Author: editor.udayarashmi@gmail.com

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪದವಿ ತರಗತಿಯ ಮೊದಲ ದಿನ. ಪ್ರೊಫೆಸರ್ ಒಬ್ಬರು ತರಗತಿಯನ್ನು ಪ್ರವೇಶಿಸಿ ಇಂಟ್ರೊಡಕ್ಷನ್ ಟು ಲಾ ಎಂಬ ವಿಷಯದ ಕುರಿತು ಮಕ್ಕಳಿಗೆ ಬೋಧನೆ ಮಾಡಲು ಬಂದರು. ನೇರವಾಗಿ ತರಗತಿಯನ್ನು ಪ್ರವೇಶಿಸಿದ ಅವರು ಮುಂದಿನ ಸಾಲಿನಲ್ಲಿ ಕುಳಿತ ಓರ್ವ ವಿದ್ಯಾರ್ಥಿಯನ್ನು ಉದ್ದೇಶಿಸಿ ನಿನ್ನ ಹೆಸರೇನು ಎಂದು ಕೇಳಿದರು ವಿದ್ಯಾರ್ಥಿ ತನ್ನ ಹೆಸರನ್ನು ಹೇಳಿದ. ಕೂಡಲೇ ಆ ವಿದ್ಯಾರ್ಥಿಗೆ ತನ್ನ ತರಗತಿಯಿಂದ ಹೊರಗೆ ಹೋಗಲು ಪ್ರೊಫೆಸರ್ ಆದೇಶಿಸಿದರು.ವಿದ್ಯಾರ್ಥಿಗೆ ತುಸು ಗಲಿಬಿಲಿಯಾಯಿತು.. ಅಂತೆಯೇ ಉಳಿದ ವಿದ್ಯಾರ್ಥಿಗಳು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಎಲ್ಲರ ಮುಖದಲ್ಲೂ ಒಂದು ರೀತಿಯ ದಿಗಿಲು.ಸರ್ ಎಂದು ಆ ವಿದ್ಯಾರ್ಥಿ ಪ್ರೊಫೆಸರರನ್ನು ಕರೆಯಲು ಕೂಡಲೇ ನನ್ನ ತರಗತಿಯನ್ನು ಬಿಟ್ಟು ಹೊರಟು ಹೋಗು ಹೊರಗೆ ನಿಂತುಕೋ, ಇನ್ನೆಂದು ನನ್ನ ತರಗತಿಯನ್ನು ಪ್ರವೇಶಿಸುವ ಪ್ರಯತ್ನ ಮಾಡಬೇಡ ಎಂದು ಜೋರಾಗಿ ಕೂಗಿದರು.ಗಾಬರಿ ಮತ್ತು ಆತಂಕದಿಂದ ಕೂಡಿದ ವಿದ್ಯಾರ್ಥಿ ತನ್ನೆಲ್ಲ ಪರಿಕರಗಳನ್ನು ಜೋಡಿಸಿಕೊಂಡು ಕೂಡಲೇ ತರಗತಿಯಿಂದ ಹೊರಗೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ 4ನೇ ಭಾನುವಾರ ಹಮ್ಮಿಕೊಳ್ಳುವ ‘ಶ್ರೀಗುರುದೇವ ಸತ್ಸಂಗ’ ಮಾಸಿಕ ಕಾರ್ಯಕ್ರಮ ಇಂದು ಸಂಜೆ 6.00 ಗಂಟೆಗೆ ಜರುಗಲಿದೆ ಎಂದು ಹರ್ಷಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.ಮುಧೋಳ ವೈದ್ಯರು, ಸಾಹಿತಿಗಳಾದ ಡಾ.ಶಿವಾನಂದ ಕುಬಸದ ‘ಆಧುನಿಕ ಸಮಾಜದಲ್ಲಿ ಶರಣರ ಪ್ರಸ್ತುತತೆ’ ಎಂಬ ವಿಷಯ ಕುರಿತು ಅನುಭಾವ ಹಂಚಿಕೊಳ್ಳಲಿದ್ದಾರೆ. ಶ್ರೀಗುರುದೇವ ಸಂಗೀತ ಬಳಗದಿಂದ ಸಂಗೀತ ಸೇವೆ ನಡೆಯಲಿದೆ. ಆಲಬಾಳ ಗ್ರಾಮದ ಸಂಗಣ್ಣ ತೇಲಿ ಅವರು ಮಹಾಪ್ರಸಾದದ ದಾಸೋಹ ಸೇವೆ ನೆರವೇರಿಸಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ಕಾಂಗ್ರೆಸ್ ಪಕ್ಷದ ಯುವ ಮುಖಂಡ, ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪಟೇಲ್ ಬಿರಾದಾರ ಕಾಯಕಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಶ್ರೀ ಗುರು ಪಂಚಾಕ್ಷರಿ ಪುಟ್ಟರಾಜ ಸಂಗೀತ ಶಾಲೆ, ಹಾಗೂ ಗೀತಾ ಸಂಗೀತ ಅಕಾಡೆಮಿ (ರಿ) ಟ್ರಸ್ಟ್, ಖಾದ್ರಿಯಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶಿವಮೊಗ್ಗ ಈ ಸಂಸ್ಥೆಗಳ ಸಹಯೋಗದಲ್ಲಿ ಇದೇ ಮೇ 27 ರಂದು ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿರುವ ಕಲಾ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಮ್ಮದ್ ಪಟೇಲ್ ರವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗಾಯಕ ಆರ್.