Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಡಗಾನೂರ ಗ್ರಾಮದ ಐತಿಹಾಸಿಕ ಸೋಮೇಶ್ವರ ಜಾತ್ರಾ ಮಹೋತ್ಸವ ರಥೋತ್ಸವ ಹಾಗೂ ನಂದಿಕೋಲ ಮೆರವಣಿಗೆಯೊಂದಿಗೆ ಭಾನುವಾರ ಸಂಪನ್ನಗೊಂಡಿತು.ಗ್ರಾಮದ ಸಾಂಪ್ರದಾಯಿಕ ಸೋಮೇಶ್ವರ ಜಾತ್ರಾ ಮಹೋತ್ಸವ ದಿ:೧೯ ರಿಂದ ಕಲಬುರಗಿ ಶ್ರೀಶರಣಬಸವೇಶ್ವರ ಪುರಾಣದಿಂದ ಆರಂಭಗೊಂಡು ನಂತರ ರೊಟ್ಟಿ ಬುತ್ತಿ ಜಾತ್ರೆ, ಮುತೈದೆಯರಿಗೆ ಉಡಿ ತುಂಬುವದು, ಉಚಿತ ನೇತ್ರ ಹಾಗೂ ಹೃದಯ ರೋಗ ತಪಾಸಣಾ ಶಿಬಿರ, ಮುಕ್ತ ಕಬಡ್ಡಿ ಪಂದ್ಯಾವಳಿಗಳಂತ ಹಲವು ಕಾರ್ಯಕ್ರಮಗಳ ಮೂಲಕ ಸಾಂಗವಾಗಿ ಸಾಗಿಬಂದು ದಿ:೨೯ ರಂದು ಬೆಳಿಗ್ಗೆ ಪುರಾಣ ಮಹಾಮಂಗಲ ನಂತರ ಶ್ರೀಸೋಮೇಶ್ವರ, ಮಲ್ಲಯ್ಯ, ಲಗಮಾದೇವಿ, ಕೆಂಚರಾಯ ಹಾಗೂ ಷ.ಬ್ರ. ವೀರಭದ್ರಶ್ರೀಗಳ ಪಲ್ಲಕ್ಕಿ ಉತ್ಸವ ಪುರವಂತರ ಸೇವೆ ಸಹಿತ ಧಾರ್ಮಿಕ ಕಾರ್ಯಗಳು ವಾದ್ಯ,ವೈಭವಗಳೊಂದಿಗೆ ಜರುಗಿದವು. ನಂತರ ಅಗ್ನಿಪ್ರವೇಶ ಮತ್ತು ಮಹಾಪ್ರಸಾದ ಜರುಗಲ್ಪಟ್ಟವು. ಸಾಯಂಕಾಲ ನಂದಿಕೋಲ ಮೆರವಣಿಗೆಯೊಂದಿಗೆ ರಥೋತ್ಸವ ಆರಂಭಗೊಂಡಿತು.ಸಾಯಂಕಾಲ ಹೂವಿನಹಾರ ಹಾಗೂ ತಳಿರು ತೋರಣಗಳಿಂದ ಶೃಂಗಾರಗೊಂಡ ರಥ(ತೇರ)ಕ್ಕೆ ನೆರೆದ ಸಾವಿರಾರು ಜನ ಭಕ್ತರು ಜಯಕಾರ ಉದ್ಘೋಶಗಳಿಂದ ಚಾಲನೆ ನೀಡಿದರು. ರಥೋತ್ಸವಕ್ಕೆ ವಿವಿಧ ಪ್ರದೇಶಗಳಿಂದ ಬಂದ ಭಕ್ತಸಮೂಹ ಯಾವುದೇ ಅಡ್ಡಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭಾರಿ ಬಿರುಗಾಳಿಗೆ ಸೋಲಾರ ಫಲಕ ಬಿದ್ದು ಹಾನಿಯಾಗಿರುವ ದುರ್ಘಟನೆ ತಾಲ್ಲೂಕಿನ ನಿಂಬಾಳ ಬಿ ಕೆ ಗ್ರಾಮದಲ್ಲಿ ನಡೆದಿದೆ.ಶನಿವಾರ ಬೀಸಿದ ಭಾರಿ ಬಿರು ಗಾಳಿಗೆ ತಾಲೂಕಿನ ನಿಂಬಾಳ ಬಿಕೆ ಗ್ರಾಮದ‌ ರೈತ ಮಹಿಳೆ ಸುನೀತಾ ಜಗದೇವ ರಾಠೋಡ ಅವರು ಅಳವಡಿಸಿರುವ ಸೋಲಾರ ಫಲಕ ಬಿದ್ದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.