Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲಿಟಲ್ ವಿಂಗ್ಸ್ ಶಾಲೆಯಲ್ಲಿ ಆಹಾರ ಉತ್ಸವ ಕಾರ್ಯಕ್ರಮ | ಗಮನ ಸೆಳೆದ ಬಗೆ ಬಗೆಯ ತಿಂಡಿ ತಿನಿಸುಗಳು ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂದು ನಾವು ವಿದೇಶಿ ಆಹಾರಗಳಾದ ಫಿಜಾ, ಬರ್ಗರ್, ಫ್ರೆಂಚ್ ಫ್ರೈಸ್, ಮೊಮೊಸ್, ನೂಡಲ್ಸ್, ಸೇರಿದಂತೆ ಫಾಸ್ಟ್ ಫುಡ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದೇವೆ. ಅಲ್ಲದೇ ಮಕ್ಕಳಿಗೂ ಕೂಡಾ ಇಂತಹ ಆಹಾರವನ್ನೇ ತಿನ್ನಿಸುತ್ತಿರುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.ಪಟ್ಟಣದ ಲಿಟಲ್ ವಿಂಗ್ಸ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಆಯೋಜಿಸಿರುವ ಆಹಾರ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ವಿಷಪೂರಿತ ಜಂಕ್ ಫುಡ್ ತಿನ್ನುವುದರಿಂದ ಹೊಸ ಹೊಸ ರೋಗಿಗಳು ಉತ್ಪತ್ತಿಯಾಗುತ್ತಿವೆ. ಆದ್ದರಿಂದ ಪಾಲಕರಾದ ನಾವುಗಳು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಆಟ-ಪಾಠದ ಜೊತೆಗೆ ದೇಶಿಯ ಮತ್ತು ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರ ಪದಾರ್ಥಗಳ ಕುರಿತು ಪರಿಚಯಿಸಬೇಕು. ಶಾಲಾ-ಕಾಲೇಜುಗಳಲ್ಲಿ ಆಹಾರ ಮೇಳ ಅಥವಾ ಆಹಾರ ಉತ್ಸವಗಳಂತ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಮ್ಮ ಸ್ವ-ದೇಶಿಯ ಆರೋಗ್ಯಕರ ಆಹಾರ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೇಶ ಕಂಡ ಧೀಮಂತ ನಾಯಕ, ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೇಶ ಕಂಡ ಅಪರೂಪ ನಾಯಕ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಪ್ರಕಾಶ ಗುಡಿಮನಿ ಹೇಳಿದರು.ಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿಪ್ರಧಾನಿ ಡಾ.ಮನಮೋಹನ್ ಸಿಂಗ್ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.ಅಭಿವೃದ್ಧಿಶೀಲ ಭಾರತಕ್ಕಾಗಿ ಶ್ರಮಿಸಿದ ಮಹಾನ್ ಚೇತನ್ ಮನಮೋಹನ್ ಸಿಂಗ್ ಇವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದರು.ನಂತರ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ(ಜಲಕತ್ತಿ), ವಸಂತ ನಾಡಗೌಡ, ಸಂಗಮೇಶ ನಂದ್ಯಾಳ, ಎಸ್.ಎಸ್.