬರಿಗೂ ಆಸರೆಯಾಗಿ ಬಾಳು ಹಸನಾಗಲಿ. ಕುಲಕರ್ಣಿ ಸಹೋದರರ ಈ ಸಾಧನೆ ಅನನ್ಯ ಎಂದು ಶ್ಲಾಘಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಸಮಾಜದಲ್ಲಿ ಗುರು ಶಿಲ್ಪಿಯಂತೆ, ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಸುಂದರ ಶಿಲ್ಪಿಯನ್ನಾಗಿ ರೂಪಿಸುವುದು ಅಗತ್ಯ. ಒಳ್ಳೆಯ ವಿದ್ಯಾರ್ಥಿಗೆ ಒಳ್ಳೆಯ ಶಿಕ್ಷಕರ ಬಲವರ್ಧನೆ ಹಾಗೂ ಸಹಕಾರ ಸಿಕ್ಕಾಗ ಪ್ರಗತಿ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತರಾದ ಮಹಾದೇವಿ ಪಾಟೀಲ, ರೇಖಾ ಕುಲಕರ್ಣಿ, ಜೆ ಪಿ ಕುಲಕರ್ಣಿ, ವೈಜನಾಥ ಅಂಕಲಗಿ, ಎಸ್.ಎಸ್.ಮಾಣಸುಣಗಿ, ಎಂ ಎಂ ಆಲಮೇಲ, ಶ್ರೀರಂಗರಾವ್ ಖೇಡಗಿಕರ, ಗಾಲಿಬ ಕೆಳಗಿನಮನಿ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ವೇಳೆ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಶ್ರೀಮತಿ ಎಸ್.ಐ ಅಸ್ಕಿ, ಶ್ರೀಮತಿ ಎಂ ಪಿ ಬುಕ್ಕಾ, ಸತೀಶ್ ಕುಲಕರ್ಣಿ ಸೇರಿದಂತೆ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಶ್ರೀಗುರು ಕೃಪಾ ಶಾಲೆ
ಪಟ್ಟಣದ ಸೋಂಪುರ ರಸ್ತೆಯ್ಲಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ಈ ವೇಳೆ ಶಾಲೆಯ ಮುಖ್ಯಗುರುಮಾತೆ ಹೇಮಾ ಪೋದ್ದಾರ, ಆಡಳಿತಾಧಿಕಾರಿ ಹಣಮಂತ ಪೋದ್ದಾರ, ಶಿಕ್ಷಕರಾದ ಶೃತಿ ಕುಲಕರ್ಣಿ, ಪ್ರಸನ್ನ ಕುಲಕರ್ಣಿ, ಹರೀಶ ಪೊದ್ದಾರ, ವಿಶಾಲ ಹಿರೇಮಠ, ಸವಿತಾ ಬನಗುಂಡಿ, ಭಾರತಿ ಬಿರಾದಾರ, ಪೂಜಾ ದಸ್ಮಾ, ಆಲಿಯಾ ಸೀತನೂರ, ವರ್ಷಾ ಜೋಷಿ, ಮಯೂರಿ ಜಮಾದಾರ, ರೇಣುಕಾ ಬಿರಾದಾರ, ಸಹನಾ ಪರೂತಿ, ನೇತ್ರಾ ವಸ್ತ್ರದ, ಆರ್.ಬಿ.ಬಿರಾದಾರ, ಬಸು ಮಾಳೆಗಾರ ಶಶೀಧರ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.
ವಿದ್ಯಾಚೇತನ ಶಾಲೆ
ಪಟ್ಟಣದ ಹೂಗಾರ ಲೇಔಟ್ನಲ್ಲಿರುವ ವಿದ್ಯಾಚೇತನ ಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುಸುಮಾ ಯಾಳಗಿ, ಸಕ್ಕುಬಾಯಿ ಡಾಂಗಿ, ವಿಕಾಸ ಚೌರ, ಅಕ್ಷಯ ದೀಕ್ಷಾ, ಸುಮಾ ಬಿರಾದಾರ, ರೂಪಾ, ಪ್ರಗತಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

