Author: editor.udayarashmi@gmail.com

ದೇವರಹಿಪ್ಪರಗಿ: ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಕೊಟ್ಟಿಗೆಯ ಗೋಡೆ ಕುಸಿದು ಎರಡು ಎಮ್ಮೆಕರುಗಳು ಸಾವಿಗೀಡಾದ ಘಟನೆ ಪಟ್ಟಣದಲ್ಲಿ ಜರುಗಿದೆ.ಪಟ್ಟಣದ ಬಸಪ್ಪ ಕೋಟಿನ್ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆ ಭಾನುವಾರ ರಾತ್ರಿ ಸುರಿದ ಮಳೆಗೆ ಕುಸಿದಿದ್ದು, ಗೋಡೆಯ ಹತ್ತಿರದಲ್ಲಿ ಕಟ್ಟಿದ ಅಂದಾಜು ೨೫ ಸಾವಿರ ಮೌಲ್ಯದ ಎರಡು ಎಮ್ಮೆ ಕರುಗಳು ಗೋಡೆಯಡಿ ಸಿಕ್ಕು ಸಾವಿಗೀಡಾಗಿವೆ. ಘಟನೆಯ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕಳೆದ ೨ ದಿನಗಳ ರಾತ್ರಿ ಸತತವಾಗಿ ಸುರಿದ ಮಳೆಯಿಂದ ಹಲವು ಮನೆ ಹಾಗೂ ಅಂಗಡಿ ಗೋಡೆಗಳ ಕುಸಿತದ ಪ್ರಕರಣಗಳು ಜರುಗಿವೆ. ಜೊತೆಗೆ ರೈತರ ಜಮೀನಿನ ಒಡ್ಡುಗಳು ಒಡೆದು ಎಲ್ಲೆಂದರಲ್ಲಿ ಕಂದಕಗಳು ನಿರ್ಮಾಣವಾಗಿವೆ.

Read More

ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯದಲ್ಲಿ ಜು. ೧೩ ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ದಲ್ಲಿ ರಾಜಿ ಸಂಧಾನಕ್ಕೆ ಸಿದ್ದರಿರುವವರು ರಾಜಿ ಸಂಧಾನ ಮಾಡಿಕೊಳ್ಳಬಹುದು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬ್ ಸುಲ್ತಾನ ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಸೋಮವಾರ ಸಂಜೆ ಲೋಕ ಅದಾಲತ್ ಕುರಿತು ಮಾಹಿತಿ ನೀಡಲು ವಿವಿಧ ಇಲಾಖೆಯ ಅಧಿಕಾರಿಗಳ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ರಾಜಿ ಸಂಧಾನದ ಮೂಲಕ ರಾಜಿಯಾಗುವಂತಹ ಎಲ್ಲ ರೀತಿಯ ಪ್ರಕರಣಗಳನ್ನು ಹಾಗೂ ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುತ್ತಿದ್ದು. ಕಕ್ಷಿದಾರರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಕ್ಷುಲ್ಲಕ ಪ್ರಕರಣ, ಎನ್ಐ ಆಕ್ಟ್, ಎಂವ್ಹಿಸಿ, ಇಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅಗತ್ಯವಾದ ನೆರವು ನೀಡಲು ತಾಲೂಕು ಕಾನೂನು ಸೇವಾ ಸಮಿತಿ ಸಿದ್ದವಿದೆ. ಅಗತ್ಯವಿರುವವರು ಉಚಿತವಾಗಿ ಕಾನೂನು ಸೇವೆ ಪಡೆದುಕೊಳ್ಳಬಹುದು ಎಂದರು.ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಮಾತನಾಡಿ, ಕಕ್ಷಿದಾರರು-ವಕೀಲರ ಒಪ್ಪಿಗೆ…

