Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಭಕ್ತಿ ಮಾರ್ಗವನ್ನು ಅನುಸರಿಸಿದರೆ ಮುಕ್ತಿ ಖಚಿತ, ಶಕ್ತಿಗಿಂತ ಭಕ್ತಿ ಮುಖ್ಯ ಎಂದು ಕಕಮರಿಯ ರಾಯಲಿಂಗೇಶ್ವರ ಮಠದ ಪೀಠಾಧ್ಯಕ್ಷ ಸದ್ಗುರು ಅಭಿನವ ಗುರುಲಿಂಗ ಜಂಗಮ ಶ್ರೀಗಳು ಹೇಳಿದರು.ಪಟ್ಟಣದ ಸಾತಪುರದ ಮಾರತಂಡ ಗುಡ್ಲ ಇವರ ಹೊಲದ ಆವರಣದಲ್ಲಿ ನಡೆದ ಜ್ಞಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಮೃತತ್ವವನ್ನು ಕಳೆದುಕೊಂಡು ಪ್ರತಿ ಜೀವಿಯು ಅಮರತ್ವಕ್ಕಾಗಿ ಹಪಹಪಿಸುತ್ತಿರುತ್ತದೆ. ಇದು ಪ್ರತಿ ಜೀವದ ಆಳ, ಗಾಢ ಬಯಕೆ, ಶಾಶ್ವತವಾಗಿ ಬದುಕಬೇಕು ಎಂಬ ಉದ್ದೇಶದಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ ಎಂದರು.ಮಲ್ಲಿಕಾರ್ಜುನ ಮಹಾರಾಜರು ಮಾತನಾಡಿ ಶರಣರ ಕುರಿತು ಆದ್ಯಾತ್ಮಿಕ ಪ್ರವಚನಗಳು ತುಂಬಾ ಮಹತ್ವ ಪಡೆದಿವೆ. ಪ್ರವಚನ ಕೇಳುವದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಹೀಗಾಗಿ ಎಲ್ಲರೂ ಭಾಗಿಯಾಗಿ ಪ್ರವಚನ ಆಲಿಸಬೇಕು ಎಂದರು.ಹೆಸ್ಕಾಂ ನಿವೃತ್ತ ಅಧಿಕಾರಿ ಎಂ.ವಿ.ಅಗಸರ ಮಾತನಾಡಿ ಶರಣರು, ಸಂತರು ಬರೆದ ವಚನ ಮತ್ತು ಸುಂದರ ಮಾತುಗಳನ್ನು ಆಲಿಸುವದರಿಂದ, ದೇವತಾ ಕಾರ್ಯಗಳಲ್ಲಿ ಭಾಗವಹಿಸುವದರಿಂದ ಸಂತೋಷ ನೆಮ್ಮದಿ ಮುಕ್ತಿ ಸಿಗಲು ಸಾದ್ಯ ಎಂದರು.ಬಸಗೊಂಡ ಬಿರಾದಾರ, ಪ್ರಕಾಶ ಗುಡ್ಲ ಮಾತನಾಡಿದರು.ಸಮಾರಂಭದಲ್ಲಿ ಪುರಸಭೆ ಮಾಜಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಾರ್ಡ್ ನಂ: 28 ರಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಗಬೇಕಾದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ವಿಜಯಪುರ ನಗರ ಉಪಾಧ್ಯಕ್ಷ ಆಮೀರ್ ಸೊಹೈಲ್ ಪಟೇಲ್ ಅವರ ನೇತೃತ್ವದಲ್ಲಿ ಮಂಗಳವಾರ ರಸ್ತೆ ತಡೆದು, ಟಾಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.ಇಲ್ಲಿನ ರಸ್ತೆಗಳಲ್ಲಿ ತಿರುಗಾಡಿದರೆ ರಸ್ತೆಯೋ ಅಥವಾ ಗುಂಡಿಯೋ ಅನ್ನುವ ಹಾಗಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಗರ ಉಪಾಧ್ಯಕ್ಷ ಆಮೀರ್ ಸೊಹೈಲ್ ಪಟೇಲ್ ಕಿಡಿಕಾರಿದರು.