ತನ್ನ ಎರಡು 5 ಎಕರೆ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಸೋಲಾರ ಫಲಕ ಅಳವಿಡಿಸಿದ್ದು , ಅದು ಬಿರುಗಾಳಿಗೆ ಬಿದ್ದು ಹಾನಿಯಾಗಿದೆ. ಇದು ಮತ್ತೆ ನಿರ್ಮಿಸಿ ಕೊಳ್ಳಲು ನನಗೆ ಕಷ್ಟ ಸಾಧ್ಯ. ಅದಕ್ಕಾಗಿ ಸರಕಾರ ಪರಿಸಡಿಕೊಳ್ಳಲು ಪರಿಹಾರ ನೀಡಬೇಕು ಎಂದು ರೈತ ಮಹಿಳೆ ಮನವಿ ಮಾಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದೊಂದಿಗೆ ಕಲಾವಿದರು ಮತ್ತು ಸಾಹಿತಿಗಳು, ಸಂಗೀತಗಾರರು, ಶಿಕ್ಷಕರು ಹಾಗೂ ಸಾಂಸ್ಕೃತಿಕ ಚಿಂತಕರೊಂದಿಗೆ ಚರ್ಚೆ ಮತ್ತು ಚಹಾಕೂಟದ ಕಾರ್ಯಕ್ರಮವನ್ನು ಜ್ಞಾನಯೋಗಾಶ್ರಮ ಹತ್ತಿರವಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಉದ್ಯಾನವನದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಎಂ.ಎಸ್ ಮದಬಾವಿ, ಮಾತನಾಡುತ್ತಾ ಕಲೆ ಸಾಹಿತ್ಯ ಸಂಸ್ಕೃತಿ ಸಮಾಜದ ಅವಿಭಾಜ್ಯ ಅಂಗ ಈ ಕ್ಷೇತ್ರದ ಎಲ್ಲರೂ ಒಟ್ಟಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಸಂಘಟನೆ ಮಾಡುವುದು ಅತ್ಯವಶ್ಯಕ ಎಲ್ಲರೂ ಸೇರಿ ಚಿಂತನ ಮಂಥನ ಮಾಡುವುದು ಈಗಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿ ಸರ್ಕಾರ ಮತ್ತು ವಿವಿಧ ಅಕಾಡೆಮಿಗಳ, ಪ್ರಾಧಿಕಾರಗಳ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಬಹುದು ಎಂದು ಸಲಹೆ ನೀಡಿದರು. ಕಲಾಪೋಷಕರು ಹಾಗೂ ವೈದ್ಯರಾದ ಡಾ. ಸತೀಶ್ ಜಿಗಜಿನ್ನಿ ಮಾತನಾಡುತ್ತಾ, ಈಗಿನ ಯುವಕರು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಖ್ಯಾತರಾಗಲು ಹಲವಾರು ಯೋಜನೆಗಳಿವೆ ಸರ್ಕಾರ ಮತ್ತು ಇನ್ನಿತರ ಸಹಯೋಗದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ಲೇಖನ- ವಿಶ್ವಪ್ರಕಾಶ ಟಿ. ಮಲಗೊಂಡeditortkm@gmail.com – 6366520266ಉಪ ಸಂಪಾದಕರುಅಪರಾಧಕ್ಕೆ ಸವಾಲು ದಿನಪತ್ರಿಕೆ ಉದಯರಶ್ಮಿ ದಿನಪತ್ರಿಕೆ ಕ್ರೀಡೆ ಎನ್ನುವುದು ಶಿಸ್ತು, ಸಂಯಮ ಮತ್ತು ಸೌಹಾರ್ದತೆಯ ಸಂಕೇತ. ಆದರೆ ಇಂದು ಅದೇ ಕ್ರೀಡೆಯನ್ನು ಬಂಡವಾಳ ಮಾಡಿಕೊಂಡಿರುವ ಬೆಟ್ಟಿಂಗ್ ದಂಧೆಕೋರರು ಯುವಜನತೆಯ ಬದುಕನ್ನು ಜೂಜಿನ ಅಡ್ಡೆಯನ್ನಾಗಿ ಮಾಡುತ್ತಿದ್ದಾರೆ. ಅಲ್ಪಾವಧಿಯಲ್ಲಿ ಕೋಟ್ಯಧಿಪತಿಗಳಾಗುವ ಆಮಿಷವೊಡ್ಡಿ, ಮಧ್ಯಮ ವರ್ಗದ ಕುಟುಂಬಗಳ ನೆಮ್ಮದಿಯನ್ನು ಈ ಬೆಟ್ಟಿಂಗ್ ಮಾಫಿಯಾ ನುಂಗಿ ಹಾಕುತ್ತಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯ ಅಂಧಕಾರಕ್ಕೆ ದೂಡಲ್ಪಡುವುದರಲ್ಲಿ ಸಂದೇಹವಿಲ್ಲ.