Read More

ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಈರಕಾರ ಮುತ್ಯಾ ದೇವಸ್ಥಾನದ ಈರಕಾರ ಮುತ್ಯಾರ ಜಡಿ ತೊಳೆಯುವ ಕಾರ್ಯಕ್ರಮ ಹಾಗೂ ಜಾತ್ರಾಮಹೋತ್ಸವ ಭಾನುವಾರ, ಸೋಮವಾರ ಎರಡು ದಿನಗಳ ಕಾಲ ಸಂಭ್ರಮ, ಸಡಗರದಿಂದ ಜರುಗಿತು.ಜಾತ್ರಾಮಹೋತ್ಸವದಂಗವಾಗಿ ಭಾನುವಾರ ಡೊಳ್ಳುವಾದ್ಯಗಳ ಮೇಳಗಳೊಂದಿಗೆ ಪಲ್ಲಕ್ಕಿಯು ಶಿವಪ್ಪ ಈರಕಾರ ಮುತ್ಯಾರ ದೇವರಮನಿಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೆರವಣಿಗೆ ಮೂಲಕ ಬಸವೇಶ್ವರರ ದೇವಸ್ಥಾನದ ಬಸವ ತೀರ್ಥ ಬಾವಿಗೆ ತೆರಳಿ ಗಂಗಸ್ಥಳ ಪೂಜೆ ನೆರವೇರಿಸಲಾಯಿತು. ನಂತರ ಮೂಲನಂದೀಶ್ವರ(ಬಸವೇಶ್ವರರ) ದೇವರ ದರ್ಶನ ಪಡೆದುಕೊಂಡ ನಂತರ ಪಲ್ಲಕ್ಕಿ ಉತ್ಸವ ಡೊಳ್ಳಿನ ವಾದ್ಯಮೇಳದೊಂದಿಗೆ ಬಸವೇಶ್ವರರ ಭಾವಚಿತ್ರದೊಂದಿಗೆ ಈರಕಾರ ಮುತ್ಯಾರ ದೇವಸ್ಥಾನಕ್ಕೆ ಸಂಜೆ ತಲುಪಿತು. ಭಾನುವಾರ ರಾತ್ರಿ ಇಡೀ ಸುಪ್ರಸಿದ್ದ ಡೊಳ್ಳಿನ ಹಾಡಕಿ ಕಾರ್ಯಕ್ರಮ ಜರುಗಿದವು.ಪಟ್ಟಣದ ಶಿವಪ್ಪ ಮುತ್ಯಾರ ದೇವರಮನಿಯಿಂದ ಸೋಮವಾರ ಸಂಪ್ರದಾಯದಂತೆ ಶಿವಾನಂದ ಈರಕಾರ ಮುತ್ಯಾರನ್ನು ಡೊಳ್ಳಿನ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಈರಕಾರ ಮುತ್ಯಾರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಶಿವಾನಂದ ಈರಕಾರ ಮುತ್ಯಾ ಅವರು ಈ ವರ್ಷದ ಮಳೆ-ಬೆಳೆ ಕುರಿತಾಗಿ ಹೇಳಿಕೆಗಳನ್ನು ನುಡಿದರು.ಶಿವಾನಂದ ಈರಕಾರ…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಲಕ್ಷ್ಮಣ ಕಲ್ಲಪ್ಪ ಹಡಪದ ಅವರು ದೆಹಲಿಯಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪಟ್ಟಣದ ಮಾರುತಿ ದೇವಸ್ಥಾನದಿಂದ ರಾಮೇಶ್ವರ ದೇವಸ್ಥಾನದವರೆಗೂ ದೀಡ್ ನಮಸ್ಕಾರ ಹಾಕಿ ತಮ್ಮ ದೀಡ್ ನಮಸ್ಕಾರ ಹರಕೆಯನ್ನು ಭಾನುವಾರ ರಾತ್ರಿ ತೀರಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ ಜಯ ಘೋಷ ಹಾಕಿ ಸಂಭ್ರಮಿಸಿದರು.ಲಕ್ಷ್ಮಣ ಹಡಪದ ಅವರನ್ನು ಮಾತನಾಡಿಸಿದಾಗ ಲೋಕಸಭಾ ಚುನಾವಣೆಯ ಫಲಿತಾಂಶ ಏರು-ಪೇರು ನಡೆಯುತ್ತಿರುವಾಗ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಲಿ ಎಂದು ದೇವರಲ್ಲಿ ದೀಡ್ ನಮಸ್ಕಾರ ಹಾಕುವದಾಗಿ ಹರಕೆ ಮಾಡಿಕೊಂಡೆ. ಈಗ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ನನ್ನ ಸಂಕಲ್ಪ ಈಡೇರಿದೆ. ಬಿಜೆಪಿ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಸೇರಿಕೊಂಡು ನನ್ನ ಹರಕೆ ತೀರಿಸಿದೆ ಎಂದರು.ಈ ಸಂದರ್ಭದಲ್ಲಿ ರೇವಣಸಿದ್ದ ಮಣ್ಣೂರ, ಹಣಮಂತ ಬದ್ನೂರ, ಮಾಳು ನಾಗರಾಳ, ಸಿದ್ರಾಯ ಕವಟೇಕರ, ಸುಭಾ ಲೇಸಪ್ಪಗೋಳ, ಪುಟ್ಟು ತೇಲಿ,…

