Author: editor.udayarashmi@gmail.com

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ ಪಾಟೀಲ ಅವರು ಫೆ.೨೪ ರಿಂದ ಫೆ.೨೫ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಫೆ.೨೪ರಂದು ಬೆಳಗ್ಗೆ ೧೧.೩೦ ಗಂಟೆಗೆ ಜಿಲ್ಲೆಯ ಇಂಡಿ ತಾಲೂಕು ಕ್ರೀಡಾಂಗಣದ ಹತ್ತಿರ ನಡೆಯುವ ಜಿಲ್ಲಾ ಗಾಣಿಗ ಸಮಾವೇಶದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ ೧.೩೦ ಗಂಟೆಗೆ ಇಂಡಿಯಿಂದ ಹೊರಟು, ವಿಜಯಪುರಕ್ಕೆ ಆಗಮಿಸುವರು. ಮಧ್ಯಾಹ್ನ ೪ ಗಂಟೆಗೆ ಸಚಿವರ ನಿವಾಸದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವರು. ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡುವರು.ಫೆ.೨೫ರಂದು ಬೆಳಗೆ ೧೧.೧೫ಕ್ಕೆ ಜಿಲ್ಲೆಯ ಕಾತ್ರಾಳದಲ್ಲಿ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ ೨ ಗಂಟೆಗೆ ಕಾತ್ರಾಳದಿಂದ ನರಗುಂದಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.೨೫ ರಂದು ನಡೆಯಲಿರುವ ಸಂವಿಧಾನ ಜಾಗೃತಿ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಸಾರ್ವಜನಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ಕೆಎಸ್‌ಆರ್‌ಟಿಸಿ ಕೆಂಪು ಬಸ್ ಸೌಲಭ್ಯ ಕಲ್ಪಿಸಲಾಗಿದೆ.ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ವ್ಯಾಪ್ತಿಯ ಸಾರ್ವಜನಿಕರು ಪಟ್ಟಣದ ಹುಡ್ಕೋದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಲಯದಲ್ಲಿ ಸಿಗುವ ಅರ್ಜಿಯನ್ನು ಸ್ವೀಕರಿಸಿ ಭರ್ತಿ ಮಾಡಿ ಜೊತೆಗೆ ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್, ಕುಟುಂಬ ಪಡಿತರ ಚೀಟಿಯ ಝರಾಕ್ಸ್ ಪ್ರತಿಗಳನ್ನು ಫೆ.೨೪ ರ ಮದ್ಯಾಹ್ನ ೧ ಗಂಟೆಯ ಒಳಗೆ ನೀಡಿದಲ್ಲಿ ಉಚಿತವಾಗಿ ಪ್ರಯಾಣಿಸಿ ಭಾಗವಹಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಏ.ಸಿ ಹಾಗೂ ಪ್ಲೇಸಮೆಂಟ್ ಘಟಕಗಳ ಆಶ್ರಯದಲ್ಲಿ ‘ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ – ಒಂದು ದಿನದ ಕಾರ್ಯಗಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಎಸ್ ಕಲ್ಲೂರ್ಮಠ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸತತ ಪರಿಶ್ರಮ, ನಿರಂತರ ಪ್ರಯತ್ನ ಮತ್ತು ತಾಳ್ಮೆಯಿಂದ ಅಧ್ಯಯನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.ಕಾರ್ಯಕ್ರಮದ ಮೊದಲು ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರೊ ಪಿ. ಬಿ.ಬಿರಾದಾರ ವಿವಿದಾಸ್ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್, ಎಫ್ ಡಿ ಎ, ಎಸ್ ಡಿ ಎ, ಪಿಡಿಒ, ಪಿಎಸ್ಐ,ಪಿ ಸಿ, ಮುಂತಾದ ಪರೀಕ್ಷೆಗಳಿಗೆ ತಯಾರು ಮಾಡಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದರು.ಎರಡನೆಯ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಚಿದಾನಂದ ಎಸ್. ಆನೂರ, ವಿವಿಧ ಬ್ಯಾಂಕಿಂಗ್ ಆರ್ ಆರ್ ಬಿ ಪರೀಕ್ಷೆಗಳ…

