Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಅಂಥ ಶ್ವಾನ ಪ್ರದರ್ಶನ ಪ್ರತಿವರ್ಷ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಶಸಂಸಿದರು.ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾತ್ರಿ ವೇಳೆ ಎಲ್ಲರೂ ನಿದ್ರೆಗೆ ಜಾರಿದ ವೇಳೆ ಶ್ವಾನಗಳು ಸದಾ ಜಾಗೃತಿಯಿಂದಿದ್ದು, ಕುಟುಂಬ ಸದಸ್ಯರನ್ನು ರಕ್ಷಣೆ ಮಾಡುತ್ತವೆ. ಅಂಥ ಶ್ವಾನಗಳೆಂದರೆ ಎಲ್ಲರಿಗೂ ಬಲು ಪ್ರೀತಿ ಎಂದರು.ಆದರೆ ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರ ಹಾವಳಿ ನಿಯಂತ್ರಣಕ್ಕೆ ಪಾಲಿಕೆ ವತಿಯಿಂದ ಸಂತಾನಹರಣ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ನಾನಾ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದನ್ನು ಪ್ರಶಂಸಿದರು. ಇಂಥ ಪ್ರದರ್ಶನವನ್ನು ಜಿಲ್ಲಾ ಪಶು…
ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (ಮಿನಿ ಪ್ಲಾನೆಟೇರಿಯಂ) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು ₹56.88 ಕೋಟಿ ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಅವರು, `2015-16ನೇ ಸಾಲಿನ ಬಜೆಟ್ಟಿನಲ್ಲೇ ವಿಜಯಪುರವೂ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಇದು ಅನುಷ್ಠಾನಕ್ಕೆ ಬರಲಿಲ್ಲ. ಈಗ ₹12.88 ಕೋಟಿಗೆ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಇದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಈ ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದಿದ್ದಾರೆ.ವಿಜಯಪುರದಲ್ಲಿ ಈ ಯೋಜನೆಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಅದು ಅಂತಿಂಥಹ ಗೂಳಿಯಲ್ಲ. ಶಿಷ್ಯನನ್ನು ಪರೀಕ್ಷಿಸಿದ ಗೂಳಿ, ಶಿಷ್ಯನಿಂದ ಪರೀಕ್ಷೆಗೆ ಒಳಗಾದ ಗುರುವಿನ ಗೂಳಿ, ಪರೀಕ್ಷೆಯಲ್ಲಿ ಪಾಸಾದ ಪವಾಡ ತೋರಿ ಬಲಾಢ್ಯವಾದ ಗುರುವಿನ ಗೂಳಿ ಲಿಂಗೈಕ್ಯವಾದರೂ ಶಿಷ್ಯ ತೋರಿದ ಗುರುಭಕ್ತಿ ಗುರುವಿನ ಗೂಳಿಗೆ ರಕ್ಷಣೆ ನೀಡಿದ್ದು ಎಂತದ್ಧು ಎಂದರೆ ಲೋಕ ಕಲ್ಯಾಣಕ್ಕಾಗಿ ತಪಸ್ಸುಗೈದ ರುದ್ರ ಭೂಮಿಯಲ್ಲಿ ಸುಮಾರು ೬ ರಿಂದ ೮ ಅಡಿ ಆಳದಲ್ಲಿ ವಿಷಜಂತೂ ಮುಟ್ಟದಂತೆ, ಮಣ ್ಣನ ಭಾರವೂ ಆಗದಂತೆ, ಗಟ್ಟಿಮುಟ್ಟಾದ ಕರಿ ಕಲ್ಲಿನ ಗಚ್ಚಿನ ಗೋಡೆ, ಮೇಲೆ ಕಲ್ಲಿನ ಛಾವಣಿಯ ಛತ್ ನಿರ್ಮಿಸಿ ಲಿಂಗೈಕ್ಯ ಗೂಳಿಗೆ ರಕ್ಷಾ ಕವಚ ನಿರ್ಮಿಸಿದ ಶಿಷ್ಯ ಕೂಗಳತೆಯ ದೂರದಲ್ಲಿ ತಾನೂ ಸಮಾಧಿಸ್ಥನಾಗಿ ಭೂಗರ್ಭದಲ್ಲೂ ಮೊದಲು ಗುರುವಿನ ದರ್ಶನ ನಂತರ ತನ್ನ ದರ್ಶನ ಎಂದು ಗುರುವಿನತ್ತ ಚಿತ್ತ ಹರಿಸಿ ಗುರುಭಕ್ತಿ ಮೆರೆದ ತಾಲ್ಲೂಕಿನ ಲಚ್ಯಾಣ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಕ್ಷೇತ್ರದತ್ತ ಈಗ ಭಕ್ತರ ಚಿತ್ತ ನೆಟ್ಟಿದೆ.ಹೌದು, ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಬಂಥನಾಳದ ಗ್ರಾಮದಲ್ಲಿ ಶ್ರೀ ವೃಷಭಲಿಂಗೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಇದೇ ಫೆಬ್ರುವರಿ 26 ರಿಂದ ಮಾರ್ಚ 1ರ ವರೆಗೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ಫೆ. 26 ರಂದು ಬಂಥನಾಳ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಮಹಾ ಶಿವರಾತ್ರಿ ಯ ಅಂಗವಾಗಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಫೆ.28 ರಂದು ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು ಈ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ. ಸಿಂದಗಿ ಶಾಸಕ ಅಶೋಕ ಮನಗೂಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಡಿ. ಪಾಟೀಲ ಭಾಗವಹಿಸಲಿದ್ದಾರೆ.ತದನಂತರ ಇಂಡಿ ಹಾಗೂ ಸಿಂದಗಿ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಶಾರೀರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಕ್ಕೆ ಜಗದ್ಗುರು ಪೀಠದ ಪೂಜ್ಯರ ತುಲಾಭಾರ ಸೇವೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೊರವಿ ನರಸಿಂಹದೇವರ ಸನ್ನಿಧಾನದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಗಾಯತ್ರಿ ಜಪ ಯಜ್ಞ ಹಾಗೂ ರಗೂ ಹೊಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಜಪಿಸಿದ ೩೬ ಲಕ್ಷ ಗಾಯತ್ರಿ ಮಂತ್ರವನ್ನು ಶನಿವಾರ ಭಗವಂತನಿಗೆ ಸಮರ್ಪಿಸಲಾಯಿತು.