Author: editor.udayarashmi@gmail.com

ದೇವರಹಿಪ್ಪರಗಿ: ಕೆ.ಇ.ಬಿ ಹನುಮಾನ ಮಂದಿರದಲ್ಲಿ ಜರುಗಿದ ಕಾರ್ತಿಕೋತ್ಸವದಲ್ಲಿ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡು ಸಂಪನ್ನಗೊಳಿಸಿದರು.ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿಯ ಹನುಮಾನ ಮಂದಿರದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಅಂಗವಾಗಿ ಅರ್ಚಕ ಶ್ರೀಪಾದ ಜೋಷಿ ನೇತೃತ್ವದಲ್ಲಿ ನಿರಂತರ ಸಂಪ್ರದಾಯಿಕವಾಗಿ ಜರುಗಿ ಬಂದ ಕಾರ್ತಿಕೋತ್ಸವಕ್ಕೆ ಮಂಗಳವಾರ ವಿವಿಧ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಮಹಾಪೂಜೆ ಸಲ್ಲಿಸಲಾಯಿತು.ಸಾಯಂಕಾಲ ದೇವಾಲಯದ ಆವರಣದಲ್ಲಿ ದೀಪ ಬೆಳಗಿಸಿ, ವಿದ್ಯುತ್ ಅಲಂಕಾರ ಮಾಡಿ ಕಾರ್ತಿಕೋತ್ಸವ ಸಂಪನ್ನಗೊಳಿಸಲಾಯತು. ನಂತರ ನೆರೆದ ಸುತ್ತಮುತ್ತಲಿನ ಬಡಾವಣೆಗಳ ಭಕ್ತಸಮೂಹಕ್ಕೆ ಮಹಾಪ್ರಸಾದ ವಿತರಣೆಯಾಯಿತು.ವ್ಹಿ.ಕೆ.ಪಾಟೀಲ, ಸಂಗಪ್ಪಣ್ಣ ತಡವಲ್, ಎಸ್.ಎನ್.ಪಡನೂರ, ಗುರುರಾಜ ದೇಸಾಯಿ, ಶಿವಾನಂದ ಕೊಡಗೆ, ದೇವೇಂದ್ರ ಯಾಳಗಿ, ಅಶೋಕ ಫಿರಂಗಿ, ರಾಘವೇಂದ್ರ ಕುಲಕರ್ಣಿ, ಬಸಯ್ಯ ಹಿರೇಮಠ, ಸೋಮಶೇಖರ ಹಿರೇಮಠ, ಕಾಶೀನಾಥ ಕೋರಿ, ಮಹೇಶ ಯಾಳಗಿ, ಆನಂದ ಜಡಿಮಠ, ನಿಂಗಯ್ಯ ಕರಡಿಮಠ, ಸಿದ್ದು ಪಾಟೀಲ, ವಸಂತ ನಾಡಗೌಡ, ಕಾಶೀನಾಥ ಹಿರೇಮಠ, ರವಿ ವಡ್ಡೋಡಗಿ, ಶಿವು ಕೋಟಿನ್, ಪ್ರಲ್ಹಾದ ಕುಲಕರ್ಣಿ, ಸೋಮು ಬಿರಾದಾರ(ಜಿರ್ಲಿ), ಸದಾಶಿವ, ನಿಂಗಪ್ಪ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