ಬೆಂಗಳೂರು ಪೊಲೀಸರಿಗೆ ನಮ್ಮದೊಂದು ಆಗ್ರಹ ಇತ್ತೀಚೆಗೆ ನಡೆದ ಆರ್‌ಸಿಬಿ (RCB) ಪಂದ್ಯಗಳ ವೇಳೆ ಬೆಂಗಳೂರು ಪೊಲೀಸ್ ಇಲಾಖೆ ವಹಿಸಿದ ಕಟ್ಟುನಿಟ್ಟಿನ ಕ್ರಮ ಮತ್ತು ಶಿಸ್ತು ನಿಜಕ್ಕೂ ಮಾದರಿ. ಲಕ್ಷಾಂತರ ಅಭಿಮಾನಿಗಳ ಸಾಗರವಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾವಲು ಕಾಯ್ದ ಪೊಲೀಸರ ಕಾರ್ಯವೈಖರಿಗೆ ನಮ್ಮದೊಂದು ಬಿಗ್ ಸೆಲ್ಯೂಟ್. ಆದರೆ, ಮೈದಾನದ ಹೊರಗಿನ ಶಿಸ್ತಿನಷ್ಟೇ ಮುಖ್ಯವಾದುದು ಆನ್‌ಲೈನ್‌ನಲ್ಲಿ ಹಗಲು-ರಾತ್ರಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯನ್ನು ಬುಡಸಮೇತ ಕಿತ್ತೊಗೆಯುವುದು. ಬೆಟ್ಟಿಂಗ್ ದಂಧೆಯ ಮಾಸ್ಟರ್‌ಮೈಂಡ್‌ಗಳ ಮೇಲೆ…

Read More

ಉದಯರಶ್ಮಿ ದಿನಪತ್ರಿಕೆ ಜೇರಟಗಿ: ಭಾರತದ ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಈಗ ಜೇವರಗಿ ತಾಲೂಕಿನ ಜೇರಟಗಿಯಲ್ಲಿ ಎ.೦೨ ರಂದು ಬಿಡುಗಡೆಯಾಗಲಿದೆ.ಅಂದು ಜೇರಟಗಿಯ ಹಳ್ಳಿ ಮೋಟಾರ್ಸ್ ಶೋರೂಂ ನಲ್ಲಿ ನಡೆಯುವ ಸಮಾರಂಭದಲ್ಲಿ ಪರಿಸರಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಈ ಕ್ರಾಂತಿಕಾರಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಅತಿಥಿಗಳಾಗಿ ಶ್ರೀಮತಿ ಶ್ವೇತಾ ಅಜಯ್ ಸಿಂಗ್ ಜಿ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಿ – ISRO ವಿಜ್ಞಾನಿ ಶ್ರೀಮತಿ ಪದ್ಮಾ ಕೃಷ್ಣ ಕುಲಕರ್ಣಿ ಆಗಮಿಸುತ್ತಿದ್ದಾರೆ. ಸ್ಥಳೀಯ ಗಣ್ಯರೂ ಸಹ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಹಳ್ಳಿ ಮೋಟರ್ಸ್ ಮಾಲಿಕ ಸುನೀಲ ಹಳ್ಳಿ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.ಬಾಹ್ಯಾಕಾಶದ ವೇಗ, ಭೂಮಿಯ ಮೇಲಿನ ಭರವಸೆಯಾಗಿರುವ ನಿಮ್ಮ ನೆಚ್ಚಿನ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಬುಕಿಂಗ್‌ಗಾಗಿ ಸಂಪರ್ಕಿಸಲು ಹಳ್ಳಿ ಮೋಟಾರ್ಸ್, ಜೇರಟಗಿ ಸಂಪರ್ಕ ಸಂಖ್ಯೆಗಳು: 6363328245, 9731234123, 9845672129

