Author: editor.udayarashmi@gmail.com

ಸಿಂದಗಿ: ತಾಲೂಕಿನ ಚಾಂದಕವಟೆ ಗ್ರಾಮದ ಈರಣ್ಣ ಉಡಚ್ಯಾಣ ಅವರು ಮಂಡಿಸಿದ “ಹೈ ವ್ಯಾಲೆಂಟ್ ಕಾರ್ಬೋನೇಡ್ ಕಾಂಪ್ಲೇಕ್ಸ್ ಫಾರ್ ಕ್ಯಾಟ್‌ಲಿಟಿಕ್ ಆಕ್ಸಿಡಿಶೇನ್ ಪ್ರೋಸೆಸ್‌ಸ್” ಸಲ್ಲಿಸಿದ ಮಹಾಪ್ರಬಂದಕ್ಕೆ ಇಸ್ರೇಲ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಆರಿಯಲ್ ವಿಶ್ವವಿದ್ಯಾಲಯವು ಪಿ.ಎಚ್‌ಡಿ ಪದವಿ ಪ್ರಧಾನ ಮಾಡಿದೆ. ಅವರಿಗೆ ರಾಸಾಯನಶಾಸ್ತ್ರ ವಿಭಾಗದ ಡಾ.ಡ್ಯಾನ್ ಮೇಯರ್‌ಸ್ಟಿನ್ ಹಾಗೂ ಡಾ. ತೋಮರ್ ಜಡಕಿ ಅವರು ಮಾರ್ಗದರ್ಶನ ನೀಡಿದ್ದಾರೆ.

Read More

ಸಿಂದಗಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ೨ವರ್ಷದ ಬಾಲಕ ಸಾತ್ವಿಕನನ್ನು ರಕ್ಷಣೆ ಮಾಡಲು ಮುಂದಾಳತ್ವವನ್ನು ವಹಿಸಿದ ವಿಜಯಪುರ ಜಿಲ್ಲಾಧಿಕಾರಿಗಳಿಗೆ, ಸಹಕರಿಸಿದ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ, ವಿಜಯಪುರ ಎಸ್ಪಿ, ಡಿವಾಯ್‌ಎಸ್‌ಪಿ, ಇಂಡಿ ಉಪವಿಭಾಗಾಧಿಕಾರಿ, ಒಳಗೊಂಡಂತೆ ಎಲ್ಲ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಸತತ ೨೧ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದ ಎಲ್ಲರಿಗೂ ಕೋಟಿ ಕೋಟಿ ಸಲಾಂ ಎಂದು ಸಿಂದಗಿ ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರದ ಸಾಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ ತಿಳಿಸಿದ್ದಾರೆ.ಇನ್ನಾದರೂ ಸಾರ್ವಜನಿಕರು ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚಿ. ಇಲ್ಲವಾದರೆ ಅಮಾಯಕ ಕಂದಮ್ಮಗಳು ಬಲಿಯಾಗುತ್ತವೆ. ಇಂತಹ ಘಟನೆಗಳು ಮೇಲಿಂದ ಮೇಲೆ ಸಂಬವಿಸುತ್ತಿದ್ದರೂ ಸಾರ್ವಜನಿಕರು ಜಾಗೃತರಾಗದೇ ಇರುವುದು ಬೇಸರದ ಸಂಗತಿ. ಸಮಾಜ ಮತ್ತು ಜನರು ಇದರ ಬಗ್ಗೆ ಇನ್ನೂ ಮುಂದಾದರೂ ಜಾಗೃತಿ ವಹಿಸಿ ಎಚ್ಚೆತ್ತುಕೊಳ್ಳಬೇಕು ಎಂದು ರಶ್ಮಿ ನೂಲಾನವರ ತಿಳಿಸಿದ್ದಾರೆ.

