Author: editor.udayarashmi@gmail.com

ವಿಜಯಪುರ: ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪರ ೮೮ನೇ ಜನ್ಮ ದಿನಾಚರಣೆಯ ಅಂಗವಾಗಿ ಪ್ರೊ. ಬಿ.ಕೆ. ಸಂಘರ್ಷ ದಿನ ಎಂಬ ಘೋಷವಾಕ್ಯದೊಂದಿಗೆ ಜೂ. ೯ ರಂದು ಬೆಳಗ್ಗೆ ೧೧:೩೦ ಕ್ಕೆ ಪುರಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜು ವೈ. ಕಂಬಾಗಿ ತಿಳಿಸಿದ್ದಾರೆ.ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಶೋಷಿತ ಸಮುದಾಐಗಳ ಹೋರಾಟಗಾರ, ದಲಿತ ಚೇತನ ಬಿ. ಕೃಷ್ಣಪ್ಪ ಭದ್ರಾವತಿಯಲ್ಲಿ ಆರಂಭಮಾಡಿದ ಚಳವಳಿ, ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿ ಲಕ್ಷಾಂತರ ತಳ ಸಮುದಾಯ ಬಡವರ ವಿಮೋಚನೆಗಾಗಿ ದಸಂಸ ಹೋರಾಟ ಮಾಡುತ್ತಾ ಬಂದಿದೆ ಎಂದರು.ಕೃಷ್ಣಪ್ಪ ತಮ್ಮ ಬದುಕಿನುದ್ದಕ್ಕೂ ಸರಳ ಜೀವನ ನಡೆಸಿದ್ದಾರೆ. ರಾಜಕೀಯವಾಗಿ ಶೋಷಿತರು ಸಬಲಾಗಬೇಕೆನ್ನುವ ಕನಸು ಹೊಂದಿದ್ದರು. ಜಾತೀಯತೆ, ಅಸ್ಪೃಶ್ಯತೆ, ವರ್ಗ ಅಸಮಾನತೆಗಳ ವಿರುದ್ಧ ಹೋರಾಟ ರೂಪಿಸಿದವರು. ಇಂದು ದಲಿತ ಶೋಷಿತ ಸಮುದಾಯದವರಿಗೆ ಅಲ್ಪ-ಸ್ವಲ್ಪ ಭೂಮಿ ಸಿಕ್ಕಿದೆ ಎಂದರೆ ಅದು ಬಿ. ಕೃಷ್ಣಪ್ಪರ ಹೋರಾಟದಿಂದಲೇ ಎಂದರು.ವಿಜಯಪುರ ಜಿಲ್ಲೆಯಿಂದ ೧೦೦ ಕ್ಕೂ ಹೆಚ್ಚು ಜನ ಕಾರ್ಯಕರ್ತರು ರೇಲ್ವೆ…

Read More

ವಿಜಯಪುರ: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ೧೮ನೇ ದಿನ ಪೂರೈಸಿದೆ.ಗುರುವಾರ ಸಂಜೆ ಮುಖಂಡರು ರಕ್ತದಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ನೀಡಿ ಬೇಗನೆ ಸಮಸ್ಯೆ ಇತ್ಯರ್ಥಗೊಳಿಸುವಂತೆ ಮನವಿ ಮಾಡಿಕೊಳ್ಳಲು ಹೋದಾಗ ಜಿಲ್ಲಾಧಿಕಾರಿಗಳು ಪ್ರತಿಭಟನಾ ನಿರತರ ಮನವಿ ಸ್ವೀಕರಿಸಲು ನಿರಾಕರಿಸಿದಾಗ ದಲಿತ ಮುಖಂಡರು ಜಿಲ್ಲಾಧಿಕಾರಿಗಳು ರಕ್ತದಲ್ಲಿ ಬರೆದ ಮನವಿಯನ್ನು ಸ್ವೀಕರಿಸುವಂತೆ ಪಟ್ಟು ಹಿಡಿದಾಗ ಪೊಲೀಸರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂಧಿಗಳ ಹಾಗೂ ಧರಣಿ ನಿರತರ ಮಧ್ಯ ಕೆಲಕಾಲ ಮಾತಿನ ಚಕಮಕಿ ನಡೆಯಿತು.ಈ ಸಂದರ್ಭದಲ್ಲಿ ಮುಖಂಡ ಬಸವಕುಮಾರ ಕಾಂಬಳೆ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ನಮಗೆ ಎರಡು ದಿನದಲ್ಲಿ ಜಾಗವನ್ನು ಮಂಜೂರು ಮಾಡಿ ಆದೇಶ ಪತ್ರ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಅವರ ಮಾತನ್ನು ನಂಬಿ ಕಳೆದ ಆದರೆ ಈಗ ಭರವಸೆ ಹುಸಿಯಾಗಿದೆ. ಜಿಲ್ಲಾಧಿಕಾರಿಗಳು ಕಾಣದ ಕೈಗಳ ಕೈಗೊಂಬೆಯಂತೆ ವರ್ತಿಸುವ ಮೂಲಕ ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು…

