Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿರುವ ಶಿಕ್ಷಕರ ಭವನ ಭೂಮಿ ಪೂಜಾ ಸಮಾರಂಭ, ಸಿಂದಗಿ ಮತಕ್ಷೇತ್ರಕ್ಕೆ ನೂತನವಾಗಿ ಮಂಜೂರಾದ ೮ ಪ್ರೌಢಶಾಲೆಗಳ ಉದ್ಘಾಟನಾ ಸಮಾರಂಭ ಜೊತೆಗೆ ದಿ.ಎಂ.ಸಿ.ಮನಗೂಳಿ ಪ್ರತಿಷ್ಠಾನದ ವತಿಯಿಂದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಪ್ರಥಮ ಹಂತದಲ್ಲಿ ೫೨ ಶುದ್ಧ ಕುಡಿಯುವ ನೀರಿನ ಘಟಕ ವಿತರಣಾ ಸಮಾರಂಭವು ಜ.೦೭ರಂದು ಬುಧವಾರ ಬೆಳಿಗ್ಗೆ ೧೧ಗಂಟೆಗೆ ಸಿಂದಗಿ ಬಸವ ನಗರದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಶಾಸಕ, ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದ್ದಾರೆ.ಸಿಂದಗಿ ಪಟ್ಟಣದ ಶಾಸಕರ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಿ.ಎಂ.ಸಿ.ಮನಗೂಳಿ ಅವರ ಪ್ರತಿಷ್ಠಾನದ ವತಿಯಿಂದ ಸಿಂದಗಿ ಮತಕ್ಷೇತ್ರದ ೩೧೪ ಸರಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಿಸುವ ಮಹದಾಸೆಯನ್ನು ಹೊಂದಿದ್ದು, ಸದ್ಯ ಪ್ರಥಮ ಹಂತದಲ್ಲಿ ಸರಕಾರಿ ಶಾಲೆಗಳಿಗೆ ೫೨ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿತರಣೆ ಮಾಡಲಾಗುವುದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಲಮೇಲ ಶ್ರೀಮಠದ…

Read More

ಸಿಂದಗಿಯಲ್ಲಿ ಮಾಜಿ ಸೈನಿಕ ಬ್ರಿಗೇಡ್ ರಮೇಶ ಜಗತಪ್ಪ ಕರೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಖರೀದಿಸಬೇಕು. ನಮ್ಮ ಹಣ ನಮ್ಮ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಾಜಿ ಸೈನಿಕರು ಬ್ರಿಗೇಡ್ ರಮೇಶ ಜಗತಪ್ಪ ಹೇಳಿದರು.ಸಿಂದಗಿ ನಗರದ ಸಾಯಿ ಬಾಬಾ ಮಂದಿರದಲ್ಲಿ ಸಾಯಿಬಾಬಾ ಅವರ ೧೪ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಸಾಯಿಬಾಬಾರವರ ಜೀವನ ಚರಿತ್ರೆಯ ಮಹಾ-ಪುರಾಣ ಕಾರ್ಯಕ್ರಮದಲ್ಲಿ ಸ್ವದೇಶಿ ಬಳಸಿ ದೇಶ ಉಳಿಸಿ ವಿಷಯವನ್ನು ಉದ್ದೇಶಿಸಿ ಮಾತನಾಡಿದರು.ವಿದೇಶಿ ಉತ್ಪನ್ನಗಳನ್ನು ಖರೀದಿಸಿದರೆ ನಮ್ಮ ಹಣ ಹೊರ ದೇಶಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಆದ್ದರಿಂದ ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು. ನಮ್ಮ ನೆಲ ಜಲ ಉಳಿಸಬೇಕು. ನಮ್ಮ ಸಂಸ್ಕೃತಿ ಉಳಿಸಬೇಕಂಬ ಸೈಕಲ್ ಜಾಥಾ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ. ಈಗ ೨೧೦೦ ಕಿಲೋ ಮೀಟರ್ ಜಾಥಾ ಮುಗಿಸಿದ್ದೇವೆ ಒಟ್ಟು ೩೬೦೦ ಕಿಲೋ ಮೀಟರ್ ಜಾಥಾ ಮಾಡಲಿದ್ದೇವೆ ಎಂದು ಹೇಳಿದರು.