Read More

ಫಸಲ ಭೀಮಾ ಯೋಜನೆಯಡಿ ನಷ್ಟಗೊಂಡ ರೈತರಿಗೆ ವಿಮಾ ಪರಿಹಾರಕ್ಕೆ ರೈತಸಂಘ ಆಗ್ರಹ ವಿಜಯಪುರ: ಜಿಲ್ಲೆಯಲ್ಲಿ ಅನೇಕ ರೈತರು ೨೦೨೩-೨೪ ನೇ ಸಾಲಿನ ಮುಂಗಾರು ಹಂಗಾಮಿನ ಫಸಲ ಭೀಮಾ ಯೋಜನೆಯನ್ನು ತುಂಬಿದ್ದು, ಅಂತವರಲ್ಲಿ ಅನೇಕ ರೈತರು ಬರಗಾಲದಿಂದ ಮಳೆ ಬಾರದೇ ನಷ್ಟ ಅನುಭವಿಸಿದ್ದಾರೆ, ವಿಮೆ ಹಣ ಬಾರದೇ ಚಿಂತೆಗಿಡಾದ ರೈತರು ಅಧಿಕಾರಿಗಳಿಗೆ ಕೇಳಿದರೆ ಮುಂಗಡ ವಿಮೆ ಹಣ ನೀಡಿದ್ದೇವೆ, ಉಳಿದ ಹಣ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಕೂಡಲೇ ವಿಮೆ ತುಂಬಿದ ಎಲ್ಲ ರೈತರಿಗೂ ಪರಿಹಾರ ನೀಡಬೇಕೆಂದು ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ, ಈ ವರ್ಷ ರಾಜ್ಯ ಸರಕಾರವೇ ಜಿಲ್ಲೆಯ ಎಲ್ಲಾ ೧೩ ತಾಲೂಕುಗಳು ಸಂಪೂರ್ಣ ಬರ ಎಂದು ಘೋಷಣೆ ಮಾಡಿರುತ್ತದೆ, ಆದರೆ ಫಸಲ ಭೀಮಾ ಯೋಜನೆ ಅಡಿಯಲ್ಲಿ ನಷ್ಟ ಅನುಭವಿಸಿಲ್ಲ ಎಂದು, ನಿಮಗೆ ಪರಿಹಾರ ಬರುವುದಿಲ್ಲ ಎಂದು ಅಧಿಕಾರಿಗಳು…

Read More

ವಿಜಯಪುರ: ನಿಜನುಡಿಗಳಿಂದ ಕಟುವಾಗಿ ಟೀಕಿಸಿ ಅಂಬಿಗೇರ ಚೌಡಯ್ಯ ಸಮಾಜವನ್ನು ತಿದ್ದುವರು.ನೇರ ನಿಭಿ೯ತ ನುಡಿಗಳಿಂದ ವಚನಗಳನ್ನು ರಚಿಸಿ ಅರಿವೇ ಗುರು ಎಂದು ಜಗತ್ತಿಗೆ ಸಾರಿದ ಅಂಬಿಗೇರ ಚೌಡಯ್ಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ, ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದತ್ತಿ ದಿವಂಗತ ಮಲ್ಲಪ್ಪ ಚಂದಪ್ಪ ಯಲಗೋಡ. ದತ್ತಿ ದಾನಿಗಳು ಡಾ: ರಾಮಕೃಷ್ಣ ಮಲ್ಲಪ್ಪ ಯಲಗೋಡಹಾಗು ದಿ ನೀಲಪ್ಪ ಬಸಪ್ಪ ಸೊಡ್ಡಿ ದತ್ತಿ. ದತ್ತಿ ದಾನಿಗಳು ರೇವಣಸಿದ್ದಪ್ಪ ನೀಲಪ್ಪ ಸೊಡ್ಡಿ ಇವರ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂಬಿಗ ಮಾತ್ರವಲ್ಲ ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯ ಉಳ್ಳವ ಅಂಬಿಗೇರ ಚೌಡಯ್ಯ ಎಂದರುಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ ವಿ ಎಮ್ ಬಾಗಾಯತ ಮಾತನಾಡಿ,ಜಗತ್ತಿನಲ್ಲಿರುವ ಎಲ್ಲ ಸಮುದಾಯದ ಕಾಯಕಗಳು ಪವಿತ್ರವೆಂದು ಸಾರಿ ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದರು.ಲಿಂಗ ಭೇದವಿಲ್ಲದೆ ಬದುಕಬೇಕು.…

