ಕರವಿನಾಳದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ
ಬ್ರಹ್ಮದೇವನಮಡು: ಸಿಂದಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುವೆ. ರಸ್ತೆ, ಶಿಕ್ಷಣ, ಆರೋಗ್ಶ, ಉದ್ಶೋಗ ಕ್ಷೇತ್ರದತ್ತ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಕರವಿನಾಳ ಗ್ರಾಮದಲ್ಲಿ ಸಮಾಜ ಕಲ್ಶಾಣ ಇಲಾಖೆಯ ಕೆ.ಆರ್.ಐ.ಡಿ.ಎಲ್ ಸನ್ ೨೦೨೧-೨೨ ನೇ ಸಾಲಿನ ಪ್ರಧಾನಮಂತ್ರಿ ಆದಶ೯ ಗ್ರಾಮ ಯೋಜನೆಯಡಿಯಲ್ಲಿ ೨೦ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸವ೯ರ ಏಳ್ಗೆಗೆ ಶ್ರಮಿಸಿ, ಸಮಾಜದಲ್ಲಿ ಶಾಂತಿ – ನೆಮ್ಮದಿ ನೆಲೆಸುವ ಕೆಲಸ ಮಾಡುವೆ. ನಮ್ಮ ತಂದೆ ದಿ.ಶಾಸಕ ಎಂ.ಸಿ.ಮನಗೂಳಿ ಅವರ ಅವಧಿಯಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿಗೆ ಮರುಜೀವ ಕೊಡಲಾಗುವುದು. ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚಿನ ಆದ್ಶತೆ ನೀಡುವೆ. ಸಂಕಷ್ಟದಲ್ಲಿರುವ ಜನರ ನೋವಿಗೆ ಸ್ಪಂದಿಸುವ ಉದ್ದೇಶದಿಂದಲೇ ನಮ್ಮ ಸಕಾ೯ರ ಗ್ಶಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳ ಮೂಲಕ ಕಾಂಗ್ರೆಸ್ ಸಕಾ೯ರ ನಿಮ್ಮ ಸಕಾ೯ರ ಎನ್ನುವುದನ್ನು ದೃಡಪಡಿಸುತ್ತೇವೆ ಎಂದರು.
ಈ ಸಂದಭ೯ದಲ್ಲಿ ಹೊನ್ನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂಗನಗೌಡ ಬಿರಾದಾರ, ಢವಳಾರದ ಒಡೆಯರ ಮುತ್ಶಾ, ವಿಜುಗೌಡ ಬಿರಾದಾರ, ಕಾಂಗ್ರೆಸ್ ಮುಖಂಡ ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ, ಮುಖಂಡ ರವಿರಾಜ್ ದೇವರಮನಿ, ಬಸವರಾಜ ಮಾರಲಭಾವಿ, ಆರ್.ಜಿ.ಮಾನಶೇಟ್, ಯಂಕನಗೌಡ ಪಾಟೀಲ, ಬಸವರಾಜ ಹದಗಲ್ಲ್, ಶ್ರೀಶೈಲ್ ಜಾಲವಾದಿ, ಸಾಹೇಪಟೇಲ ಮುರಡಿ, ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಮಲ್ಲು ಕೆಂಭಾವಿ, ಬಸನಗೌಡ ಉಳ್ಳೆಸೂರ, ಪ್ರಕಾಶಗೌಡ ಬಿರಾದಾರ, ಚಂದ್ರು ಕೆಂಭಾವಿ, ರಾಮನಗೌಡ ಪಾಟೀಲ, ಹಣಮಂತ ಯಂಟಮಾನ, ದೇವಿಂದ್ರ ತೋನಶ್ಯಾಳ ಸೇರಿದಂತೆ ಮತ್ತಿತರಿದ್ದರು.

