ಇಂಡಿ: ಅನುಭವ ಮಂಟಪದಲ್ಲಿ ಅತ್ಯಂತ ಮೌಲ್ಯಯುತ ವಚನಗಳನ್ನು ರಚಿಸಿ ಇಡೀ ಸಮಾಜಕ್ಕೆ ಕಾಯಕದ ಮಹತ್ವ ಅರಿವು ಮೂಡಿಸಿದವರು ಕಿನ್ನರಿ ಬೊಮ್ಮಯ್ಯ ಎಂದು ಖ್ಯಾತ ಸಂಶೋಧಕ ಡಿ.ಎನ್.ಅಕ್ಕಿ ಗುರುಗಳು ಹೇಳಿದರು.
ಪಟ್ಟಣದ ಹಡಪದ ಅಪ್ಪಣ್ಣ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಕಿನ್ನರಿ ಬೊಮ್ಮಯ್ಯ ನವರ ಜೀವನ ಚರಿತ್ರೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಿವೃತ್ತ ಪ್ರಾಚಾರ್ಯೆ ಶೈಲಜಾ ತೆಲ್ಲೂರ ಬಸವಣ್ಣನವರ ವಚನಗಳಿಂದ ಪ್ರಭಾವಿತರಾದ ಕಿನ್ನರ ಬೊಮ್ಮಾಯಿ ಕಾಯಕದ ಮಹತ್ವ ಸಾರಿ, ಸಮಾಜದ ಅಂಕು ಡೊಂಕು ತಿದ್ದಲು ಕಿನ್ನರ ಬೊಮ್ಮಾಯಿ ವಚನಗಳು ಸಹಕಾರಿಯಾಗಿವೆ ಎಂದರು.
ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದರಾಯ ಅಪ್ತಾಗಿರಿ ಉದ್ಘಾಟಿಸಿದರು.
ದತ್ತಿ ಸ್ಮರಣೆ ಲಿಂ ಚಂದ್ರಕಾಂತ ಗಲಗಲಿ, ಪ್ರಕಾಶ ಬಿರಾದಾರ, ಲಿಂ ಅಣ್ಣಪ್ಪ ಕುಂಬಾರ ಕುರಿತು ಗಂಗಾಬಾಯಿ ಗಲಗಲಿ ದತ್ತಿ ಸ್ಮರಣೆ ಮಾಡಿದರು.
ಭವಾನಿ ಗುಳೆದಗುಡ್ಡ, ಶೈಲಜಾ ಬಿರಾದಾರ, ಸೋನಾಬಾಯಿ ಕಂಬಾರ ದತ್ತಿ ದಾನ ಮಾಡಿದರು.
ಶಹಾಪುರ ಕಸಾಪ ತಾಲೂಕು ಘಟಕ ಸಮಾರಂಭಕ್ಕೆ ಗೌರವಾಧ್ಯಕ್ಷರಾದ ಡಿ.ಎನ್.ಅಕ್ಕಿ ಅವರನ್ನು ಶಸಾಪ ಮತ್ತು ಹಡಪದ ಅಪ್ಪಣ್ಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಬಿ.ಎಸ್.ಪಾಟೀಲ ಶಿಕ್ಷಕರು, ಎಸ್.ಐ.ಸುಗೂರ, ಎಸ್.ಎ.ಬೋರಾಮಣಿ, ಪಾರ್ವತಿ ದಳವಾಯಿ ಮಾತನಾಡಿದರು.
ಹಡಪದ ಅಪ್ಪಣ್ಣ ಸಂಸ್ಥೆಯ ಅಧ್ಯಕ್ಷ ಸಂತೋಷ ಗವಳಿ, ಆಡಳಿತಾಧಿಕಾರಿ ಪಂಡಿತ ಬಿರಾದಾರ, ಅಂಬಣ್ಣ ಸುಣಗಾರ, ಆರ್.ಎಸ್.ಮೇತ್ರಿ ವೇದಿಕೆಯ ಮೇಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

