Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬೀದರ ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಮಾರ್ಗ ಒಂದೆ ಸುಲಭ ಮಾರ್ಗಎಂದು ವೇದಮೂರ್ತಿ ಚೆನ್ನವೀರಸ್ವಾಮಿ ಹಿರೇಮಠ, ಕಡಣಿ ಹೇಳಿದರು.ಬೀದರ ತಾಲೂಕಾ ಸುಕ್ಷೇತ್ರ ಶ್ರೀ ಗುರುಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಂಗವಾಗಿ ಹಮ್ಮಿಕೊಂಡಿರುವ ಭಕ್ತಿ ವಿಜಯ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಹೇಳಿದರು.ಭಗವಂತನನ್ನ ಕೂಡಿಕೊಳ್ಳಲು ಭಕ್ತಿ, ಜ್ಞಾನ, ವೈರಾಗ್ಯ ಮೂರು ದಾರಿಗಳು ಇದ್ದರೂ ಕೂಡ ವೈರಾಗ್ಯ ಮತ್ತು ಜ್ಞಾನಮಾರ್ಗದಲ್ಲಿ ಎಲ್ಲರಿಗೂ ಸಾಗಲು ಸಾಧ್ಯವಿಲ್ಲ, ಆದರೆ ಭಕ್ತಿ ಮಾರ್ಗದಲ್ಲಿ ಎಲ್ಲರೂ ಸುಲಭವಾಗಿ ಭಗವಂತನನ್ನ ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಸುಲಭ ಮಾರ್ಗವಿದೆ. ಅಂತಹ ಭಕ್ತಿ ಮಾರ್ಗದಲ್ಲಿ ಗುರು ಭದೇಶ್ವರರು, ಬಸವಾದಿ ಪ್ರಮಥರು ನಡೆದು ತೋರಿಸಿದ್ದಾರೆ. ಅವರ ಮಾರ್ಗ ನಮಗೆ ಅನುಕರಣೀಯ ಕಾರಣ ನಾವು ನೀವೆಲ್ಲ ಸರಳ ಮಾರ್ಗವಾದ ಭಕ್ತಿ ಮಾರ್ಗವನ್ನು ಅನುಸರಿಸಿ ನಮ್ಮ ಜೀವನವನ್ನು ಸಾಫಲ್ಯ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರುದಿನಾಂಕ 02 .4.2023 ರಿಂದ 06.4. 2023 ವರೆಗೆ ಜಾತ್ರಾ ನಿಮಿತ್ಯ ಹಮ್ಮಿಕೊಂಡಿರುವ ಆಧ್ಯಾತ್ಮ ಭಕ್ತಿ ವಿಜಯ ಆಧ್ಯಾತ್ಮ ಪ್ರವಚನದ ಲಾಭವನ್ನು ಆಸ್ತಿಕರು ಪಡೆದುಕೊಳ್ಳಲು ತಿಳಿಸಿದರು.ಶ್ರೀಗುರು ಭದೇಶ್ವರ ಸಂಸ್ಥಾನದ ವಂಶ ಪರಂಪರೆಯ…
ಮೋರಟಗಿ: ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರು, ಜೀಪುಗಳು ಸೇರಿದಂತೆ ಸರ್ಕಾರಿ ಬಸ್ಸುಗಳ ಮೇಲೂ ಕೂಡಾ ಹದ್ದಿನ ಕಣ್ಣಿಟ್ಟಿರಬೇಕು ಎಂದು ತಹಸಿಲ್ದಾರ ಸುರೇಶ ಚಾವಲರ್ ಅಧಿಕಾರಿಗಳಿಗೆ ಸೂಚಿಸಿದರು.ಶನಿವಾರ ಮೋರಟಗಿ ಚೆಕ್ ಪೋಸ್ಟಗೆ ಭೇಟಿ ನೀಡಿ ವಾಹನಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.