ವಾರ್ಡ್ ನಂ 28 ರಲ್ಲಿ ಕಳೆದ 10-12 ವರ್ಷಗಳಿಂದ ವಾರ್ಡಿನ ಜನತೆಗೆ ಮೂಲಭೂತ ಸೌಕರ್ಯಗಳಾದ ಒಳ್ಳೆಯ ರಸ್ತೆ, 24×7 ಕುಡಿಯುವ ನೀರು, ದಾರಿದೀಪಗಳು, ಒಳಚರಂಡಿ ವ್ಯವಸ್ಥೆ ಇಲ್ಲದೆ ಜನರು ಹೈರಾಣ ಆಗುತ್ತಿದ್ದಾರೆ ಹಾಗೂ ರಸ್ತೆಗಳಲ್ಲಿ ಬೀದಿ ನಾಯಿಗಳ ಮತ್ತು ಬಿಡಾಡಿ ದನಗಳ ಹಾವಳಿ ಅಧಿಕವಾಗಿರುವುದರಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ರಸ್ತೆಗಳಲ್ಲಿ ಓಡಾಡಲು ಭಯಪಡುವಂತಾಗಿದೆ ಎಂದು ಆಮೀರ್ ಪಾಲಿಕೆಯ ವಿರುದ್ಧ ಹರಿಹಾಯ್ದರು.ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎರಡು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣವಾದರೂ ಶಿಥಿಲಗೊಂಡ ಹಳೆ ಕಟ್ಟಡ ನೆಲಸಮಗಿಳಿಸದೆ ಇರುವುದರಿಂದ ಪಾಲಕರು ಆತಂಕಪಡುವಂತಾಗಿದೆ.ಈಗಾಗಲೆ ಇಲ್ಲಿ ಹೆಚ್ ಕೆ ಆರ್ ಡಿ ಬಿ ಯೋಜನೆಯಡಿ 2019-20 ಹಾಗೂ 22-23 ನೇ ಸಾಲಿನಲ್ಲಿ ಎರಡು ಅಂತಸ್ತಿನ ಹೊಸ ಕಟ್ಟಡಗಳು ನಿರ್ಮಾಣವಾಗಿದ್ದು, ಮೂರ್ನಾಲ್ಕು ವರ್ಷಗಳಿಂದ ಮಕ್ಕಳಿಗೆ ಹೊಸ ಕಟ್ಟಡದಲ್ಲಿಯೇ ಪಾಠ ಪ್ರವಚ ನಡೆದಿರುತ್ತದೆ. ಆದರೆ ಹೊಸ ಶಾಲಾ ಕಟ್ಟಡದ ಮುಂಭಾಗವೇ ಇರುವ ಶಿಥಿಲಗೊಂಡ ಹಳೆ ಕಟ್ಟಡ ಇನ್ನೂ ತೆರವುಗೊಳಿಸದೆ ಇರುವುದರಿಂದ ನಿತ್ಯ ನೂರಾರು ಹೈಸ್ಕೂಲ್ ಮಕ್ಕಳು ಇದೇ ಶಿಥಿಲಗೊಂಡ ಕಟ್ಟಡದ ಅಡಿಯಲ್ಲೆ ಓಡಾಡುತ್ತಿದ್ದು ಯಾವ ಸಂದರ್ಭದಲ್ಲಿ ಯಾವ ಅನಾಹುತ ಸಂಭವಿಸುತ್ತದೆಯೋ ಎಂಬ ಆತಂಕ ಪಾಲಕರದ್ದಾಗಿದೆ.ಹತ್ತಾರು ಕೋಣೆಗಳ ಬೃಹತ್ ಕಟ್ಟಡ ಇದಾಗಿದ್ದು, ಶಿಥಿಲಾವಸ್ಥೆ ತಲುಪಿದೆ ಎಂಬ ಕಾರಣಕ್ಕೆ ಶಾಲಾ ಮಕ್ಕಳ ಪಾಠ ಪ್ರವಚನಕ್ಕೆ ಅಪಾಯವೆಂದರಿತೆ ಹೊಸ ಕಟ್ಟಡ ನಿರ್ಮಾಣವಾದರೂ ಹೊಸ ಕಟ್ಟಡದ ಮುಂಭಾಗವಿರುವ ಅಪಾಯಕ್ಕೆ ಎಡೆಯಾದ ಈ ಹಳೆ ಕಟ್ಟಡದ ತೆರವು…
ಪೊಲೀಸ್ ಅಧಿಕಾರಿಗಳು &ಸಿಬ್ಬಂದಿಗೆ ಹಾಗೂ ಅವರ ಅವಲಂಬಿತರಿಗೆ ‘ಆರೋಗ್ಯ ಭಾಗ್ಯ ಯೋಜನೆ’ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳಿಗೆ ಹಾಗೂ ಅವರ ಅವಲಂಬಿತರಿಗೆ ‘ಆರೋಗ್ಯ ಭಾಗ್ಯ ಯೋಜನೆ’ ಯಡಿ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲು ಮಾನ್ಯತೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳಿ ಹಾಗೂ ಡಿ.ವೈ.ಎಸ್.ಪಿ ಬಸವರಾಜ ಯಲಗಾರ ಅವರು ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.