Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವ ಜಯಂತಿ ನಿಮಿತ್ತ ವಿಶ್ವಗುರು ಬಸವಣ್ಣನವರು ಹುಟ್ಟೂರು ಬಸವನ ಬಾಗೇವಾಡಿಯಿಂದ ವಿಜಯಪುರ ಬಸವೇಶ್ವರ ವೃತ್ತದವರೆಗೆ ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಪುರ ಮೂಲದ ಉದ್ಯಮಿ ಬಿ ಬಿ ಪಾಟೀಲ ನೇತೃತ್ವದಲ್ಲಿ ಬಸವಜ್ಯೋತಿ ಯಾತ್ರೆಗೆ ಮಂಗಳವಾರ ಮಧ್ಯರಾತ್ರಿ ಬಾಗೇವಾಡಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಬಸವೇಶ್ವರ ಜ್ಯೋತಿಯನ್ನು ಬಾಗೇವಾಡಿಯಿಂದ ಇಂಗಳೇಶ್ವರ, ಮಸಬಿನಾಳ ಮತ್ತು ಉಕುಮನಾಳ ಮಾರ್ಗವಾಗಿ ನಗರದ ಶಿವಗಿರಿವರೆಗೆ 42 ಕಿಮಿ ದೂರವನ್ನು ಬೆಂಗಳೂರಿನ ಜಗದೀಶ ದಮಾನಿಯಾ, ಸಂದೀಪ ಡಿಯೋ, ಮೋಹನ, ಪ್ರಸಾದ ಶೃಂಗೇರಿ ಮತ್ತು ಹುಬ್ಬಳ್ಳಿಯ ವಿವಿಟ್, ವಿಸಿಜಿ ಗ್ರೂಪ್ ನ ಪ್ರವೀಣ ಚೌರ್, ಶ್ರೀಕಾಂತ ಅಂಗಡಿ, ಸಂದೀಪ್ ಮಡಗೊಂಡ, ಸೋಮು ಮಠ, ವಿನಯ ಪಾಟೀಲ, ರಘು ಸಾಲೋಟಗಿ ಮತ್ತು ಕಲಬುರಗಿಯ ವೀರಣ್ಣ ಕೌಲಗಿ ಓಡುತ್ತ ಬಂದಿದ್ದಾರೆ. ಅಲ್ಲದೆ, ವಿಸಿಜಿ ಸದಸ್ಯರಾದ ಅಬಕಾರಿ ಇಲಾಖೆ ಅಧೀಕ್ಷಕ ಲಗಮಣ್ಣ ಸಲಗಾರೆ ಹಾಗು ಪುತ್ರ ಧನುಷ್ ಮತ್ತು ಅಬಕಾರಿ ಇಲಾಖೆ ಅಪ್ಪು ಭೈರಗೊಂಡ ಮತ್ತು ಅವರ ಪುತ್ರರಾದ ಅಮಿತ ಮತ್ತು…
ವಿಜಯಪುರದಲ್ಲಿ ನಡೆದ ಬಸವೇಶ್ವರ ಜಯಂತಿ ಆಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಬ್ಬರು ದಯೆ ಗುಣ ಬೆಳೆಸಿಕೊಳ್ಳಬೇಕು ಎಂದು ಬಸವಣ್ಣನವರು ಬುದ್ಧ ಕರುಣೆಯ ಮಹತ್ವವನ್ನು ಸಾರಿದವರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿದ, ಬಸವಣ್ಣನವರ ತತ್ವಾದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಮಾಜಿಕ ಬದಲಾವಣೆ ತರಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಹೊಡೆದೊಡಿಸಲು ಶರಣರು ವಚನಗಳ ಮೂಲಕ ಸಾರಿದ್ದಾರೆ. ೧೨ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಿ, ಸಮಸಮಾಜ ಕನಸು ಕಂಡ ಬಸವಣ್ಣನವರು, ಕಾಯಕವೇ ಕೈಲಾಸ ಎಂದು ಸಾರಿದರು. ಸಂಸ್ಕೃತಿ, ರೀತಿ-ನೀತಿಗಳ ಬಗ್ಗೆಯೂ ಅವರ ವಚನಗಳು ಬೆಳಕು ಚೆಲ್ಲುತ್ವವೆ. ಅವರ ಆದರ್ಶ ವಿಚಾರಗಳು, ವಚನಗಳ ಸಾರ ಅರಿತುಕೊಂಡು ನಾವು ಅಳವಡಿಸಿಕೊಳ್ಳಬೇಕು ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿವಶರಣ ಬಸವಣ್ಣನವರು ೧೨ ನೇ ಶತಮಾನದಲ್ಲಿಯೇ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದು ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಪ್ರಾಚಾರ್ಯೆ ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿಯೇ ಸಮಾನತೆಯ ಬೀಜವನ್ನು ಬಿತ್ತಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿದ ಮಹಾನ್ ವ್ಯಕ್ತಿ ಬಸವಣ್ಣ. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸತ್ಯ ಮತ್ತು ಕಾಯಕ ನಿಷ್ಠೆಯನ್ನು ಸಾರಿದರು. ಸಮಾನ ಮನಸ್ಕರನ್ನು ಒಂದುಗೂಡಿಸಿ ಮನುಕುಲವನ್ನು ಎಚ್ಚರಗೊಳ್ಳುವಂತೆ ಮಾಡಿದರು. ಅವರಿಂದ ಕೇವಲ ವಚನ ಸಾಹಿತ್ಯವಷ್ಠೆ ಅಲ್ಲ ಕನ್ನಡ ಸಾಹಿತ್ಯವೂ ಶ್ರೀಮಂತಗೊAಡಿದೆ ಎಂದರು.ಈ ವೇಳೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡ್ಡಮನಿ ಮಾತನಾಡಿ ಹಿಂದೆ ಬಸವಣ್ಣ ಎಂದರೆ ಎಲ್ಲರೂ ಎತ್ತು ಎಂದು ಭಾವಿಸಿದ್ದರು. ಆದರೆ ಬಸವಣ್ಣ ಎಂದರೆ ಯಾರು ಎನ್ನುವುದನ್ನು ಪ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ವಚನ ಸಾಹಿತ್ಯವನ್ನು ಬೆಳಕಿಗೆ ತಂದಾಗಲೇ ಗೊತ್ತಾಗಿದ್ದು ಅವರೊಬ್ಬ…
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವಾದಿ ಶರಣರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪವಾಗಿದ್ದು, ಸಮಾಜ ಸುಧಾರಕ, ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಲ್ಲ, ಅವರು ವಿಶ್ವದ ಶ್ರೇಷ್ಠ ದಾರ್ಶನಿಕರು. ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನ ತಿದ್ದಿದ, ಕಾಯಕವೇ ಕೈಲಾಸ ಎನ್ನುವ ತತ್ವದ ಅಡಿಯಲ್ಲಿ ನಮ್ಮನ್ನೆಲ್ಲಾ ಮುನ್ನಡೆಸಲು ಪ್ರೇರೇಪಿಸಿರುವ ಅವರ ಚಿಂತನೆಗಳು ನಿಜಕ್ಕೂ ನಿತ್ಯ ನೂತನ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯ ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಿದ ಸಂಗಮೇಶ ಬಬಲೇಶ್ವರ್, ಎಲ್ಲ ವಿದ್ಯಾರ್ಥಿಗಳು ಬಸವಾದಿ ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.ತಳೆವಾಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಂಗಮೇಶ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಶರಣರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಬಸವಣ್ಣನವರ ಆದರ್ಶಗಳು ಎಲ್ಲರಿಗೂ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಹೆಣ್ಣು ಮಕ್ಕಳಿಗೆ ಕಷ್ಟದ ಬುತ್ತಿ ತಲೆಯ ಮೇಲೆ ಸದಾ ಇದ್ದೆ ಇರುತ್ತದೆ. ಆದರೆ, ಕಷ್ಟಗಳನ್ನು ಮೆಟ್ಟಿನಿಂತು ಬದುಕನ್ನು ಜಯಿಸಲು ಅಣ್ಣ ಬಸವಣ್ಣ ಹೆಣ್ಣು ಮಕ್ಕಳಿಗೆ ಶಕ್ತಿ ಕೊಟ್ಟಿದ್ದಾನೆ. ಆ ಶಕ್ತಿಯನ್ನು ಬಳಸಿ ಹುಟ್ಟಿದ ಮನೆಗೆ ಮತ್ತು ಕೊಟ್ಟ ಮನೆಗೆ ಕೀರ್ತಿ ತರುವ ಕೆಲಸವನ್ನು ಮಹಿಳೆಯರು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಹದಿನಾಲ್ಕನೆಯ ದಿನವಾದ ಸೋಮವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಮುಕ್ಕೋಟಿ ದೇವರಿಗೆ ಕೈಮುಗಿಯುವ ಬದಲಾಗಿ ಜೀವ ಕೊಟ್ಟ ತಂದೆ-ತಾಯಿಗೆ ದಿನಾಲು ಕೈಮುಗಿದು ಏನೇ ಬಂದರೂ ಮೆಟ್ಟಿ ನಿಲ್ಲುವ ಶಕ್ತಿ ಬರಲಿ ಎಂದು ಪ್ರಾರ್ಥಿಸಬೇಕು. ತಂದೆ-ತಾಯಿಯ ಆದರ್ಶಗಳನ್ನು ಪಾಲಿಸಬೇಕು ಎಂದರು. ಮಹಿಳೆಯನ್ನು ಭೂತಾಯಿ, ಗೋಮಾತೆ, ನದಿ ಇತ್ಯಾದಿಗಳಿಗೆ…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನವೆಂದರೆ ಹತ್ತು ಹಲವು ದೃಷ್ಟಿಯಲ್ಲಿ ಪರ್ವಕಾಲ. ಬಸವಣ್ಣನವರ ಮುಖಂಡತ್ವದಲ್ಲಿ ಮನುಕುಲೋದ್ಧಾರದ ಒಂದು ಸಮಾಜದ ಧಾರ್ಮಿಕ ಆಂದೋಲನ ಆಗ ನಡೆಯಿತು. ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ಗುರುತಿಸಿದರು. ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಿ ದೃಷ್ಟಾಂತವಾಗಿ ನಿಂತರು. ಕಾರಣ ಅಂದಿನ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿತ್ತು. ಬಡವ ಬಲ್ಲಿದರು ಎಂಬ ವರ್ಗ ಭೇದ, ಹೆಣ್ಣು ಗಂಡೆoಬ ಲಿಂಗ ಭೇದ, ಹುಚ್ಚ ನೀಚ ಎಂಬ ಜಾತಿ ಭೇದ ಆಳು ಅರಸ ಎಂಬ ಸ್ಥಾನಭೇದಗಳಿಂದ ಸಮಾಜ ಹರಿದು ಹಂಚಿಹೋಗಿತ್ತು. ಸಮಾಜದ ಈ ವಿಷಮತೆಯನ್ನು ತೊಡೆದು ಸರ್ವಸಮಾನತೆಯನ್ನು ಸಾಧಿಸುವ ಹಂಬಲ ಅವರದಾಯಿತು. ಉಚ್ಚ ಕುಲದವರು ಕೆಳ ವರ್ಗದವರನ್ನು ಶೋಷಣೆ ಮಾಡುತ್ತಿದ್ದರು. ಕೆಲವರಿಗೆ ಅಸ್ತಿತ್ವವೇ ಇರಲಿಲ್ಲ. ಅವರು ದನಿ ಇಲ್ಲದ ಮೂಕರಾಗಿ, ಜೀವವಿಲ್ಲದ ಶವವಾಗಿ ಬದುಕು ಸಾಗಿಸಿದ್ದರು. ಅಸ್ಪೃಶ್ಯತೆಯಂತೂ ಭಯಾನಕವಾಗಿತ್ತು. ಈ ಇಡೀ ಸಮುದಾಯಕ್ಕೆ ಬಸವಾದಿ ಶರಣರು ದನಿ ಕೊಟ್ಟರು. ಎದೆ…
