ಹೊನವಾಡ: ದಿನಾಲೂ ಉಸಿರಾಡಲು ಇಷ್ಟು ಆಮ್ಲಜನಕ ಕೊಟ್ಟಿರುವ ಪ್ರಕೃತಿಗೆ ನಾವೇನಾದರೂ ಕೊಡುಗೆ ಕೊಡಲೇಬೇಕು, ಇಂದೇನಾದರೂ ಈ ಕೆರೆಯ ಅಂದ ಸೊಬಗು ಹೆಚ್ಚುತ್ತಿದೆ ಎಂದರೆ ಅದಕ್ಕೆ ನಮ್ಮ ಭಾಗದ ಹಿಂದಿನ ಜಲ ಸಂಪನ್ಮೂಲ ಸಚಿವರು ಇಂದಿನ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲರು ಕಾರಣ. ಅವರನ್ನು ನಾವು ಬಹಳಷ್ಟು ಸ್ಮರಿಸಬೇಕಾಗಿದೆ. ಪರಿಸರ ದಿನದಂದು ಮಾತ್ರ ಉಸಿರಾಡುವುದಿಲ್ಲ , ಪ್ರತೀ ದಿನ ನಮಗೆ ಆಮ್ಲಜನಕ ಪೂರೈಕೆ ಆಗಬೇಕು. ಪ್ರಸ್ತುತ ಆಮ್ಲಜನಕದ ಮಹತ್ವ ನಮಗೆ ಅರಿವಾಗುವ ಕಾಲಬಂದಿದೆ. ಇಂದು ಆಮ್ಲಜನಕಕ್ಕಾಗಿ ಹಣ ನೀಡುತ್ತೇವೆ. ಆದರೆ ಪರಿಸರದಲ್ಲಿ ಅದೆಷ್ಟೋ ವರ್ಷಗಳಿಂದ ಬೇರೂರಿ ಉಚಿತ ಗಾಳಿ, ತಂಪು, ಹಣ್ಣು, ಹೂ ನೀಡುವ ಮರವನ್ನು ಕ್ಷಣಮಾತ್ರದಲ್ಲಿ ಧರೆಗುರುಳಿಸಿ ಬಿಡುತ್ತೇವೆ. ಇಂದು ನಮ್ಮ ಸ್ವಾರ್ಥಕ್ಕೆ ತಕ್ಕ ಪಾಠ ಪ್ರಕೃತಿಯೇ ಕಲಿಸಿದಂತಿದೆ. ಎಂದು ಬಾಬುರಾವ್ ಮಹಾರಾಜರು ಹೇಳಿದರು.
ಕೆರೆಯ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ ವಿಜಯಪುರ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಶೋಕ ಕಲಘಟಗಿ ಮಾತನಾಡಿದರು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಂಚಾಯತ ಕಾರ್ಯದರ್ಶಿ ಅಣ್ಣಪ್ಪ ಬಿದರಿ, ಡಿ ಬಿ ಡೆಂಬ್ರೆ, ಬಾಪುರಾಯ್ ದೇವನಾಯಕ, ಗೌರಿಶಂಕರ ಹಿರೇಮಠ, ಜೆ ಎನ್ ಬಡಳ್ಳಿ, ಸುರೇಶ ಚಾವರ, ಧರೆಪ್ಪ ಹಡಪದ, ಶ್ರೀಕಾಂತ್ ಕುಂಬಾರ, ಚಿದಾನಂದ ಅರಮೋತಿ, ಯಂಕಪ್ಪ ಉಪ್ಪಾರ, ಶಂಕರ ಕಟೆ, ಸುರೇಶ ನರಳೆ, ಮಹಾದೇವ ಜಾಧವ, ಸಂಜೀವ ಯಚ್ಚಿ, ತುಕಾರಾಮ ನಲವಡೆ, ಮಾಯಪ್ಪ ಪೂಜಾರಿ, ರೈತ ಸಂಘದ ಮಹಿಳೆಯರಾದ ಮಾಯಕ್ಕ ಚೌರಿ, ಮಹಾದೇವಿ ಚಾವರ, ಸರೋಜನಿ ಕೋಟ್ಯಾಳ, ಸುರೇಖಾ ಕಾತ್ರಾಳ, ಗ್ರಾಮ ಪಂಚಾಯತ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಮಸ್ತ ಹೊನವಾಡದ ಜನತೆ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