Read More

ದೇವರನಿಂಬರಗಿಯ ಸ್ವಯಂಭೂ ಶ್ರೀ ಬಲಭೀಮ ದೇವರ ಜಾತ್ರೆ ವೈಭವ | ಭಕ್ತಿ, ಪರಂಪರೆ ಮತ್ತು ಭಾವೈಕ್ಯದ ಪ್ರತೀಕ | ಚೈತ್ರ ಮಾಸದಲ್ಲಿ ಭಕ್ತರ ಮಹಾಪೂರ ಉದಯರಶ್ಮಿ ದಿನಪತ್ರಿಕೆ ವರದಿ: ರಾಜಶೇಖರ ಡೋಣಜಮಠಚಡಚಣ: ತಾಲೂಕಿನ ದೇವರನಿಂಬರಗಿ ಗ್ರಾಮದ ಸ್ವಯಂಭೂ ಶ್ರೀ ಬಲಭೀಮ ದೇವರ ಜಾತ್ರೆ ಚೈತ್ರ ಮಾಸದ ಪಾಡ್ಯದಿಂದ ದವನದ ಹುಣ್ಣಿಮೆ(ಚೈತ್ರ ಪೌರ್ಣಿಮೆ)ಯವರೆಗೆ ಅತಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ, ಭಕ್ತರ ಮಹಾಪೂರವೇ ಹರಿದು ಬರುತ್ತದೆ, ಜಾತ್ರೆ ಅವಧಿಯಲ್ಲಿ ರಾಮನವಮಿ, ಹನುಮ ಜಯಂತಿ, ಏಕಾದಶಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಏಕಾದಶಿ ದಿನದಂದು“ಮೊಸರು ಗಡಿಗೆ” ಒಡೆಯುವ ಸಂಪ್ರದಾಯವು ಊರ ಗೌಡರ ಮನೆತನದಿಂದ ಹಿಂದಿನಿಂದಲೂ ಪಾರಂಪರ್ಯವಾಗಿ ನಡೆದುಕೊಂಡು ಬಂದಿರುವ ಪ್ರಮುಖ ಆಚರಣೆ ಆಗಿದೆ.ಈ ದೇವಸ್ಥಾನದಲ್ಲಿ ಪೂಜೆ ಪದ್ಧತಿಗೂ ವಿಶೇಷ ಮಹತ್ವವಿದೆ. ಹೂಗಾರ ಮನೆತನದವರು ಪ್ರತಿದಿನ ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿ 10 ಗಂಟೆಗೆ ವೇಳೆ ಬ್ರಾಹ್ಮಣ ಅರ್ಚಕರು ಪೂಜೆಯನ್ನು ನೆರವೇರಿಸುತ್ತಾರೆ. ಪ್ರತಿದಿನ ರಾತ್ರಿ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ.ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು. ಇದೇ ರೀತಿ ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು ನೇಣು ಕಂಬಕ್ಕೆ ಕರೆದೊಯ್ಯಲು ಬರಲೇ ಇಲ್ಲ. ಚಾಪೇಕರರು ಜೈಲಿನ ಕೋಣೆಯಲ್ಲಿ ಬ್ರಿಟೀಷ್ ಜೈಲು ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಾ ಇದ್ದರು.ಕೊನೆಗೂ ಐದು ನಿಮಿಷ ತಡವಾಗಿ ಜೈಲಧಿಕಾರಿಗಳು ದಾಮೋದರ ಬಳಿಗೆ ಬಂದರು. ಬ್ರಿಟೀಷ್ ಜೈಲು ಅಧಿಕಾರಿಗಳ ಈ ಬೇಜವಾಬ್ದಾರಿಯನ್ನು ನೋಡಿದಂತಹ ದಾಮೋದರ ಚಾಪೇಕರ್ ಕೋಪಗೊಂಡರು. ಅವರು ಅತ್ಯಂತ ಚಾಣಾಕ್ಷತನದಿಂದ ಬ್ರಿಟೀಷ್ ಜೈಲು…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ “ನಗುವಿರಲಿ ಅಳುವಿರಲಿಎರಡನ್ನು ನಂಬೆನಗೆ ನಂಜುಅಳು ಮಂಜುಇದ್ದಿತು ಎಂಬೆ “ಎಂದು ವರಕವಿ ದ. ರಾ. ಬೇಂದ್ರೆ ಅವರು ಒಂದು ಕಡೆ ಹೇಳುವ ಹಾಗೆ, ಇದೇ ಪರಿಸ್ಥಿತಿ ಈಗಿನ ಒಬ್ಬಂಟಿ ಜೀವಗಳನ್ನು ಕಾಡುತ್ತಿದೆ.