ದೇವರಹಿಪ್ಪರಗಿ: ಮಣ್ಣೂರ ಗ್ರಾಮದ ತಾಂಡಾದ ಎಲ್.ಟಿ ೧ರಲ್ಲಿನ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಜಾಗದ ಅಳತೆಯನ್ನು ಹದ್ದುಬಸ್ತು ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿಮಂದಿರಕ್ಕೆ ಗುರುವಾರ ಆಗಮಿಸಿದ ಮಣೂರ ತಾಂಡಾದ ಸಾರ್ವಜನಿಕರು ತಹಶೀಲ್ದಾರರನ್ನು ಕಂಡು ಮಾತನಾಡಿ, ಶಾಲೆಗೆ ಕಂಪೌಂಡ್ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಎನ್.ಆರ್.ಇ.ಜಿಯಡಿ ಸುಮಾರು ೬ ಲಕ್ಷ.ರೂಗಳ ಕ್ರೀಯಾಯೋಜನೆ ಸಿದ್ಧಪಡಿಸಲಗಿದೆ. ಶಾಲೆಯ ಜಾಗೆಯ ಆಸ್ತಿ ನಂ ೯೭೪ ಇದ್ದು, ಚಕಬಂದಿ ಪ್ರಕಾರ ೧೨೫ ಅಡಿ ಉದ್ದ, ೧೨೫ ಅಡಿ ಅಗಲ ಅಳತೆ ಹೊಂದಿದೆ. ಈಗ ಇದನ್ನು ಸಾರ್ವಜನಿಕರು ಅತೀಕ್ರಮಣ ಮಾಡದಂತೆ ತಡೆಯಲು ಸುತ್ತಲೂ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ ಈಗಾಗಲೇ ಸುತ್ತಮುತ್ತಲಿನವರು ತಮ್ಮ ಮನೆಗಳ ಜೊತೆಗೆ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಈಗ ಕಂಪೌಂಡ್ ನಿರ್ಮಿಸಲು ಅಡಚಣೆ ಉಂಟು ಮಾಡುತ್ತಿದ್ದಾರೆ.
ಅಡಚಣೆ ಕುರಿತು ಗ್ರಾಮ ಪಂಚಾಯಿತಿ ಹಾಗೂ ಎಸ್ಡಿಎಮ್ಸಿ ಅಧ್ಯಕ್ಷರು, ಶಾಲೆಯ ಮುಖ್ಯಶಿಕ್ಷಕರು ಈಗಾಗಲೇ ಸಾಕಷ್ಟು ತಿಳಿಹೇಳಿದ್ದರು ಅನಗತ್ಯ ತಕರಾರು ಮಾಡುತ್ತಿದ್ದಾರೆ. ಶಾಲೆಯ ಸುಧಾರಣೆಗಾಗಿ ಹಾಗೂ ಶಾಲಾ ಆಸ್ತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಕಂಪೌಂಡ್ ಅಗತ್ಯವಾಗಿದ್ದು ಕೂಡಲೇ ಜಾಗೆಯನ್ನು ಅಳತೆ ಮಾಡಿಕೊಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಎಸ್ಡಿಎಮ್ಸಿ ಅಧ್ಯಕ್ಷ ಷಣ್ಮುಖ ನಾಯಿಕ್, ಉಮೇಶ, ಯುವರಾಜ, ರಾಜು, ವಿನೋದ ಶೆಟ್ಟಿ, ರಾಹುಲ, ಸುನೀಲ, ರಾಜೇಶ ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
ಸರ್ಕಾರಿ ಶಾಲೆ ಜಾಗದ ಅಳತೆ ಹದ್ದುಬಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಮನವಿ
Related Posts
Add A Comment

