Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ.. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ-ವಿವೇಕಾನಂದ ಎಚ್ ಕೆ, ಬೆಂಗಳೂರು ಹಿಂದೆ ಎಷ್ಟೋ ಘಟನೆಗಳು ನಡೆದಿವೆ, ಈಗಲು ಎಷ್ಟೋ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ, ಮುಂದೆ ಇನ್ನೂ ಭಯಂಕರ ಹತ್ಯೆಗಳು ಸಂಭವಿಸಬಹುದು. ಆಗಲು ಎಲ್ಲರೂ ಹೇಳುವುದು ಭದ್ರತಾ ವೈಫಲ್ಯ.. ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದ ಬಲಿಷ್ಠ ದೇಶಗಳಲ್ಲಿ ಸಹ ಭದ್ರತಾ ವೈಫಲ್ಯ ಎಂಬ ಕಾರಣ ಸದಾ ಸಿದ್ಧವಾಗಿರುತ್ತದೆ.. ಅಮೆರಿಕದಲ್ಲಿ, ಇಂಗ್ಲೇಂಡಿನಲ್ಲಿ, ಆಫ್ರಿಕಾದಲ್ಲಿ, ಆಸ್ಟ್ರೇಲಿಯಾದಲ್ಲಿ, ಜಪಾನಿನಲ್ಲಿ, ಚೀನಾದಲ್ಲಿ, ಭಾರತದಲ್ಲಿ ಹೀಗೆ ಎಲ್ಲಾ ದೇಶಗಳಲ್ಲಿ ಸಹ ಇದು ನಿರಂತರವಾಗಿ ನಡೆಯುತ್ತಿದೆ.. ಕಾರಣ ಭದ್ರತೆ ಎಂಬ ಭಾವದಲ್ಲಿಯೇ ಅಭದ್ರತೆ, ಆಕ್ರಮಣ ಹಾಗು ಹಿಂಸೆ ಅಡಕವಾಗಿದೆ. ಆ ಕಾರಣದಿಂದಲೇ ಭದ್ರತೆ ಪ್ರಾಮುಖ್ಯತೆ ಪಡೆಯುತ್ತದೆ. ಶೇಕಡಾ 99% ರಷ್ಟು ಭದ್ರತೆ ಯಾವಾಗಲು ಯಶಸ್ವಿಯಾಗುತ್ತದೆ. ಕೇವಲ 1% ಸಾಮಾನ್ಯವಾಗಿ ವಿಫಲವಾಗುತ್ತದೆ. ಆದರೆ ಆ 1% ಮಾಡುವ ಹಾನಿ ಮಾತ್ರ ತುಂಬಾ ಅಪಾಯಕಾರಿಯಾಗಿರುತ್ತದೆ…..ವಿಶ್ವದ ಅತ್ಯಂತ ಪ್ರಬಲ ರಕ್ಷಣಾ ವ್ಯವಸ್ಥೆ…
ಕೋಳಕೂರ ಶ್ರೀ ಸಿದ್ದಬಸವೇಶ್ವರರ ೫೯೬ ನೇ ಜಯಂತೋತ್ಸವದಲ್ಲಿ ಸಂಗನಬಸವ ಶ್ರೀ ಶ್ಲಾಘನೆ ವಿಜಯಪುರ: ಸಮಾಜದಲ್ಲಿ ಅದೆಷ್ಟೇ ದೊಡ್ಡವರಿರಲಿ, ಉನ್ನತ ಅಧಿಕಾರದಲ್ಲಿರಲಿ ಸೃಷ್ಠಿಕರ್ತನ ಮುಂದೆ ಎಲ್ಲರೂ ಚಿಕ್ಕವರು. ಪ್ರಾಂಜಲ ಮನದಿಂದ ಭಗವಂತನ ಆರಾಧನೆಯನ್ನು ಮಾಡಿದರೆ ಖಂಡಿತ ಫಲ ಸಿಗುತ್ತದೆ ಎಂದು ಮನಗೂಳಿ ಶ್ರೀ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.ಶುಕ್ರವಾರ ನಗರದ ಡಾ.ರಾಜಕುಮಾರ ಬಡಾವಣೆಯಲ್ಲಿ ಉದ್ಯಮಿ ಸಿ.ಎಂ.ಮಾಲಿಪಾಟೀಲ ಅವರು ಏರ್ಪಡಿಸಿದ ಕೋಳಕೂರ ಶ್ರೀ ಸಿದ್ದಬಸವೇಶ್ವರರ ೫೯೬ ನೇ ಜಯಂತೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದುದು. ಹಸಿದವರಿಗೆ ಅನ್ನ ನೀಡಿ. ಭಗವಂತ ಯಾವ ಸ್ವರೂಪದಲ್ಲಿ ಬರುವನೋ ಗೊತ್ತಿಲ್ಲ, ನಿಮ್ಮ ಆರ್ಥಿಕ ಸ್ಥಿತಿಗನುಗುಣವಾಗಿ ಆಗಾಗ ಅನ್ನದಾನ ಮಾಡುತ್ತಿರಿ ಎಂದು ಶ್ರೀಗಳು ಕರೆ ನೀಡಿದರು.