ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
ಇಂಡಿ: ಇಡೀ ಪ್ರಪಂಚದಲ್ಲಿ ಶಿಕ್ಷಕರು ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ಸಮೂಹ. ಆದ್ದರಿಂದಲೇ ಶಿಕ್ಷಕರು ಜಗತ್ತಿನಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಓರ್ವ ಶಿಕ್ಷಕ ರಾಷ್ಟ್ರದ ಪ್ರಥಮ ಪ್ರಜೆಯಾಗಿ ಕಂಡಿದ್ದು ಭಾರತದಲ್ಲಿ ಮಾತ್ರ. ಆದರೆ ಈ ಶಿಕ್ಷಕರನ್ನು ದೇವ ಎಂದು ಕಾಣುವ ವಿಶೇಷತೆ ನಮ್ಮ ಭಾಗದಲ್ಲಿ ಮಾತ್ರ ಕಾಣುತ್ತೆವೆ. ವಿದ್ಯಾರ್ಥಿ ಭವಿಷ್ಯ ಬೆಳಗಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಗುರುಭವನದಲ್ಲಿ ಜಿ.ಪಂ ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ತಾಲೂಕು ಆಡಳಿತ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಸಹಯೋಗದಲ್ಲಿ ನಡೆದ ಭಾರತ ರತ್ನ ಡಾ. ಎಸ್ ರಾಧಾ ಕೃಷ್ಣನ್ ರವರ ಜನ್ಮದಿನೋತ್ಸವದ ಕಾರ್ಯಕ್ರಮ ಅಧ್ಯಕ್ಷತೆವಹಿಸಿ, ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಜನತೆ ಅಥರ್ಗಾ ರೇವಣಸಿದ್ದರನ್ನು ಮತ್ತು ನಿಂಬಾಳದ ರಾನಡೆ ಮಹಾರಾಜರನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು. ಶಿಕ್ಷಕ, ಗುರು ಬರಿದಾಗದ ಅಕ್ಷಯಪಾತ್ರೆ. ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಮಾಡಹೊರಟಿರುವ ಅಪರೂಪದ ರೂವಾರಿ, ಇಡೀ ಸಮುದಾಯವೇ ಈ ಕಾರಣಕ್ಕೆ ಶಿಕ್ಷಕರನ್ನು ಗೌರವಿಸುತ್ತದೆ ಎಂದರು.
ಗುರುದೇವ ಆಶ್ರಮ ಕಾತ್ರಾಳದ ಡಾ.ಅಮೃತಾನಂದ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು.
ಕಂದಾಯ ಉಪ ವಿಬಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ತಾಯಿ ಜೀವ ಕೊಟ್ಟರೆ, ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಶಿಕ್ಷಕ ಸುಂದರ ಬದುಕು ನೀಡುತ್ತಾನೆ. ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಿ ನೀವು ನೀಡುತ್ತಿರುವ ವಿದ್ಯೆ ಶ್ರೇಷ್ಠ. ನೀವು ಪಡೆಯುತ್ತಿರುವುದು ಸಂಭಾವನೆ ಅಲ್ಲ, ಅದು ಗೌರವಧನ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ಪ್ರಕಾಶ ನಾಯಕ, ಆನಂದ ಹುಣಸಗಿ, ಬಸವರಾಜ ಗೊರನಾಳ ಮಾತನಾಡಿದರು.
ವೇದಿಕೆಯ ಮೇಲೆ ಸಿದ್ದರಾಮೇಶ್ವರ ಪಟ್ಟದದೇವರು, ಬಸವಾನಂದ ಶ್ರೀಗಳು, ತಹಸೀಲ್ದಾರ ಬಿ.ಎಸ್. ಕಡಕಬಾವಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಲ್.ಸಿ. ಗಿರಣ ವಡ್ಡರ, ಅಲ್ಲಾಬಕ್ಷ ವಾಲಿಕಾರ, ಎ.ಓ.ಹೂಗಾರ, ಸುಜಾತಾ ಪೂಜಾರಿ, ಎಸ್.ಡಿ. ಪಾಟೀಲ, ಎಸ್.ಆರ್. ಪಾಟೀಲ, ವಾಯ್.ಟಿ. ಪಾಟೀಲ, ನಿಜಣ್ಣಾ ಕಾಳೆ, ಎಂ.ಎಚ್. ಬ್ಯಾಳಿ, ಪಿ.ಜಿ. ಕಲ್ಮನಿ, ಪ್ರಕಾಶ ಐರೋಡಗಿ, ಶಂಕರ ಕೋಳೆಕರ, ಜಾವೀದ ಮೋಮಿನ್, ಭೀಮಣ್ಣ ಕವಲಗಿ ಸೇರಿದಂತೆ ಇನ್ನಿತರರು ಇದ್ದರು.
ಕಾರ್ಯಕ್ರಮದ ವಿಳಂಬದ ಹಿನ್ನೆಲೆಯಲ್ಲಿ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ದಕ್ಷತೆ, ಕ್ರಿಯಾಶೀಲತೆ ಹಾಗೂ ಕಾರ್ಯಾಲಯದಲ್ಲಿ ಪಾಲ್ಗೊಳ್ಳುವ ಮನಸ್ಸಿರಬೇಕು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಸಲಹೆ ನೀಡಿದರು.

