Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪವಿತ್ರವಾದ ರಂಜಾನ್ ಮಾಸದಲ್ಲಿ ಮಾಡಿದ ದಾನ ಇತರ ದಿನಗಳಲ್ಲಿ ಮಾಡಿದ ದಾನಕ್ಕಿಂತ ಹೆಚ್ಚಿನ ಫಲವನ್ನು ಕೊಡುತ್ತದೆ ಎಂದು ಬಾಗವಾನ ಬ್ಯಾಂಕ್ ನ ನಿಕಟಪೂರ್ವ ಅಧ್ಯಕ್ಷ ಎಚ್.ಆರ್.ಬಾಗವಾನ ಹೇಳಿದರು.ಪಟ್ಟಣದ ಬಾಗವಾನ ಬ್ಯಾಂಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ, ಬಡವರಿಗೆ ದಾನ ಮಾಡುವ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ದಿನದ ದುಡಿಮೆಯಲ್ಲಿ ಸ್ವಲ್ಪವಾದರೂ ದಾನ ಮಾಡುವವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.ಇಮಾಮ ಮೌಲಾನಾ ಆಪ್ತಾಬ ಮಾತನಾಡಿ, ಬಾಗವಾನ ಜಮಾಅತ ನವರು ಈ ಬಾರಿ ವಿಶೇಷವಾಗಿ ಬಡವರ ಮನೆ ಬಾಗಿಲಿಗೆ ಕಿಟ್ ವಿತರಣೆ ಮಾಡಿ ದಾನ ಸ್ವೀಕರಿಸುವವರ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ನೋಡಿಕೊಂಡಿರುವದು ವಿಶೇಷವಾಗಿದೆ ಎಂದರು.ಬ್ಯಾಂಕ ಅಧ್ಯಕ್ಷ ಎಚ್.ಬಿ.ಸಾಲಿಮನಿ, ಸಂಘದ ಅಧ್ಯಕ್ಷ ಸುಲೇಮಾನ ಮಮದಾಪೂರ, ಉಪಾಧ್ಯಕ್ಷ ಎ.ಎ.ಹಳ್ಳೂರ, ಕಾರ್ಯದರ್ಶಿ ಎನ್.ಆರ್.ಮಮದಾಪೂರ, ಖಜಾಂಚಿ ಜಾಫರ ಬಾಗವಾನ, ಇಮಾಮ ಮೌಲಾನಾ ಹುಸೇನ ಉಮರಿ, ಎನ್.ಆರ.ಮಮದಾಪೂರ, ಡಿ.ಎಮ್ ಚೌಧರಿ, ಎಮ್.ಆರ್.ಕಲಾದಗಿ, ಡಿ.ಡಿ.ಬಾಗವಾನ, ಎನ್.ಡಿ.ಬಾಗವಾನ, ಎ.ಕೆ.ಮಕ್ತೆದಾರ, ಎನ್.ಡಿ.ಹುಂಚಾಳ, ಯು.ಕೆ.ಮಕ್ತೆದಾರ, ಎ.ಎನ್.ಹಳ್ಳೂರ, ಅಲ್ತಾಪ ಬಾಗವಾನ, ಶಪಿ…
– ಬಸವರಾಜ ನಂದಿಹಾಳಬಸವನಬಾಗೇವಾಡಿ: ನಾಡಿನಲ್ಲಿ ಹೋಳಿ ಹಬ್ಬಕ್ಕೆ ಅದರದೇ ವಿಶೇಷ ಸ್ಥಾನವಿದೆ. ಪಟ್ಟಣದಲ್ಲಿ ಮಾ.೨೪ ರಂದು ಭಾನುವಾರ ಹೋಳಿ ಹುಣ್ಣಿಮೆ ಆಚರಿಸುತ್ತಿರುವುದರಿಂದ ಸಂಜೆ ಪಟ್ಟಣದ ವಿವಿಧೆಡೆಗಳಲ್ಲಿ ಸಂಜೆ ಕಾಮದಹನ ನಡೆಯಲಿದೆ.ಕಾಮದಹನ ಮಾಡಲು ವಿವಿಧ ಗಲ್ಲಿಯವರು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಗತ್ಯ ತಯಾರಿಯಲ್ಲಿದ್ದಾರೆ. ನಾಳೆ ಸಂಜೆಯೊಳಗೆ ಕಾಮದಹನ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ ವಿವಿಧ ರಂಗೋಲಿಗಳನ್ನು ಹಾಕಿದ ನಂತರ ಕಟ್ಟಿಗೆಗಳನ್ನು ಒಟ್ಟಿ ನಡುವೆ ಔಡಲಗಿಡವನ್ನು ಇಟ್ಟು ಕಾಮದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಹಿಡಿದ ನಂತರ ಕಾಮದಹನ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಕಾಮದಹನ ಮಾಡಿದ ಮರುದಿನ ಎಲ್ಲೆಡೆ ಬಣ್ಣದಾಟವನ್ನು ಆಡುವುದು ರೂಢಿಯಲ್ಲಿದೆ. ಮಾ.