ಸ್ಥಳೀಯ ದ್ವಿಚಕ್ರ ವಾಹನ ಅಥವಾ ಕಾರು ಮೋಟಾರುಗಳ ಚಾಲಕರು ಪರಿಚಿತರಂತೆ ವರ್ತಿಸಿ ಪಾರಾಗುತ್ತಾರೆ ಹಂತವರ ವಾಹನಗಳು ಮುದ್ದಾಮ ಮುಲಾಜ ಇಲ್ಲದೆ ವಾಹನ ಪರಿಶೀಲಿಸಿ ಎಂದು ಹೇಳಿದ ಅವರು ಸುಮಾರು ೬ ಘಂಟೆಗಳ ಕಾಲ ಚೆಕ್ ಪೋಸ್ಟನಲ್ಲೆ ಖುದ್ದಾಗಿ ಸುಮಾರು ವಾಹನಗಳನ್ನು ಪರಿಶೀಲಿಸಿದರು. ಪರಿಶೀಲನೆಯಲ್ಲಿ ಒಂದು ವಾಹನದಲ್ಲಿ ಒಬ್ಬ ರೈತನ ಹತ್ತಿರ ಎರಡು ಲಕ್ಷ ನಗದು ಹಣ ಸಿಕ್ಕಿದ್ದು ಅದು ಹತ್ತಿ ಮಾರಾಟ ಮಾಡಿದ ಅಧಿಕೃತ ಪಾವತಿ ಇರುವುದರಿಂದ ಮರಳಿ ಹಣ ನೀಡಿದರು.ವಾಹನ ಪರಿಶೀಲನೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಸಿದ್ರಾಮ್ ಮಾರಿಹಾಳ, ಎಇಇ ರಾಜಪ್ಪ ಎಸ್, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ, ಗ್ರಾಮ ಲೆಕ್ಕಾಧಿಕಾರಿ ಮಾರುತಿ ಸಾಳಂಕಿ, ಪೊಲೀಸ್ ಸಿಬ್ಬಂದಿಗಳಾದ ಆರ್…
ವಿಜಯಪುರ: ಬುದ್ಧ, ಬಸವ, ಅಂಬೇಡ್ಕರ ಅವರ ವಿಚಾರಧಾರೆಗಳ ಅಡಿಯಲ್ಲಿ ಕಾಂಗ್ರೆಸ್ ಸರ್ವ ಜನಾಂಗಗಳ ಹಿತ ಕಾಪಾಡುತ್ತಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ಸಾರವಾಡ, ದದಾಮಟ್ಟಿ, ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು. ಈಗಿನ ಅಸಮರ್ಥ ಸರಕಾರದಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಆಡಳಿತವನ್ನು ಬಯಸುತ್ತಿದ್ದಾರೆ. ನಮ್ಮ ಪಕ್ಷ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯಗಳ ಅಭ್ಯುದಯಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಬಿಜೆಪಿ ಜನರ ಭಾವನೆಗಳನ್ನು ಕೆರಳಿಸಿ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಅಲ್ಲದೇ, ಮನುಸ್ಮೃತಿ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಜೆಡಿಎಸ್ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ವಿರುದ್ಧ ಜಾತಿ, ಧರ್ಮದ ಆದಾರದ ಮೇಲೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದೆ. ಈ ಮೂಲಕ ಅತಂತ್ರ ಫಲಿತಾಂಶ ಬಂದು ಅದರಿಂದ ತನಗೆ ಲಾಭ ಗಳಿಸುವ ನಿಟ್ಟಿನಲ್ಲಿ ತಂತ್ರ ರೂಪಿಸುತ್ತಿದೆ. ಆದರೆ, ಅಹಿಂದ ಮತಗಳನ್ನು ವಿಭಜಿಸುವ ಜೆಡಿಎಸ್ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು…