Read More

ಸಿಂದಗಿ: ವಿಜಯಪುರ ಲೋಕಸಭೆಯ ಚುನಾವಣೆಯ ಪ್ರಚಾರಾರ್ಥ ಪ್ರಯುಕ್ತವಾಗಿ ಏ.೦೫ ಮದ್ಯಾಹ್ನ ೩ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ತಿಳಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚುಬಾಳ, ಮಾಜಿ ಶಾಸಕ ರಮೇಶ ಭೂಸನೂರ, ಜೆಡಿಎಸ್ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ಬಿಜೆಪಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ತಾಲೂಕಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸುವರು. ಕಾರಣ ಕನ್ನೊಳ್ಳಿಯ ಶಕ್ತಿ ಕೇಂದ್ರದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಸಾವು ಗೆದ್ದು ಬಂದ ಸಾತ್ವಿಕ್ ನ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ಕೊಳವೆ ಬಾವಿಗೆ ಬಿದ್ದಿದ್ದ ೧೪ ತಿಂಗಳ ಮಗು ಸಾತ್ವಿಕ್ ಹೊರ ಜಗತ್ತನ್ನು ನೋಡುವಂತಾಗಿದ್ದಾನೆ. ಸತತ ೨೦ ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ನಮ್ಮ ಹೆಮ್ಮೆಯ ಎಸ್ ಡಿ ಆರ್ ಎಫ್, ವಿಜಯಪುರ ಜಿಲ್ಲಾ ಆಡಳಿತಕ್ಕೆ, ಪೊಲೀಸ್ ತಂಡಕ್ಕೆ ಹಾಗೂ ಶ್ರಮಿಸಿದ ಮತ್ತು ಸಹಕರಿಸಿದ ಸರ್ವರಿಗೂ ಆಯೋಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವದಾಗಿ ತಿಳಿಸಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಫೋನ್ ಮುಖಾಂತರ ಮಾತನಾಡಿ, ಬಾಲಕ ಸಾತ್ವಿಕ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾತನಾಡಿ, ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯದ ಬಗ್ಗೆ ಸೇರಿದಂತೆ ವಿವರಣೆ ಪಡೆದುಕೊಂಡು ಆಯೋಗಕ್ಕೆ ವರದಿ ನೀಡಲು…

Read More

ಮುದ್ದೇಬಿಹಾಳ: ತಾಲೂಕು ಪಂಚಾಯತ ಆವರಣದಲ್ಲಿ ಗುರುವಾರ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥಾ ಮತ್ತು ಮಾನವ ಸರಪಳಿ ನಿರ್ಮಿಸುವ ಮೂಲಕ ಸ್ವೀಪ್ ಚಟುವಟಿಕೆ ಹಮ್ಮಿಕೊಳ್ಳಲಾಯಿತು.ಚಟುವಟಿಕೆಯಲ್ಲಿ ತಾಲ್ಲೂಕಿನ ಲೈಂಗಿಕ ಕಾರ್ಯಕರ್ತೆಯರು ಮತ್ತು ಮಂಗಳಮುಖಿಯರು ಪಾಲ್ಗೊಂಡು ಮತದಾನ ಕುರಿತು ಜಾಗೃತಿ ಮೂಡಿಸಿದರು. ಲೈಂಗಿಕ ಕಾರ್ಯಕರ್ತೆಯರು ಮತ್ತು ಮಂಗಳಮುಖಿಯರಿಗೆ ಲೋಕಸಭಾ ಚುನಾವಣೆ ಹಾಗೂ ಮತದಾನ ಕುರಿತು ತಾಲೂಕು ಪಂಚಾಯತಿ ಯೋಜನಾಧಿಕಾರಿ ಖುಬಾಸಿಂಗ್ ಜಾಧವ್ ಅವರು ಮಾಹಿತಿ ನೀಡಿ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.ತಾಲೂಕು ಪಂಚಾಯತ ವ್ಯವಸ್ಥಾಪಕ ಧೂಳಪ್ಪ ಅಂಜುಟಗಿ, ತಾ.ಪಂ.ಸಹಾಯಕ ಲೆಕ್ಕಾಧಿಕಾರಿ ವೀರೇಶ ಹೂಗಾರ, ಐಇಸಿ ಸಂಯೋಜಕ ಪರಮೇಶ ಹೊಸಮನಿ, ತಾಲೂಕು ವ್ಯವಸ್ಥಾಪಕ ಮಂಜುನಾಥ ಹಿರೇಮಠ ಚುನಾವಣೆ ವಿಷಯ ನಿರ್ವಾಹಕ ಎಸ್.ಎಸ್.ಬಂಗಾರಗುಂಡ ಹಾಗೂ ತಾಲೂಕಿನ ಎಲ್ಲ ಎಂ.ಬಿ.ಕೆ ಅವರು ಪಾಲ್ಗೊಂಡಿದ್ದರು.

