Subscribe to Updates
Get the latest creative news from FooBar about art, design and business.
Author: editor.udayarashmi@gmail.com
“ವೀಣಾಂತರಂಗ” – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ . ಬಹುಶಃ ಇತ್ತೀಚೆಗೆ ಜಗತ್ತಿನಾದ್ಯಂತ ಅತ್ಯಂತ ದುರ್ಬಳಕೆಯಾಗುತ್ತಿರುವ ವೇದಿಕೆ ಎಂದರೆ ಅದು ಸಾಮಾಜಿಕ ಜಾಲತಾಣಗಳು. ವಿವಿಧ ಸಾಮಾಜಿಕ ತಾಣಗಳಲ್ಲಿ ಕೆಲವರ ಸ್ಟೇಟಸ್ ಗಳನ್ನು, ಸ್ಟೋರಿಗಳನ್ನು ನೋಡಿದರೆ ಸಾಕು ಅವರ ಮನಸ್ಥಿತಿಯ ಅರಿವಾಗುತ್ತದೆ.. ಎಷ್ಟೋ ಬಾರಿ ಜನರು ತಮ್ಮ ಮನಸ್ಸಿನ ಕಹಿಯನ್ನು, ದ್ವೇಷ ಅಸೂಯೆಗಳನ್ನು ಹೊರಹಾಕಲು ಸ್ಟೇಟಸ್ಗಳ ಬಳಸುತ್ತಾರೆ. ರಾಜಕೀಯ ಪಕ್ಷಗಳ ನಾಯಕರು ಆಡಿದ ಪರ ವಿರೋಧಿ ಮಾತುಗಳ ಮೇಲೆ ದೇಶದ ಪ್ರತಿ ಹಳ್ಳಿ, ಪಟ್ಟಣ, ಶಹರಗಳ ಗಲ್ಲಿ ಗಲ್ಲಿಗಳಲ್ಲಿ ಅಸಹನೆಯ ದ್ವೇಷದ ಹೊಗೆ ಕಾರುವ ಸಂದೇಶಗಳು, ವಿಡಿಯೋಗಳು ಹರಿದಾಡುತ್ತವೆ. ಕೆಲವೊಮ್ಮೆ ತಮಗೆ ಬೇಕಾದಂತೆ ವಿಡಿಯೋಗಳನ್ನು, ಸಂದೇಶಗಳನ್ನು ವಿಕೃತವಾಗಿ ತಿರುಚಲಾಗುತ್ತದೆ. ಹಲವು ಬಾರಿ ಹೆಣ್ಣು ಮಕ್ಕಳ ಫೋಟೋಗಳನ್ನು ಇಂದು ಲಭ್ಯವಿರುವ ಹಲವಾರು ಆಪ್ ಗಳ ಸಹಾಯದಿಂದ ಮಾರ್ಪಡಿಸಿ ವಿಕೃತ ಕಾರ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಮತ್ತೆ ಕೆಲವೊಮ್ಮೆ ಕೆಲವರು ಮಾತನಾಡಿದ ಮಾತುಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಬೇರೆಯವರಿಗೆ ತೋರಿಸಿ ಅವಹೇಳನ ಮಾಡಲಾಗುತ್ತದೆ.…
ಕಲಕೇರಿ: ಸಮೀಪದ ಬಿ.ಬಿ.ಇಂಗಳಗಿಯ ಲಾಲಸಾಬ ದಸ್ತಗೀರಸಾಬ ವಠಾರ (೫೦ ವರ್ಷ) ಇವರು ಮಳೆ ಬಾರದಿದ್ದ ಕಾರಣ ಈ ವರ್ಷವೂ ಮತ್ತೆ ಸಾಲ ಹೆಚ್ಚಾಗುತ್ತದೆ ಎಂದು ತಮ್ಮ ಸ್ವಂತ ಮನೆಯಲ್ಲಿಯೇ ನೇಣಿಗೆ ಶರಣಾಗಿದ ಘಟನೆ ಗುರುವಾರ ನಡೆದಿದೆ.ಇವರು KVGB ಕೊಂಡಗೂಳಿ ಬ್ಯಾಂಕ್ ನಲ್ಲಿ 6 ಲಕ್ಷ ಮತ್ತು ತನ್ನ 7:17 ಗುಂಟೆ ಜಮೀನನ್ನು ಇಸಾರ ನೊಂದು ಮಾಡಿ ರೂ.10 ಲಕ್ಷ ಸೇರಿದಂತೆ ಒಟ್ಟು ರೂ.16 ಲಕ್ಷಕಿಂತ ಹೆಚ್ಚು ಸಾಲ ಮಾಡಿದ್ದು, ತೀರಿಸದಾಗದ ಮನಸ್ಸಿನಿಂದ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.ಈ ಕುರಿತು ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳ: ಅಸೂಯೆ ಪಡದ ವೃತ್ತಿ ಯಾವುದಾದರೂ ಇದ್ರೆ ಅದು ಶಿಕ್ಷಕ ವೃತ್ತಿ ಮಾತ್ರ ಎಂದು ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸೇವಾ ನಿವೃತ್ತರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತದ ಹಿಂದೂಗಳಲ್ಲಿ ಸೇವೆ ಹುಟ್ಟಿನಿಂದಲೇ ಬರುತ್ತದೆ. ಅದಕ್ಕೊಂದು ನಿದರ್ಶನವೆಂದರೆ ಹಿಂದೂ ಸೇವಾ ಪ್ರತಿಷ್ಠಾನ ಪ್ರಥಮ ನಿರ್ದೇಶಕರಾದ ದಿ.ಅಜೀತ ಕುಮಾರವರ ಕರೆಗೆ ಓಗೊಟ್ಟು ಬಂದ ಲಕ್ಷಾಂತರ ಯುವಕ ಯುವತಿಯರು ನಿಸ್ವಾರ್ಥ ಸೇವೆಯಲ್ಲಿ ಈಗಲೂ ತೊಡಗಿಕೊಂಡಿದ್ದಾರೆ. ಅಂತಹ ಸಾಲಿನಲ್ಲಿ ಉತ್ತರ ಕನ್ನಡದಿಂದ ಉತ್ತರ ಕರ್ನಾಟಕಕ್ಕೆ ಬಂದು ಇಲ್ಲಿಯ ವಾತಾವರಣ, ಆಹಾರ, ವಿಚಾರಗಳಿಗೆ ಹೊಂದಿಕೊಂಡು ೪ ದಶಕಗಳ ಸೇವೆ ಸಲ್ಲಿಸಿರುವ ಲೀಲಾ ಭಟ್ಟ ಮತ್ತು ಶಾಂತಾ ಭಟ್ಟ ಮಾತಾಜಿಯವರ ಸೇವೆ ಗಮನಾರ್ಹವಾಗಿದೆ ಎಂದರು.ಶಾಲೆಯ ಹಿರಿಯ ವಿದ್ಯಾರ್ಥಿ ಉದಯಸಿಂಗ ರಾಯಚೂರ, ಪ್ರಸನ್ನ ಇಲ್ಲೂರ, ಸಿದ್ದರಾಜ ಹೋಳಿ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ಅಭಿನಂದಿತರಾದ ಲೀಲಾ ಭಟ್ಟ, ಶಾಂತಾ ಭಟ್ಟ, ಜಿ.ಜೆ.ಪಾದಗಟ್ಟಿ, ಪ್ರಭು ನಾಗಠಾಣ…
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ | ಪತ್ರಕರ್ತರಿಗೆ ಸನ್ಮಾನ ಸಿಂದಗಿ: ಇಡೀ ಜಗತ್ತಿನಲ್ಲಿ ಪತ್ರಿಕಾ ರಂಗ ವಿಶಿಷ್ಠಪೂರ್ಣ ಸ್ಥಾನವನ್ನು ಪಡೆದುಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗದ ಪಾತ್ರ ಅಪಾರವಾಗಿದೆ ಎಂದು ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಹೇಳಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ಪತ್ರಿಕೆಗಳು ಪತ್ರಿಕಾ ಧರ್ಮ ಪಾಲಿಸುವುದರ ಜೊತೆಗೆ ನ್ಯಾಯ, ನಿಷ್ಠುರವಾಗಿ ಸಮಾಜದಲ್ಲಿನ ಸತ್ಯಾಂಶದ ವರದಿಗಳನ್ನು ಪ್ರಕಟಣೆ ಮಾಡುತ್ತಾ ನೊಂದವರ ಧ್ವನಿಯಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಹಿರಿಯ ಪರ್ತಕರ್ತರಾದ ಟಿ.ಕೆ.ಮಲಗೊಂಡ, ಬೆನಕರಾಜ ಜೋಗುರ, ರಮೇಶ ಪೂಜಾರ, ನಾಗೇಶ ತಳವಾರ ಮಾತನಾಡಿ, ಪರ್ತಕರ್ತರು ಯಾವುದೇ ಬೆದರಿಕೆಗಳಿಗೆ ಹೆದರದೆ ನಿಷ್ಠುರವಾಗಿ ಸುದ್ದಿಗಳನ್ನು ಮಾಡಬೇಕು. ಯಾರಿಗೂ ಮರ್ಜಿ ಕಾಯಬಾರದು. ಇಂದಿನ ಜನಾಂಗಕ್ಕೆ ಓಂ ಶಾಂತಿ ತಾಣ ಅಧ್ಯಾತ್ಮದ ಒಲವನ್ನು ಮೂಡಿಸಿ ಅವರನ್ನು ಸುಸಂಸ್ಕೃತವಂತರನ್ನಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇಂತಹ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯವು…