೨೫ ರಂದು ಪಟ್ಟಣದಲ್ಲಿ ಬಣ್ಣದೋಕುಳಿ ನಡೆಯಲಿದೆ. ಕೆಲವೆಡೆ ಮಾ.26 ರಂದು ಬಣ್ಣದಾಟವಿದೆ ತಿಳಿದುಬಂದಿದೆ.ಪಟ್ಟಣದಲ್ಲಿ ಶಿವರಾತ್ರಿ ಮುಗಿದ ನಂತರ ಹೋಳಿ ಹಬ್ಬದ ಹಲಗೆ ನಿನಾದ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಚಿಕ್ಕಮಕ್ಕಳು ಹಲಗೆ ಬಾರಿಸುತ್ತಾ ಸಂತಸ ಪಡುತ್ತಿದ್ದಾರೆ. ಈಗಾಗಲೇ ಪ್ರಾಥಮಿಕ ಹಂತದ ಮಕ್ಕಳ ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಹಲಗೆ…
ಬಸವನಬಾಗೇವಾಡಿ: ಪಟ್ಟಣದ ಯುವಮುಖಂಡ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ೨೦೨೪ರ ಕರ್ನಾಟಕ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ಘೋಷಿಸಿದೆ.ಮಾ.೨೪ ರಂದು ಬೆಂಗಳೂರಿನ ನೆಲಮಂಗಲದ ಎಂವಿಎಂ ಕನ್ವೆನ್ಷನ್ ಹಾಲ್ನಲ್ಲಿ ಜರುಗುವ ರಾಜ್ಯಮಟ್ಟದ ೨ ನೇ ಪತ್ರಕರ್ತರ ಸಮ್ಮೇಳನದಲ್ಲಿ ಇವರಿಗೆ ಪ್ರಶಸ್ತಿ ಪತ್ರ ಮತ್ತು ಫಲಕವನ್ನು ನೀಡಿ ಗೌರವಿಸಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರು ತಿಳಿಸಿದ್ದಾರೆ.ಅಶೋಕ ಹಾರಿವಾಳ ಅವರು ಕರವೇ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಕನ್ನಡ ನೆಲ-ಜಲ-ನುಡಿ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವ ಜೊತೆಗೆ ಅನೇಕ ಸಾಮಾಜಿಕ ಹೋರಾಟದಲ್ಲಿ ಭಾಗವಹಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಅನ್ಯಾಯವಾಗಿರುವುದನ್ನು ಖಂಡಿಸಿ ನ್ಯಾಯ ಸಿಗುವಂತೆ ಮಾಡುವಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಾಮಾಜಿಕ ಹೋರಾಟವನ್ನು ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿಂದಗಿ: ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಟ್ಟಣದ ಹಿರಿಯರು ನೋಡಿಕೊಳ್ಳಬೇಕು. ಹೋಳಿ ಹಬ್ಬದ ಸಮಯದಲ್ಲಿಯೇ ಪರೀಕ್ಷೆಗಳಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಎಂದು ಪಿಎಸ್ಐ ಭೀಮಪ್ಪ ರಬಕವಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ಸಾಯಂಕಾಲ ಹೋಳಿ ಹಬ್ಬ ಆಚರಣೆಯ ನಿಮಿತ್ಯವಾಗಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ಶಾಂತಿ ಸುವ್ಯವಸ್ಥೆಗಳನ್ನು ಕಾಯ್ದುಕೊಂಡು ಸಹಬಾಳ್ವೆಯಿಂದ ಹಬ್ಬಗಳನ್ನು ಯುವಕರು ಪ್ರತಿ ವರ್ಷದಂತೆ ಶಾಂತ ರೀತಿಯಿಂದ ಆಚರಣೆ ಮಾಡಬೇಕು.ಈ ವೇಳೆ ಅಪರಾಧ ವಿಭಾಗ ಪಿಎಸ್ಐ ಎ.ಬಿ.ಅಂಗಡಿ ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪುಡುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಆಸಕ್ತಿಯಿಲ್ಲದವರಿಗೆ ಬಣ್ಣ ಹಾಕಬೇಡಿ. ಈ ರೀತಿಯ ಘಟನೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಪರಶುರಾಮ ಹಂಡರಗಲ್, ಸಿದ್ದಪ್ಪ ಕೋರೆ, ಗೊಲ್ಲಾಳ ಇಜೇರಿ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ರಾಕೇಶ ಕಾಂಬಳೆ, ಇರ್ಫಾನ್ ಭಾಗವಾನ್, ರವಿ ನಾಟೀಕಾರ, ಸಂತೋಷ ನಾಟೀಕಾರ, ಭೀಮು ಕೂಚಬಾಳ, ವಿಠ್ಠಲ…
ಮುದ್ದೇಬಿಹಾಳ: ಇಲ್ಲಿನ ನ್ಯಾಯಾಲಯದ ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಅಧಿಕಾರ ವಹಿಸಿದ ನಾಗರಾಜ ಪೂಜಾರ್ ಅವರನ್ನು ನ್ಯಾಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ ಸೇರಿದಂತೆ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ ಇದ್ದರು.
ನಿವಾಳಖೇಡ, ಮುಳಸಾವಳಗಿ ಗ್ರಾಮಗಳ ರೈತರು | ಕಾಲುವೆಯ ಮೇಲೆ ನಿಂತು ಒತ್ತಾಯ | ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ದೇವರಹಿಪ್ಪರಗಿ: ಜನತೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕನಿಷ್ಠ ಹತ್ತು ದಿನಗಳ ಕಾಲ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು, ಗ್ರಾಮಸ್ಥರು ಕಾಲುವೆಯ ಮೇಲೆ ನಿಂತು ಸರಕಾರವನ್ನು ಆಗ್ರಹಿಸಿದ್ದಾರೆ.ತಾಲ್ಲೂಕಿನ ಗಂಗನಳ್ಳಿ ಗ್ರಾಮದವರೆಗೆ ನೀರು ಸಂಪರ್ಕಿಸುವ ನಾಗಠಾಣ ಉಪಕಾಲುವೆಯಲ್ಲಿ ಕೇವಲ ಮೂರು ದಿನ ನೀರು ಹರಿದು ಈಗ ಭಣಗುಡುತ್ತಿದೆ. ಜೊತೆಗೆ ಬೇಸಿಗೆ ಬಿಸಿಲು ಬೆಂಬತ್ತಿ ಕಾಡುತ್ತಿದೆ. ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಜನತೆ ಹಾಗೂ ಜಾನುವಾರು ನೀರಿಗಾಗಿ ಪರಿತಪ್ಪಿಸುವಂತಾಗಿದೆ.