ಕಳೆದ ಹಲವಾರು ವರ್ಷಗಳಿಂದ ಉದ್ಯಮಿ ಸಿ.ಎಂ.ಮಾಲೀಪಾಟೀಲರು ಚಾಚೂತಪ್ಪದೆ ಸತ್ಸಂಗ, ಧರ್ಮಸಭೆ, ಅನ್ನದಾಸೋಹದಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೋಳಕೂರ ಶ್ರೀ ಸಿದ್ದಬಸವೇಶ್ವರರ ಜಯಂತೋತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತ ಬಂದಿದ್ದಾರೆ. ಅನ್ನದಾನದೊಂದಿಗೆ ಮರಣೋತ್ತರ ನೇತ್ರದಾನವನ್ನೂ ಮಾಡಿರುವ ಸಿ.ಎಂ.ಮಾಲಿಪಾಟೀಲರ ನಡೆ ಅನುಕರಣೀಯ ಎಂದು…
ಕೋಳಕೂರ ಶ್ರೀ ಸಿದ್ದಬಸವೇಶ್ವರರ ೫೯೬ ನೇ ಜಯಂತೋತ್ಸವದಲ್ಲಿ ಸಂಗನಬಸವ ಶ್ರೀ ಶ್ಲಾಘನೆ ವಿಜಯಪುರ: ಸಮಾಜದಲ್ಲಿ ಅದೆಷ್ಟೇ ದೊಡ್ಡವರಿರಲಿ, ಉನ್ನತ ಅಧಿಕಾರದಲ್ಲಿರಲಿ ಸೃಷ್ಠಿಕರ್ತನ ಮುಂದೆ ಎಲ್ಲರೂ ಚಿಕ್ಕವರು. ಪ್ರಾಂಜಲ ಮನದಿಂದ ಭಗವಂತನ ಆರಾಧನೆಯನ್ನು ಮಾಡಿದರೆ ಖಂಡಿತ ಫಲ ಸಿಗುತ್ತದೆ ಎಂದು ಮನಗೂಳಿ ಶ್ರೀ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.ಶನಿವಾರ ನಗರದ ಡಾ.ರಾಜಕುಮಾರ ಬಡಾವಣೆಯಲ್ಲಿ ಉದ್ಯಮಿ ಸಿ.ಎಂ.ಮಾಲಿಪಾಟೀಲ ಅವರು ಏರ್ಪಡಿಸಿದ ಕೋಳಕೂರ ಶ್ರೀ ಸಿದ್ದಬಸವೇಶ್ವರರ ೫೯೬ ನೇ ಜಯಂತೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದುದು. ಹಸಿದವರಿಗೆ ಅನ್ನ ನೀಡಿ. ಭಗವಂತ ಯಾವ ಸ್ವರೂಪದಲ್ಲಿ ಬರುವನೋ ಗೊತ್ತಿಲ್ಲ, ನಿಮ್ಮ ಆರ್ಥಿಕ ಸ್ಥಿತಿಗನುಗುಣವಾಗಿ ಆಗಾಗ ಅನ್ನದಾನ ಮಾಡುತ್ತಿರಿ ಎಂದು ಶ್ರೀಗಳು ಕರೆ ನೀಡಿದರು.ಕಳೆದ ಹಲವಾರು ವರ್ಷಗಳಿಂದ ಉದ್ಯಮಿ ಸಿ.ಎಂ.ಮಾಲೀಪಾಟೀಲರು ಚಾಚೂತಪ್ಪದೆ ಸತ್ಸಂಗ, ಧರ್ಮಸಭೆ, ಅನ್ನದಾಸೋಹದಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೋಳಕೂರ ಶ್ರೀ ಸಿದ್ದಬಸವೇಶ್ವರರ ಜಯಂತೋತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತ ಬಂದಿದ್ದಾರೆ. ಅನ್ನದಾನದೊಂದಿಗೆ ಮರಣೋತ್ತರ ನೇತ್ರದಾನವನ್ನೂ ಮಾಡಿರುವ ಸಿ.ಎಂ.ಮಾಲಿಪಾಟೀಲರ ನಡೆ ಅನುಕರಣೀಯ ಎಂದು…
ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ | ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದೆಂದು ಸ್ಪಷ್ಠನೆ ನವದೆಹಲಿ: 370ನೇ ವಿಧಿ ಕುರಿತು ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 24 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದು ನಮ್ಮದು, ಅದನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಹೇಳುತ್ತಿದ್ದೇನೆ ಎಂದರು.ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಆರ್ಟಿಕಲ್ 370 ರ ತೀರ್ಪು ನೀಡುವಾಗ ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ವಿಲೀನಗೊಂಡ ನಂತರ ಆಂತರಿಕ ಸಾರ್ವಭೌಮತ್ವದ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದ್ದರು. ಆರ್ಟಿಕಲ್ 370 ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ಅಮಿತ್ ಶಾ ಹೇಳಿದರು.ಕಾಶ್ಮೀರದ ವಿಲೀನಕ್ಕೆ ಜವಾಹರಲಾಲ್ ನೆಹರು ಹೊಣೆಗಾರ ಎಂದು ಅಮಿತ್ ಶಾ ಹೇಳಿದರು. ನೆಹರೂ ಕಾಶ್ಮೀರವನ್ನು…
ನವದೆಹಲಿ: ಲೋಕಸಭೆ ಭದ್ರತಾ ಉಲ್ಲಂಘನೆ ಪ್ರಕರಣದ ಆರನೇ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಪ್ರಕರಣದ ‘ಮಾಸ್ಟರ್ ಮೈಂಡ್’ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ್ ಕುಮಾವತ್ ಅವರನ್ನು ಇಂದು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.ಘಟನೆ ನಡೆದ ಮರುದಿನ ಶರಣಾಗಲು ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಬಂದಿದ್ದ ಲಲಿತ್ ಝಾ ಅವರೊಂದಿಗೆ ಮಹೇಶ್ ಕುಮಾವತ್ ಕೂಡ ಆಗಮಿಸಿದ್ದರು. ಇಬ್ಬರನ್ನೂ ತನಿಖಾಧಿಕಾರಿಗಳ ವಶಕ್ಕೆ ನೀಡಲಾಗಿದ್ದು, ಅಂದಿನಿಂದಲೆ ಮಹೇಶ್ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.