ಸಿಂದಗಿ: ಶಾಸಕರ ಅನುದಾನವನ್ನು ಸರಿಯಾಗಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಎಲ್ಲ ಅಧಿಕಾರಿಗಳು ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಒಂದು ವೇಳೆ ನಿಮಗಾಗದೇ ಹೋದ ಪಕ್ಷದಲ್ಲಿ ನನ್ನ ಗಮನಕ್ಕೆ ತೆಗೆದುಕೊಂಡು ಬರಬೇಕು ಎಂದು ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸರ್ಕಾರದ ಪ್ರತಿ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಮಾಡುವ ಮೂಲಕ ಕ್ಷೇತ್ರ ಅಭಿವೃದ್ಧಿಪಡಿಸುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಬೇಕು. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು.ಆರ್ಡಬ್ಲೂಎಸ್ ಇಲಾಖೆ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯ ಜೆಜೆಎಮ್ ಕಾಮಗಾರಿ ಒಟ್ಟು೮೬ ಇದ್ದು, ಇದರಲ್ಲಿ ಎಡಿಎಂಯಿಂದ ಅನುಮೋದನೆಯಾಗಿದೆ. ೩೮ ಪ್ರಗತಿ ಹಂತದಲ್ಲಿ…
ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ದಿನೇ ದಿನೇ ಒಳಹರಿವು ಹೆಚ್ಚುತ್ತಿದ್ದು, ಇದರಿಂದ ಜಲಾಶಯದ ಮಟ್ಟ ಕ್ರಮೇಣ ಏರಿಕೆಯಾಗುತ್ತಿದೆ.ಗುರುವಾರ ಜಲಾಶಯಕ್ಕೆ ೩೪,೫೮೪ ಕ್ಯುಸೆಕ್ ನೀರು ಹರಿದು ಬಂದಿದೆ. ಮಹಾರಾಷ್ಟçದಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ಅಲ್ಲಿಂದ ೫೦ ಸಾವಿರ ಕ್ಯುಸೆಕ್ ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮುಂದಿನ ಒಂದೆರೆಡು ದಿನಗಳ ನಂತರ ಜಲಾಶಯದ ಮಟ್ಟ ಇನ್ನಷ್ಟು ಹೆಚ್ಚಲಿದೆ.ಆಲಮಟ್ಟಿ ಸಮುದ್ರ ಮಟ್ಟದಿಂದ ೪೮೮.೯೪೮ಮೀ.ಎತ್ತರದಲ್ಲಿದೆ ಆಣೆಕಟ್ಟೆಯ ಉದ್ದ ೧೫೬೪.೮೩ಮೀ.ಹೊಂದಿ ೫೧೯.೬ಮೀಟರುಗಳವರೆಗೆ (೧೨೩.೦೮೧ಟಿಎಮ್ಸಿ)ಅಡಿ ಗರಿಷ್ಟ ನೀರು ಸಂಗ್ರಹ ಮಾಡುವ ಸಾಮಥ್ರ್ಯ ಹೊಂದಿದೆ.ನೀರಿನ ಸಂಗ್ರಹ ಮಾಹಿತಿ: ೫೧೯.೬೦ ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಗುರುವಾರ ೫೧೨.೫೪ ಮೀ ವರೆಗೆ ನೀರು ಇತ್ತು.೧೨೩.೦೮೧ಟಿಎಂಸಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ ೨೬.೭೪೨ ಟಿಎಮ್ಸಿ ಅಡಿ ನೀರಿದೆ. ಅದರಲ್ಲಿ ಬಳಕೆಗೆ ಯೋಗ್ಯ ೩ ಟಿಎಮ್ಸಿ ನೀರಿದೆ. ಜಲಾಶಯಕ್ಕೆ ೩೪,೫೮೪ ಕ್ಯುಸೆಕ್ ಒಳಹರಿವು ಇದೆ. ಜಲಾಶಯದಿಂದ ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ೫೦ ಕ್ಯುಸೆಕ್ ಮತ್ತು ೩೮೦ ಕ್ಯುಸೆಕ್ ನೀರು ಕುಡಿಯುವ ನೀರು. ಒಟ್ಟು ಹೊರಹರಿವು ೪೩೦…
