ವಿಜಯಪುರ: ರಾಜ್ಯದಲ್ಲಿ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ವಿಜಯಪುರ ನಗರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ್ ಕನ್ನಡ ಮಾಧ್ಯಮ ಶಾಲೆಯು 100 ಕ್ಕೆ 98% ರಷ್ಟು ಸಾಧನೆ ಮಾಡಿದೆ. ಶಾಲೆಯ ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಪರೀಕ್ಷೆಯಲ್ಲಿ ಕಲ್ಪನಾ ಗುರವ್ ಎಂಬ ವಿದ್ಯಾರ್ಥಿನಿ 579 ಅಂಕ ಗಳಿಸಿ ಶೇ.92.64 ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ರ್ಯಾಂಕ್ ಗಳಿಸಿದ್ದಾಳೆ. ಮಲ್ಲಿಕಾರ್ಜುನ ಬ್ಯಾಲ್ಯಾಳ್ ಎಂಬ ವಿದ್ಯಾರ್ಥಿ 578 ಅಂಕ ಗಳಿಸಿ ಶೇ.92.48% ಪ್ರತಿಶತದೊಂದಿಗೆ ಶಾಲೆಗೆ ಎರಡನೇ ರ್ಯಾಂಕ್ ಪಡೆದಿದ್ದಾನೆ . ಪ್ರತೀಕ್ಷಾ ಕಾಂಬಳೆ ಎಂಬ ವಿದ್ಯಾರ್ಥಿನಿ ಶೇ. 92.% ಪ್ರತಿಶತದೊಂದಿಗೆ 575 ಅಂಕ ಪಡೆದು ಮೂರನೇ ರ್ಯಾಂಕ್ ಪಡೆದಿದ್ದಾಳೆ. ಪ್ರಫುಲ್ ವಾಲಿಕಾರ ಎಂಬ ವಿದ್ಯಾರ್ಥಿ 572 ಅಂಕ ಪಡೆದು ಶೇ.91.52% ಪ್ರತಿಶತ ಪಡೆದು ನಾಲ್ಕನೆಯ ಸ್ಥಾನ ಪಡೆದಿದ್ದಾನೆ . 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು 12 ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅದೇರೀತಿ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ಮನ್ ಶಿವಾಜಿ ಗಾಯಕವಾಡ, ಸಂಸ್ಥಾಪಕ ಚೇರ್ಮನ್ ವಸಂತ ಗಾಯಕವಾಡ, ಕಾರ್ಯದರ್ಶಿ ರೀತಾ ಗಾಯಕವಾಡ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶ್ಲಾಘಿಸಿ ಅಭಿನಂಧಿಸಿದ್ದಾರೆ. ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹಿಸಿದ ಮುಖ್ಯಗುರುಗಳಿಗೆ , ಶಿಕ್ಷಕರಿಗೆ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರಿಗೆ ಅಭಿನಂಧಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