ಪ್ರಕರಣದ ಆರೋಪಿಗಳು ಈ ಹಿಂದೆ ನಿರ್ವಹಣೆ ಮಾಡುತ್ತಿದ್ದ ಭಗತ್ ಸಿಂಗ್ ಫ್ಯಾನ್ ಕ್ಲಬ್ ಪೇಜ್ ನ ಸದಸ್ಯನಾಗಿದ್ದು, ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಕುಮಾವತ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಆರೋಪಿಗಳ ಮೊಬೈಲ್ ಫೋನ್ ನಲ್ಲಿದ್ದ ಸಾಕ್ಷ್ಯ ನಾಶಪಡಿಸುವ ಕೆಲಸದಲ್ಲಿ ಕುಮಾವತ್ ಭಾಗಿಯಾಗಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಸಿದ ನಂತರ ವಿಶೇಷ ನ್ಯಾಯಾಧೀಶ ಹರ್ದೀಪ್…
ಬೆಂಗಳೂರು: ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾನೂನಿನ ಅಡಿಯಲ್ಲಿನ ಹಕ್ಕುಗಳ ಕುರಿತು ಮಹಿಳೆಯರಿಗೆ ಸಮಾಲೋಚನೆ ನೀಡುವ ಮೂಲಕ, ಸಂತ್ರಸ್ತರಿಗೆ ಮಾನಸಿಕ ಆಘಾತ ಕಡಿಮೆ ಮಾಡಲು ಹಾಗೂ ಅವರಿಗೆ ಸಹಾಯ ಮಾಡಲು ಕರ್ನಾಟಕ ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.ಅತ್ಯಾಚಾರದಿಂದ ಗರ್ಭಿಣಿಯಾಗಿದ್ದ 17 ವರ್ಷದ ಬಾಲಕಿಗೆ ಎಂಟಿಪಿಗೆ ಒಳಗಾಗಲು ಅನುಮತಿ ನೀಡುವಾಗ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ನಿರ್ದೇಶನಗಳನ್ನು ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನ ಗರ್ಭಾವಸ್ಥೆಯ ಹಲವಾರು ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಸಂಭವಿಸಿದ್ದು, ಅದರ ಅನ್ವಯ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.ಸಂತ್ರಸ್ತೆಯರು ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಬಯಸುವ ಹೆಚ್ಚಿನ ಪ್ರಕರಣಗಳಲ್ಲಿ ಗರ್ಭಾವಸ್ಥೆಯ ಅವಧಿಯು 24 ವಾರಗಳನ್ನು ದಾಟಿರುತ್ತದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಇದು ವೈದ್ಯಕೀಯ ಗರ್ಭಪಾತ (ತಿದ್ದುಪಡಿ)-1971ರ ಅಡಿಯಲ್ಲಿ ಅನುಮತಿ ನೀಡುವ ಅವಧಿಯಾಗಿದೆ. ನಂತರದ ಯಾವುದೇ ವಿಳಂಬಕ್ಕೆ ಹೈಕೋರ್ಟ್ನಿಂದ ಅನುಮತಿ ಪಡೆಯುವುದು ಅಗತ್ಯವಿದೆ.ಐಪಿಸಿ ಸೆಕ್ಷನ್ 376 ಅಥವಾ ಪೋಕ್ಸೊ ಕಾಯ್ದೆಯಡಿ ಲೈಂಗಿಕ ಅಪರಾಧವನ್ನು ದಾಖಲಿಸಿದ ತಕ್ಷಣ, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ ಗರ್ಭಿಣಿಯಾಗಿದ್ದಲ್ಲಿ ಖಚಿತಪಡಿಸಿಕೊಳ್ಳಬೇಕೆಂದು ನ್ಯಾಯಾಲಯ…