ಲೇಖನ -ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪ್ರತಿ ಹಿಂದಿನ ದಿನ ನಾಳೆಯಿಂದ ಅದನ್ನು ಮಾಡುತ್ತೇನೆ. ಇದನ್ನು ಮಾಡಿ ಮುಗಿಸಿ ಬಿಡುತ್ತೇನೆ ಎಂದು ಏನೇನೋ ಅಂದುಕೊಳ್ಳುತ್ತೇವೆ. ಆದರೆ ಮರುದಿನದ ಬೆಳಗು ನಿತ್ಯ ನಡೆಯುವ ಸನ್ನಿವೇಶಗಳಿಗೆ ಅನುಗುಣವಾಗಿ ನಡೆಯುತ್ತದೆ. ಹೊಸ ದಿನವೂ ಅದೇ ರೀತಿಯಲ್ಲಿ ಅದೇ ಹಾದಿಯಲ್ಲಿ ನಡೆದುಹೋಗಿಬಿಡುತ್ತದೆ. ನನ್ನ ದಿನ ನನ್ನ ಕೈಯಲಿಲ್ಲವೆಂದು ಹೊರಗಿನ ಪರಿಸ್ಥಿತಿಗಳಿಗೆ ಉದ್ರೇಕಿತನಾಗಿ ನಡೆದುಕೊಳ್ಳುತ್ತೇನೆ ಎಂಬುದು ನಮ್ಮಲ್ಲಿ ಬಹುಜನರ ಅಳಲು. ಈ ನೋವನ್ನು ತಡೆದುಹಾಕುವಲ್ಲಿ ಬೆಳಗಿನ ಅಭ್ಯಾಸಗಳು ಮಹತ್ವದ್ದಾಗಿವೆ. ಅಶಿಸ್ತು ಇದಕ್ಕೆಲ್ಲ ಕಾರಣವಾಗಿದೆ. ಬೆಳಗಿನ ನಿರ್ವಹಣೆ ನಾವಂದುಕೊಂಡಷ್ಟು ಸುಲಭವಲ್ಲ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದ ಸತ್ಯ ಹಾಗೆಂದ ಮಾತ್ರಕ್ಕೆ ಬೆಳಗಿನ ನಿರ್ವಹಣೆ ಹಿಡಿತದಲ್ಲಿಡುವುದು ಅಸಾಧ್ಯವಾದ ಕಾರ್ಯ ಎಂದಲ್ಲ. ನಾವಂದುಕೊಳ್ಳುವ ಇಡೀ ದಿನದ ಗೆಲುವಿನ ಬೆಳಗಿನ ನಿರ್ವಹಣೆಗೆ ಕೆಲ ಸರಳ ಸಲಹೆಗಳು ಇಲ್ಲಿವೆ.ದಿನಚರಿಎಚ್ಚರವಾದ ನಂತರದ ಮೊದಲ ಗಂಟೆಗಳು ಬಾಹ್ಯ ಬೇಡಿಕೆಗಳು ಮೈಲುಗೈ ಸಾಧಿಸುತ್ತವೆ. ಅದಕ್ಕಿಂತ ಮೊದಲು ದಿನದ ಮೇಲೆ ನಿಯಂತ್ರಣ ಸಾಧಿಸಲು ಒಂದು ಅನನ್ಯ ಅವಕಾಶವಿದೆ. ಜರ್ನಲ್…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮೇ.೦೧ರಂದು ಬೆಳಿಗ್ಗೆ ೬ಗಂಟೆಯಿಂದ ೧೧ಗಂಟೆವರೆಗೆ ೧೧೦ಕೆವಿ ಸಿಂದಗಿ ಉಪ ಕೇಂದ್ರದಲ್ಲಿ ೨೦ಎಮ್ವಿಎ ಪರಿವರ್ತಕದ ಆಯಿಲ್ ಸೋರಿಕೆ ತಡೆಗಟ್ಟುವ ಕಾರ್ಯ ನಿರ್ವಹಿಸುತ್ತಿರುವುದರಿಂದ ೧೧೦/೧೧ಕೆವ್ಹಿ ಸಿಂದಗಿಯಿಂದ ಹೊರಹೋಗುವ ಎಲ್ಲಾ ೩೩ಕೆವ್ಹಿ ಉಪಕೇಂದ್ರ ಗೋಲಗೇರಿ ಹಾಗೂ ಕಲಕೇರಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಆದ್ದರಿಂದ ಸದರಿ ಉಪಕೇಂದ್ರಗಳಿಂದ ಹೊರಹೋಗುವ ಎಲ್ಲ ೧೧ಕೆವ್ಹಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳು ವಿಶ್ವ ಮಾನ್ಯವಾದ ತತ್ವಗಳಾಗಿದ್ದು, ೧೨ನೇ ಶತಮಾನದ ಅಸ್ಪೃಶ್ಯ ಸಮುದಾಯಗಳ ಕಾಯಕಗಳನ್ನು ಗುರುತಿಸಿ ಅವರ ಕಾಯಕಗಳಿಗೆ ಶ್ರೇಷ್ಠ ಮಟ್ಟದ ಸ್ಥಾನಮಾನಗಳನ್ನು ದೊರಕುವಂತೆ ಮಾಡಿದ್ದು ವಿಶ್ವಗುರು ಬಸವಣ್ಣ ಎಂದು ಶಿವಕುಮಾರ ಶಿವಸಿಂಪಿ ಹೇಳಿದರು.