ಅತ್ಯಂತ ಪ್ರಭಾವಶಾಲಿ, ಪರಮ ಪವಿತ್ರ ಮತ್ತು ಚತುರ್ವೇದ ಸಾರವಾಗಿರುವ ಗಾಯತ್ರಿ ಮಂತ್ರ ನಿತ್ಯ ಪಠಣದಿಂದ ಏಕಾಗ್ರತೆ, ಸ್ಮರಣಶಕ್ತಿ ವೃದ್ಧಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಜೀವನದಲ್ಲಿ ಉತ್ಸಾಹ, ದೇಹದಲ್ಲಿ ಚೈತನ್ಯ, ಮುಖದಲ್ಲಿ ತೇಜಸ್ಸು ಮೂಡುತ್ತದೆ. ಕ್ರೋಧ ನಿಯಂತ್ರಿಸಿ ಮಾನಸಿಕ ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯ ಲüಸುತ್ತದೆ. ದಾರಿ ತಪು$สสತ್ತಿರುವ ಯುವ ಜನತೆಯನ್ನು ಸನ್ಮಾರ್ಗದತ್ತ ತರುವ ಪ್ರಯತ್ನವಾಗಿ ಈ ಕಾರ್ಯಕ್ರಮ ಹಮ್ಮ್ಮಿಕೊಳ್ಳಲಾಗಿತ್ತು. ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಶನಿವಾರ ಬೆಳಗ್ಗೆ ೮ಕ್ಕೆ ಮಹಾರುದ್ರಹೊಮ ಪ್ರಾರಂಭವಾಯಿತು. ೧೧ಜನ ಋತ್ವಿಜರು ಹೊಮದ ನೇತೃತ್ವ ವಹಿಸಿದ್ದರು. ಹಿರಿಯ ವಿದ್ವಾಂಸ ಪಂ.ಮಧ್ವಾಚಾರ್ಯ ಮೊಕಾಶಿ ನೇತೃವದಲ್ಲಿ ನಡೆದ ಗಾಯತ್ರಿ ಜಪ ಯಜ್ಞದಲ್ಲ್ಲಿ ೨೨ ಜನ ಋತ್ವಿಜರು ಪಾಲ್ಗೊಂಡಿದ್ದರು. ಮಹಿಳೆಯರು ಪಠಿಸಿದ ೧೪…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕ್ದೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಾಜಶೇಖರ ಬಸವಂತಪ್ಪಾ ಹೊಸಮನಿ, ಉಪಾಧ್ಯಕ್ಷರಾಗಿ ಚನಬಸಪ್ಪ ರೇವಣಸಿದ್ದಪ್ಪ ಮಸಳಿ, ನಿದೇಶಕರಾಗಿ ಬಾಬಾಗೌಡ ರುದ್ರಗೌಡ ಪಾಟೀಲ, ಭೀರಪ್ಪ ಪೂಜಪ್ಪ ಪೂಜಾರಿ, ಶರಣಪ್ಪ ಮಲ್ಲಪ್ಪ ಹೊಸಮನಿ, ಸಿದರಾಯ ಘಂಟೆಪ್ಪ ಲೋಣ , ಅಂಬಿಕಾ ಸುನೀಲ ಬಿರಾದಾರ, ಮಹಾದೇವಿ ಜಟ್ಟೆಪ್ಪ ಗೌಡಗಾವಿ, ಶ್ರೀಮಂತ ನಾಗಪ್ಪ ಲೋಣ , ದಯಾನಂದ ಸದಪ್ಪ ಹಟ್ಟಿ ಉರ್ಫ ಹಿರೋಳಿ, ನಿಂಗಪ್ಪ ಯಮನಪ್ಪ ಸಮಗಾರ, ಬಾಲಪ್ಪ ಪೂಜಪ್ಪ ನಾಯಿಕೊಡಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ ಆಫೀಸರ್ ಕಲ್ಲನಗೌಡ ಪಾಟೀಲ ಮತ್ತು ಮಖ್ಯ ಕಾರ್ಯನಿರ್ವಾಕ ಉಮೇಶ ಹೊಸಮನಿ ಘೋಷಿಸಿದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರ್ವಜ್ಞನ ತತ್ವಗಳು ಆದರ್ಶ ಬದುಕಿಗೆ ಸರ್ವಕಾಲಿಕ ಕನ್ನಡಿಯಾಗಿದೆ ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಚರಿಸಿದ ಸಂತ ಸರ್ವಜ್ಞ ಜಯಂತಿ ಆಚರಣೆ ವೇಳೆ ಅವರು ಮಾತನಾಡಿದರು.ಸರ್ವಜ್ಞನ ತ್ರಿಪದಿಗಳು ಸಂಕ್ಷಿಪ್ತವಾಗಿದ್ದರೂ ಅರ್ಥಗರ್ಭಿತವಾಗಿದೆ. ಅಲ್ಲದೆ ಎಲ್ಲರೂ ಓದಿ ಅರ್ಥೈಸಿಕೊಂಡು ಬದುಕಿನಲ್ಲಿ ಅನ್ವಯಿಸಿಕೊಳ್ಳುವ ಅವಶ್ಯಕತೆ ಇದೆ. ವಿದ್ಯೆಗೆ ಗರ್ವಪಡಬಾರದು. ವಿದ್ಯೆಯಲ್ಲಿ ಹೊಸತನ ಕಂಡಾಗ ಅನ್ವಯಿಸಿಕೊಳ್ಳುವ ಪ್ರವೃತ್ತಿ ರೂಢಿಸಿಕೊಳ್ಳ ಬೇಕಾಗಿದೆ ಎಂದರು.