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಗಂಭೀರ ಆರೋಪ ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ಮೂಲಕ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಶನಿವಾರ ಗಂಭೀರ ಆರೋಪಿಸಿದ್ದಾರೆ.ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, ‘ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮೈಸೂರು-ಕೊಡಗು ಸಂಸದ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಅವರ (ಸಿಎಂ ಸಿದ್ದರಾಮಯ್ಯ) ಪುತ್ರನ ಗೆಲುವನ್ನು ಖಚಿತಪಡಿಸಿಕೊಳ್ಳಲು ಯೋಜಿತ ರೀತಿಯಲ್ಲಿ ಷಡ್ಯಂತ್ರ ರೂಪಿಸಲಾಗಿದೆ’ ಎಂದು ಅವರು ಹೇಳಿದರು.ಭಾರತ್ ಜೋಡೋ ಯಾತ್ರೆಯಲ್ಲಿ ‘ನಗರ ನಕ್ಸಲರು’ ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ ನಗರ ನಕ್ಸಲರ ಬೆಳವಣಿಗೆಯನ್ನು ಖಾತ್ರಿಪಡಿಸುತ್ತಿದ್ದಾರೆ. ಸಂಸತ್ತಿನಲ್ಲಿ ನಡೆದ ಹೊಗೆ ದಾಳಿ ಕೇವಲ 15 ನಿಮಿಷಗಳ ನಂತರ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಇದು ಪ್ರತಾಪ್ ಸಿಂಹ ವಿರುದ್ಧದ ಷಡ್ಯಂತ್ರವನ್ನು ಸ್ಪಷ್ಟವಾಗಿ ತೋರಿಸುತ್ತದೆ’ ಎಂದು…
– ಮ.ನಾ.ಉಡುಪ ಮಂಡ್ಯ ಅಡವಿಯೊಂದರಲ್ಲಿ ಏಕಾಕಿ ಕುದುರೆಯೊಂದು ಮೇಯುತಿತ್ತು. ಅಲ್ಲಿಗೆ ಕತ್ತೆಗಳ ಒಂದು ಗುಂಪು ಬಂತು. ಕುದುರೆಗೂ ಅವನ್ನು ಕಂಡು ತೀರ ಕೋಪ, ತಿರಸ್ಕಾರ.“ಹೊಲಸು ಪ್ರಾಣಿಗಳು, ಮೂರ್ಖರು. ನನ್ನಂಥ ಕುಲೀನನಾದ ಕುದುರೆ ನಿಮ್ಮ ಜತೆಯಲ್ಲಿ ಬರುವುದೆಂದರೆ ನನಗೇ ಅವಮಾನಕರ. ಒಂದೋ, ನೀವು ಇಲ್ಲಿಂದ ದೂರ ಸರಿಯಿರಿ. ಇಲ್ಲ. ನಾನೇ ಹೊರಟುಹೋಗುತ್ತೇನೆ” ಎಂದಿತು.ಕತೆಗಳುಮೌನವಾಗಿ ಮೇಯುವುದನ್ನು ಮುಂದುವರಿಸಿದುವು. ಅಷ್ಟರಲ್ಲಿ ಕುದುರೆಗಳನ್ನು ಹಿಡಿಯಲೆಂದು ಬೇಟೆಗಾರರ ಒಂದು ಗುಂಪು ಅಲ್ಲಿಗೆ ಬಂತು. ಅದನ್ನು ನೋಡಿ ಕುದುರೆ ಕತ್ತೆಗಳ ಗುಂಪಿನಲ್ಲಿ ಮರೆಯಾಯಿತು. ಬೇಟೆಗಾರರು ಕತ್ತೆಗಳ ಗುಂಪನ್ನು ಗಮನಿಸಿ ಮುಂದುವರಿದರು. ಕುದುರೆ “ಬದುಕಿದೆಯಾ ಬಡಜೀವವೇ !’ ಎಂದು ಸಮಾಧಾನದ ಉಸಿರುಬಿಟ್ಟಿತು.ಇತ್ತ ಮನುಷ್ಯರನ್ನು ಕಂಡು ಕತ್ತೆಗಳಿಗೂ ಭಯವಾಗಿತ್ತು. ಅಂತಲೇ ಅವು ಕುದುರೆಗೆ “ಆದಷ್ಟು ಬೇಗ ಈಅಪಾಯಕಾರಿ ಸ್ಥಳವನ್ನು ಬಿಡೋಣ. ನೀನು ದಯಮಾಡಿ ನಮ್ಮ ಜೊತೆಗೆ ಬರಲಾರೆಯಾ? ನಮಗೆ ಬೇಟೆಗಾರರನ್ನು ಕಂಡರೆ ಭಯವಾಗುತ್ತದೆ,” ಎಂದುವು.ಆದರೆ ಅಪಾಯ ದೂರವಾದಮೇಲೆ ಕುದುರೆಯ ಪ್ರತಿಷ್ಠೆಯ ಪ್ರಜ್ಞೆ ಮತ್ತೆ ಜಾಗೃತವಾಯಿತು.“ಛೇ…. ನೀವೆಲ್ಲ ಹೇಸಿ ಪ್ರಾಣಿಗಳು. ನಿಮ್ಮೊಟ್ಟಿಗೆ ನಡೆದರೆ ನನ್ನ…
ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿ ವಿ ಎಸ್ ಪ್ರೌಢಶಾಲೆ ಹೊನವಾಡಕ್ಕೆ ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೋದಿನಿ ಬಳೋಲಮಟ್ಟಿಯವರು ಭೇಟಿ ನೀಡಿ ಪರಿಶೀಲಿಸಿದರು.ಸಿ ಆರ್ ಪಿ ಸಂಯೋಜಕರಾದ ಶ್ರೀಮತಿ ಸುಜಾತಾ ಬಾಗಲಕೋಟ ಪಾಲ್ಗೊಂಡಿದ್ದರು.ಸಂಸ್ಥೆಯ ಅಧ್ಯಕ್ಷ ನಳಿನಿಕಾಂತ ಸಾವಂತ, ಪ್ರಾಚಾರ್ಯ ಎಂ ಎ ಹಿರೇಮಠ ಹಾಗೂ ಸಹ ಶಿಕ್ಷಕರು ಇದ್ದರು.
ಇಂಡಿ: ತಾಲೂಕಿನ ಅಂಜುಟಗಿ ಗ್ರಾಮದ ನಿವಾಸಿ ತಂದೆ ಕಾಮಣ್ಣ ಹರಳಯ್ಯ ಮತ್ತು ತಾಯಿ ವಿಮಲಾಬಾಯಿ ಇವರ ಪುತ್ರ ಡಾ. ಸಂಜೀವ ಹರಳಯ್ಯ ಇವರಿಗೆ ನವದೆಹಲಿಯಲ್ಲಿ ನಡೆದ ೩೯ ನೇ ರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ನ್ಯಾಶನಲ್ ಫೆಲೋಶಿಫ್ ಪ್ರಶಸ್ತಿ ನೀಡಿ ಗೌರವಿಸಿದೆ.ಡಾ. ಸಂಜೀವ ಅವರ ಶಿಕ್ಷಣ ಮತ್ತು ಸಾಧನೆ ಪರಿಗಣಿಸಿ ಈ ಗೌರವ ನೀಡಿದೆ.ಬಡತನ ಕುಟುಂಬದಲ್ಲಿ ಜನಿಸಿದ ಡಾ. ಸಂಜೀವ ಗದಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ಶುಶ್ರೂಷಾಧಿಕಾರಿ ಮತ್ತು ಸರಕಾರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಬರೆದ ಮಕ್ಕಳು ಕಲಿಕೆ ಆಲಿಕೆಗಳು ಪ್ರಬಂದಕ್ಕೆ ಅರುಣಾಚಲ ಪ್ರದೇಶದ ಹಿಮಾಲಯ ವಿವಿ ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ.ಮತ್ತು ಇಂಟರ್ ನ್ಯಾಶನಲ್ ಜನರಲ್ ಆಫ್ ಅಡ್ವಾನ್ಸ ಸೆಕ್ರೆಟರಿ ನರ್ಸಿಂಗ್ ಸಹ ಎಡಿಟರ್ ಆಗಿ ಆಯ್ಕೆ ಆಗಿದ್ದಾರೆ.