Read More

ಲಿಂ.ಚಂದ್ರಕಾಂತ ಕರದಳ್ಳಿ ಪುಣ್ಯಸ್ಮರಣೆ & ಶ್ರೀ ಚಂದ್ರಕಾಂತ ಸದ್ಭಾವನಾ ಪುರಸ್ಕಾರದಲ್ಲಿ ವಿಮರ್ಶಕ ಸಿ.ಎಸ್.ಭೀಮರಾಯ ಅಭಿಮತ ಶಹಾಪೂರ: ಮಕ್ಕಳ ಸಾಹಿತ್ಯ ಮತ್ತು ಸಾಹಿತಿಗಳೆಂದರೆ ಮೂಗು ಮುರಿಯುವುದರೊಂದಿಗೆ ಅಸಡ್ಡೆ ಮಾಡುವುದು ಸರಿಯಲ್ಲ. ಮಕ್ಕಳ ಸಾಹಿತ್ಯ ರಚನೆಗೆ ಮಗು ಮನಸ್ಸಿರಬೇಕು. ಮಕ್ಕಳಿಗಾಗಿ ಕಥೆ, ಕವಿತೆ, ನಾಟಕ ಮತ್ತು ಕಾದಂಬರಿ ರಚಿಸುವುದು ಕಷ್ಟದ ಕೆಲಸ. ಮಕ್ಕಳ ಸಾಹಿತಿಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ, ನೈತಿಕ ಮೌಲ್ಯ ಮತ್ತು ರಾಷ್ಟಪ್ರೇಮದ ಗುಣಗಳನ್ನು ಬೆಳೆಸುವಂತಹ ಸಾಹಿತ್ಯ ರಚನೆಯಾಗಬೇಕೆಂದು ವಿಮರ್ಶಕ ಸಿ.ಎಸ್.ಭೀಮರಾಯ ಅಭಿಪ್ರಾಯಪಟ್ಟರು.ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲಿಂ. ಚಂದ್ರಕಾಂತ ಕರದಳ್ಳಿಯವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಚಂದ್ರಕಾಂತ ಸದ್ಭಾವನಾ ಪುರಸ್ಕಾರ-೨೦೨೩ರ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಮಾತನಾಡಿದರು.ಮಕ್ಕಳನ್ನು ಉದ್ದೇಶಿಸಿ ರಚನೆ ಮಾಡುವ ಸಾಹಿತ್ಯವನ್ನು ಮಕ್ಕಳೇ ಓದುವುದಿಲ್ಲ. ಮಕ್ಕಳ ಸಾಹಿತ್ಯ ಬರೆಯುವವರ ನಡುವೆಯಷ್ಟೇ ಅದು ವಿನಿಮಯಗೊಳ್ಳುತ್ತದೆ. ಸಾಹಿತ್ಯದಲ್ಲಿ ಮಕ್ಕಳಿಗೆ ಅಭಿರುಚಿ ಹುಟ್ಟಿಸಬೇಕಿದೆ. ಮಕ್ಕಳಿಗೆ ಆಸಕ್ತಿ ಹುಟ್ಟಿಸುವ ರೀತಿ ಕಥೆ, ಕವಿತೆ…

Read More

ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಗ್ರಾಮದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಡಿ.೨೫ ಮತ್ತು ೨೬ರಂದು ರಂದು ಹಮ್ಮಿಕೊಳ್ಳಲಾಗಿದೆ.ಡಿ.೨೫ ರ ಬೆಳಿಗ್ಗೆ ೬ ಗಂಟೆಗೆ ಹುಲಗೆಮ್ಮ ದೇವಿ ದೇವಸ್ಥಾನದಲ್ಲಿ ರಾಯಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಕುಂಭ ಕಳಸ, ವಾದ್ಯ ವೈಭವದೊಂದಿಗೆ ಅದ್ಧೂರಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಗುವದು. ನಂತರ ಧರ್ಮ ಸಭೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ರಾತ್ರಿ ೧೦ಗಂಟೆಗೆ ಮುಗಲಿಹಾಳದ ಮಾಳಿಂಗರಾಯ ಡೊಳ್ಳಿನ ಸಂಘ, ಸಂಕನಾಳದ ಅಮೋಘ ಸಿದ್ದೇಶ್ವರ ಡೊಳ್ಳಿನ ಸಂಘದ ವತಿಯಿಂದ ವಾದಿ-ಪ್ರತಿವಾದಿ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿದೆ.ಡಿ.೨೬ ರಂದು ಬೆಳಿಗ್ಗೆ ೧೦ಕ್ಕೆ ಸಾಗ ಚೀಲ ಹೊತ್ತು ಹೋಗುವ ಸ್ಪರ್ದೆ, ಮಧ್ಯಾಹ್ನ ೨ಕ್ಕೆ ಹಾಲು ಹಲ್ಲು ಟಗರಿನ ಕಾಳಗ ಸ್ಪರ್ದೆ, ಮತ್ತು ಎರಡು ಹಲ್ಲು ಟಗರಿನ ಕಾಳಗ ಸ್ಪರ್ದೆ ರಾತ್ರಿ ೯ಕ್ಕೆ ಗಾನಯೋಗಿ ಮೆಲೋಡೀಸ್ ಮತ್ತು ಆರ್ಕೆಸ್ಟ್ರಾ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಧರ್ಮ ಸಭೆ ಹಾಗೂ…