ಆಸ್ಪತ್ರೆಯ ಆಪರೇಶನ್ ಥಿಯೇಟರ್, ಡಯಾಲಸಿಸ್ ಸೆಂಟರ್, ಪ್ರಯೋಗಾಲಯ ಸೇರಿದಂತೆ ಪ್ರತಿಯೊಂದು ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿರುವ ಆಧುನಿಕ ಚಿಕಿತ್ಸಾ ಸೌಲಭ್ಯಗಳು, ನುರಿತ ವೈದ್ಯರ ತಂಡ, ಶುಚಿತ್ವ, ಅತ್ಯುತ್ತಮ ವಾತಾವರಣ ಕಂಡು ಶ್ಲಾಘನೀಯ ವ್ಯಕ್ತಪಡಿಸಿದರು.ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್, ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಹಾಗೂ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಲು ಮಾನ್ಯತೆ ನೀಡಲಾಗಿದೆ. ಅಲ್ಲದೆ, ಆಸ್ಪತ್ರೆಯಲ್ಲಿ ಇ.ಎಸ್.ಐ, ಜ್ಯೋತಿ…
– ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಬಸವಣ್ಣ ಮೂಲ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದನು. ಬ್ರಾಹ್ಮಣ್ಯ ಪರಿಪಾಲನೆ ವೈದಿಕ ಆಚರಣೆ ಮತ್ತು ಅಸ್ಪ್ರಶ್ಯತೆ ಜಾತೀಯತೆ ಮೇಲು ಕೀಳು ಎಂಬ ಕಿತ್ತಾಟದಲ್ಲಿ ಸಾಮಾಜಿಕ ವ್ಯವಸ್ಥೆ ನಲುಗಿ ಹೋಗಿತ್ತು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಶೈಕ್ಷಣಿಕ ಆರ್ಥಿಕ ರಂಗಗಳಲ್ಲಿ ಮಹಿಳೆಯರನ್ನು ಕಾರ್ಮಿಕರನ್ನು ದಲಿತ ಪಂಚಮ ಅಸ್ಪ್ರಶ್ಯ ದಮನಿತ ವರ್ಗದವರಿಗೆ ಎಲ್ಲ ಹಕ್ಕುಗಳನ್ನು ಕಸಿದುಕೊಂಡು ಕರ್ಮ ಸಿದ್ಧಾಂತವನ್ನು ಪ್ರಧಾನವಾಗಿಟ್ಟುಕೊಂಡು ಭಕ್ತಿ ಎನ್ನುವುದು ಕೇವಲ ಶಿಷ್ಟ ವರ್ಗಕ್ಕೆ ಮೀಸಲಾಗಿತ್ತು.ಆದರೆ ಬಸವಣ್ಣನವರು ಇದಕ್ಕೆ ವಿರುದ್ಧವಾಗಿ ಭಕ್ತನು ಒಂದು ಕುಲ, ಭವಿ ಒಂದು ಕುಲ ಎಂದನು. ಭಕ್ತ ಪರಿಪೂರ್ಣ ನಾಗರೀಕ ಮತ್ತು ಭವಿ ಪ್ರಾಪಂಚಿಕ ಬದುಕಿಗೆ ಮೀಸಲಾಗಿ ಆಸನ ವ್ಯಸನಕ್ಕೆ ತನ್ನನ್ನು ಸೀಮಿತಗೊಳಿಸಿಕೊಂಡವನು ಎಂದರ್ಥ.ಜ್ಞಾನಿ ದಾಸೋಹಿ ಚಿಂತಕ ಬಸವಣ್ಣ ತಾನು ಭಕ್ತಿ ಇಲ್ಲದ ಬಡವನಯ್ಯ ಎನ್ನುತ್ತಾನೆ. ಭಕ್ತಿ ಎಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜ ಉಂಕರಿಸಿ ಲಿಂಗ ಎಂಬ ಎಲೆಯಾಯಿತ್ತು ವಿಚಾರವೆಂಬ ಹೂವು ಆಚಾರವೆಂಬ ಕಾಯಿ ಆಯಿತ್ತು ನಿಷ್ಪತ್ತಿ ಎಂಬ ಹಣ್ಣು ಸಮಾಜಕ್ಕೆ…
– ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮಕ್ಕಳ ಮನಸ್ಸಿಗೆ ಒಳ್ಳೆಯ ವಿಚಾರಗಳನ್ನು ತುಂಬಬೇಕು, ಮಕ್ಕಳು ತೋರುವ ಉತ್ತಮ ನಡವಳಿಕೆಗಳನ್ನು ಪ್ರೋತ್ಸಾಹದ ನೀರು ಹಾಕಿ ಪೋಷಿಸಬೇಕು. ತಪ್ಪು ಯಾರೇ ಮಾಡಿರಲಿ ಕ್ಷಮೆ ಯಾಚಿಸುವ ಮೂಲಕ ವಿನಯವಂತಿಕೆಯನ್ನು ರೂಡಿಸಿಕೊಳ್ಳುವುದನ್ನು ಮನೆ ಎಂಬ ಪಾಠಶಾಲೆಯಲ್ಲಿ ಪಾಲಕರು ಕಲಿಸಲೇಬೇಕು.ಹಿರಿಯರಲ್ಲಿ ಗೌರವವನ್ನು ತಂದೆ-ತಾಯಿಗಳಲ್ಲಿ ಪ್ರೀತಿ ವಿಶ್ವಾಸವನ್ನು ಒಡಹುಟ್ಟಿದವರಲ್ಲಿ ಅನ್ಯೋನ್ಯತೆ ಮತ್ತು ವಾತ್ಸಲ್ಯಗಳನ್ನು ಬಂಧು ಬಾಂಧವರಲ್ಲಿ, ಸುತ್ತಣ ಸಮಾಜದ ಜನರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿರುವುದನ್ನು ಮನೆಯೆಂಬ ಪಾಠಶಾಲೆಯಲ್ಲಿ ಮಕ್ಕಳು ಕಲಿಯಲೇಬೇಕು.ಉತ್ತಮ ನಡೆ ನುಡಿಗಳನ್ನು, ಧಾರ್ಮಿಕ ನಂಬಿಕೆಗಳನ್ನು, ಪ್ರೀತಿ, ವಿಶ್ವಾಸ, ಕರುಣೆ, ಮಮತೆ, ಮಮಕಾರಗಳ ಅವಶ್ಯಕತೆಗಳನ್ನು ಮಕ್ಕಳಿಗೆ ಮನೆಯೆಂಬ ಪಾಠಶಾಲೆಯಲ್ಲಿ ಕಲಿಸಲೇಬೇಕು.ತಪ್ಪು ಸರಿಗಳ ನಡುವಿನ ವ್ಯತ್ಯಾಸವನ್ನು, ಸುಳ್ಳು ಮತ್ತು ಸತ್ಯಗಳ ನಡುವಿನ ಅಂತರವನ್ನು ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಪರೀಕ್ಷಿಸಿ ಯಾವುದನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಪಾಲಕರು ಮನೆ ಎಂಬ ಪಾಠಶಾಲೆಯಲ್ಲಿ ಕಲಿಸಿಕೊಡಲೇಬೇಕು.ಬೇರೊಬ್ಬರೊಂದಿಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳುವುದನ್ನು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದನ್ನು ಚಿಕ್ಕಂದಿನಿಂದಲೇ ಮಕ್ಕಳು…
ವಿಧಾನಸೌಧದಲ್ಲಿ ಸಚಿವರಿಂದ ಲಂಚ | ಎಲ್ಲ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ | ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಾಂಬ್! ಮೈಸೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಪರ್ಸೆಂಟೇಜ್ ವಿಚಾರ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಈಗ ಶೇ.60 ರಷ್ಟು ಕಮಿಷನ್ ತೆಗೆದುಕೊಳ್ಳಲಾಗ್ತಿದೆ ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಚಿವರಿಗೆ ಇಂತಿಷ್ಟು ಕಮಿಷನ್ ಎಂದು ನಿಗದಿಪಡಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗುತ್ತಿಗೆದಾರರೇ ಹೇಳುತ್ತಿರುವುದಾಗಿ ತಿಳಿಸಿದರು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕೆಲ ಜನರಿಗೆ ಪ್ರಯೋಜನವಾಗುತ್ತಿರುವುದನ್ನು ಒಪ್ಪಿಕೊಂಡ ಕುಮಾರಸ್ವಾಮಿ, ಬಸ್ ಪ್ರಯಾಣ ದರ ಏರಿಕೆ ಮತ್ತಿತರ ಆರ್ಥಿಕ ಹೊಡೆತದ ಕ್ರಮಗಳು ಹಂತ ಹಂತವಾಗಿ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಪ್ರಕ್ರಿಯೆ ಭಾಗವಾಗಿರಬಹುದು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ವ್ಯಕ್ತಿಯಾಗಿದ್ದು, ಅವರೇ ಸಹ ಹಣಕಾಸು ಖಾತೆ ಹೊಂದಿದ್ದಾರೆ, ಅವರ ಒಪ್ಪಿಗೆಯೊಂದಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕಾಂಗ್ರೆಸ್…
ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ’ಆರಂಭ ೨೦೨೫’ ಉದ್ಘಾಟಿಸಿದ ಹಿರಿಯ ಪತ್ರಕರ್ತ ಬಸವರಾಜ ಸಂಪಳ್ಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪತ್ರಿಕಾರಂಗದಲ್ಲಿ ಯಶಸ್ಸು ಸಾಧಿಸಲು ಕೇವಲ ಪದವಿಯೇ ಸಾಲದು, ಅದರ ಜೊತೆಗೆ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದು ವಿಜಯಪುರದ ಪ್ರಜಾವಾಣಿ ಪತ್ರಿಕೆಯ ಹಿರಿಯ ಜಿಲ್ಲಾ ವರದಿಗಾರ ಬಸವರಾಜ ಸಂಪಳ್ಳಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಸೋಮವಾರ ಆಯೋಜಿಸಿದ್ದ ‘ಆರಂಭ ೨೦೨೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹೊಸ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮದ ಬಳಕೆ, ಮತ್ತು ಹೊಸ ಆವಿಷ್ಕಾರಗಳೊಂದಿಗೆ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಬೇಕು. ನಿರಂತರ ಅಧ್ಯಯನ, ಹೊಸತನವನ್ನು ಅಳವಡಿಸಿಕೊಳ್ಳುವ ಮನೋಭಾವ, ಮತ್ತು ಕಠಿಣ ಪರಿಶ್ರಮದಿಂದ ಈ ರಂಗದಲ್ಲಿ ಯಶಸ್ಸು ಪಡೆಯುವುದು ಸಂಪೂರ್ಣ ಸಾಧ್ಯ. ಪತ್ರಿಕೋದ್ಯಮ ಒಂದು ಸಮೃದ್ಧ ಹಾಗೂ ಪ್ರಭಾವಶಾಲಿ ಕ್ಷೇತ್ರವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಭಾಷಾ ಪ್ರಾವೀಣ್ಯತೆಯು ಅತ್ಯಂತ ಅಗತ್ಯ. ಕೇವಲ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಬಸ್ ಪ್ರಯಾಣ ದರ ಏರಿಕೆ ಮಾಡಿರುವದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಅಲ್ಲಿ ಮಾತನಾಡಿದ ಎಬಿವಿಪಿ ನಗರ ಕಾರ್ಯದರ್ಶಿ ಗಣೇಶ ಹಂಜಗಿ ಬಸ್ ಪ್ರಯಾಣ ದರ ಶೇ ೧೫ ರಷ್ಟು ಹೆಚ್ಚಿಸಿರುವದು ಖಂಡನೀಯ ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಯಾರಾದರೂ ವಿದ್ಯಾರ್ಥಿಗಳು ಇಂಟರ್ವಿವ್ ಸಂದರ್ಶನಗಳಿಗೆ ಹೋಗಲು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ಅದಲ್ಲದೆ ಎಲ್ಲ ದರಗಳು ಹೆಚ್ಚಿದ್ದು ಬಸ್ ದರ ಹೆಚ್ಚಿಸಿದರೆ ಸಾಮಾನ್ಯರ ಜೀವನ ದುಸ್ತರವಾಗುತ್ತದೆ ಎಂದರು.ಪ್ರಧಾನ ಕಾರ್ಯದರ್ಶಿ ಸಚೀನ ದಾನಗೊಂಡ, ರಾಹುಲ್ ಜಾಧವ, ಮಹೇಶ ಮುನ್ನಳ್ಳಿ, ಅಂಬರೀಷ ಬಿರಾದಾರ, ದರ್ಶನ ಹರಿಜನ, ಸಂದೀಪ ಜೇವೂರ, ಸಂದೀಪ ಪರೀಟ,ಸಮರ್ಥ ಗಾಯಕವಾಡ, ಪ್ರತೀಕ ಹಂಜಗಿ, ಮಂಜುನಾಥ ಪೂಜಾರಿ, ರಾಮು ಹೂಗಾರ ಮತ್ತಿತರಿದ್ದರು.ಶಾಂತೇಶ್ವರ ಪದವಿ ಮಹಾವಿದ್ಯಾಲಯ, ಮಿನಿ ವಿಧಾನಸೌಧ, ಬಸವೇಶ್ವರ ವೃತ್ತದ ಮೂಲಕ ಬಸ್ ನಿಲ್ದಾಣ ತೆರಳಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳಿಗೆ ಕಲಿಕಾಂಶಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಅನುಕೂಲ ಕಲ್ಪಿಸಿ ಕಲಿಕೆಯ ಫಲಿತಾಂಶವನ್ನು ಸುಧಾರಿಸುವದು ಇಂದಿನ ದಿನಗಳಲ್ಲಿ ಬಹುಮುಖ್ಯವಾಗಿದೆ ಎಂದು ವಿಜಯಪುರ ಡಯಟ್ನ ಉಪನಿರ್ದೇಶಕಿ ಉಮಾದೇವಿ ಸೊನ್ನದ ಶಿಕ್ಷಕರಿಗೆ ಕರೆ ನೀಡಿದರು.ಅವರು ಸೋಮವಾರ ಪಟ್ಟಣದ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಎಸ್ ಎಸ್ ಕೆ, ಡಯಟ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಇಂಡಿ ಹಾಗೂ ಚಡಚಣ ಶೈಕ್ಷಣಿಕ ವಲಯಗಳ ಬಿಇಓ, ಬಿ ಆರ್ ಸಿ ಹಾಗೂ ಸಿ ಆರ್ ಪಿ, ಬಿ ಆರ್ ಪಿ ರವರಿಗೆ ಹಮ್ಮಿಕೊಂಡಿರುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಜಾಗತಿಕ ಶಿಕ್ಷಣದ ಮೂಲಕ ಸುಸ್ಥಿರ ಅಭಿವೃದ್ಧಿ, ಸುಸ್ಥಿರ ಜೀವನಶೈಲಿ, ಮಾನವ ಹಕ್ಕುಗಳ ರಕ್ಷಣೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಮಕ್ಕಳಿಗೆ ಒದಗಿಸುವದು ಶಿಕ್ಷಕರ ಬಹುಮುಖ್ಯ ಕಾರ್ಯವಾಗಿದೆ ಎಂದರು.ಡಯಟ್ನ ಉಪನ್ಯಾಸಕ ಅಬ್ದುಲ್ರಹಿಮ ಮುಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಮಾತನಾಡಿ, ಶಿಕ್ಷಕರು…
