Author: editor.udayarashmi@gmail.com

ವಿಜಯಪುರ: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಆತ್ಮೀಯ ವಿದ್ಯರ‍್ಥಿಗಳಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಶುಭ ಹಾರೈಸಿದ್ದಾರೆ.ವಿದ್ಯರ‍್ಥಿಗಳ ಜೀವನದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದೆ. ವಿದ್ಯರ‍್ಥಿಗಳು ಯಾವುದೇ ರೀತಿಯ ಆತಂಕ, ಗೊಂದಲ, ಒತ್ತಡಕ್ಕೆ ಒಳಗಾಗದೆ, ಧರ‍್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು ಎಂದು ಶಾಸಕರು ಶುಭ ಹಾರೈಸಿದ್ದಾರೆ.

Read More

ದೇವರಹಿಪ್ಪರಗಿ: ಕಡ್ಲೇವಾಡ ಪಿಸಿಎಚ್ ಗ್ರಾಮದ ಜಾಮಿಯಾ ಮಸೀದಿಯ ಕಮಿಟಿ ರಚನಾ ಸಭೆ ದಿ: ೧ ರಂದು ಶುಕ್ರವಾರ ಮಧ್ಯಾನ್ಹ ೨.೦೦ ಗಂಟೆಗೆ ಜರುಗಲಿದೆ.ಗ್ರಾಮದ ಮಸೀದೆಯಲ್ಲಿ ಶುಕ್ರವಾರದ ಪ್ರಾರ್ಥನೆಯ (ಜುಮ್ಮಾ ನಮಾಜ್) ನಂತರ ಸಭೆ ಆಯೋಜಿಸಲಾಗಿದ್ದು, ಸಂಬಂಧಿಸಿದ ಸದಸ್ಯರು ಸಭೆಗೆ ಭಾಗವಹಿಸಲು ಈ ಮೂಲಕ ಕೋರಲಾಗಿದೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.

Read More

’ವೀಣಾಂತರಂಗ’ – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ನಿಜ.. ಅಪ್ಪ ಎಂಬ ವಿಶಾಲ ಆಲದ ಮರದ ಆಸರೆಯಲ್ಲಿ ಬೆಳೆದ ಮಕ್ಕಳಿಗೆ ಬದುಕಿನ ಎಲ್ಲಾ ಜಂಜಡಗಳನ್ನು ನೀಗಿಕೊಳ್ಳುವ ಬೃಹತ್ ಶಕ್ತಿ ಅಪ್ಪ. ನಾನಂತೂ ಅಪ್ಪನ ಮುದ್ದಿನ ಮಗಳು. ಅಪ್ಪನೊಂದಿಗಿನ ಒಡನಾಟದ ನನ್ನ ಬಾಲ್ಯ ಅತ್ಯಂತ ಸುಮಧುರ ನೆನಪುಗಳನ್ನು ಹೊಂದಿದೆ. ಅಪ್ಪ ಅಮ್ಮನ ಜೊತೆ ಬೈಕಿನಲ್ಲಿ ಕುಳಿತು ನನ್ನೂರಿನ ಸುತ್ತಣ ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳ ಭೇಟಿ ಪ್ರತಿ ವಾರದ ಕಡ್ಡಾಯ ದಿನಚರಿಯಾಗಿತ್ತು. ಮೂರು ನಾಲ್ಕು ವಯಸ್ಸಿನಲ್ಲಿದ್ದಾಗಲೇ ಪ್ರಯಾಣವನ್ನು ಅತಿಯಾಗಿ ಎಂಜಾಯ್ ಮಾಡುವ ನನ್ನ ಮಾತಿನಂತೆ ನಮ್ಮಪ್ಪ ತಮ್ಮ ರಾಜದೂತ ಬೈಕಿನಲ್ಲಿ ಎದುರಿಗಿನ ಎತ್ತಿನ ಗಾಡಿಯನ್ನು, ಟ್ರ್ಯಾಕ್ಟರ್ ಗಳನ್ನು,ಬಿಲ್ಡಿಂಗುಗಳನ್ನು ಹಿಂದೆ ಹಾಕಿ ಮುಂದೆ ಗಾಡಿ ಓಡಿಸುತ್ತಿದ್ದರು. ಅಪ್ಪಾಜಿ ಆ ಎತ್ತಿನ ಗಾಡಿ ಹಿಂದೆ ಹಾಕೋಣ, ಅಪ್ಪಾಜಿ ಈ ಬಿಲ್ಡಿಂಗ್ ಹಿಂದಕ್ ಹಾಕೋಣ ಎಂಬ ನನ್ನ ಬಾಲ್ಯ ಸಹಜ ಮಾತುಗಳಿಗೆ ಅಷ್ಟೇ ಪ್ರೀತಿಯಿಂದ ಅಪ್ಪ ಸ್ಪಂದಿಸುತ್ತಿದ್ದರು. ಪ್ರತಿದಿನ ರಾತ್ರಿ ಮಲಗುವಾಗ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುತ್ತಾ…

