ಸಿಂದಗಿ: ಸನಾತನ ಹಿಂದೂ ಧರ್ಮದ ಅನುಯಾಯಿಗಳು ಶ್ರೀರಾಮ ಸೇವೆ ಮಾಡುತ್ತಲೇ ಇರಬೇಕು ಎಂದು ಭೀಮಾಶಂಕರ ಶ್ರೀಮಠದ ದತ್ತಪಯ್ಯ ಮಹಾರಾಜರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಅಕ್ಷತಾ ಕಳಸ ವಿತರಣಾ ಶ್ರೀರಾಮ ರಥದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿಂದಗಿ ತುಂಬದ ಬಿಂದಗಿ ಎಂಬಂತೆ ಹಿರಿಯರಿಂದ ಒಳ್ಳೆಯ ಸಂಸ್ಕಾರ ಪಡೆದುಕೊಂಡು ಬಂದಿದ್ದಾರೆ. ನಾವು ನಮ್ಮ ಬೆಳವಣಿಗೆಗಾಗಿ ಸಂಘಟಿತರಾಗಬೇಕು ಎಂದರು.
ಈ ವೇಳೆ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮಂತ್ರಾಕ್ಷತೆಯನ್ನೇ ಕಳುಹಿಸಿದ ಉದ್ದೇಶ ಏನೆಂದರೆ ಹೂವು ಕಳಿಸಿದರೆ ಬಾಡಿ ಹೋಗುತ್ತೆ, ಆದರೆ ಅಕ್ಷತೆ ಸರ್ವಕಾಲಕ್ಕೂ ಬಾಡಲೂ ಸಾಧ್ಯವಿಲ್ಲ ಅದು ಶ್ರೇಷ್ಠವಾದ ಮಂತ್ರಾಕ್ಷತೆಯಾಗಿದೆ ಎಂಬ ಕಾರಣಕ್ಕೆ ಕಳುಹಿಸಿದ್ದಾರೆ. ಜಾತಿ ಮತ ಪಂಥ ಬೇಧ ಭಾವವಿಲ್ಲದೆ ನಾವೆಲ್ಲರೂ ಭಾರತೀಯರು ಎಂದು ಜೀವನ ಸಾಗಿಸೋಣ. ಒಂದಾಗಿರುವ ಭಾವ ನಮ್ಮಲ್ಲಿ ಬೆಳೆಯಲಿ. ಒಂದೇ ಮಾತರಂ ಎಂಬ ಭಾವವನ್ನು ಎಲ್ಲರಲ್ಲಿಯೂ ಮೂಡಿಸೋಣ. ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯ ನಾವು ನೀವೆಲ್ಲ ಮಾಡಬೇಕಾಗಿದೆ ಎಂದರು.
ಈ ವೇಳೆ ಬ್ಯಾಡಗಿಹಾಳದ ಶ್ರೀಗಳು, ಚವ್ಹಾಣ, ಶ್ರೀಮಂತ ದುದ್ದಗಿ ಮಾತನಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಹನುಮಾನ ದೇವಸ್ಥಾನದಿಂದ ತೊಂಟದ ಸಿದ್ದಲಿಂಗ ಶ್ರೀಗಳ ರಸ್ತೆ ಮಾರ್ಗವಾಗಿ, ಸ್ವಾಮಿ ವಿವೇಕಾನಂದರ ವೃತ್ತದ ಮೂಲಕ ಸಂಗಮೇಶ್ವರ ದೇವಸ್ಥಾನದವರೆಗೆ ಶೋಭಾ ಯಾತ್ರೆ ವಿಜೃಂಭಣೆಯಿಂದ ಶ್ರೀರಾಮನ ಜಯಘೋಷಗಳೊಂದಿಗೆ ಮೆರವಣಿಗೆ ಜರುಗಿತು.
ಈ ವೇಳೆ ಶರಣಗೌಡ, ಜಿಲ್ಲಾ ಸಹಕಾರ್ಯದರ್ಶಿ ಶೇಖರಗೌಡ ಹರನಾಳ, ಮಾಜಿ ಶಾಸಕ ರಮೇಶ ಭೂಸನೂರ, ಅಶೋಕ ಅಲ್ಲಾಪುರ, ಶ್ರೀಮಂತ ದುದ್ದಗಿ, ಸಾಯಬಣ್ಣ ದೇವರಮನಿ, ಮಲ್ಲು ದೇಶಟ್ಟಿ, ಅಶೋಕ ನೇಗಿನಾಳ, ಮಹಾದೇವಿ ಹಿರೇಮಠ, ಶೈಲಜಾ ಸ್ಥಾವರಮಠ, ಬೋರಮ್ಮ ಕರ್ಪೂರಮಠ, ಸುನಿತಾ, ಬಸನಗೌಡ ಪಾಟೀಲ, ಭಾಗೇಶ ಹೂಗಾರ, ಶ್ರೀಶೈಲಾಗೌಡ ಬಿರಾದಾರ ಮಾಗಣಗೇರಿ, ಎಸ್. ಆರ್ ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ರಾಜೇಂದ್ರ ರಾಠೋಡ, ಮಲ್ಲಿಕಾರ್ಜುನ ರಾಂಪೂರಮಠ ಸೇರಿದಂತೆ ಶೋಭಾ ಯಾತ್ರೆಯಲ್ಲಿ ತಾಲೂಕಿನ ಎಲ್ಲ ಹಿಂದೂ ಬಾಂಧವರು ಹಾಗೂ ಶ್ರೀರಾಮನ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