Read More

ಬಸವನಬಾಗೇವಾಡಿ: ತಾಲೂಕಿನ ಗುಳಬಾಳ ಗ್ರಾಮದಲ್ಲಿ ಜೂನ್ ೮ ರಂದು ಮಹಾಂತೇಶ ಚಿದಾನಂದ ಬಿರಾದಾರ(೨೩) ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಆರೋಪಿತರನ್ನು ಬಸವನಬಾಗೇವಾಡಿ ಪೊಲೀಸ್ರು ಮಂಗಳವಾರ ಬಂಧಿಸಿದ್ದಾರೆ. ಕೊಲೆ ನಡೆದು ಎರಡು-ಮೂರು ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡು ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಬಸವನಬಾಗೇವಾಡಿ ಪೊಲೀಸ್ ಉಪಾಧೀಕ್ಷ ಬಲ್ಲಪ್ಪ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಬಸವನಬಾಗೇವಾಡಿ ಪಿಐ ವಿಜಯ ಮುರಗುಂಡಿ ಅವರ ತನಿಖಾ ತಂಡ ಕೊಲೆ ಮಾಡಿದ ಆರೋಪಿತರಾದ ಗುಳಬಾಳ ಗ್ರಾಮದ ವಿಶ್ವರಾಜ ಶಿವಶರಣಪ್ಪ ಮದ್ದರಕಿ(೩೪), ಶೇಖರಪ್ಪ ಭೀಮರಾಯ ನೆಲ್ಲಗಿ (೩೭) ಅವರನ್ನು ಬಂಧಿಸಿದೆ. ಅನೈತಿಕ ಸಂಬಂಧ ಕಾರಣದಿಂದಾಗಿ ಕೊಲೆ ಮಾಡಲಾಗಿದೆ.ತನಿಖಾ ತಂಡದಲ್ಲಿ ಪಿಐ ವಿಜಯ ಮುರಗುಂಡಿ, ಪಿಎಸ್ಐ ರವಿ ಪವಾರ, ಸಿಬ್ಬಂದಿಗಳಾದ ಎಂ.ಐ.ತಳವಾರ, ಎ.ಸಿ.ದಿಂಡಿ, ಎನ್.ಎನ್.ಗ್ಯಾಂಡರ್, ಎ.ಎನ್.ಬಿರಾದಾರ, ಬಿ.ಎ.ಯತ್ನಾಳ, ರಾಜು ಹರನಾಳ, ಪರಶುರಾಮ ಜಾಲವಾದಿ, ರಾಜು ಜಾಧವ, ಡಿ.ಎಲ್.ಪೂಜಾರಿ, ಆರ್.ಎಂ.ಕಳಸಗೊಂಡ, ವಿಜಯಕುಮಾರ ದುದಗಿ, ಬಿ.ಬಿ.ಶೇಬಗೊಂಡ, ಬಿ.ಬಿ.ಹೊಕ್ರಾಣಿ…

Read More

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ ೯೦ ನೇ ಜಾತ್ರಾಮಹೋತ್ಸವದಂಗವಾಗಿ ಜೂ. ೧೩ ಹಾಗೂ ೧೪ ರಂದು ಎರಡು ದಿನಗಳ ಕಾಲ ಇಂಗಳೇಶ್ವರ ಉತ್ಸವ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಜೂ.೧೩ ರಂದು ಸಂಜೆ ೪ ಗಂಟೆಗೆ ಬಸವೇಶ್ವರ ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶಿವಯೋಗಿಗಳವರ ಅಭಿನಂದನಾ ಗ್ರಂಥ ನಿರಂಜನ ಜ್ಯೋತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ನಿಡಸೋಸಿ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಬಸವಲಿಂಗ ಸ್ವಾಮೀಜಿ, ಇಲಕಲ್ಲದ ಗುರುಮಹಾಂತ ಸ್ವಾಮೀಜಿ, ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಈ ಕಾರ್ಯಕ್ರಮಕ್ಕೆ ಸಚಿವ ಎಂ.ಬಿ.ಪಾಟೀಲ, ಸೋಪು ಮತ್ತು ಡಿಟರ್ಜಂಟ ಲಿಮಿಟೆಡ್ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ, ಮಾಜಿ ಸಚಿವ ಎಸ್.ಆರ್.ಪಾಟೀಲ, ವನ್ಯಜೀವಿ ಸಂರಕ್ಷಕ ಡಾ.ಎಂ.ಆರ್.ದೇಸಾಯಿ, ಮಾಜಿ ಶಾಸಕ ಎ.ಪಾಪರೆಡ್ಡಿ, ಶಸಾಕ ಜಿ.ಟಿ.ಪಾಟೀಲ,ಅದೃಶಪ್ಪ ವಾಸಣ್ಣ ದೇಸಾಯಿ, ಡಾ.ಸೋಮನಾಥ ಯಾಳವಾರ, ಈರಣ್ಣ ಬೆಕಿನಾಳ, ವ್ಹಿ.ಡಿ.ಐಹೊಳ್ಳಿ, ಅಶೋಕಗೌಡ ಪಾಟೀಲ, ಜಂಬುನಾಥ ಕಂಚ್ಯಾಣಿ, ಸಿದ್ದಬಸವ…