ಯಾರನ್ನು ನಂಬಬೇಕೋ ಯಾರನ್ನು ನಂಬಬೇಡವೋ ಯಾವುದು ಬೇಕು ಯಾವುದು ಬೇಡಾ ಹೀಗೆ ಸಾಗುತ್ತದೆ ತೊಳಲಾಟಗಳ ತುಡಿತ. ಒಂಟಿ ಜೀವಗಳ ಜೀವನ ಹೇಗಿರಬಹುದೆಂಬುದನ್ನು ನಾವು ಕಲ್ಪಿಸಿಕೊಳ್ಳಬೇಕಾಗಿಲ್ಲ. ನಮ್ಮ ಸುತ್ತ ಮುತ್ತಲೇ ಹಲವಾರು ಉದಾಹರಣೆಗಳು ಕಾಣಸಿಗುತ್ತವೆ.ಎಲ್ಲರನ್ನು ಹೊಂದಿಕೊಂಡು ಹೊಂದಿಸಿಕೊಂಡು ಹೋಗುವ ಮನಸುಗಳಿದ್ದರೆ ಒಂಟಿತನ ಸ್ವಲ್ಪವಾದರೂ ಕರಗೀತು.ಆದರೆ ಹೆಚ್ಚು ಶಿಸ್ತು, ನೇರ ನಡೆ ಅಥವಾ ಜಗಳುಗಂಟಿತನ ಇವಾವುದೇ ಇದ್ದರೂ ಇಂತವರಿಗೆ ಜೀವನ ಸಾಗಿಸೋದು ಬಹಳ ಕಷ್ಟ.ಅಲ್ಲೊಂದು ಅಜ್ಜಿ ಇದ್ದಾರೆ. ದೊಡ್ಡ ಮನೆ. ಅದರಲ್ಲಿ ಅವರೊಬ್ಬರೆ. ಶಿಸ್ತಿನ ಸಿಪಾಯಿ. ಅಷ್ಟೇ ಜಿಪುಣಿ ಕೂಡಾ. ಪತಿ ಮರಣ ಹೊಂದಿದ್ದಾರೆ. ಒಂದೇ ಊರಿನಲ್ಲಿರುವ ಮಕ್ಕಳು ಮಾತನಾಡಿಸುತ್ತಿಲ್ಲ. ‘ಕೆಲಸಕ್ಕೆ ಬರುವವರು ಏನಾದರು ಪ್ಲ್ಯಾನ್ ಮಾಡಿ ಕಳ್ಳತನ ಮಾಡಿಬಿಟ್ಟರೆ?’ ಎಂಬ ಭಯದಲ್ಲಿ “ನನ್ನ ಮೊಮ್ಮಗ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕಾ ರಂಗದ ಪಾತ್ರ ಅತ್ಯಂತ ದೊಡ್ಡದು ಎಂದು ಅಭಿಪ್ರಾಯಪಟ್ಟ ಗದಗ-ಶಿರಹಟ್ಟಿ-ಬಾಳೆಹೋಸೂರ ಸಂಸ್ಥಾನದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು, ‘ಅಪರಾಧಕ್ಕೆ ಸವಾಲು’ ಕನ್ನಡ ದಿನಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಿಕೋದ್ಯಮಿ ಟಿ. ಕೆ. ಮಲಗೊಂಡ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.ತಾಲೂಕಿನ ಕಡಣಿ ಗ್ರಾಮದಲ್ಲಿ ಮಾರ್ಚ್ 27ರಂದು ಜರುಗಿದ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಟಿ ಕೆ ಮಲಗೊಂಡ ಅವರ ಸುದೀರ್ಘ ಪತ್ರಿಕಾ ಸೇವೆ ಹಾಗೂ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಶ್ರೀಗಳು ಶಾಲು ಹೊದಿಸಿ ಗೌರವಿಸಿದರು.

Read More