Author: editor.udayarashmi@gmail.com

ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಉತ್ತೀರ್ಣ | ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆ ಸಿಂದಗಿ: ಪಟ್ಟಣದ ಆರ್.ಡಿ.ಕುಲಕರ್ಣಿ ಕೋಚಿಂಗ್ ಕ್ಲಾಸ್‌ನ ವಿದ್ಯಾರ್ಥಿಗಳು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಪಾಸಾಗಿ ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಆರ್.ಡಿ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.ಜನೇವರಿಯಲ್ಲಿ ವಿಜಯಪುರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಆರ್.ಡಿ.ಕುಲಕರ್ಣಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಕೋಚಿಂಗ್ ಕ್ಲಾಸ್‌ನ ೨೦೦ ವಿದ್ಯಾರ್ಥಿಗಳಲ್ಲಿ ಸುಮಾರು ೧೮೫ವಿದ್ಯಾರ್ಥಿಗಳು ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದು, ೭೮ ವಿದ್ಯಾರ್ಥಿಗಳು ೨೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕುಮಾರ ಶ್ರೇಯಸ ಮನಹಳ್ಳಿ ೩೦೦ ಅಂಕಗಳಿಗೆ ೨೬೮, ರಿಯಾಜ ನದಾಫ್ ೨೬೧, ವಿಕಾಸ ಬಗಲಿ ೨೫೯, ಪ್ರೀತಮ ಬಿರಾದಾರ ೨೫೫, ಕಿರಣರೆಡ್ಡಿ ಕೊಲ್ಲೂರ ೨೫೪, ಶಿವಕುಮಾರ ಸಜ್ಜನ ೨೫೩, ಶಶಾಂಕ ಬಿರಾದಾರ ೨೫೨, ರಾಹುಲ ತಾವರಖೇಡ ೨೫೦ ಮತ್ತು ಆಂಗ್ಲ…

Read More

ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಉತ್ತೀರ್ಣ | ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆ ಸಿಂದಗಿ: ಪಟ್ಟಣದ ಆರ್.ಡಿ.ಕುಲಕರ್ಣಿ ಕೋಚಿಂಗ್ ಕ್ಲಾಸ್‌ನ ವಿದ್ಯಾರ್ಥಿಗಳು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ೧೮೫ ವಿದ್ಯಾರ್ಥಿಗಳು ಪಾಸಾಗಿ ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಆರ್.ಡಿ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.ಜನೇವರಿಯಲ್ಲಿ ವಿಜಯಪುರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಆರ್.ಡಿ.ಕುಲಕರ್ಣಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಕೋಚಿಂಗ್ ಕ್ಲಾಸ್‌ನ ೨೦೦ ವಿದ್ಯಾರ್ಥಿಗಳಲ್ಲಿ ಸುಮಾರು ೧೮೫ವಿದ್ಯಾರ್ಥಿಗಳು ಈ ಕೌನ್ಸಿಲಿಂಗ್ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದು, ೭೮ ವಿದ್ಯಾರ್ಥಿಗಳು ೨೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕುಮಾರ ಶ್ರೇಯಸ ಮನಹಳ್ಳಿ ೩೦೦ ಅಂಕಗಳಿಗೆ ೨೬೮, ರಿಯಾಜ ನದಾಫ್ ೨೬೧, ವಿಕಾಸ ಬಗಲಿ ೨೫೯, ಪ್ರೀತಮ ಬಿರಾದಾರ ೨೫೫, ಕಿರಣರೆಡ್ಡಿ ಕೊಲ್ಲೂರ ೨೫೪, ಶಿವಕುಮಾರ ಸಜ್ಜನ ೨೫೩, ಶಶಾಂಕ ಬಿರಾದಾರ ೨೫೨, ರಾಹುಲ ತಾವರಖೇಡ ೨೫೦ ಮತ್ತು ಆಂಗ್ಲ…