ಸಿಂದಗಿ ಪಟ್ಟಣದ ಸಿ.ಎಮ್.ಮನಗೂಳಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತಿಯ ಅಂಗವಾಗಿ ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ವೇದಿಕೆ ಇವುಗಳ ಅಡಿಯಲ್ಲಿ ನಡೆದ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಎಂಬ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಯಕದಿಂದ ಬಂದ ಫಲದ ಒಂದು ಪಾಲನ್ನು ಸಮಾಜಕ್ಕೆ ನೀಡುವುದರ ಮೂಲಕ ದಾಸೋಹ ತತ್ವವನ್ನು ಪ್ರಪಂಚಕ್ಕೆ ಪರಿಚಯಿಸಿ ಸಮಾಜದ ಇತರೆ ಕಾರ್ಯಗಳಿಗಿಂತ ಶ್ರೇಷ್ಠ ಮಟ್ಟದ ಕಾರ್ಯವಾಗುವಂತೆ ಮಾಡಿದವರು ಬಸವಣ್ಣನವರಾಗಿದ್ದಾರೆ ಎಂದರು.ಈ ವೇಳೆ ಡಾ.ಚಂದ್ರಕಾಂತ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ಬಿ.ಜಿ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಅರವಿಂದ ಮನಗೂಳಿ ಡಾ.ಅಂಬರೀಶ ಬಿರಾದರ, ಎಸ್.ಕೆ. ಹೂಗಾರ, ಜಿ.ಜಿ.ಕಾಂಬಳೆ, ಸತೀಶ ಬಿರಾದಾರ, ಎಂ.ಡಿ.ಸುಂಗಠಾಣ,…
ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಸಲಹೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿನಿಯರ ಗುಣಮಟ್ಟದ ಶಿಕ್ಷಣದ ಕಾರಣಕ್ಕಾಗಿ ಸುಂದರ ಸುಸಜ್ಜಿತ ಶಿಸ್ತಿನಿಂದ ಕುಡಿದ ಕಟ್ಟಡವನ್ನು ಸರಕಾರ ಪೂರೈಸಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಜಿಲ್ಲಾ ಆಡಳಿತ, ಜಿಪಂ ಹಾಗೂ ವಿಜಯಪುರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಉಪ-ಚುನಾವಣೆ ಸಂದರ್ಭದಲ್ಲಿ ಸದ್ಯದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪನವರು ನನ್ನೊಂದಿಗೆ ಕನಿಷ್ಠ ೧೫ ದಿನಗಳವರೆಗೆ ಸಿಂದಗಿ ನಗರವನ್ನು ಸುತ್ತಾಡಿ ಇಲ್ಲಿನ ಸಮಸ್ಯೆಗಳ ನರನಾಡಿಯನ್ನು ಅರಿತವರು. ಆ ಸಂದರ್ಭದಲ್ಲಿ ಸಿಂದಗಿ ಅಭಿವೃದ್ಧಿಯ ಕುರಿತು ಚರ್ಚಿಸಿದ ವಿಷಯಗಳನ್ನು ಈಗಿನ ಎಲ್ಲ ಇಲಾಖೆಗಳ…