ಮೋರಟಗಿ, ಚಂದ್ರಶೇಖರ ಹೊಸಮನಿ, ಶಬ್ಬೀರ್ ಮುಲ್ಲಾ, ಮುದುಕಪ್ಪ ದಾನಗೊಂಡ, ರಾವುತ ಅಗಸರ, ಸುಭಾಸ ಜಾಧವ, ರಾವುತ ತಳಕೇರಿ, ರಾಘವೇಂದ್ರ ಗುಡಿಮನಿ, ಪ್ರಕಾಶ ಮಲ್ಲಾರಿ, ಮಹಾಂತೇಶ ವಂದಾಲ, ರಮೇಶ ಮ್ಯಾಕೇರಿ, ಬಸವರಾಜ ಇಂಗಳಗಿ, ಜಾನು ಗುಡಿಮನಿ, ಬಸವರಾಜ ತಳಕೇರಿ, ಮಡಿವಾಳಪ್ಪ ಬ್ಯಾಲ್ಯಾಳ, ರಮೇಶ ಈಳಗೇರ, ಪಿಂಟೂ ಬಾಸುತ್ಕರ್, ಶ್ರೀಕಾಂತ ಕಾಖಂಡಕಿ, ಮಾಂತೇಶ ಚಲವಾದಿ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದಲಿತ ಸಂಘರ್ಷ ಸಮಿತಿ ಸಹಿತ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಕುರಿತು ಅಮೀತ್ ಶಾ ಹೇಳಿಕೆ ಖಂಡಿಸಿ ಪಂಜಿನ ಮೆರವಣಿಗೆ ಜರುಗಿತು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಹಾಗೂ ವಿದ್ಯಾರ್ಥಿ ಒಕ್ಕೂಟ ತಾಲ್ಲೂಕು ಶಾಖೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತಾಡಿದನ್ನು ಖಂಡಿಸಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಮೋಹರೆ ಹನುಮಂತರಾಯ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ಕೈಗೊಂಡು ನಂತರ ಸಭೆಯಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಲಾಯಿತು.ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಆಸಂಗಿ ಮಾತನಾಡಿ, ದೇಶದಲ್ಲಿ ಶಾಂತಿ ಸುವ್ಯವಸ್ಥೆ ಇರಬಾರದು ಎಲ್ಲರು ಸಮಾನರಾಗಿ ಇರಬಾರದು ಎಂಬ ಮನು ಧೋರಣೆಯಿಂದ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ ಇದೊಂದು ಬಾಲಿಶ ಹೇಳಿಕೆಯಾಗಿದ್ದು, ಇಡೀ ದೇಶ ಇದನ್ನು ಖಂಡಿಸುತ್ತದೆ ಎಂದರು.ವಿಭಾಗೀಯ…
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಗ್ರಾಮದ ಜೈ ಹನುಮಾನ್ ಯುವ ಮಿತ್ರ ಮಂಡಳಿ ಆಶ್ರಯದಲ್ಲಿ ಶ್ರೀ ಮಾರುತಿ ದೇವರ ಕಾತಿ೯ಕೋತ್ಸವದ ಪ್ರಯುಕ್ತ ಇದೇ ದಿ,30 ರಂದು ಸೋಮವಾರ ಧರ್ಮ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.ಅಂದು ರಾತ್ರಿ 7 ಗಂಟೆ ಸುಮಾರಿಗೆ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಐತಿಹಾಸಿಕ ಹನುಮಾನ ಮಂದಿರದ ಆವರಣದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ವಾಗ್ಮಿ ಕು,ಹಾರಿಕಾ ಮಂಜುನಾಥ “ಧರ್ಮ ಮತ್ತು ಸಂಸ್ಕೃತಿ” ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.ಕಾರಣ ಸುತ್ತ ಮುತ್ತಲಿನ ಗ್ರಾಮಗಳ ಸದ್ಭಕ್ತರು, ಅಭಿಮಾನಿಗಳು ಹಾಗೂ ಚಿಕ್ಕಪಡಸಲಗಿ ಗ್ರಾಮದ ಸಮಸ್ತ ದೈವಬಳಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಾರಿಕಾ ರವರ ನುಡಿಮುತ್ತು ಆಲಿಸುವುದರೊಂದಿಗೆ ಹನುಮನ ಕೃಪೆಗೆ ಪಾತ್ರರಾಗಬೇಕೆಂದು ಜೈ ಹನುಮಾನ ಯುವಮಿತ್ರ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.