Read More

ನಲ್ಲಿಗಳಿಂದ ಪೋಲಾಗುತ್ತಿರುವ ನೀರು | ಕಂಡು ಕಾಣದಂತಿರುವ ಅಧಿಕಾರಿಗಳು | ಸಾರ್ವಜನಿಕರ ಆಕ್ರೋಶ *- ರಶ್ಮಿ ನೂಲಾನವರ* ಸಿಂದಗಿ: ರಾಜ್ಯದಲ್ಲಿ ಈಗಾಗಲೇ ಬರಗಾಲದ ಛಾಯೆ ಆವರಿಸಿದೆ. ಹಲವು ಕಡೆಗಳಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಆದರೆ ಸಿಂದಗಿ ಪಟ್ಟಣದ ಪುರಸಭೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ನಳ ಬಿಟ್ಟಾಗೊಮ್ಮೆ ನೀರು ಚರಂಡಿ ಮತ್ತು ರಸ್ತೆಯ ಪಾಲಾಗುತ್ತಿದೆ. ಹೌದು. ಪಟ್ಟಣದ ಬಂದಾಳ ರಸ್ತೆಯಲ್ಲಿ ಫೈಪ್‌ಗಳು ಒಡೆದು ಹೋಗಿದ್ದರೂ ಪುರಸಭೆ ಇದುವರೆಗೆ ದುರಸ್ತಿ ಮಾಡುವ ಕೆಲಸ ಮಾಡಿಲ್ಲ. ಇದರಿಂದ ನೀರು ರಸ್ತೆಯಲ್ಲಿ ಪೋಲಾಗುತ್ತಿದೆ.ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಉಢಾಪೆ ಉತ್ತರ ನೀಡುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ಇದು ಕೇವಲ ಬಂದಾಳ ರಸ್ತೆಯ ಕಥೆಯಷ್ಟೇ ಅಲ್ಲ. ಪಟ್ಟಣದ ಹಲವು ಓಣಿಗಳಲ್ಲಿ ಇದೇ ದುಸ್ಥಿತಿಯಿದೆ. ಈ ಬಗ್ಗೆ ಪುರಸಭೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕ್ರಮ ಕೈಗೊಳ್ಳುವುದಿರಲಿ ಚರ್ಚೆ ಕೂಡ ಮಾಡುತ್ತಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ವರ್ಷ ವರುಣನ ಕಠೋರತನ…

Read More

ಆಲಮೇಲ: ಪಟ್ಟಣದಲ್ಲಿ ಮಂಗಳವಾರ ಹೋಳಿ ಹಬ್ಬ ಬಣ್ಣದ ಆಟ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಿದರು.ಮಂಗಳವಾರ ಹೋಳಿ ಹಬ್ಬದ ನಿಮಿತ್ಯವಾಗಿ ನಡೆದ ಬಣ್ಣದ ಆಟದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲರು ಸಡಗರದಿಂದ ಬಣ್ಣದಾಟ ಆಡಿ ಸಂಭ್ರಮಿಸಿದರು. ನಂತರ ಸಾಯಂಕಾಲ ಜನರನ್ನು ಮನರಂಜಿಸಲು ಅಣಕು ಶವಯಾತ್ರೆ ಮಾಡಲಾಯಿತು.ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಬ್ಬದಂದು ಬಣ್ಣ ಆಡಿ ಪಟ್ಟಣದ ಕೆಲವು ನಗರದಲ್ಲಿ ಸಾಯಂಕಾಲ ಅಣಕು ಶವಯಾತ್ರೆ ಮಾಡುವದು ಇಲ್ಲಿನ ಪದ್ದತಿ. ಶವ ಯಾತ್ರೆಯಲ್ಲಿ ಮೃತನ ಹೆಂಡತ್ತಿ ಮತ್ತು ಮಗಳು ಆತನ ಬಗ್ಗೆ ಹೊಗಳಿಕೊಂಡು ಅಳುತ್ತಿರುವ ದೃಶ್ಯ ಜನರನ್ನು ನಗೆಗಡಲಲ್ಲಿ ತೇಲಿಸಿತು.ಈ ವರ್ಷ ಹುಣ್ಣಿಮೆ ಎರಡು ಇರುವದರಿಂದ ಗೊಂದಲದಿಂದ ಸೋಮವಾರ ಹೋಳ್ಳಿ ಹುಣ್ಣಿಮೆ ಆಚರಿಸಿ ಅಂದೇ ರಾತ್ರಿ ಕಾಮದಹನ ಮಾಡಿ ಮಂಗಳವಾರ ಬಣ್ಣದ ಆಟವಾಡಿದರು.ಪತಂಜಲಿ ಯೋಗ ಸಮಿತಿಯವರು ರಾಸಾಯನಿಕ ಬಣ್ಣದ ಆಟವಾಡಿ ಹೋಳಿ ಹುಣ್ಣಿಮೆಯ ಬಣ್ಣದೋಕಳಿ ಸಂಬ್ರಮದಿಂದ ಆಚರಿಸಿದರು.ಪಟ್ಟಣದ ಕಡಣಿ ಅಗಸಿ ನಗರದ ನೂರಾರು ಯುವಕರು ಅಣಕು ಶವಯಾತ್ರೆ ಮಾಡಿ ಡಿಜೆ ಸೌಂಡ ದ್ವನಿವರ್ದಕ ಮೂಲಕ ಪಟ್ಟಣದ…

