ಕೆಂಭಾವಿ: ಅಪರಾಧಿಕ ಪ್ರಕರಣಗಳನ್ನು ಭೇದಿಸಲು, ಅನುಭವ ಮತ್ತು ಮಾರ್ಗದರ್ಶನ ಮುಖ್ಯ ಅಂತಹ “ಅನುಭವದ ಅಮೃತ” ಎಂದು ಪಿಎಸ್ಐ ರಾಜಶೇಖರ ರಾಠೋಡ್ ಹೇಳಿದರು.
ಪಟ್ಟಣದ ಪೋಲೀಸ್ ಠಾಣೆಯಲ್ಲಿ ರವಿವಾರ ಸಂಜೆ ಹಮ್ಮಿಕೊಂಡಿದ್ದ, ಅಪರಾಧ ವಿಭಾಗದ ಪಿಎಸ್ಐ ವೆಂಕಣ್ಣ ಶಹಾಪುರಕರ್ ವಯೋನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ನಾನು ಮೊದಲ ಬಾರಿ ಠಾಣೆಗೆ ಬಂದು ಕರ್ತವ್ಯಕ್ಕೆ ಹಾಜರಾದಾಗ ನನಗೆ ಅನೇಕ ಸಲಹೆ ಸೂಚನೆ ನೀಡಿ ಮುನ್ನಡೆಸಿದ ಮೇಸ್ಟ್ರು ಎಂದವರು. ಒಬ್ಬ ಹಿರಿಯ ಅಣ್ಣನಾಗಿದ್ದ ವೆಂಕಣ್ಣ ಸಾಹೇಬ್ರು, ಕರ್ತವ್ಯ ಪ್ರಜ್ಞೆ ನಮಗೆಲ್ಲ ಮಾದರಿ ಸರ್ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಶುಭ ಹಾರೈಸಿ ಅಭಿನಂದಿಸಿದರು.
ಸಿಪಿಐ ಸಚಿನ್ ಚಲವಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸುರಪುರ, ಶಹಾಪುರ, ಗೋಗಿ ಹುಣಸಗಿ, ಠಾಣೆಯ ಪಿಎಸ್ಐ ಮತ್ತು ಎಎಸ್ಐ, ಸೇರಿದಂತೆ ಸಿಬ್ಬಂದಿ ವರ್ಗ, ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು, ಮಾಧ್ಯಮದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸನ್ಮಾನಿಸಿ, ಗೌರವಿಸಿ, ಅಭಿನಂದಿಸಿ, ಶುಭಹಾರೈಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