Read More

ಬಸವನಬಾಗೇವಾಡಿ ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಮರಗಮ್ಮದೇವಿ ದೇವಸ್ಥಾನ.ಬಸವನಬಾಗೇವಾಡಿ, ಡಿ. ೨೦ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ಡಿ. ೨೨ ರಂದು ಬೆಳಗ್ಗೆ ೯.೩೦ ಗಂಟೆಗೆ ಮರಗಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಸಾನಿಧ್ಯವನ್ನು ಡೋಣೂರ ಕಟ್ಟಿಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಹ ಸಾನಿಧ್ಯವನ್ನು ಮಳಸಿದ್ದಯ್ಯ ಹಿರೇಮಠ ವಹಿಸುವರು. ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ವಹಿಸುವರು. ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಜ್ಯೋತಿ ಬೆಳಗಿಸುವರು. ಅತಿಥಿಗಳಾಗಿ ನಿವೃತ್ತ ಶಿಕ್ಷಕ ಎಸ್.ಎಸ್.ಮಂಗಾನವರ, ಡೋಣೂರ ಗ್ರಾಪಂ ಅಧ್ಯಕ್ಷ ಚನ್ನುಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜ ಸೋಂಪೂರ, ತಾಪಂ ಮಾಜಿ ಉಪಾಧ್ಯಕ್ಷ ರಾಹುಲ ಕುಬಕಡ್ಡಿ, ಯುವಮುಖಂಡ ನಾಗರಾಜ ಗುಂದಗಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ ಭಾವಿಕಟ್ಟಿ, ತಾಪಂ ಮಾಜಿ ಸದಸ್ಯರಾದ ರಾಜೇಶ್ವರಿ…

Read More

ಬಸವನಬಾಗೇವಾಡಿ: ಸಮಾಜದಲ್ಲಿ ಅಪರಾಧಗಳು ನಡೆಯದಂತೆ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಯುವಜನಾಂಗ,ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪಿಎಸೈ ಶರಣಗೌಡ ನ್ಯಾಮಣ್ಣನವರ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಾರ್ವಜನಿಕರ ಉದಾಸೀನತೆಯೂ ಒಂದು ಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರೂ ಸಾರ್ವಜನಿಕ ಬದುಕಿನಲ್ಲಿ ತುಂಬಾ ಜಾಗೃತರಾಗಿರಬೇಕು. ಇಂದು ದೈಹಿಕ ಅಪರಾಧ, ಆಸ್ತಿ ಅಪರಾಧ, ವಿದ್ಯುನ್ಮಾನ ಅಪರಾಧ ಎಂಬ ಬಗೆಯ ಅಪರಾಧಗಳು ಹೆಚ್ಚುತ್ತಿವೆ. ಈ ಮೂರು ಅಪರಾಧಗಳಲ್ಲಿ ಒಂದಾಗಿರುವ ವಿದ್ಯುನ್ಮಾನ ಅಪರಾಧಗಳಲ್ಲಿ ಮಹಿಳೆಯರೇ ಹೆಚ್ಚು ಬಲಿಯಾಗುತ್ತಿರುವುದು ವಿಷಾದಕರ ಸಂಗತಿ. ಪ್ರಜ್ಞಾವಂತ ನಾಗರಿಕರು ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದರೆ ಮುಂದೆ ಸಂಭವಿಸುವ ದುರಂತಗಳನ್ನು ತಡೆಗಟ್ಟಬಹುದು ಎಂದರು.ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಿ ಉತ್ತಮ ಸಮಾಜವನ್ನು ನಿರ್ಮಿಸಲು ಪೊಲೀಸ್ ಇಲಾಖೆಯೊಂದಿಗೆ ಸಮಾಜ ಸದಾ ಸಹಕರಿಸಬೇಕು. ರಸ್ತೆಯಲ್ಲಿ ಸಂಚರಿಸುವಾಗ ಪ್ರತಿಯೊಬ್ಬರೂ ರಸ್ತೆಯ ನಿಯಮಗಳನ್ನು ಪಾಲಿಸಿದರೆ ರಸ್ತೆ…