ಈ ವೇಳೆ ಡಿಪ್ಟಿ ಕಮಾಂಡೆಂಟ್ ರಮೇಶ ನರಸಯ್ಯ, ಮಾಜಿ ಸೈನಿಕ ಕರ್ನಲ್ ಕಂದ ಸ್ವಾಮಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಜ.೬ರ ಬೆಳಿಗ್ಗೆ ೯ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತ್ರಾಯ ರಂಗಮಂದಿರದರೆಗೆ ರಸ್ತೆ ಸುರಕ್ಷತಾ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಂತರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆಗಮಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಸಿಂ ಬಾಬಾ ಮುದ್ದೇಬಿಹಾಳ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಲಿಂಗದಳ್ಳಿ ಗ್ರಾಮದ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡಕ್ಕೂ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷರಾಗಿ ಶಶಿಧರ ಟೆಂಗಳೆ ೨ನೇ ಬಾರಿಗೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮೋತಿಲಾಲ ಜಾಧವ ಆಯ್ಕೆಯಾದರು.ಜ.೪ ರಂದು ಚುನಾವಣೆ ನಿಗದಿಯಾಗಿದ್ದು ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿಯಾಗಿಲ್ಲ, ಶಶಿಧರ ಶ್ರೀಶೈಲ ಟೆಂಗಳೆಯವರು ಅಧಿಕೃತವಾಗಿ ಒಬ್ಬರೆ ಕಣದಲ್ಲಿರುವದರಿಂದ್ದ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.ಒಟ್ಟು ೧೨ ಜನ ಸದಸ್ಯರಲ್ಲಿ ಅಧ್ಯಕ್ಷರಾಗಿ ಶಶೀಧರ,ಶ್ರೀಶೈಲ ಟೆಂಗಳೆ, ಮೂತಿಲಾಲ ಜಾಧವ ಉಪಾಧ್ಯಕ್ಷರಾಗಿ, ಸದಸ್ಯರಾಗಿ ಬೋದಿನಸಾಹೇಬ ಧಡೇದ, ಕಾಶೀನಾಥ ಜಾಧವ,ಈರಪ್ಪ ಗೊಟ್ಯಾಳ, ಪ್ರಭಯ್ಯಾ ಹಿರೇಮಠ, ಅಶ್ವೀನಿ ಟೆಂಗಳೆ, ನಾಗವ್ವ ಬೋಳಕೊಟಗಿ, ಬಸಪ್ಪಾ ಹೂಗಾರ, ಪ್ರಕಾಶ ಇಂಡಿ, ಬಾಬುರಾಯ ಡೊಂಬರ್, ಮಾಳಪ್ಪ ವಾಲೀಕಾರ ಸರ್ವಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಸದ್ದಲಗಿ ಪ್ರಕಟಣೆಗೆ ತಿಳಿಸಿದ್ದಾರೆ.ಗ್ರಾಮದ ಮುಖಂಡರಾದ ಶ್ರೀಮಂತ ಹಿರೇಕುರಬರ, ಈಶ್ವರಗೌಡ ಪಾಟೀಲ, ವೇಣು ಚವ್ಹಾಣ, ಶೇಖರ ಶಿವಶರಣ, ಕಾಶಿನಾಥ ಟೆಂಗಳೆ, ಸೂರ್ಯಕಾಂತ ಹಿರೇಕುರಬರ್, ತಮ್ಮಣ್ಣಾ ಪೂಜಾರಿ, ಬುಡ್ಡೇಸಾಬ ಧಡೇದ ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಗೊಳಸಾರ ಗ್ರಾಮದ ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪಂಚಲೋಹದಿಂದ ತಯಾರಿಸಿದ ಮೂರ್ತಿ ಸೋಮವಾರ ಹುಬ್ಬಳ್ಳಿಯಿಂದ ಇಂಡಿ ನಗರ ಪ್ರವೇಶಿಸಿತು. ನಗರದ ಶಿವಾಜಿ ವೃತ್ತದಿಂದ ಮೂರ್ತಿ ಮೆರವಣಿಗೆ ನಗರದಲ್ಲಿ ವಾದ್ಯ, ವೈಭವದೊಂದಿಗೆ, ಬೈಕ್ರ‍್ಯಾಲಿಯೊಂದಿಗೆ ನೆರವೇರಿತು.