Read More

ವಿಜಯಪುರ: ಬಿತ್ತನೆ ಬೀಜ-ರಸಗೊಬ್ಬರ ಬೆಲೆ ಇಳಿಸಲು ಒತ್ತಾಯಿಸಿ, ನಕಲಿ ಕಳಪೆ ಮಾರಾಟ ತಡೆಗಟ್ಟಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆಯ ಮೇರೆಗೆ ಬಿತ್ತನೆ ಬೀಜ-ರಸಗೊಬ್ಬರ ಬೆಲೆಗಳನ್ನು ಇಳಿಸಲು ಆಗ್ರಹಿಸಿ, ಕಳಪೆ ಹಾಗೂ ನಕಲಿ ಬಿತ್ತನೆ ಬೀಜ -ರಸಗೊಬ್ಬರಗಳ ಮಾರಾಟವನ್ನು ತಡೆಗಟ್ಟಲು. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆ ಮಾರಾಟದ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ವಿಜಯಪುರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ಬಲವಂತದ ಸಾಲ ವಸೂಲಾತಿ ನಿಲ್ಲಬೇಕು. ಬರ ಪರಿಹಾರದ ಹಣವನ್ನು ಸಾಲಕ್ಕೆ ಕಟಾಯಿಸಿಕೊಳ್ಳಬಾರದು. ಸಾಲಕ್ಕೆ ಬರ ಪರಿಹಾರದ ಹಣ ಕಳೆದುಕೊಂಡಿರುವ ರೈತರ ಖಾತೆಗೆ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ಒದಗಿಸಬೇಕು ಮತ್ತು ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಎಂದು ರಾಜ್ಯ,…

Read More

ಮೋರಟಗಿಯ ಅಮೋಘಸಿದ್ದೇಶ್ವರ ಜಾತ್ರೆ I ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ ಮೋರಟಗಿ: “ರೋಣಿ ಮಿರಗಕ್ಕ ಕೂರಿಗಿ ಸಾಗ, ಪುಷ್ಯ- ಪುನರ್ವಸು ದೇಶಕ್ಕೆ ಸಂಪೂರ್ಣ, ನಂಬಿದ ರೈತಗ ಹಿಂಬಾಳಾಗಿರತೀನಿ..”ಮಿರಗ ಕೂಡುವ ದಿನವೇ ಗ್ರಾಮದಲ್ಲಿ ಕೇಳಿಬಂದ ಇಂಥದೊಂದು ಹೇಳಿಕೆ ಸುತ್ತಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ‘ಮುತ್ಯಾನ ಮಾತಿನಂತೆ ಮಳೆರಾಯ ಕೈಹಿಡದರ ಬಾಳ ಹಸನಾದಂಗ’ ಎಂದು ಅನ್ನದಾತರು ಆತ್ಮವಿಶ್ವಾಸದಿಂದ ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ.ಗ್ರಾಮದ ಆರಾಧ್ಯ ದೈವ, ಭಕ್ತಿ ಭಂಡಾರದ ಅವತಾರಿ, ಸಿದ್ಧಿಪುರುಷ ಅಮೋಘಸಿದ್ಧೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಹೇಳಿಕೆಯಲ್ಲಿ ಪಟ್ಟದ ದೇವರಾದ ಕನ್ನಯ್ಯ ಮುತ್ಯಾ ಅವರು ಮಳೆ ಭವಿಷ್ಯ ನುಡಿದಿದ್ದಾರೆ. ಅಜ್ಜನ ವಾಣಿಯಂತೆ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಗ್ರಾಮಸ್ಥರು ಸಂತಸಗೊಂಡಿದ್ದಾರೆ.ಹೇಳಿಕೆ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳ ನೂರಾರು ಜನ ನೆರೆದಿದ್ದರು.ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಂಡಾರದಲ್ಲಿ ಮಿಂದ್ದೆದ್ದರು.ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.ಗುರುವಾರ ರಾತ್ರಿ ೮ ಗಂಟೆಗೆ…

