ಮುದ್ದೇಬಿಹಾಳ: ಮಹಾರಾಷ್ಟ್ರದ ರಾಮಗಿರಿ ಮಹಾರಾಜ ಇಸ್ಲಾಮ ಧರ್ಮದ ಪ್ರವಾದಿ ಮಹ್ಮದ ಪೈಗಂಬರರ ಕುರಿತು ಮಾತನಾಡಿರುವದನ್ನು ಖಂಡಿಸಿ ಸ್ವಾಮೀಜಿ ವಿರುದ್ದ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ತಾಲೂಕಾ ಮುಸ್ಲಿಂ ಪೋರಂ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಟಿಪ್ಪು ಸುಲ್ತಾನ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಸರಾಫ ಬಜಾರ, ಬಸವೇಶ್ವರ ವೃತ್ತ, ಹೈದರಾಲಿ ಸರ್ಕಲ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಸೀಲ್ದಾರ ಕಚೇರಿಯವರೆಗೆ ಸಾಗಿತು.
ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮುಖಂಡ ಎಚ್.ಆರ್.ಬಾಗವಾನ ಮಾತನಾಡಿ, ಜಗತ್ತಿನ ಜನತೆಯ ಒಳಿತನ್ನು ಬಯಸುವದು ಇಸ್ಲಾಂ ಧರ್ಮ. ದೇಶದಲ್ಲಿ ಎಲ್ಲ ಧರ್ಮೀಯರು ಅತ್ಯಂತ ಸೌಹಾರ್ಧಯುತವಾಗಿ ಬಾಳುತ್ತಿದ್ದೇವೆ. ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಪುಟ್ಟ ಗ್ರಾಮದಲ್ಲಿರುವ ಈ ಸ್ವಾಮೀಜಿ ನಮ್ಮ ಪ್ರವಾದಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನಮ್ಮ ಮನಸ್ಸಿಗೆ ಬೇಸರವನ್ನುಂಟು ಮಾಡಿದೆ. ಕೂಡಲೇ ರಾಮಗಿರಿ ಮಹಾರಾಜನನ್ನ ಬಂಧಿಸಿ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಈ ವೇಳೆ ಹಿರಿಯ ಪತ್ರಕರ್ತ ಹಾಗೂ ನ್ಯಾಯವಾದಿ ಕೆ.ಎಂ.ರಿಸಾಲದಾರ ಮಾತನಾಡಿ, ಇಡೀ ಮಾನವ ಕುಲಕ್ಕೆ ಒಳ್ಳೆಯ ಸಂದೇಶವನ್ನು ಸಾರಿದವರು ಪ್ರವಾದಿ ಮಹಮ್ಮದ ಪೈಗಂಬರರು. ಅಂಥವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ಖಂಡನೀಯ. ಸಧ್ಯ ಮುಸ್ಲೀಂ ಧರ್ಮದವರ ಮೇಲೆ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಧೋರಣೆಯನ್ನ ನಿಲ್ಲಿಸಿ ಸೌಹಾರ್ಧಯುತ ಬಾಳ್ವೆಯತ್ತ ಹೆಜ್ಜೆ ಹಾಕಬೇಕು ಎಂದರು.
ಮೌಲಾನಾ ಅಲ್ಲಾಭಕ್ಷ ಖಾಜಿ, ಮುಫ್ತಿ ಅಫ್ತಾಬ, ಮುಫ್ತಿ ಇರ್ಫಾನ, ಡಾ.ಎ.ಎ.ಮುಲ್ಲಾ, ಸಮೀರ ಹುಣಸಗಿ, ಪಿಂಟು ಸಾಲಿಮನಿ ಮತ್ತೀತರರು ಮಾತನಾಡಿ ಘಟನೆಯನ್ನು ಖಂಡಿಸಿ ಸ್ವಾಮೀಜಿಗೆ ಕಾನೂನು ಶೀಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ನ್ಯಾಯವಾದಿ ಎನ್.ಬಿ.ಮುದ್ನಾಳ ಮನವಿ ಪತ್ರವನ್ನು ಓದಿದರು. ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯ ಮುಖಂಡ ಪಿ.ಬಿ.ಮಾತಿನ್ ವಕೀಲರು, ಪುರಸಭೆ ಸದಸ್ಯರುಗಳಾದ ಮಹೆಬೂಬ ಗೊಳಸಂಗಿ, ರಿಯಾಜ ಢವಳಗಿ, ಮುಖಂಡರಾದ ಯುಸೂಫ ನಾಯ್ಕೋಡಿ, ಮುನ್ನಾ ಚೌದರಿ, ಆಸೀಫ ನಿಡಗುಂದಿ, ಮಹೆಬೂಬ ಬಾಗವಾನ(ಆರ್.ಕೆ) ಸೇರಿದಂತೆ ೫೦೦ ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
ಸ್ವಾಮೀಜಿ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಮುಸ್ಲಿಂ ಪೋರಂ ಪ್ರತಿಭಟನೆ
Related Posts
Add A Comment

