Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಟ್ಟಿಹಾಳದಲ್ಲಿ ಪಡಿತರ ವಿತರಣಾ ಕೇಂದ್ರ ಪ್ರಾರಂಭಿಸಲು ಆಗ್ರಹ
(ರಾಜ್ಯ ) ಜಿಲ್ಲೆ

ಮಟ್ಟಿಹಾಳದಲ್ಲಿ ಪಡಿತರ ವಿತರಣಾ ಕೇಂದ್ರ ಪ್ರಾರಂಭಿಸಲು ಆಗ್ರಹ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೊಲ್ಹಾರ: ಮಟ್ಟಿಹಾಳ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರ ಪ್ರಾರಂಭಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯರೈತ ಸಂಘ, ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ ಮತ್ತು ಮಟ್ಟಿಹಾಳ ಗ್ರಾಮಸ್ಥರು ಕೊಲ್ಹಾರ ತಹಸೀಲ್ದಾರ ಹಾಗೂ ತಾಲೂಕಾ ಆಹಾರ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ತಹಸೀಲ್ದಾರ ಎಮ್.ರೇಣುಕಾರವರಿಗೆ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ಕೊಲ್ಹಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ನಾಗರದಿನ್ನಿ ಗ್ರಾಮವು ಮಟ್ಟಿಹಾಳದಿಂದ ೨.೫ ಕಿ.ಮೀ ದೂರವಿದ್ದು ತಿಂಗಳ ಪಡಿತರ ತರಲು ಒಂದು ದಿನ ತಮ್ಮ ಕೆಲಸಗಳನ್ನು ಬಿಟ್ಟು ತರುವಂತಾಗಿದ್ದು ೩೫೦ ಕ್ಕಿಂತಲೂ ಅಧಿಕವಿರುವ ಪಡಿತರದಾರರಿಗೆ ಅನುಕೂಲವಾಗಲು ಮಟ್ಟಿಹಾಳ ಗ್ರಾಮದಲ್ಲಿಯೇ ಸರಕಾರವು ಪಡಿತರ ವಿತರಣಾ ಕೇಂದ್ರವನ್ನು ತೆರಯಬೇಕೆಂದು ಹೇಳಿದರು.
ಮಟ್ಟಿಹಾಳ ಗ್ರಾಮದ ಪಡಿತರರಾದ ಶೋಭಾ ಸೊನ್ನದ ಮಾತನಾಡಿ, ವಯಸ್ಸಾದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ ನಾಗರದಿನ್ನಿ ಗ್ರಾಮಕ್ಕೆ ಹೋಗಿ ರೇಶನ್ ತರುವುದು ಬಹಳ ಕಷ್ಟಕರವಾಗಿದೆ. ಹೋಗಿ ಬರಲು ಸರಿಯಾದ ವಾಹನ ಸೌಕರ್ಯವಿಲ್ಲ ನಡೆದುಕೊಂಡು ಹೋಗಿ ತರಬೇಕು ತರುವಾಗ ರಸ್ತೆ ಮೂಲಕ ಸಂಚರಿಸುವ ಅಪರಿಚಿತ ಬೈಕ್ ಸವಾರರನ್ನು ಅವಲಂಬಿಸಬೇಕಾಗುತ್ತದೆ. ಆದಕಾರಣ ಮಟ್ಟಿಹಾಳ ಗ್ರಾಮದಲ್ಲಿ ಪಡಿತರ ವಿತರಣಾಕೇಂದ್ರ ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ತಹಸೀಲ್ದಾರ ಎಮ್.ರೇಣುಕಾ ಮಾತನಾಡಿ ಚುನಾವಣೆ ಮುಗಿದ ನಂತರ ಮಟ್ಟಿಹಾಳ ಗ್ರಾಮಕ್ಕೆ ಒಂದು ಹೊಸ ಪಡಿತರ ವಿತರಣಾ ಕೇಂದ್ರವನ್ನು ಪ್ರಾರಂಭಿಸಲಾಗುವದು. ಅಲ್ಲಿಯವರೆಗೆ ಈ ತಿಂಗಳು ತಾತ್ಕಾಲಿಕವಾಗಿ ಮಟ್ಟಿಹಾಳದಲ್ಲಿ ರೇಶನ್ನು ಹಂಚುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ತಾಲೂಕಾ ಆಹಾರ ನಿರೀಕ್ಷಕ ಎಮ್.ಎಸ್.ಗುತ್ತರಗಿ ಮಾತನಾಡಿ ಈ ತಿಂಗಳು ಮಟ್ಟಿಹಾಳ ಗ್ರಾಮದಲ್ಲಿಯೇ ರೇಶನ್ ಹಂಚುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶಶಿಕಾಂತ ಬಿರಾದಾರ, ಪರಸು ಈಟಿ, ಶ್ರೀಶೈಲ ಬಾಡಗಿ, ಗುರುನಗೌಡ ಬಿರಾದಾರ, ಸುರೇಶ ಪೂಜಾರಿ, ಗೌಡಪ್ಪ ಆಸಂಗಿ, ಈಶ್ವರ ಚಲವಾದಿ, ಮುತ್ತಪ್ಪ ಚಲವಾದಿ, ಮಾದೇವಪ್ಪ ಚಲವಾದಿ, ಶೋಭಾ ಸೊನ್ನದ, ನಿಂಗಮ್ಮ ಅರಕೇರಿ, ಲಕ್ಷೀಬಾಂಯಿ ಹಿರೇಮಠ, ಶಾಂತವ್ವ ಚಲವಾದಿ, ನೀಲವ್ವ ದೊಡಮನಿ, ಶಾಂತವ್ವ ದೊಡಮನಿ, ಮುಕ್ತಾಬಿ ಬಾಗಾನಗರ, ಯಾಸ್ಮಿನ ಬಾಗಾನಗರ,ಶೈಲಾ ಚಲವಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