ಈ ವೇಳೆ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಗುರು ಮಾತೆ ರಂಜಿತಾ ಭಟ್ಟ, ಪ್ರಾಥಮಿಕ ವಿಭಾಗದ ಮುಖ್ಯಗುರು ಮಾತೆ ಸರಸ್ವತಿ ಮಡಿವಾಳರ, ಶಿಕ್ಷಕರಾದ ಅನ್ನಪೂರ್ಣ ನಾಗರಾಳ, ಬಿ.ಟಿ.ಭಜಂತ್ರಿ, ಕಿರಣ ಕಡಿ, ಮಂಜುನಾಥ ಪಡದಾಳಿ, ಎನ್.ಡಿ.ಬಡಿಗೇರ, ಮೀನಾಕ್ಷೀ ಗಣಾಚಾರಿ, ಶಿವಶಂಕರಯ್ಯ ಮಠ, ಭಾಗ್ಯ ಸಿದ್ದಾಪೂರ, ಕೀರ್ತಿ ತಳಗೇರಿ, ತ್ರಿವೇಣಿ ಕುಲಕರ್ಣಿ, ದಾನಮ್ಮ ಮಡಿವಾಳರ್, ಅನ್ನಪೂರ್ಣ ಹೊಸಮನಿ, ರೂಪಾ ನಾಟೇಕರ್, ಶಾಹಿನ ನಾಲತವಾಡ, ನೀಲಮ್ಮ ಹಡಪದ, ವಿನಾಯಕ ನಾಗರಾಳ ಸೇರಿದಂತೆ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶಾರ್ಟ್ ಸರ್ಕೀಟ್ ನಿಂದಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಳವಾಡ ಏತ ನೀರಾವರಿ ಯೋಜನೆಯ ವಿಭಾಗ ಸಂಖ್ಯೆ -೪ ಕಚೇರಿಯ ಎರಡು ಕೋಣೆಗಳಿಗೆ ಬೆಂಕಿಬಿದ್ದ ಘಟನೆ ಶನಿವಾರ ಸಂಜೆ ಜರುಗಿದೆ.ಬೆಂಕಿ ಅವಘಡಕ್ಕೆ ಕಚೇರಿಯ ಎರಡೂ ಕೋಣೆಯಲ್ಲಿದ್ದ ಹಳೆ ಕಡತಗಳು, ಸ್ಟೇಷನರಿ ಸಾಮಗ್ರಿಗಳು, ೨೦ ಕ್ಕೂ ಕುರ್ಚಿಗಳು, ಟೈರ್ ಗಳೆಲ್ಲವೂ ಭಸ್ಮವಾಗಿವೆ.ಕಚೇರಿಯ ಹಿಂಭಾಗದ ಚಿಕ್ಕ ಸ್ಟೋರ್ ಕೋಣೆಗೆ ಬೆಂಕಿ ಬಿದ್ದ ಪರಿಣಾಮ, ಬೆಂಕಿಯ ಕೆನ್ನಾಲಿ ಪಕ್ಕದ ಕೋಣೆಗೂ ವ್ಯಾಪಿಸಿದೆ. ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ತಕ್ಷಣವೇ ಬೆಂಕಿ ನಂದಿಸಿದರು.ಸ್ಟೋರ್ ರೂಮ್ ಗೆ ಬೆಂಕಿ ಬಿದ್ದ ಪರಿಣಾಮ, ಹಳೆಯ ಕಡತಗಳು ಸುಟ್ಟಿವೆ, ಜತೆಗೆ ಸಾಮಗ್ರಿಗಳು ಭಸ್ಮವಾಗಿವೆ ಸಿಬ್ಬಂದಿಗಳೆಲ್ಲಾ ಹಾನಿಯ ನಿಖರ ಮಾಹಿತಿಯ ಪಟ್ಟಿ ಮಾಡುತ್ತಿದ್ದಾರೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಸಂಗಮೇಶ ಮುಂಡಾಸ ತಿಳಿಸಿದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸಾರಂಗ ಮಠದ ಮುಂದಿನ ಉತ್ತರಾಧಿಕಾರಿಯಾಗಿಜಮಖಂಡಿ ತಾಲೂಕಿನ ಕೊಣ್ನೂರು ಗ್ರಾಮದ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ನೇಮಕಗೊಂಡಿದ್ದಾರೆ.ಪಟ್ಟಣದ ಸಾರಂಗಮಠದಲ್ಲಿ ಶ್ರೀ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನದ ಮೊದಲ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅಫ್ಜಲಪೂರಿನ ಮಳೇಂದ್ರ ಶಿವಾಚಾರ್ಯರು ಈ ಘೋಷಣೆಯನ್ನು ಮಾಡಿದರು.