Read More

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಚಲವಾದಿ ಸಮಾಜದ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ S.S.L.C. ಮತ್ತು ಪಿ.ಯು.ಸಿಯಲ್ಲಿ 95% ಕ್ಕಿಂತ ಹೆಚ್ಚಿಗೆ ಅಂಕ ಪಡೆದ ಪ್ರತಿಭಾವಂತ 8 ಜನ ಮಕ್ಕಳಿಗೆ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ಸಂಪೂರ್ಣ ಮಧ್ಯಪಾನ ತ್ಯಜಿಸಿ ಮುಖ್ಯವಾಹಿನಿಗೆ ಬಂದ 1) ಪುಂಡಲಿಕ ಶೇಗುಣಸಿ 2) ಚಿದಾನಂದ ಚಲವಾದಿ ಇವರಿಗೂ ವಿಶೇಷ ಸನ್ಮಾನಿಸಲಾಯಿತು ಮತ್ತು S.C. ವಿದ್ಯಾರ್ಥಿ ಗಂಗಾಧರ ಈತನು L.L.B ಪಾಸಾಗಿ ವಕೀಲನಾಗಿದ್ದಕ್ಕಾಗಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತಾಡಿದ S.C. ಬಡ ವಿದ್ಯಾರ್ಥಿನಿ ಸೈನಿಕನ ಮಗಳಾದ ಭುವನೇಶ್ವರಿ ಕಟ್ಟಿಮನಿ ನಾನು 2022ರಲ್ಲಿ ಸರಕಾರಿ ಶಾಲೆ ಕಾರಜೋಳ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಿಂದ 99.84 ಅಂಕ ಪಡೆದು ರಾಜ್ಯಕ್ಕೆ 2 ನೇ ರ್‍ಯಾಂಕ್ ಗಳಿಸಿದರೂ ನನಗೆ ಸರಕಾರದಿಂದ ಮತ್ತು ಜಿಲ್ಲಾಡಳಿತದಿಂದ ಬಹುಮಾನವೂ ಇಲ್ಲ. ಸನ್ಮಾನವೂ ಇಲ್ಲ, ಯಾಕೆಂದರೆ ನಾನು ಎಸ್.ಸಿ. ವಿದ್ಯಾರ್ಥಿನಿ. ಆದರೆ ಈ ವರ್ಷ ನನ್ನಂತೆ ಮೇಲ್ವರ್ಗದ ಅಂಕಿತಾ…

Read More

ತಿಕೋಟಾ: ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದೇಶದಂತೆ ನಮ್ಮ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗಳ ಮೂಲಕ ಒಟ್ಟು ೦೭ ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ತಾಲೂಕಿನ ಸಿದ್ಧಾಪುರ (ಕೆ) ಗ್ರಾಮ ಪಂಚಾಯತಿ ವ್ಯಾಪ್ತಿಯ ಧನ್ನರ್ಗಿ ಗ್ರಾಮದಲ್ಲಿ ನಿರ್ಮಿಸಿದ ಅಮೃತ ಸರೋವರದಲ್ಲಿ ಜೂ.೬ರಂದು ಸುರಿದ ಭಾರಿ ಮಳೆಯಿಂದಾಗಿ ಅಮೃತ ಸರೋವರ ಮಳೆನೀರಿನಿಂದ ತುಂಬಿ, ಸುಂದರವಾಗಿ ಕಂಗೊಳಿಸುತ್ತಿದೆ. ಇದರಿಂದ ಈ ಭಾಗದ ಸಾವಿರಾರು ರೈತ್ತರಿಗೆ ಅನುಕೂಲವಾಗಲಿದ್ದು, ಗ್ರಾಪಂ ಸದಸ್ಯರು & ರೈತ್ತರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ ಎಂದು ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಹೇಳಿದರು.ಧನ್ನರ್ಗಿ ಗ್ರಾಮದಲ್ಲಿರುವ ಅಮೃತ ಸರೋವರ ಕೆರೆಗೆ ಇಂದು ತಿಕೋಟಾ ತಾಲೂಕು ಪಂಚಾಯತಿಯ ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ ಮತ್ತು ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು & ಸಿಬ್ಬಂದಿಗಳು ಉಪಸ್ಥಿತರಿದ್ದರು.ಈ…

