ಮುದ್ದೇಬಿಹಾಳ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಹಿರಂಗ ಸಭೆಗಳಿಗೆ ಬ್ರಿಟೀಷರು ಕಡಿವಾಣ ಹಾಕಿದ್ದರಿಂದ, ಸಂಘಟಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಗಣೇಶ ಪ್ರತಿಷ್ಠಾಪನೆಯ ಹಬ್ಬ ಬರಬರುತ್ತ ಕಳೆ ಕಳೆದುಕೊಂಡಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ನಂದಿಕೇಶ್ವರಮಠ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಅಂಗವಾಗಿ ಏರ್ಪಡಿಸಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಗಣಪನ ಹಬ್ಬ ಇಂದು ಕಳೆ ಕಳೆದುಕೊಳ್ಳುತ್ತಿದೆ. ಪೊಲೀಸರು ಶಾಂತಿ ಸಭೆ ನಡೆಸೋವಷ್ಟು ನಾವು ಹಬ್ಬವನ್ನು ಹಾಳು ಮಾಡಿದ್ದೇವೆ. ಬಹಿರಂಗ ಪ್ರತಿಷ್ಠಾಪನೆ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದು, ಮಧ್ಯ ಸೇರಿದಂತೆ ಇನ್ನೀತರ ಅಮಲಿನಲ್ಲಿ ಕುಣಿಯುವುದು ಮಾಡುತ್ತಿದ್ದೇವೆ. ಇದೆಲ್ಲವನ್ನೂ ಈ ವರ್ಷದಿಂದಲೇ ಕೊನೆಗೊಳಿಸಿ ಶ್ರದ್ಧಾ ಭಕ್ತಿಯಿಂದ, ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸೋಣ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ, ನಿಯಮಗಳನ್ನು ಪಾಲಿಸಿ ಶಾಂತಿ ಮತ್ತು ಸೌಹಾರ್ಧಯುತವಾಗಿ ಹಬ್ಬವನ್ನು ಆಚರಿಸಿ ಎಂದರು.
ಪಿಎಸ್ಐ ಸಂಜಿವ ತಿಪರೆಡ್ಡಿ ಮಾತನಾಡಿ, ಹಬ್ಬದಲ್ಲಿ ಯಾರಾದರೂ ದಾಂಧಲೆ ಮಾಡುವದು ಕಂಡು ಬಂದರೆ ಅಂಥವರ ಮೇಲೆ ಮುಲಾಜಿಲ್ಲದೇ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಮಾಜಿ ಸದಸ್ಯ ಪಿಂಟು ಸಾಲಿಮನಿ, ಮುಖಂಡ ಉದಯ ರಾಯಚೂರ ಮಾತನಾಡಿ, ಸಲಹೆ ಸೂಚನೆಗಳನ್ನು ನೀಡಿದರು.
ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ ಪ್ರಮುಖರಾದ ಹುಸೇನ ಮುಲ್ಲಾ, ರವಿ ನಾಯಕ, ಮುತ್ತು ಟಕ್ಕಳಕಿ, ರಾಹುಲ ದೊಡಮನಿ, ದೀಪಕ ಜಾಧವ, ಮಾಂತು ದೇಗಿನಾಳ, ಅಭಿಷೇಕ ಪಾಟೀಲ, ವಿಲಾಸ ಮೂಲಮನಿ, ಶಂಕರ ಕತಹಳ್ಳಿ, ವಿಜಯ ಪೂಜಾರಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