Read More

ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಪ್ರೇಮಾನಂದ ಬಿರಾದಾರ ಆಗ್ರಹ ವಿಜಯಪುರ: ಗುಂಟಾ ಪ್ಲಾಟ್ ನಿವಾಸಿಗಳು ಅತ್ಯಂತ ಬಡವರು, ಹೀಗಾಗಿ ಅವರಿಗೆ ಡಬಲ್ ಟ್ಯಾಕ್ಸ್ ಹೊರೆ ಹೊರೆಸುವುದು ಬೇಡ ಎಂದು ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಪ್ರಬಲವಾಗಿ ಒತ್ತಾಯಿಸಿದರು.ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಮೆಹಜಬೀನ್ ಹೊರ್ತಿ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಬೆಳಕು ಚೆಲ್ಲಿದ ಬಿರಾದಾರ, ಆಟೋ, ಟಾಂಗಾ, ಕೂಲಿಕಾರ್ಮಿಕರೇ ಗುಂಟಾ ಪ್ಲಾಟ್ ಖರೀದಿಸಿದ್ದಾರೆ. ಕೋವಿಡ್‌ನಲ್ಲಿ ದುಡಿಯುವ ಅನೇಕ ಯಜಮಾನರೇ ತೀರಿ ಹೋಗಿದ್ದಾರೆ. ಅಂತಹ ಕುಟುಂಬಗಳು ಎಲ್ಲಿ ಹೋಗಬೇಕು? ಡಬಲ್ ಟ್ಯಾಕ್ಸ್, ದಂಡ ಹೀಗೆ ಎಲ್ಲವನ್ನು ಕಟ್ಟಲು ಅವರು ಸಾಲ ಮಾಡಬೇಕೆ? ಅವರು ಉಪಜೀವನ ನಡೆಸುವುದೇ ಕಷ್ಟವಾಗಿದೆ, ಅಂತಹದರಲ್ಲಿ ದೊಡ್ಡ ದೊಡ್ಡ ಮೊತ್ತದ ದಂಡ ಕಟ್ಟಲು ಆ ಬಡ ಜನರಿಗೆ ಸಾಧ್ಯವೇ ಎಂದು ಪ್ರಶ್ನಿಸಿದರು.ಇದಕ್ಕೆ ಸ್ಪಷ್ಟೀಕರಣ ನೀಡಿದ ಆಯುಕ್ತ ಬದರುದ್ದೀನ ಸೌದಾಗರ, ಕಾಯ್ದೆ ಅನ್ವಯ ಗುಂಟಾ ಪ್ಲಾಟ್‌ಗಳಿಂದ ಕರ ವಸೂಲಿ ಮಾಡಲಾಗುತ್ತಿದೆ. ಇದು…

Read More

ವಿಜಯಪುರ: ತಮಗೆ ಕೊಟ್ಟ ಹಳೆಯ ವಾಹನ ಹಳೆಯದಾಗಿದ್ದು ಹಾಗೂ ವಾಹನ ಚಾಲಕನನ್ನು ನೇಮಕ ಮಾಡದ ಕಾರಣ ವಿಜಯಪುರ ಮಹಾನಗರ ಪಾಲಿಕೆ ಮೇಯರ್ಗುರುವಾರ ಟಾಂಗಾ ಮೂಲಕ ಸಾಮಾನ್ಯ ಸಭೆಗೆ ಆಗಮಿಸಿ ಗಮನ ಸೆಳೆದರು.ಪಾಲಿಕೆಯಿಂದ ಹಳೆಯ ವಾಹನ ನೀಡಲಾಗಿದೆ. ಚಾಲಕನೂ ಇಲ್ಲದೇ ವಾಹನ ಹೇಗೆ ಉಪಯೋಗಿಸಬೇಕೆಂದು ಪ್ರಶ್ನಿಸಿದರು.ನಮ್ಮದೇ ಸರ್ಕಾರವಿದ್ದರೂ ಪಾಲಿಕೆ ಮೇಯರನ್ನು ಉದಾಸೀನ ಮಾಡಲಾಗುತ್ತಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೆತಂದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.ಮೇಯರ್ ನಡೆಗೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ. ಪಾಲಿಕೆಯ ನಿಮಯದಂತೆ ನೂತನ ವಾಹನ ಖರೀಧಿ ಮಾಡಲು ಹಾಗೂ ಬಾಡಿಗೆ ವಾಹನ ಪಡೆಯಲು ಅವಕಾಶವಿದೆ.

