Author: editor.udayarashmi@gmail.com

ಮೇ.10ರಂದು ಮತದಾನ |ವಿಜಯಪುರ ಜಿಲ್ಲೆಯ 8 ಕ್ಷೇತ್ರದಲ್ಲಿ 95 ಅಭ್ಯರ್ಥಿಗಳು ಕಣದಲ್ಲಿ | 18,92,852 ಮತದಾರರು | 2078 ಮತಗಟ್ಟೆ ಸ್ಥಾಪನೆ ವಿಜಯಪುರ: ಮುಕ್ತ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮೇ.10ರಂದು ನಡೆಯಲಿರುವ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಸುಭದ್ರವಾದ ಸರ್ಕಾರವನ್ನು ರಚಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಮತವು ಅಮೂಲ್ಯವಾಗಿರುವುದರಿಂದ ಜಿಲ್ಲೆಯ ಅರ್ಹ ಎಲ್ಲ ಮತದಾರರು ಮತದಾನದ ಹಬ್ಬದಲ್ಲಿ ಭಾಗವಹಿಸಿ ತಪ್ಪದೇ ಮತ ಚಲಾಯಿಸುಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಿದ್ಧತಾ ಕಾರ್ಯಗಳ ಬಗ್ಗೆ ವಿವರ ನೀಡಲು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಇದೇ ಮೇ.10 ರಂದು ನಡೆಯುವ ಮತದಾನ ಹಾಗೂ ಮೇ.13 ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿದ್ದು, ಈ…

Read More

ಕೊಲ್ಹಾರ : ನನ್ನ ಅಧಿಕಾರವಧಿಯಲ್ಲಿ ಮತಕ್ಷೇತ್ರದ ಕೊಲ್ಹಾರ, ನಿಡಗುಂದಿ ಸೇರಿ ಜಿಲ್ಲೆಗೆ ಒಟ್ಟು 8 ನೂತನ ತಾಲ್ಲೂಕುಗಳನ್ನು ತಂದಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದ ಮತಕ್ಷೇತ್ರದ ಕೊಲ್ಹಾರ ಮತ್ತು ನಿಡಗುಂದಿ ನೂತನ ತಾಲ್ಲೂಕುಗಳು ಮತ್ತು ಪಟ್ಟಣಗಳ ಅಭಿವೃದ್ಧಿಗೊಳಿಸುವ ಜೊತೆಗೆ ಎಲ್ಲಾ ಪುನರ್ವಸತಿ ಕೇಂದ್ರಗಳ ಮರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಗುರಿ ಹೊಂದಿದ್ದೇನೆ ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಭರವಸೆ ನೀಡಿದರು. ವಿಧಾನಸಭಾ ಚುನಾವಣೆ ಹಿನ್ನೆಲೆ ಸೋಮವಾರ ಬೆಳ್ಳುಬ್ಬಿಯವರು ತಮ್ಮ ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ತೆರಳಿ ಮನೆಮನೆ ಪ್ರಚಾರ ಕೈಗೊಂಡು ಮಾತನಾಡಿದರು. ನನ್ನ ಜೀವನವೇ ಪುನರ್ವಸತಿ ಸಂತ್ರಸ್ತರು,ರೈತರ ಪರ ಹೋರಾಟದಲ್ಲೇ ಕಳೆದಿದ್ದೇನೆ. ಈ ಚುನಾವಣೆಯಲ್ಲಿ ನನಗೆ ಸಿಕ್ಕಷ್ಟು ಬೆಂಬಲ, ಜನರ ಅಭಿಮಾನ ಹಿಂದೆಂದೂ ಕಂಡಿಲ್ಲ. ಮತಕ್ಷೇತ್ರದ ಎಲ್ಲಾ ಬಡವರಿಗೂ ಸೂರು ಕಲ್ಪಿಸಲು ಮತಕ್ಷೇತ್ರಕ್ಕೆ ಸುಮಾರು 25-40 ಸಾವಿರ ಆಶ್ರಯ ಯೋಜನೆ ಮನೆಗಳನ್ನು ತರುವ ಗುರಿ ಇದೆ. ಎಲ್ಲಾ ಗ್ರಾಮಗಳ ಅಭಿವೃದ್ಧಿ,…

