ವಿಜಯಪುರ: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ೧೮ನೇ ದಿನ ಪೂರೈಸಿದೆ.
ಗುರುವಾರ ಸಂಜೆ ಮುಖಂಡರು ರಕ್ತದಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ನೀಡಿ ಬೇಗನೆ ಸಮಸ್ಯೆ ಇತ್ಯರ್ಥಗೊಳಿಸುವಂತೆ ಮನವಿ ಮಾಡಿಕೊಳ್ಳಲು ಹೋದಾಗ ಜಿಲ್ಲಾಧಿಕಾರಿಗಳು ಪ್ರತಿಭಟನಾ ನಿರತರ ಮನವಿ ಸ್ವೀಕರಿಸಲು ನಿರಾಕರಿಸಿದಾಗ ದಲಿತ ಮುಖಂಡರು ಜಿಲ್ಲಾಧಿಕಾರಿಗಳು ರಕ್ತದಲ್ಲಿ ಬರೆದ ಮನವಿಯನ್ನು ಸ್ವೀಕರಿಸುವಂತೆ ಪಟ್ಟು ಹಿಡಿದಾಗ ಪೊಲೀಸರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂಧಿಗಳ ಹಾಗೂ ಧರಣಿ ನಿರತರ ಮಧ್ಯ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಮುಖಂಡ ಬಸವಕುಮಾರ ಕಾಂಬಳೆ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ನಮಗೆ ಎರಡು ದಿನದಲ್ಲಿ ಜಾಗವನ್ನು ಮಂಜೂರು ಮಾಡಿ ಆದೇಶ ಪತ್ರ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಅವರ ಮಾತನ್ನು ನಂಬಿ ಕಳೆದ ಆದರೆ ಈಗ ಭರವಸೆ ಹುಸಿಯಾಗಿದೆ. ಜಿಲ್ಲಾಧಿಕಾರಿಗಳು ಕಾಣದ ಕೈಗಳ ಕೈಗೊಂಬೆಯಂತೆ ವರ್ತಿಸುವ ಮೂಲಕ ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೋರ್ವ ಮುಖಂಡ ಸತೀಶ ಕುಬಕಡ್ಡಿ ಅವರು ಮಾತನಾಡಿ, ದಲಿತರು ಬೀದಿಯಲ್ಲಿ ನಿಂತು ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದರು ಕೂಡಾ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ ವಹಿಸುವ ಮೂಲಕ ದಲಿತರ ಬದುಕನ್ನು ಬೀದಿಗೆ ತಂದದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವ ಮುಖಂಡ ಪ್ರತಾಪ ಚಿಕ್ಕಲಕಿ ಮಾತನಾಡಿ, ಜಿಲ್ಲಾಧಿಕಾರಿಗಳು ನಮಗೆ ನೀಡಿದ ಭರವಸೆಯನ್ನು ನಂಬಿ ನಾವು ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ನಮಗೆ ಕೊಟ್ಟ ಮಾತನ್ನು ಮರೆತು ನಮಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀಶೈಲ ಕಾಖಂಡಕಿ, ಪ್ರದೀಪ ಚಲವಾದಿ, ಬಸವರಾಜ ಕುಬಕಡ್ಡಿ, ಕೀರ್ತಿ ಕಾಖಂಡಕಿ, ರವಿ ಕಾಖಂಡಕಿ, ಶಂಕರ ಕಾಖಂಡಕಿ, ರೋಹಿತ ಮಲಕಣ್ಣವರ, ಸಚಿನ ಕಾಖಂಡಕಿ, ಶೇಖರ ಕೂಡಗಿ, ರಾಜು ಕಾಖಂಡಕಿ, ಮಂಜುನಾಥ ಶಿವಶರಣ, ರಾಮಣ್ಣ ಕಾಖಂಡಕಿ, ಅರವಿಂದ ಕಾಖಂಡಕಿ, ಕೃಷ್ಣಾ ಚಲವಾದಿ, ಸಚಿನ ಕಾಖಂಡಕಿ, ಕೀರ್ತಿ ಕುಮಾರ ಕಾಖಂಡಕಿ, ಕಿರಣ ಕಾಖಂಡಕಿ, ರಾಕೇಶ ಕಾಖಂಡಕಿ, ಬಾಬಾಸಾಹೇಬ ಶಿವಶರಣ, ಆಕಾಶ ಕಾಂಬಳೆ, ಸತೀಶ ಚಲವಾದಿ, ಮಧು ಕಾಖಂಡಕಿ, ರುಕ್ಮಿಣಿ ಕಾಖಂಡಕಿ, ಆಶಾ ಮಾನೆ, ಸರೋಜಾ ಕುಬಕಡ್ಡಿ, ಸುನಂದಾ ಕಾಖಂಡಕಿ, ಕಾವೇರಿ ವಾಲಿಕಾರ, ಮಲ್ಲಮ್ಮ ಚಲವಾದಿ, ಪ್ರತಿಭಾ ಕಾಖಂಡಕಿ, ಬಸವರಾಜ ಕಾಖಂಡಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

