ಮುದ್ದೇಬಿಹಾಳ: ಭಗವದ್ಗೀತೆ ರತ್ನಗರ್ಭವಾಗಿದೆ. ಭೂಮಿಯ ಆಳದಲ್ಲಿ ಯಾವೆಲ್ಲ ರೀತಿಯ ವಸ್ತುಗಳು ಹಂಚಿಕೆಯಾಗಿವೆಯೋ ಹಾಗೆ ಭಗವದ್ಗೀತೆ ವಿಸ್ತಾರವಾಗಿ ಮಹಾಸಾಗರೋಪಾದಿಯಲ್ಲಿ ವ್ಯಾಪಿಸಿದೆ ಎಂದು ಯೋಗ ಶಿಕ್ಷಕಿ ಪ್ರಭಾ ಹೆಬ್ಬಾರ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತ (ಸಗರಿ) ಕಾಲೇಜಿನಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ(ರಿ.) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಇವರಿಂದ ಆಯೋಜಿಸಿರುವ ಭಗವದ್ಗೀತಾ ಅಭಿಯಾನ-ಕರ್ನಾಟಕ-೨೦೨೩ರ ತಾಲೂಕು ಮಟ್ಟದ ಸಪ್ತಾಹದ ಅಂಗವಾಗಿ ನಡೆದ ೫ನೇ ದಿನದ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ “ಭಗವದ್ಗೀತೆ ಮತ್ತು ಜೀವನ ಸಮೃದ್ಧಿ” ಎನ್ನುವ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.
ಜನರ ಪ್ರತಿಯೊಂದು ಲೌಖಿಕ ಮತ್ತು ಆಲೌಖಿಕ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವಿದೆ. ಗೀತೆಯಲ್ಲಿ ನಮ್ಮ ಜೀವನವನ್ನು ಸಮೃದ್ಧ ಮತ್ತು ಸುಂದರಗೊಳಿಸುವ ಶಕ್ತಿ ಹೊಂದಿದೆ. ಅದನ್ನು ಬಳಕೆಮಾಡಿಕೊಳ್ಳಬೇಕು ಎಂದು ಹೇಳಿದರು.
ದಂತ ವೈದ್ಯೆ ಡಾ.ಆಶಾ ಮಾತನಾಡಿ ನ್ಯೂಟನ ನಿಯಮವಾದ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎನ್ನುವ ಹಾಗೆ ಭಗವದ್ಗೀತೆ ಕರ್ಮ ಸಿದ್ಧಾಂತ ಪ್ರಧಾನವಾಗಿದ್ದು ನಾವು ಮಾಡುವ ಕೆಲಸಗಳ ಆಧಾರದ ಮೇಲಿಂದ ಫಲಿತಾಂಶ ನೀಡುತ್ತವೆ ಎಂದರು.
ಸಂಸ್ಥೆಯ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿದರು.
ಈ ವೇಳೆ ನಿವೃತ್ತ ಆರೋಗ್ಯ ಇಲಾಖೆ ನೌಕರ ಜೆ.ವಾಯ್.ಹೊಕ್ರಾಣಿ, ನಿವೃತ್ತ ಕೆ.ಇ.ಬಿ ಅಧಿಕಾರಿ ಎ.ಎಲ್.ದಾಸರ, ದಂತ ವೈದ್ಯೆ ಡಾ.ಆಶಾ, ಪ್ರಾಚಾರ್ಯ ವಿಪುಲ್ ಸಗರಿ, ಬಸವರಾಜ ಬಡಿಗೇರ, ಅಶೋಕ ಹಡಪದ, ಎಚ್.ಎಸ್.ಗೌಡರ್, ಜಿ.ಡಿ.ಬಡಿಗೇರ ಸೇರಿದಂತೆ ಇತರರು ಇದ್ದರು. ಜ್ಞಾನ ಭಾರತಿ ವಿದ್ಯಾ ಮಂದಿರದ ಗೀತ ಗಾಯನ ತಂಡದವರು ಗುರುಮಾತೆ ರಂಜಿತಾ ಹೆಗಡೆ ನೇತೃತ್ವದಲ್ಲಿ ಸಾಮೂಹಿಕವಾಗಿ ಭಗವದ್ಗೀತೆಯ ೧೦ನೇ ಅಧ್ಯಾಯವನ್ನು ಪಠಿಸಿದರು.
ಉಪನ್ಯಾಸಕ ಜಿ.ಡಿ.ಬಡಿಗೇರ ಸ್ವಾಗತಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಾಜನಾರಾಯಣ ನಲವಡೆ ಹಾಗೂ ಬಸವರಾಜ ಬಡಿಗೇರ ನಿರೂಪಿಸಿದರು. ಅಶೋಕ ಹಡಪದ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