Read More

ದೇವರಹಿಪ್ಪರಗಿ: ಇಂಗಳಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆದು ಮಾರಾಟಗಾರರ ಮೇಲೆ ಕಾನೂನು ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಹಾಗೂ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ)ಯ ಕಾರ್ಯಕರ್ತರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ಇಂಗಳಗಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ ಮಾತನಾಡಿ, ಅಕ್ರಮ ಮದ್ಯ ಸುಮಾರು ವರ್ಷಗಳಿಂದ ಗ್ರಾಮದ ಮನೆ, ಕಿರಾಣಿ ಅಂಗಡಿ, ೧೦ರಿಂದ ೧೨ ಪಾನ್ ಶಾಪ್‌ಗಳಲ್ಲಿ ನಿರ್ಭಯವಾಗಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಂದಗಿ ತಾಲ್ಲೂಕು ಅಬಕಾರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಾರಾಟಗಾರರು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪ್ರತಿತಿಂಗಳ ಹಣ ನೀಡುತ್ತೇವೆ ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲು ಹಾಕುತ್ತಾರೆ. ಸಾಕಷ್ಟು ಬಾರಿ ಮನವಿ…

Read More

ದೇವರಹಿಪ್ಪರಗಿ: ಪಟ್ಟಣದ ಸಂತೆಯನ್ನು ಈಗ ಜರುಗುವ ಪ್ರದೇಶದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಜರುಗಿದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮೇನ್ ಬಜಾರ್ ವ್ಯಾಪಾರಸ್ಥರು ಆಗಮಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಮಾತನಾಡಿ, ಪಟ್ಟಣದ ಮೇನ್ ಬಜಾರ ವಾಹನಗಳ ದಟ್ಟಣೆಯಿಂದ ತುಂಬಿದೆ. ಸೋಮವಾರ ಎಲ್ಲೇಂದರಲ್ಲಿ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಸಂತೆಯನ್ನು ಬೇರೆ ಪ್ರದೇಶಕ್ಕೆ ವರ್ಗಾಯಿಸಿ ಸುಗಮ ಸಂತೆ ಜರುಗಲು ಅವಕಾಶ ಮಾಡಿಕೊಡಬೇಕು ಎಂಬ ಕಾರಣದಿಂದ ಈ ವಿಷಯ ಚರ್ಚಿಸಲಾಗುತ್ತಿದೆ ಎಂದರು.ವ್ಯಾಪಾರಸ್ಥರ ಪರವಾಗಿ ಕಾಶೀನಾಥ ಕೋರಿ, ಅಜೀಜ್ ಯಲಗಾರ ಮಾತನಾಡಿ, ಸುಮಾರು ೭೦-೮೦ ವರ್ಷಗಳಿಂದ ಇಲ್ಲಿ ಸಂತೆ ಜರುಗುತ್ತಿದೆ. ಇದು ಪಟ್ಟಣದ ಕೇಂದ್ರಸ್ಥಳ. ಇದರಿಂದ ಮಹಿಳೆಯರಿಗೂ ಅನುಕೂಲವಾಗಿದೆ. ನೀವು ಬೇರೊಂದು ಕಡೆ ಬೇರೆ ದಿನ ಸಂತೆ ನಡೆಸಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಹಿಂದಿನಂತೆ ಸೋಮವಾರ ಜರುಗುವ ಸಂತೆ ಇಲ್ಲಿಯೇ ನಡೆಯಲಿ ಎಂದು…

Read More