Read More

ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನವೆಂದ ಶಾಸಕರು ಮೋರಟಗಿ: ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿ ಗಬಸಾವಳಗಿ ಗ್ರಾಮದ ಬಸ್ ನಿಲ್ದಾಣ ಬಳಿ ಅವಳಿ ಗ್ರಾಮಸ್ಥರು ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅವರು ಮಾತನಾಡಿದರು.ನಾನು ಬೆಂಗಳೂರಿನಲ್ಲಿ ಇದ್ದಾಗಲೇ ತಾವು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದು ಇಲ್ಲಿಗೆ ಆಗಮಿಸಿದ್ದೇನೆ. ನಾನು ಯಾವತ್ತೂ ಹೋರಾಟಗಾರರೊಂದಿಗೆ ಇದ್ದೇನೆ. ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಕಾರ್ಯವನ್ನು ಕೂಡಲೇ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಎರಡು ಗ್ರಾಮಗಳ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಆದ್ಯತೆ ಮೇರೆಗೆ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಬೇಡಿಕೆ…

Read More

ಮುದ್ದೇಬಿಹಾಳ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕಾಳಿಕಾ ದ್ವಿಚಕ್ರ ವಾಹನ ಸರ್ವೀಸ್ ಸೆಂಟರ್ ನ ಮಾಲೀಕ ಸಂತೋಷ ಕಂಬಾರ ಅವರು ಪ್ರತೀ ವರ್ಷದಂತೆ ಈ ವರ್ಷವೂ ಗಂಗಾ-ತುಂಗಾ ಎಂಬ ಎರಡು ಮಡಿಕೆಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೇವೆ ನೀಡಿ ಮಾದರಿಯಾದರು.ಈ ವೇಳೆ ಪ್ರಮುಖರಾದ ಮಹಾಂತೇಶ ಮಠಪತಿ, ಶಂಕರ ಶಿವಯೋಗಿಮಠ, ಬಸವರಾಜ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.