Read More

ಇಂಡಿ: ಸಂಸದ ರಮೇಶ ಜಿಗಜಿಣಗಿ ಅವರ ಅಭಿವೃಧ್ಧಿ ಕಾರ್ಯಗಳಿಗೆ ಮೆಚ್ಚಿ ಜಿಲ್ಲೆಯ ಜನರು ಮತ್ತೆ ಜಿಗಜಿಣಗಿ ಅವರ ಕೈ ಹಿಡಿದಿದ್ದಾರೆ. ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃಧ್ಧಿ ಕಾರ್ಯ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.ಅವರು ಶುಕ್ರವಾರ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಲೋಕಸಬಾ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಗೆಲುವು ಸಾಧಿಸಿದ್ದ ಪ್ರಯುಕ್ತ ಹಮ್ಮಿಕೊಂಡ ವಿಜಯೋತ್ಸವ ಸಮಾರಂಭದಲ್ಲಿ ಸಿಹಿ ಹಂಚಿ ಮಾತನಾಡಿದರು.ಇಂಡಿ ಮತಕ್ಷೇತ್ರ ಸಂಸದ ಜಿಗಜಿಣಗಿ ಅವರ ತವರು ಕ್ಷೇತ್ರವಾಗಿದ್ದು ತವರಿನ ಜನ ರಮೇಶ ಜಿಗಜಿಣಗಿ ಅವರ ಕೈ ಹಿಡಿದು ಕಮಲ ಅರಳಿಸಿದ್ದಾರೆ. ಜಿಗಜಿಣಗಿ ಅವರು ಸಹ ಇಂಡಿ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಇಂಡಿ ಕ್ಷೇತ್ರದಲ್ಲಿಯೂ ಹೆಚ್ಚಿನ ಕೆಲಸ ಮಾಡಲಿ, ಅವರಿಗೆ ಕೇಂದ್ರದಲ್ಲಿ ಉನ್ನತ ಸ್ಥಾನಮಾನ ದೊರೆಯಲಿ ಎಂದು ಆಶಿಸುವುದಾಗಿ ತಿಳಿಸಿದರು.ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಮಾತನಾಡಿ,…

Read More

ಇಂಡಿ: ಶಹರ ಪೋಲಿಸ್ ‌ಠಾಣಾ ವ್ಯಾಪ್ತಿ ಹೆಚ್ಚಿಸಲು ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ‌‌ ಸಾಳೆಂಕೆ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳಿಗೆ ಮನವಿ ಮಾಡಿದರು.ಬುಧವಾರ ಶಹರ ಪೋಲಿಸ್ ಠಾಣಾದಲ್ಲಿ ಆಯೋಜಿಸಿದ್ದ ಬಕ್ರೀದ್ ಹಾಗೂ ಚೌಡಮ್ಮ‌ ಜಾತ್ರೆ ನಿಮಿತ್ಯ ಶಾಂತಿ ಸಭೆಯಲ್ಲಿ ಮಾತನಾಡಿದರು.ಪಟ್ಟಣದಿಂದ ಸುಮಾರು 10 ಕಿಮೀ ವ್ಯಾಪ್ತಿಯ ಬರುವ ಹಳ್ಳಿಗಳು ಶಹರ ಪೋಲಿಸ್ ಠಾಣೆಗೆ ಸೇರ್ಪಡೆಗೊಳಿಸಿ ಶಹರ ಪೋಲಿಸ್ ಠಾಣೆಗೆ ಮೆರಗು ತರಬೇಕು. ಈ ಹಿಂದೆ ಶಹರ್ ಮತ್ತು ಗ್ರಾಮೀಣ ಠಾಣೆ ಒಂದೇಯಾಗಿತ್ತು. ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಮತ್ತು ಆಡಳಿತದ ಹಿತದೃಷ್ಟಿಯಿಂದ ಗ್ರಾಮೀಣ ಮತ್ತು ಶಹರ ಠಾಣೆ‌ ಎಂದು ಇಬ್ಬಾಗ ಮಾಡಲಾಗಿದೆ. ಆದರೆ ಆಡಳಿತ ಹಿತ ದೃಷ್ಟಿಯಿಂದ‌ ಶಹರ್ ಠಾಣೆಗೆ ಇನ್ನೊಂದಿಷ್ಟು ಹಳ್ಳಿಗಳು ಸೇರ್ಪಡೆ ‌ಮಾಡುವುದರಿಂದ‌‌‌ ಒಳ್ಳೆಯದು ಆಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭೀಮನಗೌಡ ಪಾಟೀಲ, ಸತೀಶ ಕುಂಬಾರ, ಅಯೂಬ್ ನಾಟೀಕಾರ ಮಾತನಾಡಿ, ಪಟ್ಟಣ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ‌ಹಾಗಾಗಿ ಯಾವುದೆ ಕಾರಣಕ್ಕೂ ಕೆಟ್ಟ…