ಹುಬ್ಬಳ್ಳಿಯಿಂದ ಮೂರ್ತಿ ಮೆರವಣಿಗೆ ಸುಮಾರು ಐದಾರು ದಿನಗಳಿಂದ ಪಾದಯಾತ್ರೆ ಮೂಲಕ ನಡೆದು ಸೋಮವಾರ ಇಂಡಿ ನಗರ ತಲುಪಿ ಗೋಳಸಾರ ಗ್ರಾಮದೆಡೆಗೆ ಸಾಗಿತು.ಹುಬ್ಬಳ್ಳಿ ಮೂಲದ ಭಕ್ತರೊಬ್ಬರು ಗಂಡು ಮಗುವಿಗಾಗಿ ಶ್ರೀ ತ್ರೀಧರೇಶ್ವರ ಶ್ರೀಗಳಲ್ಲಿ ಬೇಡಿಕೊಂಡಾಗ, ೬೦ ವರ್ಷ ವಯಸ್ಸಿನಲ್ಲಿ ಗಂಡು ಮಗು ಜನನವಾಗಿದ್ದು, ಮಗುವಿಗೆ ಸಂಗಮೇಶ ಎಂದು ನಾಮಕರಣ ಮಾಡಿದ್ದಾರೆ. ತಂದೆಯ ಹರಕೆ ಭಕ್ತಿ ಸಮರ್ಪಣೆಗಾಗಿ ಮಠದ ಭಕ್ತ ಸಂಗು ರೋಡಗಿ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ಪಂಚಲೋಹದಿಂದ ತಯಾರಿಸಿದ ಮೂರ್ತಿಯನ್ನು ರಥಯೊಂದನ್ನು ತಯಾರಿಸಿ ಅದರಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಹುಬ್ಬಳ್ಳಿಯಿಂದ ಮೆರವಣಿಗೆ ಮೂಲಕ ಇಂಡಿ ನಗರದ ಮೂಲಕ ಗೊಳಸಾರ ಮಠಕ್ಕೆ ನಡೆದಿದ್ದಾರೆ.ನಗರದ ಶಿವಾಜಿ ವೃತ್ತದಲ್ಲಿ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ಮೂರ್ತಿ ಮೆರವಣಿಗೆಯನ್ನು ನಗರದ ಗಣ್ಯರು, ಭಕ್ತರು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ, ನಿರಂತರ ಅಧ್ಯಯನ, ಶೃದ್ಧೆ, ಕಠಿಣ ಪರಿಶ್ರಮ ರೂಢಿಸಿಕೊಂಡಾಗ ತಮ್ಮ ಬದುಕಿನ ಗುರಿ ತಲುಪಲು ಸಾಧ್ಯ. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸದಾ ಮುತುವರ್ಜಿ ವಹಿಸಬೇಕು ಎಂದು ಶಿಕ್ಷಕ, ಸಾಹಿತಿ ಸಂತೋಷ ಬಂಡೆ ಹೇಳಿದರು.ಸೋಮವಾರದಂದು ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ‘ಪಾಲಕರ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪಾಲಕರ ಸಭೆಯು ಪಾಲಕ-ಶಿಕ್ಷಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಯ ಶೈಕ್ಷಣಿಕ, ವೃತ್ತಿಯ, ಜ್ಞಾನಾತ್ಮಕ, ಕೌಶಲ್ಯಯುತ ಪ್ರಗತಿ ಮನಗಾಣಲು ಪೂರಕವಾಗಿದೆ. ವಿದ್ಯಾರ್ಥಿಗಳ ವರ್ತನೆ, ನಡತೆಯನ್ನು ಸರಿ ಮಾಡಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದು ಹೇಳಿದರು.