Read More

ಸರಳತೆಯ ಪ್ರಚಾರ | ಅಭಿವೃದ್ಧಿಯ ಮಂತ್ರ | ದುಂದುವೆಚ್ಚಕ್ಕೆ ಕಡಿವಾಣ ಸಿಂದಗಿ: ಕರ್ಕಶವಾಗಿ ಒದುರುವ ಮೈಕುಗಳಿಲ್ಲ. ಜೈಕಾರ ಹಾಕುತ್ತ ಚೀರುವ ಯುವಕರಿಲ್ಲ. ಧೂಳೆಬ್ಬಿಸಿ ಆರ್ಭಟಿಸಿ ಬರುವ ಬೆಂಗಾವಲಿನ ವಾಹನಗಳಿಲ್ಲ. ಹೆಂಡ-ಹಣ ಹಂಚುವುದು ಮೊದಲೇ ಇಲ್ಲ. ದಾಬಾದಲ್ಲಿ ಊಟಾ ಮಾಡಿಸುವುದಿಲ್ಲ. ಯಾರಿಗೂ ತೇಜೋವಧೆ ಮಾಡುವುದಿಲ್ಲ. ಆರೋಪ-ಪ್ರತ್ಯಾರೋಪಕ್ಕೆ ಅವಕಾಶವಿಲ್ಲ. ಅಭಿವೃದ್ಧಿಯೇ ಮೂಲ ಮಂತ್ರವೆನ್ನುವ ಉರುಗೋಲು ಹಿಡಿದು ಸದ್ದಿಲ್ಲದೆ ನಡೆಯುತ್ತಿದೆ ಇಲ್ಲೊಂದು ಚುನಾವಣಾ ಪ್ರಚಾರ!. ಹೌದು, ಈ ಮೇಲೆ ಹೇಳಿರುವುದು ಅಕ್ಷರಶಃ ಸತ್ಯ. ಸಿಂದಗಿ ವಿಧಾನಸಭೆ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಹೊರತುಪಡಿಸಿ ಎಲ್ಲ ಪಕ್ಷಗಳು ತುರುಸಿನ ಪ್ರಚಾರ ಕೈಗೊಂಡಿವೆ. ಆದರೆ, ಆಪ್ ಪಕ್ಷದ ಅಭ್ಯರ್ಥಿಯಾಗಿರುವ ಹಿರಿಯ ಜನಸೇವಕ ಮುರಿಗೆಪ್ಪಗೌಡ ರದ್ದೇವಾಡಗಿ ಅವರು ತಮ್ಮ ರಾಜಕೀಯದ ಅನುಭವ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪ್ರಚಾರ ಕೈಗೊಂಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಯಾವ ರೀತಿ ನಡೆಸಬೇಕು ಎಂದು ಎದುರಾಳಿಗಳಿಗೆ ತೋರ್ಪಡಿಸುತ್ತಿದ್ದಾರೆ. ಮತಕ್ಷೇತ್ರದ ಯಾವುದೇ ಹಳ್ಳಿಗೆ ಹೋದರೂ ಮುರಿಗೆಪ್ಪಗೌಡರ ಜೊತೆ ಅವರ ವಯೋಸಮಾನರಾದ…