ಯತೀಶ್ ಕುಮಾರ್, ಬರಹಗಾರ ಡಾ.ಮಹಾಂತೇಶ ಬಿರಾದಾರ, ಚಿತ್ರ ನಟ, ಡಾ.ಸಂಗಮೇಶ ಉಪಾಸೆ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತೆ ಸವಿತಾ ಆರ್.ಇನಾಮದಾರ, ಡಿವೈಎಸ್ಪಿ ಕು.ಉಮಾರಾಣಿ ಎಸ್ ಸೇರಿದಂತೆ ಇತರರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಸಂಗೀತ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಾರ್ಡ್ ನಂ.೧೪ರಲ್ಲಿದ್ದ ಉದ್ಯಾನದಲ್ಲಿ ವಾಸವಿದ್ದವರನ್ನು ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರು ಶಾಸಕರಿಗೆ ಹಾಗೂ ಪುರಸಭೆಗೆ ಒತ್ತಡ ಹೇರಿದ್ದರಿಂದ ಅದನ್ನು ತೆರವುಗೊಳಿಸಲಾಯಿತೇ ಹೊರತು ಅದರಲ್ಲಿ ನನ್ನ ಸ್ವ- ಹಿತಾಸಕ್ತಿ ಏನಿಲ್ಲ. ಅಲ್ಲಿದ್ದವರಿಗೆ ಬೇರೆ ಸ್ಥಳಾವಕಾಶ ಮಾಡಿಕೊಡುವವರೆಗೂ ಬೇರೊಂದೆಡೆ ಸ್ಥಳ ನಿಗದಿ ಪಡಿಸಿದ್ದರಿಂದ ಸ್ವಯಂ ಪ್ರೇರಿತವಾಗಿ ಅಲ್ಲಿದ್ದವರು ತೆರವು ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಸೂಕ್ತ ನಿವೇಶನ ಒದಗಿಸಿ ಸ್ಥಳದ ಹಕ್ಕುಪತ್ರ ವಿತರಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸವಾಲು ಹಾಕಿದರು.ಪಟ್ಟಣದಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ಕೆಲವು ಸದಸ್ಯರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹುಸಿ ಸುಳ್ಳಾಗಿದೆ. ಅವರ ಆರೋಪಕ್ಕೆ ಪುರಾವೆ ಏನಾದರೂ ಇದ್ದರೆ ಸಾಬೀತು ಪಡಿಸಲಿ.ನನ್ನ ವಿರುದ್ಧ ತನಿಖೆಗೆ ಮನವಿ ಮಾಡಿದ್ದು ಸ್ವಾಗತಾರ್ಹ. ಅಧಿಕಾರಿಗಳು ಬಂದು ಅವರಿಗೆ ಬೇಕಾದ ಮಾಹಿತಿ ಕೇಳಿದರೂ ನೀಡಲು ಸಿದ್ದ. ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ. ಸುಪ್ರೀಂಕೋರ್ಟ್ ನನ್ನನ್ನು ಅಧ್ಯಕ್ಷನೆಂದು ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ. ನನಗೆ ಸಿಕ್ಕ ಅವಧಿಯಲ್ಲಿ ಅಭಿವೃದ್ಧಿಪರ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಸ್ರೋ ಮಾಜಿ ಅಧ್ಯಕ್ಷ, ಪದ್ಮವಿಭೂಷಣ ಡಾ. ಕೆ. ಕಸ್ತೂರಿ ರಂಗನ್ಅವರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಬಾಹ್ಯಾಕಾಶ ವಿಜ್ಞಾನದಲ್ಲಿ ಅಪಾರ ಸೇವೆ ಸಲ್ಲಿಸಿ ದೇಶಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ದೇಶದ ವಿಜ್ಞಾನ ಕ್ಷೇತ್ರಕ್ಕೆ ಭರಿಸಲಾರದ ನಷ್ಟ ಉಂಟುಮಾಡಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ರಾಜ್ಯಸಭಾ ಸದಸ್ಯರಾಗಿ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿ ಹಾಗೂ ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ಸಟ್ಯೂಟ್ ಆಫ್ಆಡ್ವಾನ್ಸ್ಡ್ನಿರ್ದೇಶಕರಾಗಿ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ. ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಅವರು ಕೇಂದ್ರ ಸರ್ಕಾರದ ಮೂರು ಪ್ರಮುಖ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ – 1 ಭಾಸ್ಕರ – 2ರ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಸ್ತೂರಿ ರಂಗನ್ಅವರ ನಾಯಕತ್ವದಲ್ಲಿ ಹಲವು ಪ್ರಮುಖ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಮಳೆಯಾಗಿದೆ. ಪಟ್ಟಣದಲ್ಲಿ ಮಧ್ಯಾನ್ಹ ೩.೩೦ ಗಂಟೆ ಸುಮಾರಿಗೆ ದಟ್ಟನೆಯ ಮೋಡ, ಗುಡುಗು, ಸಿಡಿಲು ಅಬ್ಬರದೊಂದಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಜಿಟಿ ಜಿಟಿ ಮಳೆ ಮಳೆಯಾಯಿತು. ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜಿಟಿ ಜಿಟಿ ಮಳೆಯಾದರೆ ಗ್ರಾಮದ ಹೊರವಲಯದಲ್ಲಿ ಕೆಲಹೊತ್ತು ಜೋರಾದ ಮಳೆ ಸುರಿಯಿತು. ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮಧ್ಯಾನ್ಹ ೩.೩೦ ಗಂಟೆಗೆ ಸುಮಾರಿಗೆ ಆರಂಭವಾದ ಆಲಿಕಲ್ಲುಗಳೊಂದಿಗೆ ಆರಂಭವಾದ ಮಳೆ ಒಂದೂವರೆ ಗಂಟೆ ಕಾಲ ಸುರಿಯಿತು. ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಹರಿಯಿತು. ಚರಂಡಿಗಳು ತುಂಬಿ ಹರಿದವು. ಮನಗೂಳಿ ಪಟ್ಟಣದ ವೈಭವ ಪಾಟೀಲ ಅವರು ನಮ್ಮ ಪಟ್ಟಣದಲ್ಲಿ ಕೆಲ ಹೊತ್ತು ಆಲಿಕಲ್ಲು ಬಹಳ ಬಿದ್ದವು. ಇದರಿಂದಾಗಿ ಮೈದಾನ ಆಲಿಕಲ್ಲು ತುಂಬಿ ಹೋಗಿತ್ತು.ರಭಸವಾದ ನೀರಿನಲ್ಲಿ ಆಲಿಕಲ್ಲು ಹರಿದುಕೊಂಡು ಹೋಗುವದು ಕಂಡುಬಂದಿತ್ತು ಎಂದು ಹೇಳಿದರು.ಪಟ್ಟಣದ ಜಾಮೀಯಾ ನಗರದಲ್ಲಿರುವ ಮಹ್ಮದಹುಸೇನ ಮುಕ್ತುಮಸಾಬ ಹೊಕ್ರಾಣಿ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಬಸವ ಜಯಂತಿ ಕಾರ್ಯಕ್ರಮದಂಗವಾಗಿ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಏ.೨೯ ಮತ್ತು ೩೦ ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮದಂಗವಾಗಿ ೧೫ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆಯು ಬಸವ ಜನ್ಮಸ್ಥಳ ಬಸವನಬಾಗೇವಾಡಿಗೆ ಶುಕ್ರವಾರ ಇಂಗಳೇಶ್ವರ ಮಾರ್ಗವಾಗಿ ಆಗಮಿಸಿದ ಸಂದರ್ಭದಲ್ಲಿ ಬಸವೇಶ್ವರ ವೃತ್ತದಲ್ಲಿ ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಗುವ ಮೂಲಕ ಸಮಾನತೆ ಸಂದೇಶ ಸಂದೇಶ ಸಾರಲಾಯಿತು. ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂದರೆ ತಪ್ಪಾಗಲಾರದು. ಇದುವೇ ಇಂದಿನ ಸಂಸತ್ತಿನ ಕಲ್ಪನೆಗೆ ನಾಂದಿಯಾಗಿದೆ. ಬಸವಾದಿ ಶರಣರ, ನಾಡಿನ ದಾರ್ಶನಿಕರ ಸಂದೇಶಗಳನ್ನು ನಾಡಿನಾದ್ಯಂತ ಸರ್ಕಾರವು ಪ್ರಚಾರ ಮಾಡುತ್ತಿರುವ ಕಾರ್ಯ ಸುತ್ತ್ಯರ್ಹವಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಕರ್ನಾಟಕ ರಾಜ್ಯದ ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ನಾಡಿನಾದ್ಯಂತ…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಕಸ್ತೂರ್ ಬಾ ಅವರು ಮೋಹನ್ ಚಂದ್ ಕರಮಚಂದ್ ಗಾಂಧೀಜಿಯವರ ಬಾಳ ಸಂಗಾತಿ. ಇವರು ಪೋರ್ ಬಂದರ್ ನಲ್ಲಿ ಹುಟ್ಟಿದರು. ತಂದೆ ಗೋಕುಲ್ ದಾಸ್ ಮಾಕoಜಿ. ತಾಯಿ ಬ್ರಜಕುವರಿ. ಇವರಿಗೆ ಮದುವೆಯಾದಾಗ 13 ವರ್ಷ. ಗಂಡನ ಕೆಲವು ನೀತಿ ನಿಯಮಗಳಿಗೆ ಹೊಸ ಪ್ರಯೋಗಗಳಿಗೆ, ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿದ ಕಸ್ತೂರ್ ಬಾ ಒಲ್ಲದ ಮನಸ್ಸಿನಿಂದ ಒಗ್ಗಿಕೊಳ್ಳಬೇಕಾಯಿತು. ಆದರೂ ಅವರು ಪತಿ ಹೇಳಿದ್ದಕ್ಕೆಲ್ಲ ಯಾವುದನ್ನೂ ಪ್ರತಿಭಟಿಸದೆ ಮಣಿದವರಲ್ಲ. ವಿಧೇಯ, ವಿವೇಕ ಹೆಂಡತಿ, ಕಷ್ಟ ಸಹಿಷ್ಣುತೆ, ಜವಾಬ್ದಾರಿ ಹೊರುವಿಕೆ, ಧೈರ್ಯದಲ್ಲಿ ನಿಜವಾಗಿ ಅರ್ಧಾoಗಿ ಸಹ ಧರ್ಮಿಣಿ ಆಗಿದ್ದರು. ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿ ಆತ್ಮವಿಶ್ವಾಸದಿಂದ ವರ್ತಿಸುತ್ತಿದ್ದರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಸ್ವಪ್ರೇರಣೆಯಿಂದ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆಯ ವಾಸ ಅನುಭವಿಸಿದರು. ಆಹಾರ ಸರಿಯಿಲ್ಲದೆ ಉಪವಾಸ ಮಾಡಿದರು. ಆರೋಗ್ಯ ಕೆಟ್ಟರೂ ಧೃತಿಗಡಲಿಲ್ಲ.1919ರಲ್ಲಿ ಶುದ್ಧ ಖಾದಿ ವಸ್ತ್ರಧಾರಿಯಾಗಿ ಸಾಬರ್ಮತಿ ಆಶ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಭೋಜನ,ಸ್ವದೇಶಿ ವ್ರತಗಳಲ್ಲಿ ಪಾಲ್ಗೊಂಡರು.