Read More

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪವಾಡ ಬಸವೇಶ್ವರ ಆಶ್ರಮದಲ್ಲಿ ಬಸಪ್ಪ ಶರಣ (ಮೌನ ಯೋಗಿ)ರ ೨೭ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಏಪ್ರೀಲ್ ೫ ರಂದು ಬೆಳಿಗ್ಗೆ ೧೦.೩೦ಕ್ಕೆ ಶರಣರ ಗದ್ದುಗೆಗೆ ಅಭಿಷೇಕ, ಪೂಜೆ, ಭಜನಾ ಸಮಾಪ್ತಿ, ಮಹಾನೈವೇದ್ಯ, ಮಂಗಳಾರತಿ, ಹಾಗೂ ಮಧ್ಯಾಹ್ನ ೧ ಕ್ಕೆ ಮಹಾಪ್ರಸಾದ ಇರಲಿದೆ.ಚನ್ನಮ್ಮಲ್ಲಪ್ಪ ಶರಣರ ದಿವ್ಯ ನೇತೃತ್ವದಲ್ಲಿ ವಿವಿಧ ಮಠಾಧೀಶರ, ಸಂತರ ಸಮ್ಮುಖದಲ್ಲಿ ಆರಾಧನಾ ಮಹೋತ್ಸವ ನಡೆಯಲಿದೆ. ಸದ್ಭಕ್ತರು ಆಗಮಿಸಿ ಗುರುದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.

Read More

ಇಂಡಿ: ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ್ ಮುಜಗೊಂಡ ಇವನನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಕಾರ್ಯಾಚರಣೆ ತಂಡವನ್ನು ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎನ್‌ಡಿಆರ್‌ಎಫ್ ತಂಡ, ಎಸ್‌ಡಿಆರ್‌ಎಫ್ ತಂಡ, ಪೋಲಿಸರು, ಗೃಹ ರಕ್ಷಕದಳ ಮತ್ತು ಇಂಡಿ ಸರಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಇವರನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್, ಸಿಇಒ ರಿಷಿ ಆನಂದ, ಎಸಿ ಅಬೀದ್ ಗದ್ಯಾಳ ಸನ್ಮಾನಿಸಿದರು.

Read More

ವಿಜಯಪುರ: ಕಳೆದ ೪೦ ವರ್ಷಗಳಲ್ಲಿ ರಾಜ್ಯದಲ್ಲಿ ಇಂತಹ ಪಾಪಿಷ್ಟ ಸರಕಾರ ಎಂದಿಗೂ ಕಂಡಿಲ್ಲ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.ಗುರುವಾರ ಕನ್ನೂರ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಜಗತ್ತು ಕಂಡ ಶ್ರೇಷ್ಠ ನಾಯಕ ನರೇಂದ್ರ ಮೊದಿ ಸ್ವತಃ ತನ್ನ ಸಂಬಂಧಿಕರನ್ನು ಸರ್ಕಾರದ ಸಮೀಪಕ್ಕೆ ಸೇರಿಸದೇ ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಅವರ ತಾಯಿ ತೀರಿಕೊಂಡಾಗಲೂ ಕಡಿಮೆ ಸಮಯ ಕೊಟ್ಟು ಮತ್ತೆ ಕರ್ತವ್ಯಕ್ಕೆ ಹಾಜರಾಗಿ ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದ್ದಾರೆಂದು ಹೇಳಿದರು.ಮೇ ೭ ರಂದು ನಡೆಯುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕೆಂದು ಕರೆ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಅರುಣ ಶಹಾಪೂರ, ಅಪ್ಪು ಪಟ್ಟಣಶೆಟ್ಟಿ, ಪ್ರಕಾಶ ಅಕ್ಕಲಕೋಟ, ಸಂಜೀವ ಐಹೊಳೆ, ಈರಣ್ಣ ರಾವರೂರ, ಮುಳುನಗೌಡ ಪಾಟೀಲ, ಚಿದಾನಂದ ಚಲವಾದಿ, ಸಿದ್ಧನಗೌಡ ಪಾಟೀಲ, ಎಸ್.ಎ.ಪಾಟೀಲ, ಶಂಕರಗೌಡ ಪಾಟೀಲ, ಭೀಮು ಸಾಹುಕಾರ ಬಿರಾದಾರ, ಮಹೇಂದ್ರ…

