ಸಿಂದಗಿ: ಕಾಂಗ್ರೆಸ್ ಪಕ್ಷದ ಮುಂದಾಲೋಚನೆ, ನಾಯಕರ ಸಮಯಪ್ರಜ್ಞೆ ಹಾಗೂ ಕೊಟ್ಟ ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದ ಸರಕಾರ ಕಾಂಗ್ರಸ್ ಸರಕಾರವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವ್ಯಕ್ತಿಯೊರ್ವನನ್ನು ತೋರಿಸಿ ಮತ ಕೇಳುತ್ತಿದೆ. ಹಾಗಾಗಿ ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಏಕೆಂದರೆ ಎಲ್ಲ ಪಕ್ಷದಲ್ಲಿ ಟಿಕೆಟಗಾಗಿ ಪೈಪೋಟಿ ಇತ್ತು. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಪಕ್ಷದ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲರೂ ಒಮ್ಮತದಿಂದ ರಾಜೂ ಆಲಗೂರ ಅವರನ್ನು ಆಯ್ಕೆ ಮಾಡಲಾಗಿದೆ.
ಸಿಂದಗಿ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯತ್ ಮತಕ್ಷೇತ್ರಗಳಲ್ಲಿ ಎ.೦೨ರಿಂದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗುವುದು. ಎ.೦೨ರಂದು ಕನ್ನೊಳ್ಳಿ ಗ್ರಾಮದ ಬೆಳಿಗ್ಗೆ ೧೦ಗಂಟೆಗೆ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪ, ಮದ್ಯಾಹ್ನ ೧ಗಂಟೆಗೆ ಯಂಕಂಚಿಯ ಬೀರಲಿಂಗೇಶ್ವರ ಕಲ್ಯಾಣ ಮಂಟಪ, ಸಾಯಂಕಾಲ ೪ಗಂಟೆಗೆ ಮೋರಟಗಿಯಲ್ಲಿ, ೬ಗಂಟೆಗೆ ದೇವಣಗಾವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು. ಎ.೦೩ರಂದು ತಾಂಬಾ ಗ್ರಾಮದ ಶಾದಿ ಮಹಲನಲ್ಲಿ, ಬಳಗಾನೂರ ಗ್ರಾಮದಲ್ಲಿ ಸಾಯಂಕಾಲ ೬ಗಂಟೆಗೆ ಚಾಂದಕವಟೆ ಗ್ರಾಮದ ಮಡ್ಡಿ ಸಿದ್ದ ದೇವಸ್ಥಾನದಲ್ಲಿ ಜರುಗುವು ಎಂದು ತಿಳಸಿದ್ದಾರೆ.
ಈ ವೇಳೆ ರಾಜಶೇಖರ ಕೂಚಬಾಳ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಬದಲಾವಣೆಯ ಗಾಳಿಯಿದೆ. ಗ್ಯಾರಂಟಿ ಯೋಜನೆ, ಕಾರ್ಯಕರ್ತರ ಹುಮ್ಮಸ್ಸು, ಪ್ರಾಧ್ಯಾಪಕರಾಗಿ, ಶಾಸಕರಾಗಿ, ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಫ್ರೋ.ರಾಜು ಆಲಗೂರ ಅವರ ಗೆಲುವು ಮಾತ್ರ ನಿಶ್ಚಿತ ಎಂದರು.
ಈ ವೇಳೆ ಆಲಮೇಲ ಬ್ಲಾಕ್ ಕಾಂಗ್ರಸ್ ಸಮಿತಿ ತಾಲೂಕಾಧ್ಯಕ್ಷ ಸಾಧಿಕ್ ಸುಂಬಡ. ನಿಂಗಣ್ಣ ಬುಳ್ಳಾ, ಪ್ರವೀಣ ಕಂಟಿಗೊಂಡ, ಅರವಿಂದ ಹಂಗರಗಿ, ಮಹ್ಮದ್ಪಟೇಲ್ ಬಿರಾದಾರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
ಜಿಪಂ ಕ್ಷೇತ್ರಗಳಲ್ಲಿ ಇಂದಿನಿಂದ ಕಾಂಗ್ರೆಸ್ ಕಾರ್ಯಕರ್ತರ ಸಭೆ
Related Posts
Add A Comment