ನಿಡಗುಂದಿ: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಗುರುವಾರ ಜರುಗಿತು.ಅಧ್ಯಕ್ಷರಾಗಿ ಎಸ್.ಎಸ್. ಗಲಗಲಿ, ಕಾರ್ಯದರ್ಶಿಯಾಗಿ ಬಿ.ಎಂ. ಬಳಬಟ್ಟಿ, ಖಜಾಂಚಿಯಾಗಿ ವಿ.ಎಸ್. ಕುಲಕರ್ಣಿ ನೇಮಕಗೊಂಡಿದ್ದಾರೆ.ಸದಸ್ಯರ ಹೆಸರುಗಳು: ಜಿ.ಎಂ.ಹಿರೇಮಠ, ಎಸ್.ಎಚ್.ನಾಗಣಿ, ಆರ್.ಎಸ್.ವಡ್ಡರ, ಎಂ.ಜಿ.ದಾನಪ್ಪನವರ, ಆರ್.ಕೆ.ಪವಾರ, ಎಚ್.ಎಚ್.ಬೀಳಗಿ, ಬಿ.ಎಸ್.ಇಬ್ರಾಹಿಂಪುರ, ಎ.ಬಿ.ಚಲವಾಗಿ ಎಲ್.ಜಿ.ಚಲವಾಗಿ, ಎಂ.ಬಿ.ನಿಗರಿ, ಎನ್.ಡಿ.ತೋಳಮಟ್ಟಿ, ಎಸ್.ವಾಯ್.ಗೊಳಸಂಗಿ ಇತರರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐಗೆ ಹಸ್ತಾಂತರ ಮಾಡಿರಲಿಲ್ಲವೆಂದ ಸಿಎಂ | ರಾಜೀನಾಮೆ ಬೇಡಿಕೆಗೆ ಸಿದ್ದರಾಮಯ್ಯ ತಿರಸ್ಕಾರ ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ನಿವೇಶನ ಹಂಚಿಕೆ ಹಗರಣ ಮತ್ತು ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ನಾಯಕರ ಬೇಡಿಕೆಯನ್ನು ಸಿದ್ದರಾಮಯ್ಯ ಅವರು ಬುಧವಾರ ತಿರಸ್ಕರಿಸಿದ್ದಾರೆ.ಮೈಸೂರಿನ ಮುಡಾ ಅವ್ಯವಹಾರವನ್ನು ಖಂಡಿಸಿ ಬುಧವಾರ ಬಿಜೆಪಿ ನಾಯಕರು ನಡೆಸಿದ ಪ್ರತಿಭಟನೆ ಕುರಿತು ಮಾತನಾಡಿದ ಅವರು, ತನಿಖೆ ಮುಗಿದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ಹಂಚಿಕೆಯಾದ ನಿವೇಶನಗಳನ್ನು ಅಮಾನತ್ತಿನಲ್ಲಿ ಇಟ್ಟಿರುವುದರಿಂದ ಸರ್ಕಾರಕ್ಕೆ ಸದ್ಯ ಯಾವ ನಷ್ಟವೂ ಆಗಿಲ್ಲ. ಹಿಂದೆ ನಿವೇಶನ ಹಂಚಿದವರು ಬಿಜೆಪಿಯವರೇ ಆಗಿರುವುದರಿಂದ ಈಗವರು ನನ್ನ ರಾಜೀನಾಮೆ ಕೇಳುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಿ, ಸಿಬಿಐ ಗೆ ಹಸ್ತಾಂತರಿಸಲು ಬಿಜೆಪಿ ಪಕ್ಷ ಒತ್ತಾಯಿಸುತ್ತಿದೆ. ಹಿಂದೆ ಅವರೇ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು?…
ಜಿಲ್ಲಾ ಮಟ್ಟದ ಸಮನ್ವಯ ಸಮಿತಿ & ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಬಾಲ್ಯ ವಿವಾಹ ತಡೆಗಟ್ಟಲು ಶಿಕ್ಷಣ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದು, ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಿರಂತರ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಬಾಲ್ಯವಿವಾಹದ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ತಡೆಗಟ್ಟಲು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನಾ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಮಟ್ಟದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಶಿಕ್ಷಕರು, ಆಶಾ ಕಾರ್ಯಕತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಬಹುಮುಖ್ಯವಾಗಿದೆ. ಬಾಲ್ಯ ವಿವಾಹ ತಡೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿಸಿದ ಇಲಾಖೆಗಳು…
