ದೇವರಹಿಪ್ಪರಗಿ: ಜನಪರ ಸೇವೆಗೆ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಸಮಾಜದ ಋಣ ತೀರಿಸುವ ಕಾಯಕ ಮಾಡುತ್ತೇನೆ. ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನೇಮಕಕ್ಕೆ ಕಾರಣರಾದವರ ಹೆಸರು ತರುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಕೆಡಿಪಿ ಸದಸ್ಯ ನೂರಅಹಮ್ಮದ ಅತ್ತಾರ ಹೇಳಿದರು.
ಪಟ್ಟಣದ ಖ್ಯಾತ ನ್ಯಾಯವಾದಿ ಎ.ಎಂ.ತಾಂಬೋಳಿ ಗೆಳೆಯರ ಬಳಗದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಗುರುತರ ಜವಾಬ್ದಾರಿ ನೀಡಿದೆ. ನನ್ನ ನೇಮಕ ಮಾಡಲು ಶಾಸಕ ಅಶೋಕ ಮನಗೂಳಿ ಸಹಕಾರ ನೀಡಿ ಶಿಫಾರಸ್ಸು ಮಾಡಿದ್ದರಿಂದ ನನ್ನ ನೇಮಕವಾಗಿದೆ. ಮೊದಲಿನಿಂದಲೂ ನನ್ನ ಮೇಲೆ ಮನಗೂಳಿ ಮನೆತನದ ಭರವಸೆಯಿದೆ. ಶಾಸಕ ಅಶೋಕ ಮನಗೂಳಿ ಯಾವುದೇ ಬೇದಭಾವ ಮಾಡದೆ ನನ್ನನ್ನು ಜಿಲ್ಲಾ ಕೆಡಿಪಿ ಸದಸ್ಯನ್ನನಾಗಿಸಿ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮಾಡುತ್ತೇನೆ, ತಮ್ಮೆಲ್ಲರ ಸಹಕಾರ ಇರಲಿ ಎಂದರು.
ಖ್ಯಾತ ನ್ಯಾಯವಾದಿ ಎ.ಎಂ.ತಾಂಬೋಳಿ ಮಾತನಾಡಿ, ನೂರಅಹಮ್ಮದ ಅತ್ತಾರ ಅವರು ಶ್ರಮಜೀವಿಗಳಾಗಿದ್ದು, ಉತ್ತಮ ಸಂಘಟಕರಾಗಿದ್ದಾರೆ. ಇವರ ಶ್ರಮಕ್ಕೆ ತಕ್ಕ ಹುದ್ದೆ ದೊರೆತಿದ್ದು, ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮೃದ್ಧಿ ಸಹಕಾರಿ ಸಂಘದ ನಿರ್ದೇಶಕ ಎ.ಕೆ.ಹಿರೇಮಠ, ಶಿಕ್ಷಕ ಕಬೂಲ್ ಕೊಕಟನೂರ, ವಕೀಲ ಶಾಹೀದ್ ಶೇಖ ಸೇರಿದಂತೆ ಮತ್ತೀತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