Read More

ಜಯ್ ನುಡಿ (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿ, ಉಪನ್ಯಾಸಕರು, ಬೆಳಗಾವಿ  ೯೪೪೯೨೩೪೧೪೨ ಏಕೋ ಏನೋ ಗೊತ್ತಿಲ್ಲ, ಯಾವುದೇ ಕೆಲಸದಲ್ಲೂ ಆಸಕ್ತಿಯೇ ಇಲ್ಲ. ಹೇಗೋ ಮನಸ್ಸಿಗೆ ಒಪ್ಪಿಸಿ ಹುಮ್ಮಸ್ಸು ಮೂಡಿಸಿಕೊಂಡು ಯಾವ ಕೆಲಸವನ್ನು ಆರಂಭಿಸಿದರೂ ಅರ್ಧಂಬರ್ಧ ಮಾಡಿ ನಿಲ್ಲಿಸಿ ಬಿಡ್ತಿನಿ ಅನ್ನೋದು ಬಹುತೇಕ ಜನರ  ಚಿಂತೆ. ಸಾಮಾನ್ಯವಾಗಿ ಬಹಳಷ್ಟು ಜನರನ್ನು ಮೇಲಿಂದ ಮೇಲೆ ಈ ತೊಂದರೆ ಕಾಡುತ್ತದೆ. ಮೇಲ್ನೋಟಕ್ಕೆ ಈ ಸಮಸ್ಯೆ ದೊಡ್ಡದೇನಲ್ಲ ಆದರೆ ಇದರ ಬೇರುಗಳನ್ನು ಬಲಗೊಳ್ಳಲು ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಏನೆಲ್ಲ ಇದ್ದರೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣ ಮಾಡಿಬಿಡುತ್ತದೆ. ‘ಒಂದು ದುರ್ಬಲ ಮನಸ್ಸು ಒಂದು ಸೂಕ್ಷ್ಮದರ್ಶಕದಂತೆ. ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು.’ ಸ್ವಯಂ ಸ್ಪೂರ್ತಿ ಇರದಿದ್ದರೆ ಸಂಕಟ, ನೋವು, ಅವಮಾನ ಹಾಗೂ ಬೇಸರಗಳು ಬೆನ್ನು ಹತ್ತಿ ಜೀವ ತಿನ್ನುತ್ತವೆ. ಜೀವನವನ್ನು ನಿಸ್ಸಾರಗೊಳಿಸುತ್ತವೆ. ಇತರರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತವೆ. ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತವೆ. ಸ್ಪೂರ್ತಿ ಇಲ್ಲದ ಸ್ಥಿತಿಯಲ್ಲಿ…