Read More

ವಿಜಯಪುರ: ಜನರ ಆಶೀರ್ವಾದದಿಂದ ಬಬಲೇಶ್ವರ ಮತಕ್ಷೇತ್ರದ ಹುಲ್ಲು ಬೆಳೆಯದ ಜಾಗದಲ್ಲಿಯೂ ಈಗ ಕಬ್ಬು ಕಾಣಿಸುತ್ತಿದೆ ಎಂದು ಆಶಾ ಎಂ. ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಅವರು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಮಾತನಾಡಿದರು. ಕ್ಷೇತ್ರದ ಮತದಾರರು ಎಂ. ಬಿ. ಪಾಟೀಲರನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಅವರು ಶಾಸಕರಷ್ಟೇ ಅಲ್ಲ, ನೀರಾವರಿ ಮಂತ್ರಿಯೂ ಆಗಿದ್ದಾರೆ. ಅವರು ಕೈಗೊಂಡ ಯೋಜನೆಗಳಿಂದ ನಿಮ್ಮ ಭಾಗದಲ್ಲಿ ಬೇಸಿಗೆಯಲ್ಲಿಯೂ ಕೆರೆಗಳಲ್ಲಿ ನೀರು ಇದೆ. ಕುಡಿಯುವ ನೀರಿಗಾಗಿ ಮಹಿಳೆಯರು ಅಲೆದಾಡುವುದು ತಪ್ಪಿದೆ, ಟ್ಯಾಂಕರ್ ಮೂಲಕ ನೀರು ಪಡೆಯುವ ಕಷ್ಟ ಪರಿಸ್ಥಿತಿ ಈಗ ಇಲ್ಲ. ಎಲ್ಲ ಕಡೆ ಹಸಿರುಮಯವಾಗಿದೆ ಎಂದು ಅವರು ಹೇಳಿದರು. ಪ್ರತಿಯೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಮಹಿಳೆಯರು, ರೈತರು, ಯುವಕರು ಸೇರಿದಂತೆ ಗ್ಯಾರಂಟಿ ಸ್ಕೀಂ ಗಳನ್ನು ಘೋಷಣೆ ಮಾಡಿದೆ. ಇಲ್ಲಿ ಎಂ. ಬಿ. ಪಾಟೀಲರು ಶಾಸಕರಾಗಬೇಕು. ರಾಜ್ಯದಲ್ಲಿ…

Read More

ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಸಂತೃಪ್ತಿ ಇದೆ. ಮತದಾರರ ಮೇಲೆ ಪೂರ್ಣ ನಂಬಿಕೆ ಇದೆ. ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ಇಂದು ತಿಕೋಟಾದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು ಮತದಾರರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ನೀಡಿದರೆ ಇನ್ನೂ 10 ಪಟ್ಟು ಹೆಚ್ಚಾಗಿ ಕೆಲಸ ಮಾಡುತ್ತೇನೆ. ಈವರೆಗೆ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಹಕ್ಕಿನಿಂದ ಮತ ಕೇಳುತ್ತಿದ್ದೇನೆ. ನಂದನವನವಾಗಿರುವ ಮತಕ್ಷೇತ್ರವನ್ನು ಬಂಗಾರದ ಬಬಲೇಶ್ವರವನ್ನಾಗಿ ಮಾಡಲು ಹತ್ತಾರು ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಅವರು ಹೇಳಿದರು. ತಿಕೋಟಾ ಹೋಬಳಿಗೆ ನೀರಾವರಿ ಮಾಡಲು ಅಂದಿನ ಸಿಎಂ ಮೇಲೆ ಒತ್ತಡ ಹಾಕಿದ್ದೆ. ತುಬಚಿ- ಬಬಲೇಶ್ವರ ಏತ ನೀರಾವರಿಗಾಗಿ ಒಂದೇ ಹೋಬಳಿಗೆ ರೂ. 3600 ಕೋ. ಹಣದ ಮಂಜೂರಾತಿ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳ ವಿರೋಧಕ್ಕೆ ಮನಿಯದೆ ಕೆಲಸ ಮಾಡಿದ್ದೇನೆ. ಈ ಯೋಜನೆ ಜಾರಿಗೆ ಅಡ್ಡಿ ಪಡಿಸಿದ್ದ ಅಧಿಕಾರಿಗಳು ಮತ್ತು ಇತರರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ…