Read More

ಬಸವನ ಬಾಗೇವಾಡಿ: ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹುನುಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ರಾಷ್ಟೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಗುರುವಾರ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ ಮುಳವಾಡ,ಸುಭಾಷ ಕೊಪ್ಪದ, ಜಟ್ಟಿಂಗರಾಯ ಮಾಲಗಾರ, ಹಣಮಂತ ಅಡಗಿಮನಿ ಇದ್ದರು.

Read More

ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ನಡೆದಿರುವ ಸಹಕಾರ ಕಾನೂನುಗಳ ಉಲ್ಲಂಘನೆ, ಹಣ ದುರ್ಬಳಕೆ ಸೇರಿದಂತೆ ಅಲ್ಲಿನ ನಡೆದಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆಯಾಗಬೇಕು. ಈ ಕುರಿತು ವಿಚಾರಣೆ ಮಾಡಿದ ತನಿಖಾಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರನ್ನು ಸೇವೆಯನ್ನು ವಜಾಗೊಳಿಸದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಸಹಕಾರ ಇಲಾಖೆಯ ಅಧಿಕಾರಿಗಳು ತನಿಖಾ ಅಧಿಕಾರಿ ಸೇರಿದಂತೆ ವಿಪಿಕೆಪಿಎಸ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾ ಉಸ್ತುವಾರಿ ರಾಜಶೇಖರ ಹುಲ್ಲೂರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಹಾಂತೇಶ ಚಕ್ರವರ್ತಿ ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಹಕಾರಿಯಲ್ಲಿ ನಡೆದಿರುವ ಅವ್ಯವಹಾರ, ಸಹಕಾರ ಕಾನೂನುಗಳ ಉಲ್ಲಂಘನೆ, ಖರ್ಚು ವೆಚ್ಚಗಳ ಮಾಹಿತಿ ನೀಡದೇ ಇರುವದು, ಹಣ ದುರ್ಬಳಕೆ, ಸಾಲಗಾರರಿಗೆ, ಠೇವಣಿದಾರರಿಗೆ ಸಮರ್ಪಕ ಮಾಹಿತಿ ನೀಡದೇ ಇರುವದರ ಬಗ್ಗೆ ಸಹಕಾರ ಇಲಾಖೆಗೆ ದೂರು ನೀಡಿದಾಗ ಸಹಕಾರಿ ಅಭಿವೃದ್ಧಿ…

