ಸಿಂದಗಿ: ಹಿಂದುಳಿದ ಬಡ ಜನರಿಗಾಗಿ ಮೋದಿ ಅವರ ಸೇವೆ ಅಮೂಲ್ಯವಾಗಿದೆ. ವಿಶೇಷವಾಗಿ ಬಂಜಾರಾ ಸಮುದಾಯದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವು ಬಂಜಾರಾ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಮೂಲಕ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅವುಗಳ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದು ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಲಂಬಾಣಿ ಜನಾಂಗದ ಸರ್ವೋತೋಮುಖ ಅಭಿವೃದ್ಧಿಗಾಗಿ ಶ್ರಮವಹಿಸಿ ಲಂಬಾಣಿ ಜನಾಂದವರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಸ್ಥಾನ ನೀಡಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭೆಯಿಂದ ಡಾ.ಉಮೇಶ ಜಾದವರಿಗೆ ಬಿಜೆಪಿ ಟಿಕೆಟ್ ಕೊಡುವುದರ ಮೂಲಕ ಲಂಬಾಣಿ ಜನಾಂಗಕ್ಕೆ ಪ್ರಾತಿನಿದ್ಯ ಕೊಟ್ಟಿದೆ.
ಪ್ರಸ್ತುತ ರಾಜ್ಯ ಕಾಂಗ್ರೇಸ್ ಸರ್ಕಾರವು ಲಂಬಾಣಿ ಜನಾಂಗದ ಯಾವುದೇ ಮಂತ್ರಿಸ್ಥಾನ ನೀಡದೇ ಮತ್ತು ಲೋಕಸಭೆಯಲ್ಲಿ ಯಾವುದೇ ಬಂಜಾರಾ ಸಮಾಜದ ವ್ಯಕ್ತಿಗೆ ಟಿಕೇಟ್ ನೀಡದೇ ಆ ಜನಾಂಗಕ್ಕೆ ದ್ರೋಹ ಎಸಗಿದೆ. ಪ್ರಸ್ತುತ ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಉಹಾಪೋಹಗಳಿಗೆ ಕಿವಿಗೊಡದೇ ಮೋದಿ ಅವರನ್ನು ಬಂಜಾರಾ ಸಮಾಜ ಮತದಾರರು ಪ್ರಧಾನಿಯನ್ನಾಗಿ ಮಾಡುವ ದೃಷ್ಠಿಯಿಂದ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