ಅತಿಯಾದ ಮೊಬೈಲ್ ಬಳಕೆಯಲ್ಲಿ ಇಂದಿನ ವಿದ್ಯಾರ್ಥಿಗಳು ಬದುಕಿನ ಭವಿಷ್ಯದ ಗುರಿ ಮರೆಯಬಾರದು. ತಂದೆ-ತಾಯಿಗಳ ಪರಿಶ್ರಮದ ದುಡಿಮೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಶಿಕ್ಷಕರ ಸಕಾಲಿಕ ಮಾರ್ಗದರ್ಶನ ಪಡೆದು, ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದು ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಪರಶುರಾಮ ರಜನಿಕರ ಮಾತನಾಡಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ವಿಜಯಪುರದಲ್ಲಿ ನಡೆಸುತ್ತಿರುವ ಹೋರಾಟವನ್ನು ೧೦೬ ನೇ ದಿನ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಪೋಲಿಸ್ ದೌರ್ಜನ್ಯದ ಮೂಲಕ ಸದೆ ಬಡೆಯಲು ಪ್ರಯತ್ನಿಸುವುದು ತೀವ್ರ ಖಂಡನಾರ್ಹ ಮತ್ತು ಸರಕಾರಕ್ಕೆ ನಾಚಿಕೆ ಉಂಟು ಮಾಡುವ ಸಂಗತಿಯಾಗಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ೬ ಜನ ಹೋರಾಟಗಾರರನ್ನು ಜೈಲಿಗಟ್ಟಿರುವ ಕ್ರಮವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗು ಉಳಿದ ೨೧ ಜನ ಹೋರಾಟಗಾರರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನೂ ಕೂಡಲೇ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಕೆ ಆರ್ ಎಸ್ ಪಕ್ಷವು ಆಗ್ರಹಿಸಿದೆ.ಈ ವೇಳೆ ಮಾತನಾಡಿದ ಕೆಆರೆಸ್ ಪಕ್ಷದ ಮುಖಂಡರು, ರಾಜ್ಯ ಸರ್ಕಾರ ಪೋಲಿಸ್ ಬಲದಿಂದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಆದರೆ ಯಾವುದೇ ಕಾರಣಕ್ಕೂ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗುವವರೆಗೂ ಹೋರಾಟ ನಿಲ್ಲಲ್ಲ. ಹೋರಾಟದ ಸ್ವರೂಪ ಬದಲಾಗುತ್ತದೆ ಆದರೆ ಹೋರಾಟ ನಿರಂತರವಾಗಿರುತ್ತದೆ. ಮುಖ್ಯಮಂತ್ರಿಗಳು ವಿಜಯಪುರಕ್ಕೆ ಬಂದಾಗ ಒಂಬತ್ತನೇ ತಾರೀಖಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಾಕ್ಷಿ ವಾಲಿಕಾರ ಇವಳು ಕರ್ನಾಟಕ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗುವ ಮೂಲಕ ರಾಷ್ಟç ಮಟ್ಟದ ಬಾಸ್ಕೆಟ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾಳೆ. ಈ ಮೂಲಕ ಸಂಸ್ಥೆಯ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.ಇದೇ ಡಿ.೨೯ ರಿಂದ ಜ.