ವಿಜಯಪುರ ಮಹಾನಗರ ಪಾಲಿಕೆ ನೂತನ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅಭಿಮತ
ವಿಜಯಪುರ: ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜ್ಞಾನ ಪಸರಿಸುವಲ್ಲಿ ಇಂತಹ ದತ್ತಿ ಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೇಡರೇಶನ ಅಧ್ಯಕ್ಷ ಡಾ ಜಾವೀದ ಜಮಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲಾ, ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಲಿಂ.ಮಾತೋಶ್ರೀ ಗುರವ್ವ ಹೊರಟ್ಟಿ ದತ್ತಿ ಕಾರ್ಯಕ್ರಮದಲ್ಲಿ
ಅವಿಭಕ್ತ ಕುಟುಂಬ ಕುರಿತ ಚಿಂತನ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡುತ್ತಾ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ದತ್ತಿ ಗೋಷ್ಠಿಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ವಿಶೇಷ ಸನ್ಮಾನಿತರಾದ ಮುಖ್ಯಮಂತ್ರಿಗಳಿಂದ ಶ್ರೇಷ್ಠ ಶಸ್ತ್ರ ಚಿಕಿತ್ಸಕ ಪ್ರಶಸ್ತಿ ಪುರಸ್ಕೃತ ಡಾ ಶಿವಾನಂದ ಮಾಸ್ತಿಹೊಳಿ ಮಾತನಾಡಿ, ನನ್ನದು ಅವಿಭಕ್ತ ಕುಟುಂಬ. ಚಿಕ್ಕ ಮನೆಯಲ್ಲಿ ಎಂಟು ಜನ ಸಹೋದರ, ಸಹೋದರಿಯರು ಕೂಡಿ ಆನಂದದಿಂದ ಕಳೆದ ನನ್ನ ಬಾಲ್ಯ ಜೀವನ ಇಂದು ನನ್ನನ್ವು ಈ ಹಂತದ ಗೌರವಕ್ಕೆ ತಂದು ನಿಲ್ಲಿಸಿದೆ ಅಷ್ಟೇ ಅಲ್ಲದೇ ಕನ್ನಡ ಸಾಹಿತ್ಯ ನಮಗೆಲ್ಲರಿಗೂ ಅನ್ನ ನೀಡುವ
ಭಾಷೆಯಾಗಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು.
ವಿಶೇಷ ಸನ್ಮಾನ ಸ್ವೀಕರಿಸಿದ ವಿಜಯಪುರ ಮಹಾನಗರ ಪಾಲಿಕೆಯ ನೂತನ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡುತ್ತ, ನಗರದ ಸ್ವಚ್ಛತೆ ಹಾಗು ಸೌಂದಯಿ೯ಕರಣಕ್ಕೆ ನಗರದ ಜನತೆ ಸಹಕರಿಸುತ್ತಿದ್ದಾರೆ. ನಾನು ಕನ್ನಡ ಮಾಧ್ಯಮದಲ್ಲಿ ಓದಿ ಇಂದು ನಾನು ಉನ್ನತ ಮಟ್ಟದ ಅಧಿಕಾರಿಯಾಗಲು ಕನ್ನಡ ಭಾಷೆ ಕಾರಣವಾಯಿತು ಎಂದರು.
ರಂಗಭೂಮಿ ಕಲಾವಿದ ಸಂಗಮೇಶ ಬಾದಾಮಿ ಆಕಾಶವಾಣಿ ಪ್ರಸಾರಾಂಗದ ಕಂಗಕಮಿ೯ ದಿ, ಅನೀಲ ದೇಸಾಯಿ ಕುರಿತು ಉಪನ್ಯಾಸ ನೀಡುತ್ತಾ ಖ್ಯಾತ ನಿರೂಪಕರಾಗಿ, ಸಂಗೀತ ಅಕಾಡೆಮಿ ಸದಸ್ಯರಾಗಿ ನಟ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದ ದಿ ಅನೀಲ ದೇಸಾಯಿ ಯವರನ್ನು ಸ್ಮರಿಸಿದರು
ಡಾ ದಾನಮ್ಮ ಗಿಡವೀರ ಉಪನ್ಯಾಸ ನೀಡಿ, ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ಮು ಬಿತ್ತುವಲ್ಲಿ ಅವಿಭಕ್ತ ಕುಟುಂಬದ ಪಾತ್ರ
ದೊಡ್ಡದು ಎಂದರು
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಸುಭಾಸ ಯಾದವಾಡ ಮಾತಾನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಇಂತಹ ಸಾಹಿತ್ಯಿಕ ಚಟುವಟಿಕೆಗಳು ನಡೆದಿರುವುದು ಹೆಮ್ಮೆಯ ವಿಷಯ ಎಂದರು.
ಎನ್ ಆರ್ ಕುಲಕರ್ಣಿ, ಸತೀಶ ಇಂಚಗೇರಿ, ಅನುರಾಧ ಕಲಾಲ. ರಾಜೇಸಾಬ ಶಿವನಗುತ್ತಿ ವೇದಿಕೆಯ ಮೇಲಿದ್ದರು
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ ಪ್ರೊ ಸುಭಾಶ್ಚಂದ್ರ ಕನ್ನೂರ, ಕಮಲಾ ಮುರಾಳ, ಬಸವರಾಜ ಆಜೂರ, ಟಿ ಆರ್ ಹಾವಿನಾಳ, ಆರ್ ಎಸ್ ವಾಡೇದ, ವಿದ್ಯಾವತಿ ಅಂಕಲಗಿ, ಕೆ ಎಸ್ ಹಣಮಾಣಿ, ಡಿ ಎಸ್ ಹಾವಗೊಂಡ, ಕೆ ಸುನಂದ.
ಮಾರುತಿ ತರಸೆ, ಅಮೋಘಸಿದ್ದ ಪೂಜಾರಿ, ಎಸ್ ವಿ ನಾಡಗೌಡ, ಡಾ ದೀಲಿಪರಾಜ ಪಾಟೀಲ, ಸೋ ಈ ಕಗ್ಗೋಡ, ಶೋಭಾ ಹರಿಜನ, ವಿ ಎಸ್ ಖಾಡೆ, ಭಾಗೀರಥಿ ಸಿಂಧೆ, ಕೆ ಎಪ್ ಅಂಕಲಗಿ.
ಬಿ ಎಸ್ ಕುರಿ, ಜಿ ಎಸ್ ಬಳ್ಳೂರ, ಚಂದ್ರಶೇಖರ ಗೊಬ್ಬುರ ಉಪಸ್ಥಿತರಿದ್ದರು
ಶಾಂತಾ ವಿಭೂತಿ ಪ್ರಾಥಿ೯ಸಿದರು.
ಸ್ವಾಗತ ಹಾಗು ಪರಿಚಯವನ್ನು ರವಿ ಕಿತ್ತೂರ ನೆರವೇರಿಸಿದರು.
ಮಹಮ್ಮದ ಗೌಸ ಹವಾಲ್ದಾರ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಮಾತನಾಡಿದರು.
ಕಡಕೋಳ ಮಡಿವಾಳಪ್ಪನವರ ತತ್ವ ಗೀತೆಯನ್ನು ಮಹೆತಾಬ ಕಾಗವಾಡ ಹಾಡಿದರು. ಪ್ರೊ ಸಿದ್ರಾಮಯ್ಯ ಲಕ್ಕುಂಡಿಮಠ ವಂದಿಸಿದರು.