Read More

ವ್ಯಂಗೋತ್ಸವ – ಶ್ರೀನಿವಾಸ ಜಾಲವಾದಿ*, ಸುರಪುರ ‘ಏನಪಾ ಗುಂಡಪ್ಪಾ ಏನು ಹೊಸದು ಐತಿ ಹೇಳಪಾ?’ ಅಂತ ಬಂದ ಕಾಕಾ’ಏನೂ ಇಲ್ಲ ಕಾಕಾ, ಚಾ ಹೇಳ್ಲೇನು?’ ಅಂದ ಗುಂಡ್ಯಾ’ಏ ಮೂಳ ಹಳೇ ಮೂಳ ಏನು ಹೊಸಾದು ಇಲ್ಲ? ಸುಳ್ಳ ಹೇಳ್ತಿ ಏನು?’ ಅಂತ ದಬಾಯಿಸಿದ್ಲು ರಾಶಿ’ಏನೈತೆ ಹೇಳವಾ ನೀ?’ ಅಂದ ಗುಂಡ್ಯಾ’ದೀಡಸೇ ಮೆಂಬರ್ಗ್ಗೊಳ್ನ ಅಮಾನತ್ತ ಮಾಡ್ಯಾರು’ ಅಂದಳು ರಾಶಿ’ಯಾವ ಮೆಂಬರಗಳು? ಪಂಚಾಯಿತಿದಾ?’ ಅಂದ ಕಾಕಾ’ಏ ಅಲ್ಲಪಾ ಕಾಕಾ, ಅವರು ಲೋಕಸಭಾ ರಾಜ್ಯಸಭಾ ಸದಸ್ಯರು’ ಅಂದ ರಬಡ್ಯಾ’ಏ ಅವರರ್ನ್ಯಾಕ ಸಸ್ಪೆಂಡ್ ಮಾಡ್ಯಾರು?’ ಅಂದ ಶೌರಿ’ಪಾರ್ಲಿಮೆಂಟದಾಗ ವೀಕ್ಷಕರ ಗ್ಯಾಲರಿಯಿಂದ ಜಿಗದು ಹೊಗಿ ಹಾಕಿದ್ರಲಾ ಗೊತೈತಿಲ್ಲ? ಅದರ ಬಗ್ಗೆ ಸ್ಟೇಟಮೆಂಟ್ ಕೊಡ್ರಿ ಅಂತ ವಿರೋಧ ಪಕ್ಷದವರು ಕೇಳ್ಯಾರ’ ಅಂದ ಗುಡುಮ್ಯಾ’ಸರಿಯಪಾ ಯಾರು ಕೊಡಬೇಕಂತ?’ ಅಂದ ಗುಂಡ್ಯಾ’ಅದೇ ಗೃಹಸಚಿವರಿಗೆ ಕೇಳ್ಯಾರು’ ಅಂದಳು ರಾಶಿ’ಶ್ಯಾಣ್ಯಾ’ರು ಏನು ಅಂದಾರು?’ ಅಂದ ಶೌರಿ’ಏ ಹಂಗೇನಿಲ್ಲ, ಎಲ್ಲಾ ನಾವು ಎನ್ಕ್ವೈರಿ ಮಾಡ್ತಿವಿ ಅಂತ ಹೇಳ್ಯಾರು ನಮೋ’ ಅಂದಳು ರಾಣಿ’ಆದ್ರs, ಇವರು ಇಲ್ಲೇ ಬಂದು ಹೇಳಿಕೆ…

Read More

ಮುಷ್ಕರ ನಿರತ ಉಪನ್ಯಾಸಕರ ಮನವಿ ಸ್ವೀಕರಿಸಿದ ಕೆಪಿಸಿಸಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅಭಿಮತ ವಿಜಯಪುರ: ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂಮಾತಿಗಾಗಿ ಕಳೆದ 28 ದಿನಗಳಿಂದ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಸರ್ಕಾರ ಶೀಘ್ರ ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.ವಿಜಯಪುರ ಜಿಲ್ಲಾಧಿಕಾರಿಗಳ ಆವರಣದ ಹತ್ತಿರ ಕಳೆದ 27 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಉಪನ್ಯಾಸಕರನ್ನು ಭೇಟಿ ಮಾಡಿ ಅವರ ಮನವಿ ಸ್ವೀಕರಿಸಿ ಮಾತನಾಡಿದ ಬಬಲೇಶ್ವರ ಅವರು, “ಕಳೆದ 20 ವರ್ಷದಿಂದ ಸಾವಿರ ರೂಪಾಯಿ ಸಂಬಳಕ್ಕೆ ಪ್ರಾರಂಭವಾಗಿರುವ ಎಲ್ಲಾ ಅತಿಥಿ ಉಪನ್ಯಾಸಕರ ನೋವಿನ ಕಥೆ ಕೇಳಿದರೆ ದುಃಖವಾಗುತ್ತದೆ. ಕಳೆದ ಎರಡು ದಶಕಗಳಿಂದಲೂ ಆಡಳಿತದಲ್ಲಿರುವ ಯಾವ ಪಕ್ಷದ ಸರಕಾರವಿದ್ದಾಗಲೂ ಯಾವ ಮುಖ್ಯಮಂತ್ರಿಯೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎನ್ನುವುದು ಅವರ ನೋವಾಗಿದೆ. ಈಗಾಗಲೇ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಸಚಿವ ಡಾ. ಎಂ ಬಿ ಪಾಟೀಲರು ಸುವರ್ಣ ಸೌಧದ ಮುಂದೆ…