Read More

ಬ್ರಹ್ಮದೇವನಮಡು: ಸಿಂದಗಿ ಮತಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ಕಾಯ೯ಕತ೯ರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎಂ.ಪಿ.ರಾಠೋಡ(ಡಂಬಳ) ಆರೋಪಿಸಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕೆ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ಮೂಲ ಕಾಂಗ್ರೆಸೀಗರಿಗೆ ಯಾವುದೇ ರೀತಿಯ ಕಿಮ್ಮತ್ತಿಲ್ಲ. ಸಕಾ೯ರದ ನಾಮ ನಿದೇ೯ಶನ ಮಾಡುವುಲ್ಲಿ ಮೂಲ ಮತ್ತು ನಿಷ್ಠಾವಂತ ಕಾಂಗ್ರೆಸೀಗರಿಗೆ ಬೆಲೆ ಇಲ್ಲದಂತಾಗಿದೆ. ತಮ್ಮ ಹಿಂಬಾಲಕರನ್ನೇ ನಾಮನಿದೇ೯ಶನ ಮಾಡಿದ್ದಾರೆ. ಅಲ್ಲದೇ,ಲಂಬಾಣಿ ಸಮಾಜದ ಅಭಿವೃದ್ದಿಗೆ ಬಗ್ಗೆ ಸ್ವಲ್ಪವು ಕಾಳಜಿ ಮಾಡುತ್ತಿಲ್ಲ. ಸಿಂದಗಿಯಲ್ಲಿ ಶಾಸಕ ಅಶೋಕ ಮನಗೂಳಿ ಶಾಸಕರಾಗಲು ಕೇವಲ ಜೆಡಿಎಸ್ ನಿಂದ ವಲಸೆ ಬಂದವರು ಮಾತ್ರ ಮತ ಹಾಕಿದ್ದಾರೆಯೇ ? ಹಿಂದುಳಿದವರು – ಮುಸ್ಲಿಂ, ದಲಿತರು, ಲಂಬಾಣಿಗರು ಸೇರಿದಂತೆ ಎಲ್ಲ ಜಾತಿ ಜನಾಂಗದ ಜನತೆ ತಮಗೆ ಮತ ಹಾಕಿದ್ದನ್ನು ಮರೆಯಬಾರದು. ಪಕ್ಷದ ಕಾಯ೯ಕತ೯ರನ್ನು ವಿಶ್ವಾಸಕ್ಕೆ ತಗೆದುಕೊಂಡು ಅಧಿಕಾರ ಮಾಡುಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತೆ ಎಂದು ರಾಠೋಡ ಎಚ್ಚರಿಕೆ ನೀಡಿದ್ದಾರೆ.

Read More

ಮುದ್ದೇಬಿಹಾಳ: ಪಟ್ಟಣದಲ್ಲಿ ಈ ಬಾರಿ ರಂಗಿನಾಟ ಹೇಳಿ ಕೊಳ್ಳುವಷ್ಟು ಹುರುಪಿನಿಂದ ಕೂಡಿರಲಿಲ್ಲ.ಸೋಮುವಾರ ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಇದ್ದವು. ಆದರೆ ಬಣ್ಣದಾಟದಲ್ಲಿ ಬೆರಳಿಕೆಯಷ್ಟು ಜನ ಮಾತ್ರ ಭಾಗಿಯಾಗಿ ಸಂಭ್ರಮಿಸಿದರು.ಹರಣಶಿಕಾರಿ ಸಮುದಾಯದವರು ಪ್ರತೀ ವರ್ಷದಂತೆ ತಮ್ಮ ಹಲಿಗೆ ಬಡಿತದ ತಂಡದೊಂದಿಗೆ ವಿವಿಧ ಕಡತಗಳನ್ನು ಬಾರಿಸುತ್ತ, ಕುಣಿಯುತ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮುಖ್ಯ ಬಜಾರನಲ್ಲಿ ಬೆರಳಿಕೆಯಷ್ಟು ಜನ ಮಾತ್ರ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.ಮಂಗಳವಾರವೂ ಹೇಳಿಕೊಳ್ಳುವಷ್ಟು ಹುರುಪು ತುಂಬಿರಲಿಲ್ಲ. ಕೆಲ ಏರಿಯಾಗಳಲ್ಲಿ ಮಾತ್ರ ಬಣ್ಣದಾಟದ ಸಂಭ್ರಮವಿತ್ತು. ಒಂದೆಡೆ ಬಿಸಿಲು ಇನ್ನೊಂದೆಡೆ ಬರಗಾಲ ಮತ್ತೊಂದೆಡೆ ಹಿರಿಯರ ನೇತೃತ್ವ ಇಲ್ಲದೇ ಆಟಕ್ಕೆ ಮಂಕು ಬಡಿದುಕೊಳ್ಳುವಂತೆ ಮಾಡಿತ್ತು.