ವಿಜಯಪುರ: ಕಾರ್ಯಕರ್ತರ ಮೂಲಕವೇ ಅಭಿಪ್ರಾಯ ಸಂಗ್ರಹಿಸಿ, ಮುಕ್ತ ಮತದಾನ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡುವ ಹೊಸ ಪ್ರಯೋಗವನ್ನು ಭಾರತೀಯ ಜನತಾ ಪಕ್ಷ ಮಾಡಿರುವುದು ಒಂದು ಹೊಸ ಮೈಲುಗಲ್ಲು, ಈ ಪ್ರಕ್ರಿಯೆಯಿಂದ ಕಾರ್ಯಕರ್ತರ ಉತ್ಸಾಹ ಹಾಗೂ ಜನರ ವಿಶ್ವಾಸ ಪಕ್ಷದ ಮೇಲೆ ಮತ್ತಷ್ಟು ಹೆಚ್ಚಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಯಕರ್ತರು ಪಕ್ಷದ ಆಸ್ತಿ ಹಾಗೂ ಜೀವಾಳ, ಈ ಮಾತನ್ನು ಎಲ್ಲ ರಾಜಕೀಯ ಪಕ್ಷಗಳು ಹೇಳುತ್ತವೆ, ಆದರೆ ಇದನ್ನು ಉಸಿರಾಗಿಸಿಕೊಂಡು,ನೈಜವಾಗಿಯೂ ಕಾರ್ಯಕರ್ತರಿಗೆ ಮಹತ್ವ ನೀಡುವ ಪಕ್ಷ ಬಿಜೆಪಿ ಎಂಬುದು ಸಾಬೀತಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯವೇ ಮಾನದಂಡ ಎಂಬ ಸೂತ್ರ ವನ್ನು ಅನುಸರಿಸಿರುವುದು ಅತ್ಯಂತ ಮಹತ್ವದ್ದಾಗಿದೆ, ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕಾರ್ಯಕರ್ತರಿಗೆ ಜನರ ನಾಡಿಮಿಡಿತ ಅರಿತಿರುತ್ತಾರೆ, ಕಾರ್ಯಕರ್ತರೇ ಗುಪ್ತ ಮತದಾನ ಮೂಲಕ ಪಾರದರ್ಶಕವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುವ ವ್ಯವಸ್ಥೆ ಕೇವಲ ಕಾರ್ಯಕರ್ತರಲ್ಲಿ ಅಷ್ಟೇ ಅಲ್ಲದೇ ಜನತೆಯಲ್ಲೂ ಬಿಜೆಪಿ ಬಗ್ಗೆ…
ವಿಜಯಪುರ: ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾಡಿನಲ್ಲಿ ರಾಜಯೋಗವಿತ್ತು. ಆದರೆ ಡಂಬಲ್ ಎಂಜಿನ್ ಸರಕಾರದ ಈ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿ ಸುವರ್ಣ ಯುಗ ಪುನಾರಂಭವಾಗಲಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ತಿಕೋಟಾ ತಾಲೂಕಿನ ಹೊನವಾಡ, ಕೋಟ್ಯಾಳ ಮತ್ತು ಹರನಾಳ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು, ಹೊನವಾಡದಲ್ಲಿ ಮಾತನಾಡಿದ ಅವರು ಸೂರ್ಯ, ಚಂದ್ರ ಇರುವವರೆಗೆ ಈ ಭಾಗದ ಜನರ ಬದುಕು ಹಸನಾಗಿರಿಸಲು ಹೊನ್ನದ ರೂಪದಲ್ಲಿ ನೀರು ನೀಡಿದ್ದೇನೆ. ನಾನು ಮಾಡಿದ ಕೆಲಸ ನೋಡಿ ಮತ ಹಾಕಿ ಎಂದು ಮನವಿ ಮಾಡಿದರು. ಈ ಭಾಗದಲ್ಲಿ ಕೈಗೊಂಡ ನೀರಾವರಿ ಮತ್ತು ಅಭಿವೃದ್ಧಿ ಕಾರ್ಯಗಳು ಉತ್ತಮ ಫಲ ನೀಡುತ್ತಿದ್ದು, ರೈತರ ಆದಾಯ, ವ್ಯಾಪಾರ ವಹಿವಾಟು ಹತ್ತು ಪಟ್ಟು ಹೆಚ್ಚಾಗಿದೆ. ಇಲ್ಲಿನ ಜನರ ಆರ್ಥಿಕ ಸ್ಥಿತಿ ಸುಧಾರಿಸಿ ಸುಖ ಸಂಸಾರ ನಡೆಸಲು ಸಾಧ್ಯವಾಗಿದೆ. ಈ ಸಲ ಪ್ರತಿ ಪಕ್ಷದಲ್ಲಿದ್ದರೂ ಶಕ್ತಿಮೀರಿ ಕೆಲಸ…
ಇಂಡಿ : ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ವಿರುದ್ಧ ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಯದರ್ಶಿ ನಾಗೇಶ ಶಿವಶರಣ ಚುನಾವಣೆ ಅಧಿಕಾರಿ, ತಹಶಿಲ್ದಾರ ನಾಗಯ್ಯ ಹಿರೇಮಠ ಅವರಿಗೆ ದೂರು ಸಲ್ಲಿಸಿದ್ದಾರೆ. ತಾಲ್ಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ದೇವಸ್ಥಾನದ ಒಳಗಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ತಮ್ಮ ಪರವಾಗಿ ಮತಯಾಚನೆ ಮಾಡಿದ್ದಾರೆ. ಮಾ.31ರಂದು ಮಧ್ಯಾಹ್ನ 12 ಗಂಟೆಯಿಂದ 1:30 ಗೆ ಮತಯಾಚನೆ ಮಾಡಿದ್ದಾರೆ. ಮುಖ್ಯ ಚುನಾವಣೆ ಅಧಿಕಾರಿಗಳ ಸೂಚನೆ ಮೇರೆಗೆ ಯಾವುದೇ ಗುಡಿ ಗುಂಡಾರ, ಮಜೀದಿ ಮುಂತಾದ ಧಾರ್ಮಿಕ ಸ್ಥಳದಲ್ಲಿ ಯಾವುದೇ ವ್ಯಕ್ತಿ ತಮ್ಮ ಪರ ಮತ ಯಾಚನೆ ಪ್ರಚಾರ ಮಾಡುವಂತಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮತ್ತು ಇತರೆ ಸೇರಿ ನೀತಿಸಂಹಿತೆ ಉಲ್ಲಂಘಿಸಿ ಸಭೆ ಮತ್ತು ಮತಯಾಚನೆ ಮಾಡಿದ್ದಾರೆ. ಇದು ಸಾವಿರಾರು ಭಕ್ತರ ಮನಸ್ಸಿಗೆ ಘಾಸಿ ಉಂಟು ಮಾಡುವುದರ ಜೊತೆಗೆ…
ಬಸವನಬಾಗೇವಾಡಿ: ತಾಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ರೇಣುಕಾ ಮಸೂತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಜರುಗಿದ ಚುನಾವಣೆಯಲ್ಲಿ ನಿಲುಫರ್ ಬಂದೇನವಾಜ ವಾಲೀಕಾರ ಅವರು ಅವಿರೋಧವಾಗಿ ಆಯ್ಕೆಯಾದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಿಲುಫರ ಬಂದೇನವಾಜ ವಾಲೀಕಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದಾಗಿ ನಿಲುಪರ ವಾಲೀಕಾರ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಒಟ್ಟು ೨೩ ಸದಸ್ಯ ಬಲ ಹೊಂದಿದೆ. ಇಂದು ಜರುಗಿದ ಚುನಾವಣೆಯಲ್ಲಿ ೧೫ ಸದಸ್ಯರು ಹಾಜರಿದ್ದರು. ೮ ಜನ ಸದಸ್ಯರು ಗೈರು ಇದ್ದರು. ಕೋರಂ ಭರ್ತಿ ಇದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಽಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಪಂ ಇಓ ಬಿ.ಎಸ್.ಭಾರತಿ ಚಲುವಯ್ಯ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ಅಽಕಾರಿ ಶಶಿಧರ ಪಾಟೀಲ, ಪಿಡಿಓ ಎಸ್.ಆರ್.ತೋಳನೂರ ಇದ್ದರು.ಸಂಭ್ರಮಾಚರಣೆಃ ಅಧ್ಯಕ್ಷ ಸ್ಥಾನಕ್ಕೆ…
ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ ಸಿಂದಗಿ: ಜೆಡಿಎಸ್ ಘೋಷಿತ ಅಭ್ಯರ್ಥಿಯ ಧೋರಣೆಯ ವಿಚಾರದಲ್ಲಿ 13 ಜನ ಪದಾಧಿಕಾರಿಗಳು ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸಿದ್ದೇವೆ ಎಂದು ತಾಲೂಕಾಧ್ಯಕ್ಷ ದಾನಪ್ಪಗೌಡ ಚನಗೊಂಡ ಹೇಳಿದರು.ಶನಿವಾರದಂದು ಈ ಕುರಿತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಅಭ್ಯರ್ಥಿಯಾಗಿ ಘೋಷಿತರಾದ ವಿಶಾಲಾಕ್ಷಿ ಪಾಟೀಲ ಅವರು ಪಕ್ಷದಲ್ಲಿ ಪದಾಧಿಕಾರಿಗಳು ಮಾಡುವ ಸಂಘಟನಾತ್ಮಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿಲ್ಲ. ಅಲ್ಲದೆ ಸಲಹೆ ಸೂಚನೆಗಳನ್ನು ನೀಡಿದರೂ ಅವುಗಳನ್ನು ಆಲಿಸುತ್ತಿಲ್ಲ. ಪಕ್ಷದ ಪದಾಧಿಕಾರಿಗಳನ್ನು ಸಮಾಧಾನ ಪಡಿಸುವಲ್ಲಿ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಅಭ್ಯರ್ಥಿಯು ಗೆಲುವು ಸಾಧಿಸಬೇಕಾದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಗೆಲುವಿಗೆ ಶ್ರಮಿಸುತ್ತೇವೆ. ಇಲ್ಲವಾದಲ್ಲಿ ಜೆಡಿಎಸ್ ಕಾರ್ಯಕರ್ತರೆಲ್ಲ ಜೊತೆಗೂಡಿ, ಪಕ್ಷದ ಕಾರ್ಯಕರ್ತೆಯಾದ ಜ್ಯೋತಿ ಗುಡಿಮನಿಯವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ, ಅವರನ್ನು ಜಯಗೊಳಿಸಲು ಪಣ ತೊಡುವುದಾಗಿ ಎಚ್ಚರಿಕೆ ನೀಡಿದರಲ್ಲದೆ ಜೆಡಿಎಸ್ ಗೆಲುವಿಗೆ ತಾವು ಸದಾ ಬದ್ಧರಾಗಿರುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಿಂಗರಾಜು ಬಗಲಿ, ಶಿವರಾಜ ಪೊಲೀಸ್ ಪಾಟೀಲ, ಸಿ.ಎಸ್.ಕುಂಬಾರ, ಶಿವಶರಣ ಹೆಗ್ಗಣದೊಡ್ಡಿ, ಮ ಬಾಬುಪಟೇಲ ಬಿರಾದಾರ…
ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ, ಗಣಿಹಾರ ಆರೋಪ ವಿಜಯಪುರ: ಮುಸ್ಲಿಮರ 2ಬಿ ಮೀಸಲಾತಿಯನ್ನು ರದ್ದುಪಡಿಸಿದ ಸರಕಾರದ ಉದ್ದೇಶ, ಸಮಾಜಗಳಲ್ಲಿ ಒಡಕುಂಟು ಮಾಡುವುದಲ್ಲದೆ ಇದರಿಂದ ಮುಸ್ಲಿಮರು ಪ್ರಚೋದನೆಗೆ ಒಳಗಾಗಿ ಗಲಭೆ, ದಾಂಧಲೆ ಮಾಡಲಿ ಎನ್ನುವುದಾಗಿತ್ತು. ಇದರಿಂದ ರಾಜ್ಯದಲ್ಲಿ ಅಶಾಂತಿ, ಗೊಂದಲ ಸೃಷ್ಟಿಸಿ ಚುನಾವಣೆಯಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಹೊಂದಿತ್ತು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ಮುಸ್ಲಿಮರ ಶೇಕಡ ನಾಲ್ಕು ಮೀಸಲಾತಿ ರದ್ದುಪಡಿಸಿ ಅದರಲ್ಲಿ ಪಂಚಮಸಾಲಿಗೆ ಶೇಕಡ 2 ಒಕ್ಕಲಿಗರಿಗೆ ಶೇಕಡ 2 ಹಂಚಿದ್ದಾರೆ. ನಮ್ಮ ಅನ್ನವನ್ನು ಕಸಿದುಕೊಂಡು ಇನ್ನೊಬ್ಬರಿಗೆ ಹಂಚಿದ್ದಾರೆ. ಇದು ಯಾವ ನ್ಯಾಯ? ಯಾವ ಧರ್ಮವೂ ಹೀಗೆ ಹೇಳುವುದಿಲ್ಲ. ಎಲ್ಲ ಧರ್ಮಗಳ ಸಾರ ಒಂದೇ ಆಗಿರುವಾಗ ಚುನಾವಣೆ ಹೊತ್ತಲ್ಲಿ ಕೇವಲ ರಾಜಕೀಯ ಮತ ಬೇಟೆಗೋಸ್ಕರ ಸರಕಾರ ಈ ನಾಟಕವಾಡಿದೆ. ಆದರೆ ಮುಸ್ಲಿಂ ಸಮುದಾಯವು ಬಿಜೆಪಿ ಸರ್ಕಾರದ ಹುನ್ನಾರಕ್ಕೆ ಬಲಿಯಾಗದೆ ಪ್ರತಿಭಟನೆ, ಗಲಭೆಗೆ ಕೈಹಾಕದೆ ಕಾನೂನು ಹೋರಾಟಕ್ಕೆ ಮುಂದಾಗಿದ್ದು…
ಸೀರೆ ಮತ್ತು ನೀರೆಗೆ ಅವಿನಾಭಾವ ಸಂಬಂಧವಿದೆ.ನೀರೆಗೆ ಸೀರೆಯೇ ಸೊಬಗು ನಮ್ಮ ಭಾರತ ದೇಶದ ಸಂಸ್ಕೃತಿ ಕೂಡ ಹೌದು.ಸೀರೆಯಿಂದ ನಾರಿಯ ಸೌಂದರ್ಯ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ.ಪಾರಂಪರಿಕ ಉಡುಪು ಕೂಡ ಹೌದು.ಸೀರೆಯಲ್ಲಿ ನೀರೆಯ ಅಂದವೇ ಚಂದ.ಸೀರೆ ನಮ್ಮ ದೇಶದ ಸಂಸ್ಕೃತಿಯ ಜೀವಾಳ.ನೀರೆಗೆ ಸೀರೆಯ ಮೇಲೆ ಮೋಹ ಹೆಚ್ಚು ಅದರಿಂದ ಅವಳ ಮೆರಗೂ ಕೂಡ ಹೆಚ್ಚಾಗುವುದು.ನವಿಲಿನ ನಾಟ್ಯ ಚಂದಕೋಗಿಲೆಯ ಗಾನ ಚಂದನೀರೆಗೆ ಸೀರೆ ಬಲು ಅಂದ..ಹೆಣ್ಣು ತೆಳ್ಳಗಿರಲಿ, ಬೆಳ್ಳಗಿರಲಿ, ದಪ್ಪಗಿರಲಿ , ಉದ್ದವಿರಲಿ, ಗಿಡ್ಡವಿರಲಿ,ಪ್ರತಿಯೊಬ್ಬರ ತನು ಮನವನ್ನು ಅಪ್ಪಿ ಬಳಸಿ ಎಲ್ಲರಿಗೂ ಖುಷಿ ಕೊಡುವುದು ಈ ಸೀರೆ.ಬಣ್ಣ ಬಣ್ಣದ ಬಗೆ ಬಗೆಯ ಸೀರೆಗೆ ಸೆಳೆಯುವ ಗುಣವಿದೆ.ಎಲ್ಲ ಭಾವಗಳನ್ನು ಸಂಬಂಧಗಳನ್ನು ಬೆಸೆದುಕೊಂಡಿದೆ.ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಎಷ್ಟೇ ಉಡುಪುಗಳು ಬಂದರು ಸೀರೆಯ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.ಅತಿ ಉದ್ದದ ಉಡುಪಾದರು ಎಲ್ಲ ಸಭೆ ಸಮಾರಂಭಗಳಲ್ಲಿ ಆಕರ್ಷಣೀಯ ಮೆರಗು ಕೊಡುವುದು ಸೀರೆ ಮಾತ್ರ. ಸೀರೆಯ ಮಹಿಮೆ ಅಪಾರನಮ್ಮ ರೀ ಯನ್ನು ಸೆಳೆಯುವ ಗುರಿಕಾರ.ಚಂದವಾಗಿ ಸೀರೆಯುಟ್ಟು ಜಡೆಗೆ ಮಲ್ಲಿಗೆ ಮುಡಿದು…