ಈ ಬಗ್ಗೆ ರೈತಪ್ರಮುಖರಾದ ಚನ್ನಪ್ಪ ಕಾರಜೋಳ ಹಾಗೂ ಬಸವರಾಜ ಕಲ್ಲೂರ ಮಾತನಾಡಿ, ನಮ್ಮ ಭಾಗದ ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಗೆ ಕನಿಷ್ಟ ೧೫ ದಿನವಾದರೂ ನೀರು ಹರಿಸಬೇಕಾಗಿತ್ತು. ಆದರೆ ಕೇವಲ ೩ ದಿನ ಹರಿಸಿ ನಂತರ ನೀರು ನಿಲ್ಲಿಸಿಬಿಟ್ಟರು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಅದೇ ಮುಳವಾಡ ಕಾಲುವೆಯಲ್ಲಿ…
ಬ್ರಹ್ಮದೇವನಮಡು: ಕನಾ೯ಟಕ ಸಕಾ೯ರದ ಆರಾಧನಾ ಯೋಜನೆಯ ಅನುಷ್ಠಾನಕ್ಕಾಗಿ ಆರಾಧನಾ ಸಮಿತಿಗೆ ಅಧಿಕಾರೇತರ ಸದಸ್ಶರನ್ನಾಗಿ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಹಣಮಂತ ಯಂಟಮಾನ ಅವರನ್ನು ಸಕಾ೯ರ ನಾಮನಿದೇ೯ಶನಗೊಳಿಸಿ ಆದೇಶ ಹೊರಡಿಸಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಇಂಡಿ: ಸಮಾಜದಲ್ಲಿ ಸ್ವಾಸ್ತ್ಯ ಕಾಪಾಡುವದು ಎಲ್ಲರ ಕರ್ತವ್ಯ. ಸಂತೋಷ ಹಂಚಿಕೊಳ್ಳಲಿಕ್ಕೆ ಶಾಂತಿ ಸಾರಲಿಕ್ಕೆ ಹಬ್ಬಗಳು ಆಚರಿಸುತ್ತೇವೆ ಎಂದು ಡಿ.ವೈ.ಎಸ್.ಪಿ ಎಚ್.ಎಸ್.ಜಗದೀಶ ಹೇಳಿದರು.ಪಟ್ಟಣದ ಡಿಎಎಸ್ಪಿ ಕಚೇರಿಯ ಸಬಾಭವನದಲ್ಲಿ ನಡೆದ ಹೋಳಿ ಮತ್ತು ರಮಜಾನ ಪ್ರಯಕ್ತ ಶಾಂತಿ ಸಭೆಯಲ್ಲಿ ಮಾತನಾಡಿದರು.ಪಟ್ಟಣದ ಪೋಲಿಸ್ ಠಾಣಾ ಸಿಪಿಐ ರತನಕುಮಾರ ಜಿರಗಿಹಾಳ ಮಾತನಾಡಿ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಗೆಯಲ್ಲಿ ಇರುವದರಿಂದ ರಾಜಕೀಯ ಧುರೀಣರ ಬ್ಯಾರ್ಸ, ಬಂಟಿಗ್ಸ ಮತ್ತು ಪ್ಲಕ್ಸ ಅಳವಡಿಸಬಾರದು. ಹಚ್ಚಿದರೆ ಕ್ಷಣಾರ್ಧದಲ್ಲೇ ತೆರವುಗೊಳಿಸಲಾಗುವದು ಎಂದರು.ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಭೀಮನಗೌಡ ಪಾಟೀಲ, ಅಯೂಬ ನಾಟಿಕಾರ, ರೈಸ್ ಅಷ್ಟೇಕರ ಮಾತನಾಡಿ ಹಿಂದು ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಹಬ್ಬ ಆಚರಿಸುತ್ತ ಬಂದಿದ್ದಾರೆ. ಯಾವದೇ ಸಮಸ್ಯೆ ಎಂದೂ ಉದ್ಭವಿಸಿಲ್ಲ. ರಂಗಪಂಚಮಿ ಎಂದು ಇದೆ ಡಂಗುರ ಸಾರಲಾಗುವದು. ೨೪ ರಂದು ಕಾಮದಹನ ಇದೆ. ಇಂಡಿಯಲ್ಲಿ ಸುಮಾರು ೫೦ ಕಡೆ ಕಾಮದಹನ ಮಾಡುತ್ತಾರೆ. ಅಣ್ಣ ತಮ್ಮಂದಿರಂತೆ ಮುಸ್ಲಿಂ ಬಾಂಧವರು ಸಹಕರಿಸುತ್ತಾರೆ ಎಂದರು.ಸಭೆಯಲ್ಲಿ ಪುರಸಭೆ ಮಾಜಿ…