BIJAPUR NEWS public public news udayarashminews.com
Share. Facebook Twitter Pinterest Email Telegram WhatsApp
  • Website

Related Posts

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ
    In (ರಾಜ್ಯ ) ಜಿಲ್ಲೆ
  • ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ
    In ವಿಶೇಷ ಲೇಖನ
  • ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಕ್ರೀಡೆಯಲ್ಲಿ ಮಕ್ಕಳ ಆರೋಗ್ಯ ಅಡಗಿದೆ :ಎಸ್.ಕೆ.ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ: ಡಿ.೧ ರಂದು ಬೃಹತ್ ಹೋರಾಟಕ್ಕೆ ಕರೆ
    In (ರಾಜ್ಯ ) ಜಿಲ್ಲೆ
  • ಹಿರಿಯರನ್ನು ಗೌರವಿಸುವುದು ಯುವಪೀಳಿಗೆ ಜವಾಬ್ದಾರಿ :ಪ್ರೊ.ಹಿರೇಮಠ
    In (ರಾಜ್ಯ ) ಜಿಲ್ಲೆ
  • ಡಾ.ಸರೋಜನಿ ಮಹಿಷಿ ವರದಿ ಜಾರಿಗೆ ಕದಂಬ ಸೈನ್ಯ ಆಗ್ರಹ
    In (ರಾಜ್ಯ ) ಜಿಲ್ಲೆ
  • ವಿದೇಶಕ್ಕೆ ಹೊರಟ ಗ್ರಾಮೀಣ ಪ್ರತಿಭೆ ಪ್ರೀತಿ ಆನೆಗುಂದಿ
    In (ರಾಜ್ಯ ) ಜಿಲ್ಲೆ
  • ನಬಿರೋಶನ್ ಪ್ರಕಾಶನದಿಂದ ಮಹಾಂತೇಶ ಅವರಿಗೆ ನುಡಿ ನಮನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.