ಬಾಪೂಜಿ ಯರವಾಡ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಆದರ್ಶಗಳನ್ನು ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಪಟ್ಟಣದ ಸಮೀಪ ಸುಕ್ಷೇತ್ರ ಮಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮಲ್ಲಮ್ಮ ತನಗ ಕಷ್ಟ ಕೊಟ್ಟವರನ್ನು ಅತಿ ಪ್ರೀತಿಯಿಂದ ಕಂಡ ಮಹಿಳಾ ಶಿರೋಮಣಿ, ಮುಂಬರುವ ದಿನಗಳಲ್ಲಿ ಮಲ್ಲಮ್ಮನ ಭವ್ಯ ಮಂದಿರ ನಿರ್ಮಾಣ ಕಾರ್ಯಕ್ಕೆ ತಾವೆಲ್ಲರೂ ತನುಮನ ಧನದಿಂದ ಸಹಕಾರ ನೀಡಬೇಕು ಎನ್ನುತ್ತಾ, ಇತ್ತೀಚೆಗೆ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಮ್ ದಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ ಶ್ರೀಗಳು, ಪಕ್ಷಾತೀತವಾಗಿ ಎಲ್ಲಾ ಪಕ್ಷಗಳು ಭಯೋತ್ಪಾದಕ ಕೃತ್ಯವನ್ನು ಖಂಡಿಸಬೇಕು ಅವರು ಎಲ್ಲೇ ಅಡಗಿ ಕುಳಿತರು ಕೇಂದ್ರ ಸರ್ಕಾರ ಅವರನ್ನು ಸದೆಬಡಿಯಬೇಕು ಎಂದರು.ಮಾಗಣಗೇರಾ ವಿಶ್ವಾರಾಧ್ಯ ಮಠದ ಡಾ.ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು, ಯಂಕಂಚಿಯ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ಶ್ರೀ ಹನುಮಾನ್ ಮಂದಿರದಲ್ಲಿ ಕಾಶ್ಮೀರದ ಪಾಹಾಲ್ಗಮದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.ಜಮ್ಮು ಮತ್ತು ಕಾಶ್ಮೀರಕ್ಕೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಭೇಟಿ ನೀಡುವ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿತ್ತು. ಇಲ್ಲಿನ ಹಿಂದೂಗಳು ಸಹ ಕಣಿವೆ ರಾಜ್ಯಕ್ಕೆ ಮರಳಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಮುಸ್ಲಿಮರು ಸಹ ಇಲ್ಲಿನ ಪ್ರವಾಸೋದ್ಯಮ ಚಿಗುರೊಡೆದಿದ್ದಕ್ಕೆ ಸಂಭ್ರಮದಲ್ಲಿದ್ದರು. ಆದರೆ, ಈಗ ಆಗಿರುವ ಉಗ್ರರ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಕ್ಕೆ ತೀವ್ರ ಪೆಟ್ಟು ಬಿದ್ದಿದೆ ಎಂದು ಎಸ್ ಜಿ ಲಕ್ಕುಂಡಿಮಠ ಹೇಳಿದರು.ಯುವ ಮುಖಂಡ ಲಿಂಗರಾಜ್ ಪಾಟೀಲ, ತುಕಾರಾಮ ನಲವಡೆ ಮಾತನಾಡಿದರು.ಈ ಸಂದರ್ಭದಲ್ಲಿ ಮುತ್ತು ಹಿರೇಮಠ್, ಸೋಮು ಶೇಂಡೆ, ಅಡಿವೆಪ್ಪ ಖಿಲಾರಿ, ಅನಿಲ್ ಕಾಳೆ, ಧರೆಪ್ಪ ಹೆಚ್ ಡಿ, ಸತೀಶ ಬನ್ನೂರ, ಸುರೇಶ ಪತ್ತಾರ, ಕಲ್ಯಾಣಕುಮಾರ ಮಾಲಗಾರ, ಎನ್ ಬಿ ಕೋಟಿ, ಹಣಮಂತ ಶಿಂದೆ, ಎಸ್ ಎನ್ ಕೋರಬು, ಮಲ್ಲು ರಂಗಪ್ಪಗೋಳ, ಅಪ್ಪು ಕೋಟಿ, ರಾಹುಲ್ ಗಡದಿ, ಹಾಗೂ ಹೊನವಾಡದ ಗ್ರಾಮಸ್ಥರು ಶ್ರದ್ದಾಂಜಲಿ ಸಲ್ಲಿಸಿದರು.

Read More