ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಟೆಂಪೋ-ಟ್ರಾಕ್ಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ೧೦ ಜನ ಗಂಭೀರವಾಗಿ ಗಾಯಗೊಂಡ ಘಟನೆ ಆಲಮಟ್ಟಿ ಜಲಾಶಯದ ಬಲಭಾಗದ ಕೆಎಸ್ ಐಎಸ್ ಎಫ್ ಸಿಬ್ಬಂದಿಗಳ ವಸಾಹತು ಸಮೀಪ ಸೊಮವಾರ ಸಂಜೆ ಸಂಭವಿಸಿದೆ.
ಟೆಂಪೋದಲ್ಲಿದ್ದ ಪ್ರಯಾಣಿಕರೆಲ್ಲರೂ ಗಾಯಗೊಂಡಿದ್ದು, ಅದರಲ್ಲಿ ೧೦ ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಅವರೆಲ್ಲರೂ ಹುಣಸಗಿ ತಾಲ್ಲೂಕಿನ ಜೈನಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದವರು.
ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿ, ದರ್ಶನ ಪಡೆದು ಮರಳಿ ತಮ್ಮೂರಿಗೆ ಹೋಗುವ ಮಧ್ಯೆ ಆಲಮಟ್ಟಿ ಉದ್ಯಾನ ವೀಕ್ಷಿಸಲು ಆಲಮರಿಗೆ ಸೊಮವಾರ ಬಂದಿದ್ದರು. ಲವಕುಶ ಉದ್ಯಾನ ವೀಕ್ಷಿಸಿ ಅಲ್ಲಿಂದ ಕೆಳಕ್ಕೆ ಬರುವಾಗ ಇಳಿಜಾರಿನಲ್ಲಿ ಟೆಂಪೋ ಚಾಲಕನ ನಿಯಂತ್ರಣಕ್ಕೆ ಬಾರದೇ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಟೆಂಪೋ ನುಜ್ಜುಗುಜ್ಜಾಗಿ ಉರುಳಿ ಬಿದ್ದಿದೆ.
ಅಲ್ಲಿಯೇ ಇದ್ದ ಕೆಎsIಎsಂಫ್ ನ ೨೦ ಕ್ಕೂ ಹೆಚ್ಚು ಪೊಲೀಸರು ತಕ್ಷಣವೇ ಟೆಂಪೋನಲ್ಲಿದ್ದ ಪ್ರಯಾಣಿಕರೆಲ್ಲರನ್ನು, ಸಿಲುಕಿಗೊಂಡ ಗಾಯಾಳಗಳನ್ನು ಹೊರಕ್ಕೆ ತೆಗೆದರು. ತಕ್ಷಣವೇ ಅಂಬುಲೆನ್ಸ್ ಸಂಪರ್ಕಿಸಿದಾಗ ನಾಲ್ಕು ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಕೆಎಸ್ ಐಎsಂಫ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ನಂತರ ಕ್ರೇನ್ ಮೂಲಕ ಟೆಂಪೋ ಎತ್ತಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಘಟನೆಯಲ್ಲಿ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಇನ್ನೂ ಆರು ಜನರಿಗೆ ಮೂಳೆ ಮುರಿತವಾಗಿವೆ, ಅವರೆಲ್ಲರನ್ನು ವಿಜಯಪುರ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದ ೨೦ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಸರಸ್ವತಿ ಮಲ್ಲಪ್ಪ ದೊಡಮನಿ (೩೫), ಹಣಮವ್ವ ದೆವೇಂದ್ರಪ್ಪ ವಾಲೀಕಾರ (೫೦), ಗೌತಮ ವಾಲೀಕಾರ (೧೦), ಭಾಗಮ್ಮ ವಾಲೀಕಾರ (೧೭) ಅವರಿಗೆ ಗಂಭೀರ ಗಾಯಗಳಾಗಿವೆ.
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

