ಗೋಲಗೇರಿ ವಿದ್ಯುತ್ ಶಾಖೆ ವ್ಶಾಪ್ತಿಯ ಹಳ್ಳಿಗಳಲ್ಲಿ ಕಾರ್ಯಾಚರಣೆ
ಬ್ರಹ್ಮದೇವನಮಡು: ಈ ಭಾಗದಲ್ಲಿ ರಾತ್ರಿ ವೇಳೆ ನೇರವಾಗಿ ಎಲ್ ಟಿ ಲೈನ್ ಗೆ ಹುಕ್ಕು ಹಾಕುತ್ತಿರುವದು ಕಂಡು ಬರುತ್ತಿದೆ. ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಖಾಧಿಕಾರಿ ದಯಾನಂದ ಹಂಚಿನಾಳ ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಶಾಖೆಯ ವ್ಶಾಪ್ತಿಯ ವಂದಾಲ, ಢವಳಾರ, ಸಾಸಾಬಾಳ, ಸಾಸಾಬಾಳ ತಾಂಡಾ, ಡಂಬಳ, ಕರವಿನಾಳ, ಕದಾರಪೂರ, ಡಂಬಳ ತಾಂಡಾದಲ್ಲಿ ಸೋಮವಾರ ವಿದ್ಯುತ್ ಬಾಕಿ ವಸೂಲಿ ಹಾಗೂ ಅನಧಿಕೃತ ವಿದ್ಯುತ್ ಕಾರ್ಯಾಚರಣೆಯಲ್ಲಿ ಮಿಟರ್ ವೈಯರ್, ವಶಪಡಿಸಿಕೊಂಡು ಅವರು ಮಾತನಾಡಿದರು.
ವಿದ್ಯುತ್ ಕಳ್ಳತನ ಮಹಾ ಅಪರಾಧ ಎಂದು ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಿದರು.
ಅನಧಿಕೃತವಾಗಿ ಬಳಸುತ್ತಿರುವ ಮನೆಗಳ ಮೇಲೆ ದಾಳಿ ಮಾಡಿ ಮೋಟರ್, ಪಂಪಸೆಟ್ ವಿದ್ಯುತ್ ವೈಯರ್ ಗಳನ್ನು ವಶಪಡಿಸಿಕೊಂಡರು.
ವಿದ್ಯುತ್ ಕಾರ್ಯಾಚರಣೆಯಲ್ಲಿ ಮೆಲ್ವಿಚಾರಕ ಉಮೇಶ ಕನಾ೯ಳ, ಲೈನಮನ್ ಫಾರುಕಪಟೇಲ ಪಾಟೀಲ, ಶ್ರೀಶೈಲ್ ಮಾಲಿಪಾಟೀಲ, ಹಣಮಂತ್ರಾಯಗೌಡ ಬಿರಾದಾರ, ಗ್ರಾಮ ವಿದ್ಶುತ್ ಪ್ರತಿನಿಧಿ ಮಲ್ಲಿಕಾಜು೯ನ ಕೋಟಾರಗಸ್ತಿ, ದೇವಿಂದ್ರ ಬಿರಾದಾರ ಇದ್ದರು.

