ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಯುಕೆಪಿ ಹತ್ತಿರ ವಾರ್ಡ 17 ರ ಸರ್ವೇ ಸಂಖ್ಯೆ 236ರಲ್ಲಿ ಕಟ್ಟಿಸಿರುವ ಮನೆ ತೆರವುಗೊಳಿಸಲು ಲೋಕೊಪಯೋಗಿ ಇಲಾಖೆ ನೀಡಿರುವ ನೋಟೀಸನ್ನು ಹಿಂಪಡೆಯಲು ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ತಹಶೀಲ್ದಾರ್ ಎಸ್.ಎಸ್. ಅರಕೇರಿ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಪಟ್ಟಣದ ಯುಕೆಪಿ ಹತ್ತಿರ 236 ಸರ್ವೇ ಸಂಖ್ಯೆಯ ಸರಕಾರಿ ಜಾಗದಲ್ಲಿ ಸಂತ್ರಸ್ತರಾದ ಬಡ ಕುಡುಂಬದ ದಲಿತ ಸಮೂದಾಯದ 15 ರಿಂದ 20 ಕುಟುಂಬಗಳು 25-30 ವರ್ಷಗಳಿಂದ ವಾಸವಾಗಿದ್ದು ಇಂತಹ ಕುಟುಂಬಗಳಿಗೆ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯಿಂದ ಕೊಲ್ಹಾರ ಪಟ್ಟಣದಲ್ಲಿ ಸಂತ್ರಸ್ತರೆಂದು ಪರಿಗಣಿಸದೆ ನಿವೇಶನ ಹಂಚಿಕೆ ಮಾಡಿರುವುದಿಲ್ಲ.
ಆದ್ದರಿಂದ ಅವರು ಸದರಿ ಜಾಗದಲ್ಲಿ ತಮ್ಮ ದಿನನಿತ್ಯದ ಕಾಯಕಮಾಡಿ ಬದಕು ಸಾಗಿಸಲು ಒಂದು ಸೂರು ಕಟ್ಟಿಕೊಂಡಿರುವುದಕ್ಕೂ ಸರ್ಕಾರದ ಲೋಕೋಪಯೋಗಿ ಇಲಾಖೆಯವರು ತೆರವುಗೊಳಿಸಲು ನೋಟೀಸು ನೀಡಿರುವುದು ಯಾವ ನ್ಯಾಯ ಅನೇಕ ವರ್ಷಗಳಿಂದ ಬರದ ನೋಟೀಸಗಳು ಈಗೇಕೆ ಬರುತ್ತೀವೆ. ಒಂದು ವೇಳೆ ತಾವುಗಳು ತೆರವುಗೊಳಿಸಲು ದೃಢನಿರ್ಧಾರ ಮಾಡುವುದಾದರೆ ಅಲ್ಲಿರುವ ಅಂದರೆ ಇಲಾಖೆಯವರು ಗುರುತಿಸಿ, ನೋಟೀಸ ನೀಡಿರುವ ಎಲ್ಲ ಕುಟುಂಬಸ್ತರಿಗೆ, ಸರಕಾರದ ಆಶ್ರಯ ವಸತಿ ಯೋಜನೆಯ ಫಲಾನುಭವಿಗಳೆಂದು ಗುರುತಿಸಿ ಈಗ ಅವರು ವಾಸಿಸುವ ಜಾಗವು ಸರ್ಕಾರಿ ಜಾಗವಾಗಿರುವುದರಿಂದ ದಲಿತ ಸಮುದಾಯದ ಕುಟುಂಬಸ್ತರಿಗೆ ಅನ್ಯಾಯ ಮಾಡದೇ ನ್ಯಾಯ ದೊರಕಿಸಲು ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ಆದೇಶ ಮಾಡಲು ಕ್ರಮಕೈಗೊಳ್ಳಬೇಕು.
ಒಂದು ವೇಳೆ ಅದು ಸಾದ್ಯವಾಗದಿದ್ದರೆ ಎಲ್ಲಾ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರವು ಒದಗಿಸಿಕೊಡುವತನಕ ತೆರೆವುಗೊಳಿಸಲು ಹೊರಡಿಸಿರುವ ನೋಟೀಸನ್ನು ಹಿಂಪಡೆಯಬೇಕು ಅಲ್ಲದೇ ಆ ಎಲ್ಲಾ ಕುಟುಂಬಗಳ ಜಾಗವನ್ನು ಬಿಟ್ಟು ಪ್ರವಾಸಿ ಮಂದಿರದ ಆವರಣ ಗೋಡೆ ನಿರ್ಮಿಸಿಕೊಳ್ಳಲು ಮತ್ತು ತಮ್ಮ ಉಳಿದ ಕಾಮಗಾರಿಗಳನ್ನು ಮಾಡಿಕೋಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ರಾಮಣ್ಣ ಬಾಟಿ, ರಾಜಶೇಖರ ಶೀಲವಂತ, ಗಿರಿಯಪ್ಪ ಕಾಳೆ, ಖಾಸೀಂ ಕಾಳೆ, ರತ್ನವ್ವ ಮಾದರ, ಹಣಮವ್ವ ತಳಗೇರಿ, ಕಾಶಿಬಾಯಿ ಬುದ್ನಿ, ಮಹಾದೇವಿ ಬಾಡಗಂಡಿ, ರತ್ನವ್ವ ಬ್ಯಾಲ್ಯಾಳ, ರೇಣುಕಾ ಗುಡದಿನ್ನಿ, ಶಾಂತವ್ವ ಇಂಗಳೇಶ್ವರ, ಯಲ್ಲವ್ವ ಬ್ಯಾಲ್ಯಾಳ ಇನ್ನೂ ಹಲವಾರು ಮಹಿಳೆಯರು ಹಾಜರಿದ್ದರು.