Read More

ಸಿಂದಗಿ: ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದ್ದೋದೇಶ ಸಂಸ್ಥೆಯ ಆಲಮೇಲ ರಸ್ತೆಯ ಹೊರವಲಯದಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಫೆ.೨೪ರಂದು ಶಾಸಕರ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭವನ್ನು ರಾಂಪೂರ ರಸ್ತೆಯ ಶಾಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ತಿಳಿಸಿದ್ದಾರೆ.ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ಅಶೋಕ ಮನಗೂಳಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ದಸಂಸ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ, ವಿ.ಡಿ.ಕುಲಕರ್ಣಿ, ಪಿ.ಡಿ.ಕುಲಕರ್ಣಿ, ಮುಖ್ಯೋಪಾದ್ಯಾಯ ಎಸ್.ಆಯ್.ಅಸ್ಕಿ, ಪಿ.ಎಂ ಬುಕ್ಕಾ ಇರಲಿದ್ದಾರೆ. ಈ ವೇಳೆ ಚಿಕ್ಕ ಮಕ್ಕಳ ತಜ್ಞ ಡಾ.ಇಸ್ಮಾಯಿಲ್ ಮೊಗಲಾಯಿ, ಇಸಿಒ ಸುಧೀರ ಕಮತಗಿ, ಆನಂದ ಮಾಡಗಿ ಸಿಆರ್‌ಪಿ ನೀಲಕಂಠ ತಿಳಗೂಳ ಅವರನ್ನು ಸನ್ಮಾನಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಸಿಂದಗಿಯ ವಿದ್ಯಾಚೇತನ ಪ್ರಕಾಶನದಿಂದ ಕೊಡಮಾಡುವ ಬಾಲಸಾಹಿತ್ಯ ಪುರಸ್ಕಾರಕ್ಕಾಗಿ ೨೦೨೩ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.ಈ ಪ್ರಶಸ್ತಿಗೆ ಆಸಕ್ತ ಲೇಖಕರು ಮಕ್ಕಳ ಸಾಹಿತ್ಯದ ಕಥೆ, ಕವನ, ಕಾದಂಬರಿ ಈ ಮೂರು ಪ್ರಕಾರಗಳ ಕೃತಿಗಳನ್ನು ಕಳಿಸಬಹುದು.೨೦೨೩ರಲ್ಲಿ ಪ್ರಕಟಗೊಂಡ ಕೃತಿಯ ನಾಲ್ಕು ಪ್ರತಿಗಳನ್ನು ರಜಿಸ್ಟರ್ಡ ಅಂಚೆ ಅಥವಾ ಕೋರಿಯರ್ ಮೂಲಕ ಕಳುಹಿಸಬೇಕು. ಈ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಕೃತಿಗಳನ್ನು ಮಾರ್ಚ ೩೧ರೊಳಗಾಗಿ ತಲುಪುವಂತೆ ಹ.ಮ. ಪೂಜಾರ, ನಿವೃತ್ತ ಶಿಕ್ಷಕರು, ಶ್ರೀ ಸಂಗಮೇಶ್ವರ ಕಾಲನಿ, ಸಿಂದಗಿ-೫೮೬ ೧೨೮, ಜಿಲ್ಲಾ ವಿಜಯಪುರ ಈ ವಿಳಾಸಕ್ಕೆ ಕಳುಹಿಸಬೇಕು. ಪ್ರಶಸ್ತಿಯು ಮೂರು ಪ್ರಕಾರಗಳಿಗೆ ತಲಾ ಐದು ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹ.ಮ.ಪೂಜಾರ ಮೊಬೈಲ್ ನಂ.:೯೪೪೮೬೪೪೨೨೮ಗೆ ಸಂಪರ್ಕಿಸಬೇಕು ಎಂದು ವಿದ್ಯಾಚೇತನ ಪ್ರಕಾಶನದ ಪ್ರಕಟಣೆ ತಿಳಿಸಿದೆ.

Read More

ಸಿಂದಗಿ: ಜಗತ್ತಿಗೆ ದಾನದ ಮಹಿಮೆಯನ್ನು ಸಾರಿ ಲಿಂಗಮ್ಮ ದಾನಮ್ಮಳಾಗಿ ಬೇಡಿದ ವರ ಕರುಣಿಸುವ ವರದಾನೇಶ್ವರಿ ಎಂದೇ ಪ್ರಸಿದ್ಧಿಯಾಗಿರುವ ಗುಡ್ಡಾಪುರ ದಾನಮ್ಮದೇವಿ ಭಕ್ತರ ಎಲ್ಲ ಇಷ್ಟಗಳನ್ನು ಪೂರೈಸಿದ್ದಾಳೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳ ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ನೂತನವಾಗಿ ನಿರ್ಮಾಣವಾದ ಗುಡ್ಡಾಪುರ ದಾನಮ್ಮ ದೇವಿ ಹಾಗೂ ಸೋಮನಾಥೇಶ್ವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕ್ರಾಂತಿಯ ನಂತರ ಶರಣರ ವಚನಗಳನ್ನು ಕಾಪಾಡುವ, ಪ್ರಸಾರ ಮಾಡುವ ಕಾರ್ಯವನ್ನು ಮಾಡಿದವಳು ಗುಡ್ಡಾಪುರ ದಾನಮ್ಮ ದೇವಿ ಶಿವ ಶರಣರ ಸಂಸ್ಕೃತಿಯಿಂದ ಬೆಳೆದು ಬಂದ ಲಿಂಗಮ್ಮಳು, ದಿನದಲಿತರ ಸೇವೆಯನ್ನು ಮನಗಂಡ ಬಸವಣ್ಣನವರಿಂದ ದಾನಮ್ಮಳಾಗಿ ಪ್ರಖ್ಯಾತಿಯನ್ನು ಹೊಂದಿದಳು. ತನಗೆ ನಂಬಿ ಬಂದ ಭಕ್ತರನ್ನು ಉದ್ದರಿಸುತ್ತಾ ಬಂದಿದ್ದಾಳೆ. ಇದೀಗ ಸಿಂದಗಿಯಲ್ಲಿಯೂ ನೆಲೆಗೊಂಡಿದ್ದಾಳೆ ಎಂದರು.ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪೂಜಾ ಕಾರ್ಯದಲ್ಲಿ ಶ್ರೀಶೈಲದ ವೀರಶೈವ ಗುರುಕುಲ ವೇದ ಸಂಸ್ಕೃತ ಪಾಠ ಶಾಲೆಯ ಚಂದ್ರಶೇಖರ ಶಿವಾಚಾರ್ಯರು, ಮಲ್ಲಿಕಾರ್ಜುನ ಸ್ವಾಮಿಗಳ ಶಿಷ್ಯ ಬಳಗ, ಶಿವಶಂಕರ ಶಾಸ್ತ್ರಿ, ದಿವಾಕರ ಸ್ವಾಮಿ,…

Read More

ಮುದ್ದೇಬಿಹಾಳ: ತಾಲೂಕಿನ ಮಾದಿನಾಳ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.ಗ್ರಾಮದ ಈಶ್ವರ ಹಿರೇಮಠ ಎನ್ನುವವರ ಜಮೀನಿನ ಭಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಗ್ರಾಮಸ್ಥರ ದೂರಿನ ಅನ್ವಯ ಮೊಸಳೆ ಸೆರೆ ಹಿಡಿಯುವ ಪರಿಣಿತರ ಸಹಾಯದೊಂದಿಗೆ ಮೊಸಳೆಯನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದ ತಂಡ ಮೊಸಳೆಯನ್ನು ಜೀವಂತವಾಗಿ ಹಿಡಿದು ಆಲಮಟ್ಟಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಬಿಟ್ಟಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ರಮೇಶ ಮೆಟಗುಡ್ದ, ಗಸ್ತು ಅರಣ್ಯಪಾಲಕ ಯಲ್ಲಪ್ಪ ಹಿರೇಕುರುಬರ, ಗುರಣ್ಣ ಮಾಡಗಿ, ಈಶ್ವರಯ್ಯ ಹಿರೇಮಠ, ಸೇರಿದಂತೆ ಮೊಸಳೆ ಕರ್ಯಚರಣೆಯ ಪರಿಣಿತ ನಾಗೇಶ ಮೋಪಗಾರ ತಂಡದವರು ಭಾಗಿಯಾಗಿದ್ದರು.

Read More

ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೧೧೦ಕೆವಿ ಬೇಗಳ ನಾಲ್ಕನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ೧೧೦/೧೧ಕೆವಿ ವಿವಿ ಕೇಂದ್ರ ಕೆಐಎಡಿಬಿ, ಜುಮನಾಳ, ಸಿಟಿ ವಿಜಯಪುರ ೨೨೦/೧೧೦ ಕೆವಿ ಸ್ವೀಕರಣಾ ಕೇಂದ್ರ ವಿಜಯಪುರದಿಂದ ಹೊರಹೋಗುವ ಎಲ್ಲಾ ೧೧ ಕೆವಿ ವಿದ್ಯುತ್ ಮಾರ್ಗಗಳಿಗೆ ಫೆ.೨೭ರ ಬೆಳಗ್ಗೆ ೯ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತಯವಾಗಲಿದೆ. ಗ್ರಾಹಕರು ಸಹರಿಸಬೇಕು ಎಂದು ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More