Read More

ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ , ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಚಡಚಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ಪಾಲಿಮರ್ ನ್ಯಾನೊಕಾಂಪೊಸಿಟ್ಸ್ ಎಂಬ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ವಿಜಯಪುರದ ಬೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಆನಂದ ಕುಲಕರ್ಣಿ ಮಾತನಾಡಿ, ಒಂದು ಪಾಲಿಮರ್ ಎಂಬುದು ಬಹುದೊಡ್ಡ ಅಣುಗಳನ್ನು ಒಳಗೊಂಡಿರುವ ಒಂದು ವಸ್ತು ಅಥವಾ ಇದು ಅನೇಕ ಪುನರಾವರ್ತಿತ ಉಪಘಟಕಗಳಿಂದ ಕೂಡಿದೆ. ಅವುಗಳ ವಿಶಾಲ ವರ್ಣಪಟಲದ ಗುಣಲಕ್ಷಣಗಳಿಂದಾಗಿ, ಸಂಶ್ಲೇಷಿತ ಮತ್ತು ನೈಸರ್ಗಿಕ ಪಾಲಿಮರ್‌ಗಳು ದೈನಂದಿನ ಜೀವನದಲ್ಲಿ ಅಗತ್ಯ ಮತ್ತು ಸರ್ವತ್ರ ಪಾತ್ರಗಳನ್ನು ನಿರ್ವಹಿಸುತ್ತವೆ. ಪಾಲಿಮರ್‌ಗಳು ಪಾಲಿಸ್ಟೈರೀನ್‌ನಂತಹ ಪರಿಚಿತ ಸಿಂಥೆಟಿಕ್ಪ್ಲಾಸ್ಟಿಕ್‌ಗಳಿಂದ ಹಿಡಿದು ನೈಸರ್ಗಿಕ ಬಯೋಪಾಲಿಮರ್‌ಗಳವರೆಗೆ, ಜೈವಿಕ ರಚನೆ ಮತ್ತು ಕಾರ್ಯಕ್ಕೆ ಮೂಲಭೂತವಾದ ಪ್ರೋಟೀನ್‌ಗಳು. ಪಾಲಿಮರ್‌ಗಳು, ನೈಸರ್ಗಿಕ ಮತ್ತು ಸಂಶ್ಲೇಷಿತ ಎರಡೂ, ಮೊನೊಮರ್‌ಗಳು ಎಂದು ಕರೆಯಲ್ಪಡುವ ಅನೇಕ ಸಣ್ಣ ಅಣುಗಳ ಪಾಲಿಮರೀಕರಣದ ಮೂಲಕ ರಚಿಸಲ್ಪಡುತ್ತವೆ ಎಂದರು.ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್.ಎಸ್.ಚೋರಗಿ, ಪ್ರಾಚಾರ್ಯ ಡಾ. ಎಸ್.ಬಿ.ರಾಠೋಡ, ನಮ್ಮ ಭಾರತ ದೇಶಕ್ಕೆ ವಿಜ್ಞಾನಿಗಳ ಕೊಡುಗೆ ಅಪಾರ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಹೇಳಿದರು. ಗ್ರಂಥಪಾಲಕ ಎಂ.ಕೆ. ಬಿರಾದಾರ,ಐ.ಕ್ಯೂ.ಎ.ಸಿ.ಯ ಸಂಯೋಜಕ ಡಾ.ಎಸ್.ಎಸ್.ದೇಸಾಯಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್ ಎಸ್ ಅವಟಿ, ಪ್ರೊ.ದಿವ್ಯಾಶ್ರೀ ಭೋಗಾರ, ಪ್ರೊ.ಆಕಾಶ ಜಂಗಮಶೆಟ್ಟಿ, ಪ್ರೊ. ಗುರುರಾಜ ಮುಚ್ಚಂಡಿ, ಪ್ರೊ.ಅಣ್ಣಾರಾಯ…