Read More

ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗ ಮಂಗಳವಾರ ವಿವೇಕ ಬ್ರಿಗೇಡ್ ಸಂಘಟನೆಯ ಪದಾಧಿಕಾರಿಗಳು ಬೇಸಿಗೆಕಾಲದಲ್ಲಿ ಜನರಿಗೆ ಕುಡಿಯುವ ನೀರಿನ ಅರವಟ್ಟಿಗೆ ವ್ಯವಸ್ಥೆಗೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಪಟ್ಟಣಕ್ಕೆ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವದು ಶ್ಲಾಘನೀಯ. ಇದೊಂದು ಉತ್ತಮ ಕಾರ್ಯ. ಜನರು ನೀರಿನ ಮಹತ್ವ ಅರಿತು ಅರವಟ್ಟಿಗೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸಲು ಅರವಟ್ಟಿಗೆ ತುಂಬಾ ಸಹಕಾರಿಯಾಗುತ್ತದೆ. ವಿವೇಕ ಬ್ರಿಗೇಡ್ದವರು ಅರವಟ್ಟಿಗೆಯಿಂದ ಜನರು ನೀರು ತೆಗೆದುಕೊಳ್ಳುವಾಗ ರಸ್ತೆ ಬಾರದಂತೆ ನೋಡಿಕೊಳ್ಳವ ಜೊತೆಗೆ ಅದರ ಕೆಳಗೆ ನೀರಿನ ತೊಟ್ಟಿಯನ್ನು ಇಟ್ಟಿರುವುದು ಜಾನುವಾರುಗಳು ನೀರು ಕುಡಿಯಲು ಅನುಕೂಲವಾಗಿದೆ. ಇದರ ಪಕ್ಕದಲ್ಲಿರುವ ಗಿಡಗಳಲ್ಲಿ ಮಣ್ಣಿನ ಪರಾಣಿಯನ್ನು ನೇತು ಹಾಕಿ ಅದರಲ್ಲಿ ನೀರು ಹಾಕಿರುವದು ಪಕ್ಷಿಗಳಿಗೆ ನೀರು ಕುಡಿಯಲು ತುಂಬಾ ಅನುಕೂಲವಾಗುವಂತೆ ಮಾಡಿರುವ ವ್ಯವಸ್ಥೆ ಸಹ ಒಳ್ಳೆಯದು. ಈ ಸಲ ಕಳೆದ ವರ್ಷಕ್ಕಿಂತ ಬಿಸಿಲು ಹೆಚ್ಚಾಗಿದೆ. ಜನರು ನೀರು ಪೋಲಾಗದಂತೆ ಬಳಕೆ ಮಾಡುವುದು ಅಗತ್ಯವಿದೆ.…

Read More

ವಿಜಯಪುರ: ನಾದ ೩೩/೧೧ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ೧೧೦ಕೆವಿ ಮಾರ್ಗದ ಗೋಪುರ ಹಾಗೂ ತಂತಿ ಎಳೆಯುವ ಕಾಮಗಾರಿ ಕೈಗೊಂಡಿರುವಾದರಿಂದ, ಸದರಿ ವಿದ್ಯುತ ಉಪಕೇಂದ್ರದಿಂದ ಸರಬರಾಜು ಆಗುವ ಎಲ್ಲಾ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ಮಾ.೨೭ ಹಾಗೂ ಮಾ.೨೮ರಂದು ಬೆಳಗ್ಗೆ ೧೧ರಿಂದ ಸಾಯಂಕಾಲ ೫ ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More