ವಿಜಯಪುರ ಜಿ.ಓ.ಸಿ.ಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅವಳಿ ಜಿಲ್ಲೆಯ ಪ್ರತಿಷ್ಠಿತ ಜಿ.ಓ.ಸಿ.ಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಗೆ ಗುರುಸ್ಪಂದನಾ ಪೆನಲ್ ವತಿಯಿಂದ ನಾಮಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಅರ್ಜುನ ಲಮಾಣಿ ಹಾಗೂ ನಿರ್ದೇಶಕ ಹಣಮಂತ ಕೊಣದಿ ೧೧೬ ವರ್ಷಗಳ ಇತಿಹಾಳ ಹೊಂದಿರುವ ನಮ್ಮ ಬ್ಯಾಂಕು ಪ್ರಗತಿಪಥದಲ್ಲಿದೆ ಈ ಸಲ ೧.೭೫ ಕೋಟಿ ನಿವ್ಹಳ ಲಾಭ ಗಳಿಸಿದ್ದು ಅವಳಿ ಜಿಲ್ಲೆಯಲ್ಲಿ ೧೨ ಶಾಖೆಗಳನ್ನು ಹೊಂದಿದೆ, ನೌಕರರ ಅನುಕೂಲಕ್ಕಾಗಿ ಬಡ್ಡಿ ದರವನ್ನು ಇಳಿಸಲಾಗಿದ್ದು ವಯಕ್ತಿಕ ಸಾಲ ೧೨ ಲಕ್ಷದ ವರೆಗೆ ನೀಡಲಾಗುತಿದೆ, ಬ್ಯಾಂಕಿನ ಕಾರ್ಯವ್ಯಾಪ್ತಿಯೂ ಅವಳಿ ಜಿಲ್ಲೆಯಲ್ಲದೇ ಕಲಬುರ್ಗಿ, ಬೆಳಗಾವಿ, ಕೊಪ್ಪಳ, ರಾಯಚೂರ, ಗದಗ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ, ನೌಕರರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ನಮ್ಮ ಗುರುಸ್ಪಂದನಾ ಪೆನಲ್ನ ೯ ಅಭ್ಯರ್ಥಿಗಳಿಗೂ ಮತ ನೀಡಿ ಬೆಂಬಲಿಸಿ ಆರ್ಶಿವದಿಸಬೇಕೆಂದು ವಿನಂತಿಸಿಕೊಂಡರು.ಬಾಗಲಕೋಟ ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಬಾಗೇನ್ನವರ, ಅಲ್ಲಾಭಕ್ಷ ವಾಲಿಕಾರ ಮಾತನಾಡಿ ಸರಕಾರಿ ನೌಕರರ ಅನುಕೂಲಕ್ಕಾಗಿ…
ಡಿ.೩೦ ರಿಂದ ಜ.೫ ರವರೆಗೆ ರೇವತಗಾಂವದ ಸಿಂಹಗಢ ಮಹಾರಾಜರ ೫೫ ನೇ ಪುಣ್ಯಾರಾಧನೆ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.ಈ ಸಿಂಹಗಢ ಮಹಾರಾಜರ ದೇವಾಲಯವು ದ್ರಾವಿಡ ಶೈಲಿಯ ಸಭಾಮಂಟಪ , ಪ್ರದಕ್ಷಣಾಪಥ ಕುರುಹುಗಳನ್ನು ಇರುವದು ನೋಡಿದರೆ, ಈ ದೇವಾಲಯಗಳು ಹಂಪಿ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂಬುದು ತಿಳಿದುಬರುತ್ತದೆ. ಈ ದೇವಾಲಯದಲ್ಲಿ ಬೃಹತ್ ಗಾತ್ರದ ಮಹಾದೇವನ ಲಿಂಗವೂ ಇದೆ. ಸುಮಾರು ೬೫ ವರ್ಷಗಳ ಹಿಂದೆ ಅಂದರೆ, ೧೯೫೯ ರಲ್ಲಿ ಮಹಾದೇವನ ದೇವಾಲಯವೆಂದು ಕರೆಯುತ್ತಾರೆ.ಮಹಾರಾಜರು ನೆಲೆ ಕಂಡದ್ದು: ಸುಮಾರು ೬೫ ವರ್ಷಗಳ ಹಿಂದೆ ರೇವತಗಾಂವ ಗ್ರಾಮಕ್ಕೆ ಆಗಮಿಸಿದ ಸಿಂಹಗಢ ಮಹಾರಾಜರು ಮೂಲತಃ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಮೀಪದಲ್ಲಿರುವ ಸಿಂಹಗಢ ಎಂಬ ಪುಟ್ಟ…