Read More

ವಿಜಯಪುರ: ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಸರ್ ಸಿ.ವಿ ರಾಮನ್ ಅವರು ಅತ್ಯಂತ ಪ್ರಮುಖರು. ಇವರು ರಾಮನ್ ಪರಿಣಾಮ ಎಂಬ ಹೊಸ ಆವಿಷ್ಕಾರ ನೀಡಿ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಬೆಳಕಿನ ಚದುರುವಿಕೆ ಎಂಬ ಹೊಸ ವೈಜ್ಞಾನಿಕ ಸಂಶೋಧನೆ ಮಾಡಿದ ಮೊದಲಿಗ ಎಂದು ಶೈಲಶ್ರೀ ನಾಯಕ ಅವರು ಅಭಿಪ್ರಾಯ ಪಟ್ಟರು.ಸ್ಥಳಿಯ ದೇವರಹಿಪ್ಪರಗಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಮಾತನಾಡಿದ ಅವರು, 1930ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ ರಾಮನರವರು ರಾಮನ್ ಪರಿಣಾಮ ಆವಿಷ್ಕಾರವನ್ನು ಗೌರವಿಸಲು ಪ್ರತಿವರ್ಷ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ವಿಜ್ಞಾನ ವಿಷಯಕ್ಕೆ ಸಂಭಂದಿಸಿದ ಮಾದರಿ, ಚಿತ್ರಗಳನ್ನು ತಯಾರಿಸಿ ವಸ್ತು ಪ್ರದರ್ಶನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಶಾಲೆಯ ಹಿರಿಯ ಶಿಕ್ಷಕ ರಮೇಶ ತರಲಗಟ್ಟಿಯವರು ತಿಳಿಸಿದರು.ಶಾಲೆಯ ಶಿಕ್ಷಕರಾದ ಮಹೇಶ ಕಂಟಿಗೊಂಡ, ಮಧುಮತಿ,ರೇಖಾ ಹಜಾರೆ, ಎಲ್.ಎಸ್…

Read More

ಉಭಯ ಸದನಗಳಲ್ಲಿ ಗದ್ದಲ | ಕಲಾಪ ಮುಂದೂಡಿಕೆ | ಪಾಕ್ ಪರ ಘೋಷಣೆ ವಿವಾದ ಬೆಂಗಳೂರು: ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಬೆಂಬಲಿಗರಿಂದ ವಿಧಾನಸೌಧ ಕಾರಿಡಾರ್‌ನಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕುರಿತ ವಿವಾದ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಭಾರಿ ಗದ್ದಲ, ಕೋಲಾಹಲ ಉಂಟು ಮಾಡಿದ್ದರಿಂದ ಕಲಾಪವನ್ನು ಎರಡು ಬಾರಿ, ಕೊನೆಗೆ ನಾಳೆಗೆ ಮುಂದೂಲಾಯಿತು.ಕಲಾಪ ಆರಂಭವಾಗುತ್ತಿದ್ದಂತೆಯೇ ಈ ವಿಚಾರ ಕುರಿತು ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿಯನ್ನು ಅರಿತು ಮಾರ್ಷಲ್ ಗಳು ಸದನದ ಬಾವಿಗೆ ಧಾವಿಸಿದರು. ತೀವ್ರ ಗದ್ದಲ, ಕೋಲಾಹಲದಿಂದ ಸದನವನ್ನು ಎರಡು ಬಾರಿ ಮುಂದೂಡಲಾಗಿತ್ತು.ಗದ್ದಲದ ನಡುವೆ ಕೆಲ ಮಸೂದೆಗಳನ್ನು ಅಂಗೀಕರಿಸಲಾಯಿತು. ಭೋಜನ ವಿರಾಮದ ನಂತರವೂ ಗದ್ದಲ, ಕೋಲಾಹಲ ಮುಂದುವರೆದಿದ್ದರಿಂದ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂಡೂಲಾಯಿತು. ಇದಕ್ಕೂ ಮುನ್ನ ಕೆಲ ಶಾಸಕರು ವಿಧಾನಸೌಧ ಬಳಿ ಪ್ರತಿಭಟನೆ…

Read More

ಮುದ್ದೇಬಿಹಾಳ: ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವದರಿಂದ ಫೆ.೨೯ ರಂದು ತಾಲೂಕಿನ ಹುಲ್ಲೂರ, ಕಾಶಿನಕುಂಟಿ, ಮಸೂತಿ, ಜಟ್ಟಗಿ, ಹುಲ್ಲೂರ ಎನೆ.ಜೆ.ವಾಯ್ ಮಾರ್ಗಗಳಲ್ಲಿ ಮತ್ತು ಮಾ.೧ ರಿಂದ ಮಾ.೫ ರವರೆಗೆ ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆಯವರೆಗೆ ಹುಲ್ಲೂರು, ಕಾಶಿನಕುಂಟಿ, ಜಟ್ಟಗಿ ಹಾಗೂ ಹುಲ್ಲೂರ ಎನ್.ಜೆ.ವಾಯ್ ಮಾರ್ಗಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು ಸಾರ್ವಜನಿಕರು, ರೈತರು ಸಹಕರಿಸುವಂತೆ ಪ್ರಕಟಣೆಯ ಮೂಲಕ ಕೋರಲಾಗಿದೆ.

Read More