Read More

ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಜಾಗೃತಿ ಮತ್ತು ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಡಿಸೆಂಬರ್ 24 ರಂದು ನಗರದಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್- 2023 ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನ ನೀಡಲಿದ್ದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿವೆ. ಓಟ ನಡೆಯಲಿರುವ ಡಿಸೆಂಬರ್ 24 ರಂದು ರವಿವಾರ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಈ ಕಲಾ ತಂಡಗಳು 16 ನಾನಾ ಭಾಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತ ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಿವೆ. ವೃಕ್ಷೊಥಾನ್ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಣ್ಯರು ಈ ಕಲಾ ತಂಡಗಳಿಗೆ ಮಾರ್ಗದರ್ಶನ ಮಾಡುತ್ತಿದ್ದು, ಒಟ್ಟಾರೆ ಸುಮಾರು 150 ಜನ ಕಲಾವಿದರು ಈ ತಂಡಗಳಲ್ಲಿದ್ದಾರೆ ಎಂದು ವೃಕ್ಷೊಥಾನ್ ಹೆರಿಟೇಜ್ ರನ್- 2023 ಸಮಿತಿಯ ಕೋರ್ ಕಮಿಟಿ ಸಾಂಸ್ಕೃತಿಕ ವಿಭಾಗದ ಶಿವನಗೌಡ ಪಾಟೀಲ ಮತ್ತು ಸೋಮು ಎಸ್. ಮಠ ತಿಳಿಸಿದ್ದಾರೆ. *ಕಲಾ ತಂಡಗಳು ಮತ್ತು ಅವುಗಳು ಓಟಗಾರರಿಗೆ ಸ್ಪೂರ್ತಿ…

Read More

ವಿಜಯಪುರ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಉನ್ನತ ಸಾಧನೆ ಮಾಡಬಲ್ಲರು ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.ನಗರದ ಪ್ರತಿಷ್ಟಿತ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ರವಿವಾರ ನಡೆದ ಸಂಶೋಧನಾತ್ಮಕ ವಿಜ್ಞಾನ ಮಾದರಿಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಚಾರ್ಯೆ ಬಂಧನಾ ಬ್ಯಾನರ್ಜಿ, ಪ್ರತಿಯೊಂದು ತರಗತಿಗಳ ಎಲ್ಲ ಮಕ್ಕಳು ಒಂದಲ್ಲ ಒಂದು ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಮಕ್ಕಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಅಗಾಧ ಪ್ರತಿಭೆ ಇರುತ್ತವೆ. ಇಲ್ಲಿನ ವಿದ್ಯಾರ್ಥಿಗಳು ಇಲ್ಲಿ ಪ್ರದರ್ಶಿಸಿರುವ ವಿಜ್ಞಾನ ಮಾದರಿಗಳು ಇದಕ್ಕೆ ಸಾಕ್ಷಿ ಎಂದು ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿದರು. ಮನೋಭಾವನೆಯನ್ನು, ಸಂಶೋಧನಾ ಪ್ರವೃತ್ತಿಯನ್ನು, ಕಲಾತ್ಮಕತೆಯನ್ನು ಮನದುಂಬಿ ಹೊಗಳಿದರು.ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳಾದ, ಹಿಮಾಚ್ಫಾದಿತ ಇಗ್ಲೂ ಮನೆಗಳು, ಅಂಧರಿಗಾಗಿ ತಯಾರಿಸಿದ ಮೂರನೇ ಕಣ್ಣು ಕನ್ನಡಕ, ಚಂದ್ರಯಾನ ಉಪಗ್ರಹ ಉಡಾವಣೆಯ ಮಾದರಿ, ಬೃಹದಾಕಾರದ…

Read More