Read More

ವಿಜಯಪುರ: ನಗರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆಯ ಕುತಂತ್ರಕ್ಕೆ ಬುದ್ದಿ ಕಲಿಸಲು, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಮೋತಿರಾಮ ಧರ್ಮು ಚವ್ಹಾಣ ಅವರು, ಸ್ವಯಂ ಪ್ರೆರೀತವಾಗಿ ಚುನಾವಣೆ ಕಣದಿಂದ ಹಿಂದೆ ಸರಿದು, ಬಿಜೆಪಿ ಅಭ್ಯರ್ಥಿಯಾದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಂಬಲಿಸುವುದಾಗಿ, ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರಿಗೆ ಭಾನುವಾರ ಘೋಷಣಾ ಪತ್ರ ನೀಡಿದರು. ಈ ವೇಳೆ ಮಾತನಾಡಿದ ಮೋತಿರಾಮ ಚವ್ಹಾಣ, ನಗರದ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕುತಂತ್ರ ಮಾಡಿ ಒಂದಾಗಿದನ್ನು ಖಂಡಿಸಿ ಹಾಗೂ ನಾನು ಒಬ್ಬ ಹಿಂದೂವಾಗಿ, ಹಿಂದೂ ನಾಯಕರು, ಅಭಿವೃದ್ಧಿ ಹರಿಕಾರರಾದ ಬಸನಗೌಡರಿಗೆ ಮುಖ್ಯಮಂತ್ರಿ ಆಗುವ ಅವಕಾಶವಿದೆ. ಹೀಗಾಗಿ ಅವರ ಗೆಲುವಿನಲ್ಲಿ ನನ್ನದು ಒಂದಿಷ್ಟು ಕಾಣಿಕೆ ಇರಲೆಂದು, ಸ್ವಯಂ ಪ್ರೇರಿತನಾಗಿ ಬೆಂಬಲ ನೀಡುತ್ತಿದ್ದೇನೆ. ನನ್ನ ಜೊತೆಗೆ ಅಪಾರ ಬೆಂಬಲಿಗರು ಸಾಥ ನೀಡಿದ್ದು,…

Read More

ವಿಜಯಪುರ: ಎಂ.ಬಿ.ಪಾಟೀಲರು ಪ್ರಚಂಡ ಬಹುಮತದಿಂದ ಆಯ್ಕೆಯಾಗಲಿ ಎಂದು ಪ್ರಾರ್ಥಿಸಿ ನಾಲ್ಕು ಜನ ಯುವಕರು ಸುಮಾರು 55 ಕಿ.ಮೀ ದೀರ್ಘದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ. ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಮಳೆಮಲ್ಲೇಶ್ವರ ದೇವಸ್ಥಾನದಿಂದ ದೀರ್ಘದಂಡ ನಮಸ್ಕಾರ ಆರಂಭಿಸಿದ ಯುವಕರಾದ ದಶರಥ ಮಹಾದೇವ ದೊಡಮನಿ, ಗೋಪಾಲ ಶಂಕ್ರಪ್ಪ ದೊಡಮನಿ, ಸಂತೋಷ ಲಕ್ಷ್ಮಣ ದೊಡಮನಿ ಮತ್ತು ರವಿ ಅಡಿವೆಪ್ಪ ಕವಟಗಿ ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ರಾತ್ರಿ 10 ಗಂಟೆಗೆ ಬೆಳ್ಳುಬ್ಬಿಯಿಂದ ಹೊರಟ ಈ ಯುವಕರು ಮರುದಿನ ಬೆಳಿಗ್ಗೆ 11 ಗಂಟೆಗೆ ವಿಜಯಪುರ ತಲುಪಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಉಪಸ್ಥಿತರಿದ್ದ ಯುವಕರ ಸಂಬಂಧಿಕರು ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವಕರು, ಎಂ. ಬಿ. ಪಾಟೀಲರು ನೀರಾವರಿ ಮೂಲಕ ನಮ್ಮ ಭಾಗದಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದ್ದಾರೆ. ಇಂಥವರ ಸೇವೆ ನಮಗೆ ಅಗತ್ಯವಾಗಿದೆ. ಜಲನಾಯಕರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಲಿ ಎಂದು ಪ್ರಾರ್ಥಿಸಿ…