Read More

ಬಸವನ ಬಾಗೇವಾಡಿ: ತಾಲೂಕಿನ ವಡವಡಗಿಯಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಮೋದಿ ಮೋಡಿಯಿಂದ ದೇಶ ಹೊರ ಬರಬೇಕು ಎಂದು ಕರೆ ನೀಡಿದರು.ದೇಶ ಹಾಗೂ ವಿಜಯಪುರ ಲೋಕಸಭೆ ಕ್ಷೇತ್ರದ ಇಂದಿನ ಸ್ಥಿತಿ-ಗತಿ ಕುರಿತು ಮತದಾರರಿಗೆ ಮನವರಿಕೆ ಮಾಡಿ ಮಾತನಾಡಿದರು.ಮೋದಿಯವರ ಮೋಡಿಯಿಂದ ಹೊರ ಬಂದು ಕಾಂಗ್ರೆಸ್‌ನ್ನು ಬೆಂಬಲಿಸಿದರೆ ನೀವು ನಿಜವಾದ ಪ್ರಗತಿ ಹೊಂದಲು ಸಾಧ್ಯ. ಸುಳ್ಳಿನ ಭರವಸೆಗಳಿಂದ ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.ಸಭೆಯಲ್ಲಿ ನೂರಾರು ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ಅವರನ್ನು ಉದ್ದೇಶಿಸಿ, ಸಿದ್ದರಾಮಯ್ಯರ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ತೃಪ್ತರಾಗಿದ್ದು, ಅವರೆಲ್ಲ ಕಾಂಗ್ರೆಸ್ ಪರವಾದ ಒಲುವು ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿದರೆ ಅಲ್ಲಿಯೂ ಗ್ಯಾರಂಟಿಗಳ ಭಾಗ್ಯ ಜಾರಿಯಾಗಿ ಜನಸಾಮಾನ್ಯರ ಬದುಕು ಹಗುರವಾಗಲಿದೆ ಎಂದು ಭರವಸೆ ನೀಡಿದರು.ಮಾಜಿ ಶಾಸಕ ಶರಣಪ್ಪ ಸುಣಗಾರ, ಮುಖಂಡರಾದ ಬಿ.ಎಸ್. ಪಾಟೀಲ ಯಾಳಗಿ, ಬಾಪೂಗೌಡ. ಎಂ. ಪಾಟೀಲ, ಆನಂದ ದೊಡ್ಡಮನಿ, ಡಾ. ಪ್ರಭುಗೌಡ.…

Read More

ಕೊಳವೆಬಾವಿಯಲ್ಲಿ ಬಿದ್ದ ಮಗು ರಕ್ಷಣೆ | ಸತತ ೨೧ ಗಂಟೆಗಳ ರಕ್ಷಣಾ ಕಾರ್ಯಾಚರಣೆ | ಮುಗಿಲು ಮುಟ್ಟಿದ ಹರ್ಷೋದ್ಘಾರ ಇಂಡಿ: ಬುಧವಾರ ಸಂಜೆ ೫ ಗಂಟೆಯ ಸುಮಾರಿಗೆ ಅಪ್ಪ ಕೊರೆರಿಸಿದ್ದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ್ ಮುಜಗೊಂಡ ಇವನನ್ನು ರಕ್ಷಿಸುವಲ್ಲಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಯಶಸ್ವಿಯಾಗಿದೆ.ಸತತ ೨೧ ಗಂಟೆಯ ಕಾರ್ಯಾಚರಣೆ ಬಳಿಕ ಸಾತ್ವಿಕ್ ಸಾವು ಗೆದ್ದು ಮೃತ್ಯುಂಜಯನಾಗಿ ಹೊರಬಂದಿದ್ದಾನೆ.ಕಾರ್ಯಾಚರಣೆಯಲ್ಲಿ ಹೈದ್ರಾಬಾದದ ೨೧ ಜನರ ಎನ್‌ಡಿಆರ್‌ಎಫ್ ತಂಡ, ಬೆಳಗಾಂವ ಮತ್ತು ಕಲಬುರಗಿಯಿಂದ ಬಂದ ೨೫ ಜನರ ಎಸ್‌ಡಿಆರ್‌ಎಫ್ ತಂಡ, ೫೦ ಜನ ಪೋಲಿಸರು, ೨೦ ಜನ ಗೃಹ ರಕ್ಷಕದಳದ ಸಿಬ್ಬಂದಿ ಮತ್ತು ಇಂಡಿ ಸರಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡು ಆಹೋರಾತ್ರಿ ನಡೆಸಿದ ಸತತ ಪ್ರಯತ್ನದ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿ ಗುರುವಾರ ಮಧ್ಯಾಹ್ನ ೧.೪೪ಕ್ಕೆ ಮಗುವನ್ನು ಜೀವಂತವಾಗಿ ಹೊರತೆಗೆಯಲಾಯಿತು.ಘಟನಾ ಸ್ಥಳಕ್ಕೆ ಲಚ್ಯಾಣದ ವೃಷಭಲಿಂಗೇಶ್ವರ ಶ್ರೀಗಳು, ಜನತಾದಳದ ಬಿ.ಡಿ.ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ ಸೇರಿದಂತೆ ಅನೇಕ…

Read More