೦೯ ರವರೆಗೆ ರಾಜಸ್ಥಾನದಲ್ಲಿ ನಡೆಯುವ ರಾಷ್ಟç ಮಟ್ಟದ ೧೯ ವರ್ಷ ವಯೋಮಿತಿಯ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿಲಿದ್ದಾಳೆ. ವಿದ್ಯಾರ್ಥಿಯ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯವರು, ಆಡಳಿತಾಧಿಕಾರಿಗಳು, ಪ್ರಾಚಾರ್ಯರು, ದೈಹಿಕ ನಿರ್ದೇಶಕರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: 2025-26ನೇ ಸಾಲಿನಡಿವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಅನುಷ್ಠಾನಗೊಳ್ಳುವ ಸಾಧನೆ ಯೋಜನೆಗೆ ಸೇವಾಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಹರು ಜ.31 ರ ವರೆಗೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಿದ ಅರ್ಜಿಯ ಹಾರ್ಡ್ ಪ್ರತಿಯನ್ನು ಜಿಲ್ಲಾ ಕಚೇರಿ ಅಥವಾ ಸಂಬಂಧಿಸಿದ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ನೀಡಬೇಕು.ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಸಂಯೋಜಕರಾಪ್ರತಿಭಾ ಮೊ: 9606151149 ವಿಜಯಪುರ ತಾಲ್ಲೂಕು ಪಂಚಾಯತ ರವಿ ರಾಥೋಡ್ ಮೊ;9035553337 ಇಂಡಿ ತಾಲೂಕು ಪಂಚಾಯತ್ ಪರಶುರಾಮ ಭೋಸಲೆ ಮೊ: 9972441464 ಸಿಂದಗಿ ತಾಲ್ಲೂಕು ಪಂಚಾಯತ್ ಮುತ್ತುರಾಜ ಸಾತಿಹಾಳ ಮೊ: 9980019635 ಮುದ್ದೇಬಿಹಾಳ ತಾಲ್ಲೂಕು ಪಂಚಾಯತ್ ಎಸ್. ಕೆ. ಘಾಟಿ ಮೊ:9740682979ಬಸವನಬಾಗೇವಾಡಿ ಪಂಚಾಯತ್ ತಾಲೂಕು |ಶಿವಲೀಲಾ ಬಿರಾದಾರ ಮೊ:8722135660 ಮಾಹಿತಿ ಕೇಂದ್ರಗಳಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ‌ಹಾ ಹಾಗೂ ಹಿರಿಯ ನಾಗರಿಕರಕ ಸಬಲೀಕರಣ ಇಲಾಖೆಯ ಪ್ರಕಟಣೆ ತಿಳಿಸಿದೆ

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ವಜ್ರ ಹನುಮಾನ ನಗರದಲ್ಲಿ ಅಂಡರ ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಆ ಭಾಗದಲ್ಲಿರುವ ಕುಡಿಯುವ ನೀರಿನ ಪೈಪಲೈನ್, ಟೆಲಿಫೋನ್ ತಂತಿ ಮೊದಲಾದ ಪೂರಕ ಕಾಮಗಾರಿ ಕೈಗೊಳ್ಳಲು ಆರು ಕೋಟಿ ರೂ‌.‌ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ವಜ್ರ ಹನುಮಾನ ರೈಲ್ವೇ ಕ್ರಾಸಿಂಗ್ ಬಳಿ ಅಂಡರ ಪಾಸ್ ನಿರ್ಮಾಣ ಕಾರ್ಯ ಕೈಗೊಳ್ಳಲು ಅನೇಕ ವರ್ಷಗಳಿಂದ ಸಾರ್ವಜನಿಕರ ಬೇಡಿಕೆ ಇದೆ, ಹೀಗಾಗಿ ಆ ವಿಷಯವಾಗಿ ಪಾಲಿಕೆ, ರೈಲ್ವೇ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿರುವೆ, ರೈಲ್ವೇ ಅಂಡರ ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೆಲದ ಆಳದಲ್ಲಿರುವ ನೀರಿನ ಪೈಪ್ ಲೈನ್ ಜಾಲ, ಟೆಲಿಫೋನ್ ಜಾಲ ಮೊದಲಾದವುಗಳನ್ನು ಸ್ಥಳಾಂತರ ಮಾಡುವುದು ಸೇರಿದಂತೆ ವಿವಿಧ…

Read More