Read More

ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲು ಎಂ. ಬಿ. ಪಾಟೀಲರನ್ನು ಮತ್ತೋಮ್ಮೆ ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ. ತಿಕೋಟಾ ತಾಲೂಕಿನ ಧನರ್ಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡ ಅವರು ಮಾತನಾಡಿದರು. ತಮ್ಮೆಲ್ಲರ ಆಶೀರ್ವಾದದಿಂದ ಎಂ. ಬಿ. ಪಾಟೀಲರು ಶಾಸಕರಾಗಿ ಜಲಕ್ರಾಂತಿ ಮಾಡಲು ಸಾಧ್ಯವಾಗಿದೆ. ಈ ಭಾರಿಯೂ ತಾವೆಲ್ಲರೂ ಸಂಪೂರ್ಣವಾಗಿ ಬೆಂಬಲ ನೀಡಬೇಕು. ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲು ಮತ್ತು ಬಂಗಾರದ ಬಬಲೇಶ್ವರ ಮತಕ್ಷೇತ್ರ ಮಾಡಲು ಸಹಕಾರ ನೀಡಬೇಕು ಎಂದು ಅವರು ಹೇಳಿದರು. ಈವರೆಗೆ ಎಂ. ಬಿ. ಪಾಟೀಲರಿಗೆ ಮತ ಹಾಕುವ ಮೂಲಕ ಬೆಂಬಲವಾಗಿ ನಿಂತಿದ್ದೀರಿ. ನಿಮ್ಮ ಆಶೀರ್ವಾದ ಇದೇ ರೀತಿ ಮುಂದುವರೆಯಲಿ ಇತರರಿಗೆ ಸ್ಪೂರ್ತಿಯಾಗಲಿ. ಮುಂಬರುವ ದಿನಗಳಲ್ಲಿ ಮತಕ್ಷೇತ್ರದಲ್ಲಿ ಕ್ಷೀರಕ್ರಾಂತಿ, ಫುಡ್‍ಪಾರ್ಕ್ ಸ್ಥಾಪನೆ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ, ಮಹಿಳೆಯರು ಮತ್ತು ಯುವಕರು ಸ್ವಾವಲಂಬಿಯಾಗಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದ…

Read More

ದೇವರಹಿಪ್ಪರಗಿ: ಚುನಾವಣೆಯಲ್ಲಿ ಜನತೆ ಜಾತಿ ಆಧಾರದ ಮೇಲೆ ಮತ ನೀಡದೇ ಅಭಿವೃದ್ಧಿ ಪರವಾಗಿ ಮತ ನೀಡಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹೇಳಿದರು.ಪಟ್ಟಣದಲ್ಲಿ ಶನಿವಾರ ಜರುಗಿದ ಬಿಜೆಪಿ ರೋಡ್ ಶೋದಲ್ಲಿ ಪಾಲ್ಗೊಂಡು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪರವಾಗಿ ಮತ ಯಾಚಿಸಿ ಮಾತನಾಡಿದರು. ಶಾಸಕ ಸೋಮನಗೌಡ ಪಾಟೀಲ ಯಾವುದೇ ಜಾತಿ, ಮತ ನೋಡದೇ ಕಳೆದ ಐದು ವರ್ಷಗಳ ಕೆರೆ ತುಂಬುವುದು, ರಸ್ತೆಗಳ ನಿರ್ಮಾಣ ಸೇರಿದಂತೆ 3 ಸಾವಿರ ಕೋಟಿಗಳ ಅನುದಾನದಲ್ಲಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗ ಚುನಾವಣೆ ಬರುತ್ತಿದ್ದಂತೆ ಆಕಳ ಮುಖದ ಕೆಲವರು ಪಂಚಮಸಾಲಿ ಜಾತಿ ಆಧಾರದಲ್ಲಿ ಮತ ಯಾಚಿಸುತ್ತಿದ್ದಾರೆ. ಇವರೇ ಹಿಂದೆ 2008 ರಲ್ಲಿ ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್ ಪಕ್ಷದ ಏಜೆಂಟ್ ರಾಗಿ ಕಾರ್ಯನಿರ್ವಹಿಸಿದ್ದಾರೆ. ಆವಾಗ ಇವರ ಜಾತಿಯ ಪ್ರೇಮ ಎಲ್ಲಿ ಹೋಗಿತ್ತು? ಪಂಚಮಸಾಲಿ ಮೀಸಲಾತಿಗಾಗಿ ಕೂಡಲಸಂಗಮಶ್ರೀಗಳ ಜೊತೆಗೆ ಅವಿರತ ಹೋರಾಟ ಮಾಡಿದವರು ನಾವು. ಈಗ ಜಾತಿಯ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಮತಕ್ಷೇತ್ರದ ಪಂಚಮಸಾಲಿ…

Read More