ಈ ವೇಳೆ ಅವರು ಮಾತನಾಡಿ, ಸಿಂದಗಿ ಸಾರಂಗಮಠಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಗುರುಪರಂಪರೆಯ ಮಠವಾದ ಸಾರಂಗಮಠ ಜಾತಿಧರ್ಮವನ್ನು ಮಿರಿದ ಮಠಗಳಲ್ಲಿ ಒಂದಾಗಿದೆ. ಶಿಕ್ಷಣ, ಧರ್ಮ ಪ್ರಸಾರ, ಸಾಮಾಜಿಕ ಸೇವೆ, ಕೃಷಿ, ಆಧ್ಯಾತ್ಮವನ್ನು ನಿತ್ಯ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ಸೇವೆ ಮೆರೆಯುತ್ತಿದೆ. ಲಿಂ. ಪೂಜ್ಯ ಚನ್ನವೀರ ಸ್ವಾಮಿಗಳು ಮಠವನ್ನು ಬೆಳೆಸುವುದರ ಜೊತೆಗೆ ಈ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು ಪ್ರಸ್ತುತ ಪೀಠಾಧಿಪತಿಯಾಗಿರುವ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಠವನ್ನು ಬೆಳೆಸುವುದು ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಉತ್ತರ ಕರ್ನಾಟಕದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕೋಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಜ್ಞಾನಿಗಳು, ವಿದ್ಯಾವಂತರು, ಧರ್ಮನಿಷ್ಠರು, ಶ್ರಮಜೀವಿಗಳು ಅಂತವರನ್ನು ಸಾರಂಗಮಠದ ೧೮ ನೇ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾನವ ಜೀವನ ಪರೋಕಾರದಿಂದಲೇ ನಡೆಯಬೇಕು. ಇಂತಹ ಪರೋಪಕಾರದ ಮನೋಭಾವ ಹೊಂದಿರುವ ಬಿರಾದಾರ ಕುಟುಂಬವು ಮುಕ್ತಿ ವಾಹನವನ್ನು ಸಮಾಜಕ್ಕೆ ಅರ್ಪಿಸಿ ಒಳಿತು ಮಾಡಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾಯರು ಹೇಳಿದರು.ಸಿಂದಗಿ ಪಟ್ಟಣದ ಆಶೀರ್ವಾದ ಗ್ರೂಪ್ ವತಿಯಿಂದ ದಿ.ರವಿಗೌಡ ಬಿರಾದಾರ ಆವರು ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಶನಿವಾರ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ನೇರವಾಗಿ ಹಸ್ತಾಂತರಿಸಿ ಮಾತನಾಡಿದ ಶ್ರೀಗಳು, ನಗರ ಬೆಳೆಯುತ್ತಿದೆ. ನಗರದ ಎಲ್ಲ ವರ್ಗದ ಜನರ ಅಂತಿಮ ಸಂಸ್ಕಾರಕ್ಕೆ ಮುಕ್ತಿ ವಾಹನವನ್ನು ಒದಗಿಸುವ ಮೂಲಕ ತಮ್ಮ ಪರೋಪಕಾರವನ್ನು ಸಮಾಜಕ್ಕೆ ಬಿತ್ತರಿಸಿದ್ದಾರೆ. ಇವರ ಈ ಸಮಾಜ ಮುಖಿ ಕಾರ್ಯ ಸಮಾಜಕ್ಕೆ ಮಾದರಿ ಎಂದರು.ಈ ವೇಳೆ ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ವಿಶ್ರಾಂತ ಶಿಕ್ಷಕ ಸಿದ್ದಪ್ಪ ಮಾಸ್ತರ ಬಿರಾದಾರ, ದಿ.ರವಿ ಬಿರಾದಾರ ಪತ್ನಿ ಲಕ್ಷ್ಮಿ, ಪುತ್ರ ಅಭಿಷೇಕ, ಅದ್ವಿತ್, ನಾಗರತ್ನ ಮನಗೂಳಿ ಸೇರಿದಂತೆ ಬಿರಾದಾರ…