ಇಂಡಿ: ವಿಶ್ವ ಬಂಧುತ್ವವನ್ನು ಸಾರಿದ ಶ್ರೀ ರೇಣುಕಾಚಾರ್ಯರರು ಭೋದಿಸಿದ ಮಾನವೀಯತೆಯ ಧರ್ಮದ ಸೂತ್ರಗಳು ಸರ್ವಕಾಲಕ್ಕೂ ಸರ್ವರಿಗೂ ಅರ್ಥಪೂರ್ಣವಾಗಿ ಬದುಕುವ ದಾರಿ ತೋರಿಸಿವೆ ಎಂದು ಶಿರಸ್ತೆದಾರ ಎಸ್.ಆರ್.ಮುಜಗೊಂಡ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಗದ್ಗುರು ರೇಣುಕಾಚಾರ್ಯರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಗದ್ಗುರು ರೇಣುಕಾಚಾರ್ಯರರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು. ಅವರು ಸಮಾಜದ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶ ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮಾನತೆಯಿಂದ ಬದುಕಬೇಕು ಎಂದರು.ಎಚ್.ಎಚ್.ಗುನ್ನಾಪುರ, ರೇಷ್ಮೆ ಇಲಾಖೆಯ ಅಶೋಕ ತೇಲಿ, ಎಂ.ಪಿ.ಕೊಡತೆ, ಇಂಡಿ ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಚವಡಿಹಾಳ, ಸಂಕೇತ ಪಾಟೀಲ, ಶೈಲಜಾ ಒಡೆಯರ, ಉಮಾ ಕಟ್ಟಿಮನಿ ಮತ್ತಿತರಿದ್ದರು.
ಇಂಡಿ: ತಾಲೂಕಿನ ೩೬ ಗ್ರಾಮಗಳ ೭೩೫ ವಸ್ತಿ ಪ್ರದೇಶಗಳು ಮತ್ತು ೩೪ ತಾಂಡಾಗಳಿಗೆ ೯೩ ಟ್ಯಾಂಕರಗಳ ಮೂಲಕ ೨೨೬ ಟ್ರೀಪ್ ನೀರನ್ನು ಪೂರೈಸಲಾಗುತ್ತಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ಪಿಡಿಒ, ಗ್ರಾಮ ಆಡಳಿತ ಅಧಿಕಾರಿ ಮತ್ತು ತಾಲೂಕಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ ಫೋರ್ಸ ಸಭೆಯಲ್ಲಿ ಮಾತನಾಡುತ್ತಿದ್ದರು.ಈಗಾಗಲೇ ತಾಲೂಕಿನ ಹರಿಯುವ ಕೃಷ್ಣಾ ಕಾಲುವೆಯಿಂದ ಎಲ್ಲ ಕೆರೆಗಳನ್ನು ಮತ್ತು ಹಳ್ಳ ಗಳಲ್ಲಿ ನೀರು ತುಂಬಿದ್ದು ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಎಲ್ಲ ಗ್ರಾಮಗಳಲ್ಲಿ ಪೂರೈಸಲಾಗುತ್ತಿದೆ. ಹೀಗಾಗಿ ಮುಂದಿನ ಒಂದು ತಿಂಗಳು ಕುಡಿಯುವ ನೀರಿನ ತೊಂದರೆಯಾಗುವದಿಲ್ಲ ಎಂದರು.ಅದಲ್ಲದೆ ಇನ್ನು ಅನೇಕ ವಸ್ತಿ ಪ್ರದೇಶಗಳಲ್ಲಿ ಟ್ಯಾಂಕರ ಮೂಲಕ ನೀರು ಪೂರೈಸಲು ಕೇಳಿಕೊಂಡಿದ್ದು ಸಧ್ಯದಲ್ಲಿಯೇ ಟ್ಯಾಂಕರ ಮೂಲಕ ನೀರು ಪೂರೈಸಲಾಗುವದು ಎಂದರು.ನೀರಿನ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳು ವಾಚ್ ವಾರ್ಡ ಸರಿಯಾಗಿ ಕೆಲಸ…