Read More

ಕೊಲ್ಹಾರ: ತಾಲೂಕು ಕೇಂದ್ರವಾಗಿ ಎಂಟು ವರ್ಷ ಗತಿಸುತ್ತಾ ಬಂದರೂ ಕೇಂದ್ರ ಸ್ಥಾನವಾದ ಕೊಲ್ಹಾರ ಪಟ್ಟಣದ ಹಾಗೂ ತಾಲೂಕು ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ರೈತಾಪಿ ವರ್ಗದವರು ವಿದ್ಯುತ್ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಭೇಟಿಯಾಗಬೇಕಾದರೆ ದೂರದ ನಿಡಗುಂದಿ ಬಸವನ ಬಾಗೇವಾಡಿ ವಿಜಯಪೂರ ನಗರದಲ್ಲಿರುವ ಕಚೇರಿಗೆ ಅಲೆದಾಡುವುದು ತಪ್ಪುತ್ತಿಲ್ಲ.ಪಟ್ಟಣದ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕವಾದ ಎಚ್.ಟಿ ಲೈನ್ ಮತ್ತು ಹದಿನೈದುನೂರು ಕಿ.ಮೀ ಉದ್ದದ ಎಚ್.ಟಿ ಲೈನ್‌ಗಳು ಹಾಯ್ದುಹೋಗಿದ್ದು ಅಂದಾಜು ೩೨ ಸಾವಿರ ಸ್ಥಾವರಗಳನ್ನು ಹೊಂದಿದ ಕೊಲ್ಹಾರ ತಾಲೂಕು ಕೆಂದ್ರದಿಂದ ಹುಬ್ಬಳ್ಳಿ ವಿದ್ಯುತ್ ನಿಗಮ ನಿಯಮಿತ ಕಂಪನಿಗೆ ಸುಮಾರು ೪ ಕೋಟಿ ರೂ.ಗಿಂತಲೂ ಪ್ರತಿ ತಿಂಗಳು ಅಧಿಕ ಆದಾಯ ಕೊಡುವ ಕೊಲ್ಹಾರ ಪಟ್ಟಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸೆಕ್ಷನ್ ಆಫಿಸ್‌ನ ಕಾರ್ಯ ರೈತರಿಗೆ ವರದಾನವಾಗದೇ ವಿದ್ಯುತ್ ಗ್ರಾಹಕರಿಗೆ ಸರಿಯಾದ ಸೌಲಭ್ಯ ಕೊಡುವಲ್ಲಿ ವಿಫಲವಾಗುವದನ್ನು ತಪ್ಪಿಸಲು ತಾಲೂಕು ಕೇಂದ್ರದಲ್ಲಿರುವ ಕಾರ್ಯ ಮತ್ತು ಪಾಲನಾ ಕಾರ್ಯನಿರ್ವಾಹಕ ಅಧಿಕಾರಿಗಳ ಉನ್ನತ ದರ್ಜೆಯ ಉಪವಿಭಾಗ ಕಚೇರಿ ಅತೀ ಅವಶ್ಯಕವಾಗಿದೆ.ಒಂದು ಲಕ್ಷ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಐಷಾರಾಮಿ ಹಾಸಿಗೆಯ ಮೇಲೆ ಮಲಗಬಹುದು.. ನಿದ್ದೆಯನ್ನು ಕೊಳ್ಳಲು ಸಾಧ್ಯವಿಲ್ಲ,ಮೃಷ್ಟಾನ್ನ ಭೋಜನ ತಟ್ಟೆಯಲ್ಲಿಹುದು.. ಆದರೆ ಹಸಿವಿಲ್ಲ,ಜಗತ್ತಿನ ಎಲ್ಲ ಸುಖಗಳು ಅಂಗೈಯಲ್ಲಿ ಸಿಗಬಹುದು.. ಅನುಭವಿಸಲು ಆರೋಗ್ಯವಿಲ್ಲಹಾಗಾದರೆ ಓರ್ವ ವ್ಯಕ್ತಿಗೆ ಬದುಕಿನಲ್ಲಿ ಮುಖ್ಯವಾಗಿ ಬೇಕಾದದ್ದು ಯಾವುದು?? ಎಲ್ಲವೂ ಇದ್ದು ಏನೂ ಇಲ್ಲದಂತಹ ಮಾನಸಿಕ ವಿಷಣ್ಣತೆ ಮನುಷ್ಯನನ್ನು ಕಾಡುವುದಾದರೂ ಏಕೆ?ಇದಕ್ಕೆ ಪರಿಹಾರಗಳು ಉಂಟೆ?ಖಂಡಿತವಾಗಿಯೂ.. ಒಂದು ಸೂಕ್ಷ್ಮ ಜೀವಕೋಶದಿಂದ ಉದಿಸಿದ,ಒಂದು ಹತ್ತಾಗಿ ಹತ್ತು ಇಪ್ಪತ್ತಾಗಿ ಲಕ್ಷಾಂತರ ಜೀವಕೋಶಗಳ ಹೊಂದಿರುವ ಮನುಷ್ಯನ ನಿಜವಾದ ಅವಶ್ಯಕತೆಗಳು ಬಹಳವೇ ಕಡಿಮೆ. ತಾನು ತನ್ನದು ತನಗಾಗಿ ಎಂದು ಆತ ವೈಯುಕ್ತಿಕ ಪರಿಧಿಯಲ್ಲಿ ಯೋಚಿಸಲಾರಂಭಿಸಿದರೆ ಈ ಭೂಮಿಯ ಮೇಲಿರುವ ಎಲ್ಲವೂ ಆತನ ಬೇಡಿಕೆಯ ಪರಿಧಿಯಲ್ಲಿ ಬರುತ್ತದೆ.ಮೂಲಭೂತವಾಗಿ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು.. ಒಂದೊಳ್ಳೆಯ ಆರೋಗ್ಯ, ಸೊಂಪಾದ ನಿದ್ರೆ, ಪೌಷ್ಟಿಕ ಆಹಾರ, ಪ್ರಕೃತಿಯೊಂದಿಗೆ ಒಡನಾಟ, ತನ್ನವರ ಪ್ರೀತಿ ವಿಶ್ವಾಸ, ಸಮಯ ಮತ್ತು ತನ್ನಿಚ್ಛೆಯಂತೆ ಬದುಕುವ ಸ್ವಾತಂತ್ರ್ಯ.. ಇವುಗಳಲ್ಲಿ ಕೆಲವನ್ನು ವೈಯುಕ್ತಿಕ ಸಾಧನೆಯ ಮೂಲಕ ಸಂಪಾದಿಸಿಕೊಂಡರೆ ಮತ್ತೆ ಕೆಲವು…

Read More