ಪುಸ್ತಕ ಸಂಸ್ಕೃತಿ & ಪ್ರಶಸ್ತಿ ಪ್ರದಾನ ಸಮಾರಂಭ | ಮಕ್ಕಳ ಸಾಹಿತಿ ಹ.ಮ.ಪೂಜಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ವಿದ್ಯಾರ್ಥಿಗಳು ಕೃತಿಗಳು ಓದುವ ಹವ್ಯಾಸ ರೂಡಿಸಿಕೊಂಡು ಸಂಸ್ಕಾರವಂತರಗಬೇಕು, ಕೃತಿ ಓದುವಿಕೆಯಿಂದ ಜ್ಞಾನ ಪ್ರಾಪ್ತಿವಾಗುತ್ತದೆ ಎಂದು ಸಾಹಿತಿ ಹ ಮ ಪೂಜಾರ ಹೇಳಿದರು.ಶನಿವಾರ ಗ್ರಾಮದ ಕಲ್ಪವೃಕ್ಷ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾಚೇತನ ಪ್ರಕಾಶನ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪುಸ್ತಕ ಸಂಸ್ಕೃತಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯುವಕರು ಇತ್ತೀಚಿನ ದಿನದಲ್ಲಿ ಮೊಬೈಲ್ ಗೀಳಿನ ಹಿಂದೆ ಬಿದ್ದು ಸುಂದರವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆ ಬೇಡಾ ಎಂದು ಹೇಳಲಾರೆ ಮಿತವಾಗಿ ಮತ್ತು ಅವಶ್ಯಕತೆ ಮಾತ್ರ ಬಳಸಿ ನಿಮ್ಮ ಪಾಲಕರು ಅತಿಯಾದ ನಂಬಿಕೆ ಇಟ್ಟು ಗ್ರಾಮೀಣ ಭಾಗದಲ್ಲಿ ಕೂಲಿನಾಲಿ ಮಾಡುತ್ತ ನಿಮ್ಮನ್ನು ಸಾಕಿ ಶಿಕ್ಷಣ ಕೊಡಿಸುತಿದ್ದಾರೆ. ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಯ ಅಧಿಕಾರಿಗಳಾಗಿ ಹೊರಹುಮ್ಮಬೇಕು ಎಂದು ಸಲಹೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶ್ರೀ ಮಹಾಲಕ್ಷಿ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಮುಕುಂದ ಎಸ್. ಕುಲಕರ್ಣಿ ಇವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ವಿಕಾಸ ಅ. ಪದಕಿ ರವರು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ ವಿಜಯಕುಮಾರ ಜೋಶಿ, ಕೃಷ್ಣಾ ಗುನ್ಹಾಳಕರ, ಗೋವಿಂದ ಜೋಶಿ, ಶ್ಯಾಮಸುಂದರ ಕುಲಕರ್ಣಿ, ಪವನ ಕುಲಕರ್ಣಿ, ಶ್ರೀಮತಿ ರಾಧಾ ತಾವರಗೇರಿ, ಶ್ರೀಮತಿ ವೀಣಾ ಟಂಕಸಾಲಿ, ಬಸವರಾಜ ಪತ್ತಾರ, ಸಚಿನ ಮದ್ದಿನಮಠ, ಪವನಕುಮಾರ ಮುರಾಳ, ವಿಶ್ವನಾಥ ತಳವಾರ ಚುನಾವಣಾಧಿಕಾರಿಯಾದ ರಿಟರ್ನಿಂಗ್ ಆಫೀಸರ್ ಮಹಾಲಕ್ಷಿ ಸಹಕಾರಿ ಬ್ಯಾಂಕ್, ವಿಜಯಪುರ ಹಾಗೂ ಸಹಕಾರ ಸಂಘಗಳ ಸಹಾಯಕ ನಿರ್ಭಂಧಕರಾದ ಚೇತನ ಆರ್. ಭಾವಿಕಟ್ಟಿ ರವರು ಘೋಷಿಸಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಪದ್ಮಾವತಿ ಕುಲಕರ್ಣಿ, ನಿದೇಶಕರಾದ ರಾಕೇಶ ಕುಲಕರ್ಣಿ, ಸದಸ್ಯರುಗಳಾದ ಗಿರೀಶ ಅಕ್ಕಲಕೋಟ, ಪ್ರಕಾಶ ಅಕ್ಕಲಕೋಟ, ಗೋವಿಂದ ಜೋಶಿ, ಪವನ ಜೋಶಿ, ಆದಿತ್ಯ ತಾವರಗೇರಿ, ದತ್ತಾತ್ರೆಯ ಜೋಶಿ, ಸಂಜು ದಿವಾಣಜಿ ಮುಂತಾದವರು ಉಪಸ್ಥಿತರಿದ್ದರು.
– ಡಾ.ಶಶಿಕಾಂತ ಪಟ್ಟಣಪುಣೆ – ರಾಮದುರ್ಗ ಮೊ:9552002338 ಉದಯರಶ್ಮಿ ದಿನಪತ್ರಿಕೆ ಕಲ್ಯಾಣ ನಾಡಿನಲ್ಲಿ ಜರುಗಿದ ಕ್ಷಿಪ್ರ ಕ್ರಾಂತಿ, ಹಠಾತ್ ರಕ್ತಪಾತ, ಶರಣರ ಹತ್ಯಾಕಾಂಡ ಮುಂತಾದ ಅನಿರೀಕ್ಷಿತ ಘಟನೆಗಳಿಂದ ಕಲ್ಯಾಣ ನಾಡಿನ ಶರಣರು ಬೇರೆ ಬೇರೆ ಪ್ರದೇಶ ಗಳಿಗೆ ವಲಸೆ ಹೋಗಬೇಕಾಗಿ ಬಂತು. ವೈದಿಕರ ಅಟ್ಟಹಾಸದಿಂದ ಇಡೀ ಜಗತ್ತಿಗೆ ಮಾದರಿಯಾಗಬೇಕಿದ್ದ ಶರಣರ ಕನಸು ಬಸವಣ್ಣನವರ ವಿಚಾರ ಸಿದ್ಧಾಂತಗಳನ್ನು ಮೊಟಕುಗೊಳಿಸಲು ಕೆಲ ಸನಾತನ ಶಕ್ತಿಗಳು ಕುತಂತ್ರ ನಡೆಸಿದವು. ಅನೇಕ ಸಲ ನಾನು ಎತ್ತ ಹೋದರು ನಮ್ಮ ಶರಣರು ಎಂದು ವಿಚಾರ ಮಾಡಿದಾಗ ಕದಂಬರ ಆಶ್ರಯಕ್ಕೆ ಒಳಗಾದವರು, ಬೇರೆ ಬೇರೆ ಪ್ರದೇಶಗಳಲ್ಲಿ ವಚನ ಚಳುವಳಿಯನ್ನು ಪ್ರಚುರ ಪಡಿಸಿ ಅಲ್ಲಿಯೇ ಐಕ್ಯವಾದದ್ದನ್ನು ನಾವು ಕಾಣುತ್ತೇವೆ. ಶರಣರ ಸ್ಮಾರಕಗಳನ್ನು ಸಮಾಧಿಗಳನ್ನು ಹುಡುಕುವ ಒಂದು ಹವ್ಯಾಸ ಮುಂದೆ ಸಂಶೋಧನೆಗೆ ಎಡೆ ಮಾಡಿ ಕೊಟ್ಟಿತು. ಶರಣರ ಸ್ಮಾರಕಗಳು, ಜಾನಪದ ಮೌಖಿಕ ಹೇಳಿಕೆ, ಕುರುಹುಗಳು ಶಾಸನಗಳು ಮತ್ತು ಕ್ಷೇತ್ರ ಕಾರ್ಯದಲ್ಲಿನ ಜನರ ಸ್ಪಷ್ಟವಾದ ನಂಬಿಕೆಗಳು ಮುಖ್ಯವಾಗುತ್ತವೆ. ಅನೇಕ ಶರಣರ ವಿಚಾರ ಚಿಂತನೆ ವಚನ…
ವಿಜಯಪುರದಲ್ಲಿ ಓಂ ಶ್ರೀ ಸಾಯಿರಾಮ ಸೇವಾ ಸಮೀತಿಯಿಂದ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಥಣಿ ರಸ್ತೆಯ ಮಹಾತ್ಮಾ ಗಾಂಧಿ ಕಾಲೋನಿಯಲ್ಲಿ ಓಂ ಶ್ರೀ ಸಾಯಿರಾಮ ಸೇವಾ ಸಮೀತಿ ವತಿಯಿಂದ ಜ.೧ ಮತ್ತು ೨ ರಂದು ಶ್ರೀ ಸಾಯಿಬಾಬಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಜ.೧ ಬುಧವಾರ ಬೆಳಗ್ಗೆ ೯ ಗಂಟೆಗೆ ಕುಂಭ ಕಳಸ, ಪಂಡರಾಪೂರ ಶ್ರೀ ವಿಠ್ಠಲ ವಾರ್ಕಾರಿಗಳಿಂದ ಭಜನೆ ಹಾಗೂ ಸಕಲ ವಾದ್ಯಮೇಳದೊಂದಿಗೆ ಶ್ರೀ ಸಾಯಿಬಾಬಾ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಕಾಳಿದಾಸ ಶಾಲೆಯಿಂದ ಹೊರಡುವ ಮೆರವಣಿಗೆಗೆ ರಾಮನಗೌಡ ಬ.ಪಾಟೀಲ (ಯತ್ನಾಳ) ಚಾಲನೆ ನೀಡಲಿದ್ದಾರೆ.ಮದ್ಯಾಹ್ನ ೧ ಗಂಟೆಗೆ ಅಂಬಾದಾಸ ಜೋಶಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಮತ್ತು ನಗರದ ಕೈವಲ್ಯಕುಟೀರದ ಪ್ರಕಾಶ ಮಹಾರಾಜರು ಹಾಗೂ ಹೊನವಾಡದ ಬಾಬುರಾವ ಮಹಾರಾಜರಿಂದ ಆಧ್ಯಾತ್ಮಿಕ ಪ್ರವಚನ ಜರುಗಲಿದೆ.ಮಧ್ಯಾಹ್ನ ೨ ಗಂಟೆಗೆ ಮಹಾಪ್ರಸಾದ, ಸಂಜೆ ೬ ಗಂಟೆಗೆ ರಕ್ಷಾ ಸುದರ್ಶನ ಹೋಮ, ಪ್ರಾಸಾದ ವಾಸ್ತು (ದೇವಾಲಯದ ವಾಸ್ತು ಹೋಮ)…
